ಅಪರೂಪದ ಪ್ರಸಂಗ ಕಾಂಡವ ದಹನ 


Team Udayavani, Dec 14, 2018, 6:00 AM IST

10.jpg

ಮಾಯಾಸುರ ರಾಕ್ಷಸ ಪ್ರವೇಶ. ಇಲ್ಲಿ ವೇಷಭೂಷಣದಲ್ಲಿ ತಪ್ಪು ಆಯ್ಕೆ ಅಲ್ಲದೇ ಆ ಪಾತ್ರಕ್ಕೆ ತಕ್ಕಂತೆ ಪಾತ್ರದಾರಿಯ ಆಯ್ಕೆಯಿರದೆ ಪ್ರವೇಶದ ಸನ್ನಿವೇಶ ಸೊರಗಿ ಹೋಯಿತು. ಯಾವುದೋ ಬೇಡರ ವೇಷದಂತಿತ್ತು. ಹೀಗಾಗಿ ಪ್ರಸಂಗಕ್ಕೆ ಇದ್ದ ಮತ್ತೂಂದು ತಿರುವು ಕೂಡಾ ಸೋತಿತು

ಕರ್ಕಿ ಮೇಳದ ಕಲಾವಿದರಾಗಿದ್ದ ದಿ. ಪರಮಯ್ಯ ಹಾಸ್ಯಗಾರ ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ಕೆರೆಮನೆ ಮೇಳದವರ ಯಕ್ಷಗಾನ ಪ್ರದರ್ಶನ ಏರ್ಪಡಿಸಲಾಗಿತ್ತು. ಕರ್ಕಿ ಮತ್ತು ಕೆರೆಮನೆ ಮೇಳ ಎರಡೂ ವಿಭಿನ್ನ ಶೈಲಿಯ ಯಕ್ಷಗಾನ ತಂಡಗಳು. ಇಂದು ಕರ್ಕಿ ಮೇಳ ಇಲ್ಲದೇ ಹೋದರೂ ಆ ವಿಶಿಷ್ಟ ಪರಂಪರೆಯ ಉಳಿಸುವ ಹವ್ಯಾಸಿ ಕಲಾವಿದರು ಕೆಲವರು ಇದ್ದಾರೆ. ಅಂದು ಈ ಮೇಳದ ವಿಭಿನ್ನ ಶೈಲಿ ಅಷ್ಟೇ ಅಲ್ಲ ಪ್ರಸಂಗದ ಆಯ್ಕೆ ಕೂಡಾ ವಿಶೇಷತೆಯಿಂದ ಕೂಡಿತ್ತು. ಅಂದಿನ “ಕಾಂಡವ ದಹನ’ ಪ್ರಸಂಗ ಕರ್ಕಿ ಮೇಳಕ್ಕೆ ತುಂಬಾ ಜನಪ್ರಿಯತೆ ತಂದು ಕೊಟ್ಟಿತ್ತು. ಆ ಸವಿ ನೆನಪುಗಳನ್ನು ಮರುಕಳಿಸುವ ಉದ್ದೇಶದಿಂದ ಸಂಸ್ಮರಣಾ ಕಾರ್ಯಕ್ರಮದಲ್ಲಿ ಅದೇ ಪ್ರಸಂಗವನ್ನು ಕೆರೆಮನೆ ಮೇಳದವರು ರಂಗಕ್ಕೆ ತಂದರು. ಪ್ರಸಂಗ ಪದ್ಯಗಳು ತುಂಬಾ ಚೆನ್ನಾಗಿವೆ ಎಂದು ಹೇಳದೇ ಹೋದರೂ ಚೆನ್ನಾಗಿ ಇಲ್ಲ ಅನ್ನುವ ಹಾಗಂತೂ ಇಲ್ಲ. ಎಲ್ಲಿಯೂ ಬೋರ್‌ ಅನಿಸುವುದಿಲ್ಲ. ಇಂದ್ರನ ಪ್ರವೇಶದಿಂದಲೇ ಆರಂಭಗೊಂಡ ಪ್ರಸಂಗಕ್ಕೆ ಎಲ್ಲ ಸನ್ನಿವೇಶದಲ್ಲಿಯೂ ಮಾತಿಗೆ, ಅಭಿನಯಕ್ಕೆ ಕುಣಿತಕ್ಕೆ ತುಂಬಾ ಅವಕಾಶವಿದೆ . ಪ್ರೇಕ್ಷಕರು ಅಂದು ಕೆರೆಮನೆ ಶಿವಾನಂದ ನೇತೃತ್ವದ ಪ್ರದರ್ಶನ ಮೂರಕ್ಕೆ ಇಳಿಯದೇ ಆರಕ್ಕೆ ಏರದೇ ಸಾಧಾರಣ ಅನ್ನುವ ಧಾರಣೆ ಕಟ್ಟಿದರು. ಮೊದಲ ಪ್ರವೇಶದ ಇಂದ್ರನಾಗಿ ಶ್ರೀಪಾದ ಹೆಗಡೆ ಅವರ ಪ್ರವೇಶ ಎಂದಿನ ಮಿಂಚಿನ ಪ್ರವೇಶ ಅಂದುಕೊಂಡರೂ ನಂತರ ಅವರು ಇಂದ್ರನ ಪಾತ್ರ ಎನ್ನುವದನ್ನು ಮರೆಯುತ್ತಾರೆ. ಇಂದ್ರನ ಪಾತ್ರವೋ ಇಲ್ಲ ಬೇರೆ ಯಾವುದೋ ಪಾತ್ರದ ಛಾಯೆ ಮೂಡಿಸುತ್ತಾರೆ. ಹಾಗಂತ ಪಾತ್ರಧಾರಿಯಾಗಿ ಶ್ರೀಪಾದರು ಪ್ರೇಕ್ಷಕರ ದೃಷ್ಟಿಯಲ್ಲಿ ಸೋಲುವುದಿಲ್ಲ.