ಜೊತೆಯಾಗಿ ನಡೆಯೋಣ ನಾನಿನ್ನ ಬಿಡಲಾರೆ!


Team Udayavani, Jun 19, 2018, 5:02 PM IST

joteyagi.jpg

ನನ್ನ ದಾರಿಯಲ್ಲಿ ನಾನೆಂದೂ, ಯಾರಿಗೂ ಸೋತವಳಲ್ಲ. ಆದರೆ, ನಿನ್ನ ಪ್ರೀತಿ ಶರಧಿಯ ಮುಂದೆ ನನ್ನ ಪ್ರತಿಜ್ಞೆಗಳು ಮಂಜಿನ ಹನಿಗಳಂತೆ ಕರಗುತ್ತಿವೆ. ಅದೆಷ್ಟೋ ಮುನಿಸಿನ ಘನ ನಿರ್ಧಾರಗಳು ಸಡಿಲಗೊಂಡು ಸೋಲುತ್ತಿವೆ. 

ಹೂ ನಗೆಯ ಹುಡುಗ,
ಹೇಗಿದ್ದೀಯಾ? ಎಂದೂ ಕೇಳದ ಪ್ರಶ್ನೆ ಅಲ್ಲವಾ ಇದು? ಅದ್ಯಾಕೆ, ನೀನು ಎದುರಿಗಿ¨ªಾಗ ಈ ಪ್ರಶ್ನೆ ಕೇಳುವುದಿಲ್ಲ ನಾನು? ಹೀಗೆ ಉಭಯ ಕುಶಲೋಪರಿ ವಿಚಾರಿಸಲು ಪತ್ರದ ಸಹಾಯ ಅಡ್ಡವಿಡಬೇಕೇನೋ. ಜೀವಕ್ಕೆ ಜೀವವಾದ, ನಿನ್ನ ಅಪರಿಮಿತ ಕನಸಾದ ನಾನೇ ನಿನ್ನೊಟ್ಟಿಗೆ ಇರುವಾಗ ಎಂಥ ಚಿಂತೆ ಎಂಬ ಹುಂಬತನ. ಅದಕ್ಕೇ ಇವತ್ತು ಹೇಗಿದ್ದೀ ಎಂದು ಕೇಳುತ್ತಿರುವೆ. ನಿನ್ನ ಕನಸುಗಳೆಲ್ಲ ನನಸಾಗುವ ದಾರಿಯಲ್ಲಿ ಹೆಜ್ಜೆ ತಪ್ಪದೆ ನಡೆಯುತ್ತಿರುವೆಯಾ? ಆಸೆಗಳೆಲ್ಲಾ ನಿನ್ನ ಬಳಿಗೆ ದಾಪುಗಾಲು ಹಾಕಿ ಓಡಿ ಬರುತ್ತಿವೆಯಾ? ಇದನ್ನೆಲ್ಲ ಏಕೆ ಕೇಳುತ್ತಿದ್ದೇನೆ ಗೊತ್ತಾ?

ಪ್ರೇಮ ನಿವೇದನೆ ಅಂದ್ರೆ ಬರಿಯ ಒಲವನ್ನು ಸುರಿಸುವುದಲ್ಲ. ನಿನ್ನನ್ನು ಹೊಗಳಿ ಅಟ್ಟದ ಮೇಲೆ ಕೂರಿಸುವುದಲ್ಲ. ಅಲ್ಲಿ ಕಾಳಜಿ, ಪ್ರೀತಿ, ಆಸರೆ, ಸ್ಫೂರ್ತಿ, ವಿಶ್ವಾಸ, ನಂಬುಗೆ ಎಲ್ಲವೂ ಇರಬೇಕು. ಅಪರಿಚಿತ ಕೆಟ್ಟ ಕನಸುಗಳ ರಾತ್ರಿಯಲ್ಲಿ, ಚಿರಪರಿಚಿತನಾಗಿ ಹೆಜ್ಜೆ ಇಟ್ಟವನು ನೀನು. ಮನಸ್ಸಿಗೆ  ಶಾಂತಿ ತುಂಬಿ, ನಗು ಬೀರುತ್ತಾ, ಭದ್ರತಾ ಭಾವವನ್ನು ಕೊಂಚವಾಗಿ ಅರಳಿಸಿದೆ. ಒಲವ ಕುಂಚದಿಂದ, “ನಾನಿರುವೆ ಜೊತೆಯಾಗಿ’ ಎಂದು ಶರಾ ಬರೆದೆ. 

