ರಾಧೇಯ: ಒಂದೆರಡು ಅನಿಸಿಕೆಗಳು


Team Udayavani, Jul 28, 2017, 8:04 AM IST

28-KALA-4.jpg

ಉಡುಪಿಯ ಯಕ್ಷಗಾನ ಕಲಾರಂಗ ಆಯೋಜಿಸಿದ “ರಾಧೇಯ’ ಬಡಗು ತಿಟ್ಟು ಯಕ್ಷಗಾನ ಪ್ರಸ್ತುತಿಯನ್ನು ವೀಕ್ಷಿಸಿದ ಬಳಿಕ ನನಗನಿಸಿದ್ದು ಹೀಗೆ:

ಕುಂತೀಭೋಜನಿಂದ ತೊಡಗಿ ಕುರುಕ್ಷೇತ್ರದಲ್ಲಿ ಕರ್ಣನ ಕಾಯಕ ಆರಂಭಗೊಳ್ಳುವವರೆಗೆ ಸಂಯೋಜಕರು ಕಥಾಭಾಗವನ್ನು ಉತ್ತಮವಾಗಿ ಪೋಣಿಸಿದ್ದಾರೆ. ನಿಗದಿತ ಸಮಯದೊಳಗೆ ಆಖ್ಯಾನವನ್ನು ಮುಗಿಸಬೇಕೆಂದಿದ್ದರೆ ಕೆಲವು ಕಡೆಗಳಲ್ಲಿ “ಕತ್ತರಿ ಪ್ರಯೋಗ’ ಆವಶ್ಯಕ. ಕೆಲವು ಭಾಗಗಳನ್ನು ತ್ಯಜಿಸಬಹುದು ಅಥವಾ ಮೊಟಕುಗೊಳಿಸಬಹುದು. ಅನುಭವವಿರುವ ಹಿರಿಯರ ಸಲಹೆಯಂತೆ ಆ ಕಾರ್ಯವನ್ನು ಮಾಡಬಹುದು.

ಉಡುಪಿ, ಕುಂದಾಪುರ ತಾಲೂಕುಗಳಲ್ಲಿ ನೆಲೆನಿಂತ ನಡುತಿಟ್ಟಿನ ಪ್ರಾತಿನಿಧಿಕ ಪ್ರಸಂಗ “ಕರ್ಣಾರ್ಜುನ’. ಹಾರಾಡಿ ರಾಮ ಗಾಣಿಗರಿಗೆ ರಾಷ್ಟ್ರ ಪ್ರಶಸ್ತಿ ಸಿಗುವಲ್ಲಿ ಕುರುಕ್ಷೇತ್ರದ ಈ “ಅತುಳಬಲ’ ಕರ್ಣ ಮಹತ್ತರ ಪಾತ್ರ ವಹಿಸಿದ್ದಾನೆ ಎಂಬುದು ಆ ಪಾತ್ರ ಪರಿಚಯವಿರುವ ಕಲಾಭಿಮಾನಿಗಳೆಲ್ಲರೂ ಒಪ್ಪತಕ್ಕ ಮಾತು. ರಾಧೇಯ ಕಥಾನಕ ರಂಜನೀಯವಾಗಬೇಕಾದರೆ ಕುರುಕ್ಷೇತ್ರದ ಪೂರ್ವ ಭಾಗದಲ್ಲಿ , ಮೇಲೆ ಹೇಳಿದಂತೆ ಸಂಸ್ಕರಿಸಿದ ಕಥಾಭಾಗದೊಂದಿಗೆ ಉತ್ತರಾರ್ಧದಲ್ಲಿ ನಮ್ಮ ಬಡಗುತಿಟ್ಟಿನ ಕರ್ಣಾರ್ಜುನ ಪ್ರಸಂಗವನ್ನು ಹಾಗೆಯೇ ಉಳಿಸಬೇಕು. ಈ “ಅತುಳಬಲ ಕರ್ಣ’ನನ್ನು ಮೂರ್ತರೂಪಕ್ಕಿಳಿಸಲು ಆಗಿ ಹೋದ ಕಲಾವಿದರ ಮಟ್ಟಕ್ಕೆ ನಿಲ್ಲತಕ್ಕ ಕಲಾವಿದರು ಇಂದು ನಮ್ಮಲ್ಲಿ ಇಲ್ಲವೆಂಬ ಅಭಿಪ್ರಾಯವಿರಬಹುದು (ಈ ಮಾತು ಎಲ್ಲ ತಿಟ್ಟುಗಳಿಗೂ ಅನ್ವಯಿಸುವಂಥದ್ದು). ಆದರೂ ಅವರ ಪಳೆಯುಳಿಕೆಗಳಂತೆ ಈ ಭಾಗವನ್ನು ಅಭಿನಯಿಸಬಲ್ಲ ಕಲಾವಿದರು ಈಗಲೂ ಇದ್ದಾರೆ. “ಕರ್ಣಾವಸಾನ’ದ ಕರ್ಣನ ಪಾತ್ರವನ್ನು ತಮ್ಮ ವೃತ್ತಿ ಜೀವನದಲ್ಲಿ ಕಡಿಮೆ ಪಕ್ಷ ಹತ್ತು -ಹದಿನೈದು ಬಾರಿ ಅಭಿನಯಿಸಿದವರು ಈಗಲೂ ಇದ್ದಾರೆ. ಈ ಕಥಾಭಾಗದ ಕರ್ಣ, ಶಲ್ಯ, ಅರ್ಜುನ, ಶ್ರೀಕೃಷ್ಣ – ಪಾತ್ರಗಳನ್ನು ನಡುತಿಟ್ಟಿನ ಕಲಾವಿದರಿಂದಲೇ ಮಾಡಿಸಿದರೆ “ರಾಧೇಯ’ ಪ್ರಸಂಗ ಇನ್ನಷ್ಟು ಕಳೆಗಟ್ಟುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ.

