ನಿನ್ನನ್ನೇ ಧ್ಯಾನಿಸುತ್ತ ನಿಂತಲ್ಲೇ ನಿಂತಿರುತ್ತಿದ್ದೆ…
Team Udayavani, May 21, 2019, 6:00 AM IST
ಗುಳಿಗೆನ್ನೆಯ ಗೆಳೆಯ,
ನಿನ್ನೊಳಗೆ ನಾನಿದ್ದೆ ಎಂದು ತಿಳಿಯಲೇ ಇಲ್ಲ, ನನಗಾದರೂ ಹೇಗೆ ಹೊಳೆದೀತು? ಬಸ್ ನಿಲ್ದಾಣದಲ್ಲಿ ನನಗಾಗಿ ಅರಸುವಾಗ, ನಾನು ಕಾಣಿಸುತ್ತಲೇ ಸಾವಿರ ವ್ಯಾಟ್ ದೀಪದಂತೆ ಬೆಳಗುತ್ತಿದ್ದ ನಿನ್ನ ಕಂಗಳ ಕಾಂತಿ ನನ್ನನ್ನೇಕೆ ಸೆಳೆಯಲಿಲ್ಲ? ಜನ ಸಂದಣಿಯಿದ್ದ ಬಸ್ಸಿನಲ್ಲಿ, ನೀ ಕುಳಿತ ಜಾಗವ, ನಿಂತಿದ್ದ ನನಗೆ ಬಿಟ್ಟಾಗ ನಿನ್ನ ಹೃದಯದಲ್ಲಿ ನನಗಾಗಿ ಕಾದಿರಿಸಿದ್ದ ಸಿಂಹಾಸನ ನನಗೇಕೆ ಗೋಚರಿಸಲಿಲ್ಲ? ನಿನ್ನ ಮಿತ ಭಾಷೆಯ ಹಿಂದೆ ಅವಿತು ಕಾತರಿಸುತ್ತಿದ್ದ ತುಂಟಮನ ನನಗೇಕೆ ಅರಿವಾಗಲಿಲ್ಲ?
ನನಗೆ ತಿಳಿದದ್ದು ಒಂದೇ ವಿಷಯ, ನೀನು ಅತ್ಯಂತ ಸಭ್ಯ ಹುಡುಗ ಅನ್ನೋದು. ತುರ್ತಿಗೆ ಇರಲಿ’ ಅಂತ ಅವತ್ತು ನಿನ್ನ ಮೊಬೈಲ್ ನಂಬರ್ ಕೊಟ್ಟಾಗಲೂ, ಅದನ್ನು ನಾನು ವಿಶೇಷವೆಂದು ಪರಿಗಣಿಸಲಿಲ್ಲ.
ನಿನ್ನಲ್ಲೂ ಸಾವಿರಾರು ಆಸೆ, ಕನವರಿಕೆ ಇದೆಯೆಂದು ತಿಳಿದದ್ದು, ನಿನ್ನೆ ನನ್ನ ಹುಟ್ಟುಹಬ್ಬದ ಆಮಂತ್ರಣ ಸಂದೇಶವನ್ನು ಉಳಿದವರಿಗೆ ಕಳುಹಿಸಿದಂತೆ ನಿನಗೂ ತಲುಪಿಸಿದಾಗ. ಅಬ್ಟಾ, ಪೌರ್ಣಮಿಯ ಅಲೆಯಂತೆ ಒಂದೇ ರಭಸದಲ್ಲಿ ನನಗೆ ಕರೆ ಮಾಡಿ ಪ್ರೀತಿಯ ಬಾಗಿಲು ತೆರೆದೆಯಲ್ಲೋ?
I am lucky! ನಿನ್ನೊಳಗೆ ಎಷ್ಟೊಂದು ಮೃದುಭಾವಗಳು, ನನ್ನ ಕುರಿತು! ಬೇಕಿಲ್ಲ ಬೇರೇನೂ…ನಿನ್ನೆ ಕರೆ ಮುಗಿಸುವಾಗ ಏನಂದೆ? ನಾನು ದೂರ ದೂರ ಹೋಗುತ್ತಿದ್ದೆ ಎಂದೇ?… ಇಲ್ಲ, ನೀನು ನನ್ನನ್ನು ಸಮೀಪಿಸಲು ಹೆಜ್ಜೆ ಮುಂದೆ ಇಟ್ಟೇ ಇರಲಿಲ್ಲ, ಅಲ್ಲವೆ?
-ರಾಜಿ,ಬೆಂಗಳೂರು
ಕೆ.ವಿ. ರಾಜಲಕ್ಷ್ಮಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?
ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