ಸಾಂಸ್ಕೃತಿಕ, ಧಾರ್ಮಿಕ, ಆಧ್ಯಾತ್ಮಿಕ ಹಿರಿಮೆಗರಿಮೆಗಳನ್ನು ಸಾರಿದ ತುಳುನಾಡ ವೈಭವ


Team Udayavani, Apr 12, 2019, 6:00 AM IST

h-6

ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ವರ್ಣೋತ್ಸವದ ಪ್ರಯುಕ್ತ ವಿದ್ಯಾರ್ಥಿಗಳು ರಚಿಸಿ, ನಿರ್ದೇಶಿಸಿ, ನಿರೂಪಿಸಿ, ಪ್ರಸ್ತುತ ಪಡಿಸಿದ “ತುಳುನಾಡ ವೈಭವ’ ತುಳುನಾಡಿನ ಸಾಂಸ್ಕೃತಿಕ, ಧಾರ್ಮಿಕ, ಆಧ್ಯಾತ್ಮಿಕ ಹಿರಿಮೆಗರಿಮೆಗಳನ್ನು ಸಮರ್ಥವಾಗಿ ಪ್ರತಿಬಿಂಬಿಸುವಲ್ಲಿ ಯಶಸ್ವಿಯಾಯಿತು. ವಿವಿಧ ಸನ್ನಿವೇಶಗಳಿಗೆ ಸಂಬಂಧಪಟ್ಟ ನೃತ್ಯಗಳಿಗೆ, ಧ್ವನಿಮುದ್ರಿತ ಹಾಡುಗಳನ್ನು ಅನಿವಾರ್ಯವಿದ್ದಲ್ಲಿ ಮಾತ್ರ ಬಳಸಿಕೊಂಡು, ಉಳಿದೆಲ್ಲ ಕಡೆ ವಿದ್ಯಾರ್ಥಿಗಳೇ ಹಾಡಿ, ಹಿನ್ನೆಲೆ ಸಂಗೀತ ನೀಡಿ ಸಹಕರಿಸಿದ್ದು ಇನ್ನೊಂದು ವಿಶೇಷ.

ವಿದ್ಯಾರ್ಥಿಗಳೇ ನಿರ್ಮಿಸಿದ ತುಳುನಾಡಿನ ಪ್ರಾಚೀನ ಮನೆಯ ಮಾದರಿಯ ವೇದಿಕೆಯಲ್ಲಿ ಅಜ್ಜಿಯೊಬ್ಬಳು ಗತಕಾಲದಿಂದ ವರ್ತಮಾನದವರೆಗೆ ಮೆರೆದ, ಮೆರೆಯುತ್ತಿರುವ ತುಳುನಾಡಿನ ವೈಭವವನ್ನು ನಿರೂಪಿಸುವಂತೆ ಹೆಣೆದ ಈ ಕಾರ್ಯಕ್ರಮ ಆರಂಭವಾದದ್ದು ಪರಶುರಾಮ ಸೃಷ್ಟಿಯ ಪೌರಾಣಿಕ ಕಥನದ ಮೂಲಕ. ಕೊಡಲಿ ಎಸೆದು ತುಳುನಾಡನ್ನು ನಿರ್ಮಿಸಿದ ಐತಿಹ್ಯವನ್ನು “ಅಗ್ರತಃ ಚತುರೋ ವೇದಃ’ ಹಾಡಿನೊಂದಿಗೆ ನಿರೂಪಿಸಿದರು. ಹೀಗೆ ನಿರ್ಮಾಣವಾದ ಭೂಮಿಯಲ್ಲಿ ಮೊದಲೇ ವಾಸವಾಗಿದ್ದ ಸರ್ಪ ಸಂತತಿಯ ಸಮಾಧಾನಕ್ಕಾಗಿ ಬೆಳೆದುಬಂದ ನಾಗಾರಾಧನೆಯನ್ನು ನಾಗಮಂಡಲದ ಪ್ರದರ್ಶನದೊಂದಿಗೆ ಕಾಣಿಸಿದರು. ವಿಶಿಷ್ಟ ಸಂಪ್ರದಾಯವಾದ “ಅಳಿಯಕಟ್ಟಿನ’ ಮೂಲವಾದ ಭೂತಾಳ ಪಾಂಡ್ಯನ ಕಥೆಯನ್ನು ರೂಪಕದ ಮೂಲಕ ಪ್ರದರ್ಶಿಸಿದರು. ಆ ಮೂಲಕ ತುಳುನಾಡಿನ ರಾಜ ಪರಂಪರೆಯ ಚಿತ್ರಣವೂ ಮೂಡಿಬಂತು. ಜಾನಪದ ನೃತ್ಯ ಪರಂಪರೆಯ ಪ್ರತೀಕವಾಗಿ ಪ್ರದರ್ಶಿಸಲ್ಪಟ್ಟ ಕಂಗೀಲು ಕುಣಿತವಂತೂ ವಿದ್ಯಾರ್ಥಿಗಳ ಅಂತಃಶಕ್ತಿಯನ್ನು ಪರಿಪೂರ್ಣವಾಗಿ ಬಹಿರಂಗಪಡಿಸಿತು.