ಜುಲೈ 10ರಂದು ಕಲಾರಂಗದ ಕಚೇರಿಯಲ್ಲಿ ಜರಗಿದ ತೆಂಕು-ಬಡಗು ಪ್ರದರ್ಶನಗಳ ಅವಲೋಕನ ಕಾರ್ಯಕ್ರಮದಲ್ಲಿ ಅನೇಕ ಯಕ್ಷಗಾನ ಕಲಾಭಿಮಾನಿಗಳು ತಮ್ಮ ಅಭಿಮತವನ್ನು ಮಂಡಿಸಿದ್ದಾರೆ. ಅಂದು ತೀವ್ರ ಚರ್ಚೆಗೆ ಒಳಪಟ್ಟಿದ್ದು ಬಡಗುತಿಟ್ಟಿನ “ರಾಧೇಯ’. ಕಟ್ಟು ಮೀಸೆಯ ವೇಷವನ್ನು ಧರಿಸಿ ತೆಂಕುತಿಟ್ಟಿನ ಕಲಾವಿದರು “ಮಹಾಪ್ರಸ್ಥಾನ’ ಆಖ್ಯಾನದಲ್ಲಿ ವಿಜೃಂಭಿಸಿದ್ದಾರೆ; ಬಡಗುತಿಟ್ಟಿನ ಕಲಾವಿದರು ಈ ವಿಷಯದಲ್ಲಿ ಅಸಡ್ಡೆ ತೋರಿರುವುದು ಏಕೆಂದು ಅರ್ಥವಾಗುವುದಿಲ್ಲ. ಕಟ್ಟುಮೀಸೆಯ ಬಗ್ಗೆ “ಅವಲೋಕನ’ ಕಾರ್ಯಕ್ರಮದಲ್ಲಿ ಸಾಕಷ್ಟು ಅನಿಸಿಕೆಗಳು ಮುಂಬಂದಿವೆ. 

ಎ. ಜೆ. ಡಿ’ಸೋಜಾ, ಉಡುಪಿ

ಟಾಪ್ ನ್ಯೂಸ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.