ಮಾಲಿನಿಯ ದೂತನ ಮುಖದಲ್ಲಿ “ಎರಡು ಮುಖ’ 


Team Udayavani, Jan 18, 2019, 12:30 AM IST

6.jpg

ಯಕ್ಷಗಾನದಲ್ಲಿ ಉತ್ತಮ ಬಣ್ಣಗಾರ ಅಥವಾ ಕಲೆಗಾರನಿಗೆ ತನ್ನ ಕುಂಚ ನೈಪುಣ್ಯವನ್ನು ಸಾದರಪಡಿಸಲು ಇರುವ ಅವಕಾಶವೆಂದರೆ ಕಾಟು ರಕ್ಕಸನ ಬಣ್ಣದ ವೇಷ ಹಾಗೂ ಹಾಸ್ಯಗಾರನ ವೇಷ. ಈ ಪಾತ್ರಗಳಲ್ಲಿ ಕಲಾವಿದ ಚಿತ್ರಕಲೆಯ ಕಲ್ಪನೆಯನ್ನು ಉತ್ತಮವಾಗಿ ಬಿಂಬಿಸಲು ಸಾಧ್ಯವಿದೆ . ಸಮರ್ಥ ಬಣ್ಣದ ವೇಷಧಾರಿಗಳು ಕಾಟುರಕ್ಕಸನ ಪಾತ್ರದಲ್ಲಿ ಈ ಮೊದಲೇ ತಮ್ಮ ಅದ್ಭುತ ಕಲ್ಪನೆಯ ಮೂಲಕ ಬಣ್ಣಗಾರಿಕೆ ಮಾಡುತ್ತಿರುವುದು ಉಲ್ಲೇಖನೀಯ. ಕಟೀಲು ಆರನೇ ಮೇಳದ ಪ್ರಧಾನ ಹಾಸ್ಯಗಾರರಾದ ಪೂರ್ಣೇಶ ಆಚಾರ್ಯರು ಇತ್ತೀಚೆಗೆ ಪುತ್ತೂರಿನಲ್ಲಿ ಜರಗಿದ ಶ್ರೀದೇವಿ ಮಹಾತ್ಮೆಪ್ರಸಂಗದಲ್ಲಿ ಮಾಲಿನಿ ದೂತನಾಗಿ ಅದ್ಭುತ ಬಣ್ಣಗಾರಿಕೆಯ ಮೂಲಕ ಮೆಚ್ಚುಗೆಗೆ ಪಾತ್ರರಾಗಿದ್ದಾರೆ . 

 ಮಾಲಿನಿ ದೂತನು ಸಾಮಾನ್ಯವಾಗಿ ನಿರ್ವಹಿಸುವ ವಿಧಾನವನ್ನೇ ಬದಲಾಯಿಸಿರುವ ಪೂರ್ಣೇಶರ ಬಣ್ಣಗಾರಿಕೆ , ಸಂಭಾಷಣೆ , ನಾಟ್ಯ – ಎಲ್ಲದರಲ್ಲೂ ಪರಂಪರೆ ಮೀರದ ಹೊಸತನವಿದೆ .ಮುಖದಲ್ಲಿ ಫ‌ುಟ್‌ಬಾಲ್‌ನ ಚಿತ್ರ , ಬೋಳು ತಲೆಯ ಮೇಲೆ ಕೊಂಬು , ತಾನೇ ಸ್ವತಃ ಪೀಲಿಯಿಂದ ರಚಿಸಿದ ಕಿರೀಟ , ಕಿವಿ , ಮೂಗುಗಳ ಬಳಕೆ – ಇವೆಲ್ಲಾ ಪೂರ್ಣೇಶರ ಅನ್ವೇಷಣೆಗಳು . 