ಆಚಾರ್ಯ ಮಧ್ವರು ರಚಿಸಿದ “ಪ್ರೀಣಯಾಮೋ ವಾಸುದೇವಂ’ ಕೃತಿಗೆ ನೃತ್ಯ ದೊಂದಿಗೆ ಉಡುಪಿಯ ಕೃಷ್ಣನ ಸ್ಥಾಪನೆ, ಭರತನಾಟ್ಯದೊಂದಿಗೆ ಪರ್ಯಾಯ ದರ್ಬಾರಿನ ವೈಭವ ಧಾರ್ಮಿಕತೆಯೊಂದಿಗೆ ಸಾಂಸ್ಕೃತಿಕ ವೈಭವ ಮೇಳೈಸಿಸಿತು.

ವಾದಿರಾಜರು ತುಳುವಿನಲ್ಲಿ ರಚಿಸಿದ “ಲೇ ಲೇ ಲೇ ಗಾ’ ದಶಾವತಾರದ ವರ್ಣನೆಯನ್ನು ಒಳಗೊಂಡ ಹಾಡಿಗೆ ವಿದ್ಯಾರ್ಥಿಗಳ ಸಮೂಹ ನೃತ್ಯ ದಶಾವತಾರದ ಸಂಪೂರ್ಣ ದರ್ಶನವನ್ನು ನೀಡುವಲ್ಲಿ ಯಶ ಪಡೆಯಿತು. ಅವರೇ ರಚಿಸಿದ ಲಕ್ಷ್ಮೀ ಶೋಭಾನೆ ಕೃತಿಯ ಪ್ರಸ್ತುತಿ ತುಳುನಾಡಿನ ಮದುವೆಗಳಲ್ಲಿ ನೆಲದ ಹಾಡು ಸೇರಿಕೊಂಡು ಹೊಸ ಸಂಪ್ರದಾಯಕ್ಕೆ ನಾಂದಿಯಾದ ರೀತಿಯನ್ನು ವಿವರಿಸಿತು. ವಾದಿರಾಜರ ಶಿಷ್ಯರಾದ ನಾರಾಯಣ ಭಟ್ಟರು ಮಾಡಿದ ಪ್ರಮಾದದಿಂದ ಬ್ರಹ್ಮರಾಕ್ಷಸರಾಗಿ ಮತ್ತೆ ಶಾಪವಿಮುಕ್ತರಾಗಿ ಭೂತರಾಜರಾದ ಪ್ರಕರಣವನ್ನು ಪರಿಣಾಮಕಾರಿಯಾಗಿ ರೂಪಕದಲ್ಲಿ ನಿರೂಪಿಸಿದರು.

