ರಾಗಧನದ ಶ್ರಾವಣದ ಸಂಗೀತ ಸಂಜೆ
Team Udayavani, Sep 6, 2019, 4:55 AM IST
ಉಡುಪಿಯ ರಾಗಧನ ಸಂಸ್ಥೆಯು ಆ.17ರಂದು ನೂತನ ರವೀಂದ್ರ ಮಂಟಪದಲ್ಲಿ ಒಂದು ಸಂಗೀತ ಕಛೇರಿಯನ್ನು ಆಯೋಜಿಸಿತ್ತು. ಶಾವ್ರಣ ಈ ಸಂಗೀತವನ್ನು ನಡೆಸಿಕೊಟ್ಟವರು ಗಿರಿಜಾ ಶಂಕರ್ ಚೆನ್ನೈ.
ಹದವಾದ ಧ್ವನಿ ಸೌಕರ್ಯವನ್ನು ಹೊಂದಿರುವ ಈ ಗಾಯಕರು ಆ ದಿನ ದೋಷರಹಿತವಾದ ಮತ್ತು ಸರಳವಾದ ಸೌಖ್ಯ ಸಂಗೀತವನ್ನು ನೀಡಿದರು.ಅಟತಾಳ ಭೈರವಿ ವರ್ಣದೊಂದಿಗೆ ಶುರುವಾದ ಹಾಡುಗಾರಿಕೆಯಲ್ಲಿ ಧೇನುಕ ( ತೆಲಿಯತೇರು) ಸೌರಾಷ್ಟ್ರ (ಶರಣು ಸಿದ್ಧಿ ವಿನಾಯಕ), ಧನ್ಯಾಸಿ (ಸಂಗೀತ ಜ್ಞಾನಮು) ರವಿಚಂದ್ರಿಕ (ಮಾಕೇಲರ ) ರಾಗಗಳ ಕೃತಿಗಳು ಸೊಗಸಾಗಿ ಮೂಡಿ ಬಂದವು. ಲಲಿತ ( ಹಿರಣ್ಮಯೀಂ) ಮತ್ತು ಪೂರ್ವಿ ಕಲ್ಯಾಣಿ ( ಸಾಟಿಲೇನಿ) ರಾಗಗಳು ಪ್ರಧಾನವಾಗಿದ್ದವು. ಈ ರಾಗಗಳನ್ನು ಅಚ್ಚುಕಟ್ಟಾಗಿ ವಿಸ್ತರಿಸಿದ ಗಾಯಕರು ಎರಡೂ ಕೃತಿಗಳನ್ನು ಸೂಕ್ತವಾದ ನೆರ್ವಲ್ ಮತ್ತು ಸ್ವರವಿನಿಕೆಗಳಿಂದ ಪೋಷಿಸಿದರು. ಮುಂದೆ ರಾಗಂ-ತಾನಂ- ಪಲ್ಲವಿಗಾಗಿ ಕೀರವಾಣಿಯನ್ನು ಆಯ್ದುಕೊಂಡು ಶ್ರೀ ರಾಮ ಪ್ರಿಯಂ ಶ್ರೀನಿವಾಸಂ ಭಜೇ/ ಹಂ… ಶ್ರೀ ವತ್ಸ ನಾಮ ಧೇಯಂ… ಎಂಬ ಪಲ್ಲವಿಯನ್ನು, ಖಂಡ ತ್ರಿಪುಟ ತಾಳದಲ್ಲಿ ಕ್ರಮಬದ್ಧವಾಗಿ ನಿರೂಪಿಸಿ, ಸ್ವರ ಕಲ್ಪನೆಗಳನ್ನು ರಾಗ ಮೂಲಿಕೆಯಲ್ಲಿ ನೀಡಿದರು.
ವಯಲಿನ್ ಕಲಾವಿದ ವೈಭವ್ ರಮಣಿ, ಲಲಿತ ರಾಗದ ಶರಣಾಗತ – ಶೋಕ ಭಾವಗಳನ್ನು , ಪೂರ್ವಿ ಕಲ್ಯಾಣಿಯ ಗಾಂಭೀರ್ಯವನ್ನು ಅಂತೆಯೇ ಕೀರವಾಣಿಯ ಘನ ಮತ್ತು ಮೃದು ಮಗ್ಗುಲುಗಳನ್ನು ತನ್ನದೇ ಆದ ವಿನ್ಯಾಸ ವೈವಿಧ್ಯಗಳಿಂದ ನುಡಿಸಿದರು.
ಹದವರಿತು ಮೃದಂಗ ನುಡಿಸಿದ ಸುನಾದ ಕೃಷ್ಣ ಅಮ್ಮೆ ತನಿ ಆವರ್ತಗಳಲ್ಲಿ ನಿರ್ಮಿಸಿದ ಭಿನ್ನ ಲಯಗಣಿತದ ಗೋಪುರಗಳು ಪ್ರಶಂಸೆಗೆ ಪಾತ್ರವಾದವು. ಒಂದು ಶ್ಲೋಕವನ್ನು ಅನುಸರಿಸಿದ ಹಂಸಾನಂದಿ (ಮಾಧವ ಮಾಯಾ) ಪ್ರಸ್ತುತಿಯೊಂದಿಗೆ ಕಛೇರಿ ಸಂಪನ್ನಗೊಂಡಿತು.
ಸರೋಜಾ ಆರ್. ಆಚಾರ್ಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ
Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ
Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್
ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು
Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