ನಂತರದಲ್ಲಿ ಅಗ್ನಿ ಪ್ರವೇಶ. ಸೂಕ್ತ ವೇಷಭೂಷಣ ನಿರರ್ಗಳ ಮಾತು ಎಲ್ಲವೂ ಸಾಮಾನ್ಯ ಎನ್ನಬಹುದು . ಆ ನಂತರ ಅರ್ಜುನ, ಕೃಷ್ಣರಾಗಿ ಶಿವಾನಂದ ಹೆಗಡೆ ಹಾಗೂ ಸದಾಶಿವ ಯಲ್ಲಾಪುರ ಇವರುಗಳ ಪ್ರವೇಶ ಹೊಸ ಪದ್ಧತಿಯಲ್ಲಿ ಆಗುತ್ತದೆ . ಇಬ್ಬರೂ ಸೊಗಸಾದ ನೃತ್ಯ ಸಾಮರ್ಥ್ಯ ಹೊಂದಿರುವವರು. ಅತಿರೇಕ, ವಿಕೃತ ಯಾವುದು ಕಾಣಲಾರೆವು. ಈ ಇಬ್ಬರಲ್ಲಿ ಸದಾಶಿವ ಕೃಷ್ಣ ಪಾತ್ರದಲ್ಲಿ ನೃತ್ಯ, ಮಾತಿನಲ್ಲಿ ಚುರುಕಾಗಿ , ಲವಲವಿಕೆಯಿಂದ ಆಕರ್ಷಿಸುತ್ತಾರೆ. ಅರ್ಜುನ ಪಾತ್ರ ಆ ದಿನದ ಮಟ್ಟಿಗೆ ಸ್ವಲ್ಪ ಸಪ್ಪೆ ಎಂದರೆ ತಪ್ಪಾಗಲಾರದು. ಬಹಳಷ್ಟು ಸಂದರ್ಭದಲ್ಲಿ ತಲೆ ಕೆಳಗೆ ಹಾಕಿ ನೆಲ ನೋಡಿದ್ದೇ ಹೆಚ್ಚು. ಅರ್ಜುನನ ಪಾತ್ರಕ್ಕೆ ಔಚಿತ್ಯ ಅನಿಸುವುದಿಲ್ಲ. ಅವರ ಮಾತಿನಲ್ಲಿ ಸ್ಪಷ್ಟತೆ ಇರಲಿಲ್ಲ. ಅನೇಕ ಬಾರಿ ಮಾತು ತೇಲಿ ಹೋಗಿ ಯಾವುದೇ ಪರಿಣಾಮ ಬೀರುತ್ತಿರಲಿಲ್ಲ. ಅಗ್ನಿ , ಕೃಷ್ಣ, ಅರ್ಜುನ ಈ ಮೂರು ಪಾತ್ರ ಪರಸ್ಪರರ ನಡುವೆ ಮಾತಿನ ಚಕಮಕಿ ನಡೆಸಿ ಬಹಳಷ್ಟು ಪ್ರೇಕ್ಷಕರಿಗೆ ರಂಜನೆ ಒದಗಿಸಬಹುದಾಗಿತ್ತು. ಅದಾಗಲೇ ಇಲ್ಲ. ಇನ್ನು ಮಾಯಾಸುರ ರಾಕ್ಷಸ ಪ್ರವೇಶ. ಇಲ್ಲಿ ವೇಷಭೂಷಣದಲ್ಲಿ ತಪ್ಪು ಆಯ್ಕೆ ಅಲ್ಲದೇ ಆ ಪಾತ್ರಕ್ಕೆ ತಕ್ಕಂತೆ ಪಾತ್ರದಾರಿಯ ಆಯ್ಕೆಯಿರದೆ ಪ್ರವೇಶದ ಸನ್ನಿವೇಶ ಸೊರಗಿ ಹೋಯಿತು . ಯಾವುದೋ ಬೇಡರ ವೇಷದಂತಿತ್ತು. ಹೀಗಾಗಿ ಪ್ರಸಂಗಕ್ಕೆ ಇದ್ದ ಮತ್ತೂಂದು ತಿರುವು ಕೂಡಾ ಸೋತಿತು . ಅನೇಕ ಕಡೆ ಲೈಟಿಂಗ್‌ ಬಳಕೆ ಮಾಡುವ ಅವಕಾಶ ಇತ್ತು . ಅಗ್ನಿ ಕಾಂಡವ ವನ ದಹಿಸುವ ಸಂದರ್ಭ ಆಗಿರಬಹುದು, ರಾಕ್ಷಸ ಮಾಯಾಸುರನ ಪ್ರವೇಶ ಸಂದರ್ಭದಲ್ಲಿ ಕೂಡಾ ಲೈಟಿಂಗ್‌ ವ್ಯವಸ್ಥೆ ಬಹಳ “ಉಟಾವ್‌ ‘ ನೀಡುತ್ತಿತ್ತು. ಕರ್ಕಿ ಮೇಳದ ಈ ಪ್ರಸಂಗದ ಸವಿ ಉಂಡವರಿಗೆ ಅಷ್ಟಾಗಿ ಪ್ರದರ್ಶನ ಸಮಾಧಾನ ತರಲಿಲ್ಲ. 