ಮಾಲಿನಿ ದೂತನಾಗಿ ಪೂರ್ಣೇಶರ ಬಣ್ಣಗಾರಿಕೆ ಗಮನಿಸಿ. ಈ ಫೋಟೋ ಮೇಲಿನಿಂದ ಕೆಳಗೆ ತಿರುಗಿಸಿ ನೋಡಿ . ಬೇರೆಯೇ ವ್ಯಕ್ತಿ ಕಾಣಿಸಿಕೊಳ್ಳುತ್ತಾನೆ . ಮುಖದಲ್ಲಿ ಉಲ್ಟಾ ಬಣ್ಣಗಾರಿಕೆ ಮಾಡಿ ಮೇಲಿನಿಂದ ನೋಡಿದರೂ , ಕೆಳಗಿನಿಂದ ನೋಡಿದರೂ ಬೇರೆ ಬೇರೆ ಮುಖವೇ ಕಾಣುವಂತೆ ಮುಖವರ್ಣಿಕೆ ಮಾಡಿದ್ದಾರೆ . ನಾವು ಇಂಥಹ ಚಿತ್ರಗಳನ್ನು ನೋಡಿದ್ದೇವೆ . ಆದರೆ  ಇಂಥದ್ದನ್ನು ಮಾಡಲೂ ಸಾಧ್ಯ ಎಂದು ಪೂರ್ಣೇಶರು ತಮ್ಮದೇ ಕಲ್ಪನೆಯ ಮೂಲಕ ತೋರಿಸಿದ್ದಾರೆ . ಹಾಸ್ಯ ಪಾತ್ರಗಳ ಬಣ್ಣಗಾರಿಕೆಯಲ್ಲಿ ಈ ತರದ ಸೃಜನಶೀಲತೆ ಪ್ರಥಮ ಎನ್ನಬಹುದು . ಹಿಂದೆ ದಿ.ವಿಟ್ಲ ಗೋಪಾಲಕೃಷ್ಣ ಜೋಷಿಯವರು ಹಾಸ್ಯ ಪಾತ್ರಗಳಲ್ಲಿಯ ವೇಷಭೂಷಣಗಳಲ್ಲಿ ಆಮೂಲಾಗ್ರ ಬದಲಾವಣೆ ತಂದವರು . ತಮ್ಮ ಮುಖವನ್ನು ಅಗಲವಾಗಿ ಕಾಣುವಂತೆ ವಿಶಿಷ್ಠವಾದ ಬಣ್ಣಗಾರಿಕೆ ಮಾಡುತ್ತಿದ್ದರು. ಆದರೆ ಇದು ಅದಕ್ಕಿಂತಲೂ ಭಿನ್ನವಾಗಿದೆ. ಪೂರ್ಣೇಶರ ಈ ಪಾತ್ರ ಯಕ್ಷಗಾನದಲ್ಲಿಯ ಸೃಜನಶೀಲತೆಯ ಬಣ್ಣಗಾರಿಕೆಗೆ ಇನ್ನೊಂದು ಉದಾಹರಣೆ.ಹೊಸತನದ ಈ ಬಣ್ಣಗಾರಿಕೆಗೆ ಅವರು ಸುಮಾರು 30 ನಿಮಿಷ ವ್ಯಯಿಸಿ¨ªಾರೆ. ಮುಖದಲ್ಲಿರುವ ನಿಜವಾದ ಕಣ್ಣನ್ನು ಬಣ್ಣದ ಮೂಲಕ ಮರೆಮಾಚಿ , ನೈಜ ಕಣ್ಣಿನ ಕೆಳಗೆ ಬಣ್ಣದಲ್ಲೇ ಕಣ್ಣನ್ನು ಚಿತ್ರಿಸಿದ್ದಾರೆ. ರಂಗಸ್ಥಳದಲ್ಲಿ ಕಣ್ಣನ್ನು ಮುಚ್ಚಿಯೇ ಸುಮಾರು 15 ನಿಮಿಷಗಳ ಕಾಲ ನಾಟ್ಯಾಭಿನಯ ನೀಡಿದ್ದಾರೆ .  

 ಎಂ .ಶಾಂತರಾಮ ಕುಡ್ವ

ಟಾಪ್ ನ್ಯೂಸ್

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Sullia ಮನೆಯಿಂದ ನಗ, ನಗದು ಕಳವು

Sullia ಮನೆಯಿಂದ ನಗ, ನಗದು ಕಳವು

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ

Uppinangady ಸೇನೆಯ ಐಟಿಬಿಪಿ ವಿಭಾಗಕ್ಕೆ ಡಾ| ಗೌತಮ್‌ ರೈ ಸೇರ್ಪಡೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

U. T. Khader ಮಂಗಳೂರಿನಿಂದ ಹಜ್‌ಗೆ ನೇರ ವಿಮಾನ ಸೌಲಭ್ಯಕ್ಕೆ ಯತ್ನ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Dharmasthala ಇಂದು 52ನೇ ವರ್ಷದ ಸಾಮೂಹಿಕ ವಿವಾಹ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Manipal ದೇಶದ ಜಿಡಿಪಿ ಜತೆ ಪದವೀಧರರ ಸಂಖ್ಯೆಯೂ ದ್ವಿಗುಣ: ಕೆ.ವಿ. ಕಾಮತ್‌ ಕರೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Udupi ಕುಡಿಯುವ ನೀರಿನ ಸಮಸ್ಯೆಗಳಿಗೆ ತುರ್ತು ಸ್ಪಂದನೆ

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Kasaragod ಕಾರು-ಲಾರಿ ಢಿಕ್ಕಿ: ಮಗು ಸಹಿತ ಒಂದೇ ಕುಟುಂಬದ ಐವರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.