ಧಾರ್ಮಿಕ ಸೌಹಾರ್ದಕ್ಕೆ ಸಾಕ್ಷಿಯಾದ ಬಪ್ಪನಾಡಿನ ಐತಿಹ್ಯವನ್ನು ಯಕ್ಷಗಾನೀಯವಾಗಿ ಸಪ್ತದುರ್ಗೆಯರ ಭೂ ಅವತರಣ, ಗುಳಿಗನ ಭೇಟಿ, ಬೇರೆ ಬೇರೆ ಸ್ಥಳಗಳಲ್ಲಿ ದುರ್ಗೆಯರ ನೆಲೆ, ಬಪ್ಪ ಬ್ಯಾರಿಯ ಮೂಲಕ ದುರ್ಗೆಯ ಆಲಯದ ಸ್ಥಾಪನೆಗಳ ಸನ್ನಿವೇಶಗಳೊಂದಿಗೆ “ಶ್ರೀ ಬಪ್ಪನಾಡು ಕ್ಷೇತ್ರ ಮಹಾತ್ಮೆ’ ಪ್ರಸಂಗದ ಹಾಡುಗಳೊಂದಿಗೆ ಪ್ರದರ್ಶಿಸಿದರು. ದೊಂದಿಯೊಂದಿಗೆ ಗುಳಿಗನ ಪ್ರವೇಶವಂತೂ ಅದ್ಭುತ ವಾತಾವರಣವನ್ನು ನಿರ್ಮಿಸಿತು. ಕಾರಣಿಕ ಪುರುಷರಾದ ಕೋಟಿ ಚೆನ್ನಯರ ಪ್ರಸ್ತಾಪದೊಂದಿಗೆ ತುಳುನಾಡಿನ ಇತಿಹಾಸದೊಂದಿಗೆ ಪವಾಡ ಸದೃಶ ಘಟನೆಗಳು ಸೇರಿಕೊಂಡು ಇಲ್ಲಿನ ಇತಿಹಾಸವು ಪುರಾಣವಾದ ಹೆಗ್ಗಳಿಕೆಯನ್ನು ಬಿಂಬಿಸಿತು.

“ಕೊಂಬುದ ಸೊರೊಕು ಕಂಬುಲದ ಎರುಕುಲು’ ಪದ್ಯಕ್ಕೆ ನೃತ್ಯದೊಂದಿಗೆ ಕಂಬಳದ ಪ್ರಾತ್ಯಕ್ಷಿಕೆ, ಕ್ರೀಡಾ ಸಂಸ್ಕೃತಿಗೆ ಸಾಕ್ಷಿಯಾದರೆ, “ನೀರೆ ತೋರೆಲೆ ನೀರೆ ತೋರೆಲೆ’ ಎಂಬ ವಾದಿರಾಜರ ಹಾಡಿಗೆ ತುಳಸಿ ಸಂಕೀರ್ತನೆ ಈ ಪ್ರದೇಶದ ಅಪೂರ್ವ ಸಂಪ್ರದಾಯದ ಸೌಂದರ್ಯವನ್ನು ಕಾಣಿಸಿತು.

ಹದಿನೈದು ನಿಮಿಷದ‌ ಹುಲಿವೇಷ ಕುಣಿತ ಸಾಂಪ್ರದಾಯಿಕ ಹೆಜ್ಜೆಗಾರಿಕೆ, ಸತ್ವಯುತ ಪ್ರದರ್ಶನದೊಂದಿಗೆ ಯಶಸ್ವಿಯಾಗಿತ್ತು. “ತುದೆತ ಪುಡೆಟು, ಪುಣಿತ ಬರಿಟು’ ಹಾಡಿಗೆ ವಿದ್ಯಾರ್ಥಿನಿಯರು ಮಾಡಿದ ಓಬೇಲೆ ನೃತ್ಯ ಮನೋಹರವಾಗಿತ್ತು.

ಡಾ| ವಾಸುದೇವ

ಟಾಪ್ ನ್ಯೂಸ್

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.