ಗೌರೀಶ ಶಾಸ್ತ್ರಿ

ಟಾಪ್ ನ್ಯೂಸ್

Bidar; ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕ್ರೂಸರ್ ವಾಹನ; ಮೂವರು ಸ್ಥಳದಲ್ಲೇ ಸಾವು

Bidar; ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕ್ರೂಸರ್ ವಾಹನ; ಮೂವರು ಸ್ಥಳದಲ್ಲೇ ಸಾವು

panchamsali

Vijayapura; ಶನಿವಾರ ಇಂಚಗೇರಿಯಲ್ಲಿ ಪಂಚಮಸಾಲಿ ಸಮಾವೇಶ; ಕಾಂಗ್ರೆಸ್‌ಗೆ ಬೆಂಬಲ ಎಂದ ನಾಯಕರು

Americaದ ವಿವಿಯಲ್ಲಿ ತೀವ್ರಗೊಂಡ ಪ್ಯಾಲೆಸ್ತೀನ್‌ ಪರ ಪ್ರತಿಭಟನೆ; ನೂರಾರು ಮಂದಿ ಬಂಧನ

Americaದ ವಿವಿಯಲ್ಲಿ ತೀವ್ರಗೊಂಡ ಪ್ಯಾಲೆಸ್ತೀನ್‌ ಪರ ಪ್ರತಿಭಟನೆ; ನೂರಾರು ಮಂದಿ ಬಂಧನ

ಇನ್ನು 24 ಗಂಟೆಗಳಲ್ಲಿ ಅಮೇಥಿ, ರಾಯ್‌ಬರೇಲಿ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಪ್ರಕಟ…

LS Polls: ಇನ್ನು 24 ಗಂಟೆಯಲ್ಲಿ ಅಮೇಥಿ, ರಾಯ್‌ಬರೇಲಿ ಕಾಂಗ್ರೆಸ್ ಅಭ್ಯರ್ಥಿಗಳ ಹೆಸರು ಫೈನಲ್

LokSabha: ಒಂದೇ ಒಂದು ಪಕ್ಷ 272 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಿಲ್ಲ: ಪ್ರಧಾನಿ ವ್ಯಂಗ್ಯ

LokSabha: ಒಂದೇ ಒಂದು ಪಕ್ಷ 272 ಲೋಕಸಭಾ ಸ್ಥಾನಗಳಲ್ಲಿ ಸ್ಪರ್ಧಿಸಿಲ್ಲ: ಪ್ರಧಾನಿ ವ್ಯಂಗ್ಯ

ಅಸ್ಸಾಂನಲ್ಲಿ ಅಭಿವೃದ್ಧಿ ಒಂದನ್ನು ಬಿಟ್ಟು ಬೇರೆಲ್ಲಾ ಮಾಫಿಯಾಗಳು ನಡೆಯುತ್ತಿವೆ: ಪ್ರಿಯಾಂಕಾ

ಅಸ್ಸಾಂನಲ್ಲಿ ಅಭಿವೃದ್ಧಿ ಒಂದನ್ನು ಬಿಟ್ಟು ಬೇರೆಲ್ಲಾ ಮಾಫಿಯಾಗಳು ನಡೆಯುತ್ತಿವೆ: ಪ್ರಿಯಾಂಕಾ

Ayodhya: ಅಯೋಧ್ಯೆ ಬಾಲ ರಾಮನಿಗೆ ವಿಶೇಷ ಆರತಿ ಬೆಳಗಿದ ರಾಷ್ಟ್ರಪತಿ ಮುರ್ಮು

Ayodhya: ಅಯೋಧ್ಯೆ ಬಾಲ ರಾಮನಿಗೆ ವಿಶೇಷ ಆರತಿ ಬೆಳಗಿದ ರಾಷ್ಟ್ರಪತಿ ಮುರ್ಮು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Bidar; ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕ್ರೂಸರ್ ವಾಹನ; ಮೂವರು ಸ್ಥಳದಲ್ಲೇ ಸಾವು

Bidar; ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕ್ರೂಸರ್ ವಾಹನ; ಮೂವರು ಸ್ಥಳದಲ್ಲೇ ಸಾವು

2-uv-fusion

UV Fusion: ಸದ್ಗತಿಯ ಹಾದಿಯಲ್ಲಿ ನೆಮ್ಮದಿಯ ಹಾಸು

ಕೊಳವೆ ಬಾವಿ ಕೊರೆಯಲು ಹೆಚ್ಚಿದ ಬೇಡಿಕೆ; ನದಿಗಳ ಒಡಲು ಬರಿದು

ಕೊಳವೆ ಬಾವಿ ಕೊರೆಯಲು ಹೆಚ್ಚಿದ ಬೇಡಿಕೆ; ನದಿಗಳ ಒಡಲು ಬರಿದು

panchamsali

Vijayapura; ಶನಿವಾರ ಇಂಚಗೇರಿಯಲ್ಲಿ ಪಂಚಮಸಾಲಿ ಸಮಾವೇಶ; ಕಾಂಗ್ರೆಸ್‌ಗೆ ಬೆಂಬಲ ಎಂದ ನಾಯಕರು

Americaದ ವಿವಿಯಲ್ಲಿ ತೀವ್ರಗೊಂಡ ಪ್ಯಾಲೆಸ್ತೀನ್‌ ಪರ ಪ್ರತಿಭಟನೆ; ನೂರಾರು ಮಂದಿ ಬಂಧನ

Americaದ ವಿವಿಯಲ್ಲಿ ತೀವ್ರಗೊಂಡ ಪ್ಯಾಲೆಸ್ತೀನ್‌ ಪರ ಪ್ರತಿಭಟನೆ; ನೂರಾರು ಮಂದಿ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.