ಮನಸ್ಸಿನ ಒಳಗೆÇÉೋ ನಾನು ಬಿಕ್ಕುತ್ತಿದ್ದರೆ ಒಂದರೆ ಘಳಿಗೆಯಲ್ಲಿ ಪರಿಣತನ ಹಾಗೆ ಅದನ್ನೆಲ್ಲ ಪತ್ತೆ ಮಾಡಿ ಬಿಡುವೆಯÇÉೋ ಮಾರಾಯ! ನಿನ್ನ ಪ್ರೇಮದ ಪರಿಯೇ ನನಗೊಂದು ಬೆರಗು. ನನ್ನನ್ನೇ ನಾನು ಕಳೆದುಕೊಂಡು, ನಿನ್ನಲ್ಲಿ ಒಂದಾಗಿ ಬಿಡುತ್ತಿದ್ದೇನೆ. ನನ್ನ ದಾರಿಯಲ್ಲಿ ನಾನೆಂದೂ, ಯಾರಿಗೂ ಸೋತವಳಲ್ಲ. ಆದರೆ, ನಿನ್ನ ಪ್ರೀತಿ ಶರಧಿಯ ಮುಂದೆ ನನ್ನ ಪ್ರತಿಜ್ಞೆಗಳು ಮಂಜಿನ ಹನಿಗಳಂತೆ ಕರಗುತ್ತಿವೆ. ಅದೆಷ್ಟೋ ಮುನಿಸಿನ ಘನ ನಿರ್ಧಾರಗಳು ಸಡಿಲಗೊಂಡು ಸೋಲುತ್ತಿವೆ. ಅದೇ ಅಲ್ಲವೆ ಚಿರನೂತನ ಒಲವು? 

ನಾನು ನಿನ್ನನ್ನು ಎಂದಿಗೂ ಅನುಮಾನಿಸಿಲ್ಲ. ನಿನ್ನ ಸಹಪಾಠಿ, ಸಹೋದ್ಯೋಗಿ ಹುಡುಗಿಯರೊಂದಿಗೆ ಸಲುಗೆ ಇರಲಿ. ಸ್ನೇಹ, ಹರಟೆ, ಮೋಜು ಮಸ್ತಿ ಎಲ್ಲವೂ ಇರಲಿ. ಅವರೊಂದಿಗೆ ಒಂದು ನಿರಂತರ ಅಂತರದ ಗೆರೆಯೂ ಇರಲಿ. ಏಕೆಂದರೆ, ನಾನು ಮಾತ್ರವೇ ನಿನ್ನ ಏಕೈಕ ಸ್ನೇಹಿತೆ, ಕೇರ್‌ ಟೇಕರ್‌, ಹೆಂಡತಿಗಿಂತ ಹೆಚ್ಚಿನವಳು. ಸಂಗಾತಿ ಆಗುವವಳು. ಮೊದಲ ಸೂರ್ಯ ರಶ್ಮಿ ಭೂಮಿಗೀತ ಹಾಡುವಂತೆ, ನಿನ್ನ ಮನದಲ್ಲಿ ನನ್ನದೇ ಮೊದಲ ಅನುರಾಗ ಗೀತೆಯಾಗಲಿ. ನಿನ್ನ ಬದುಕಿನ ಕಠಿಣ ಸವಾಲುಗಳಿಗೆ ನನ್ನ ಹೆಜ್ಜೆಯೂ ಜೊತೆಯಾಗಲಿ. 

ಬಯಸಿದ ಪ್ರೀತಿ ಸಿಗುವವರೆಗೆ ಎಲ್ಲರೂ ಒಳ್ಳೆಯವರೇ. ಬಯಕೆಯ ಹಪಹಪಿ ತೀರಿದ ನಂತರ, ಸಿಕ್ಕ ಪ್ರೀತಿಯನ್ನು ಹೇಗೆ ಉಳಿಸಿಕೊಳ್ಳುತ್ತೇವೆ ಎಂಬುದು ಮುಖ್ಯವಾಗುತ್ತದೆ. ಇರುವಷ್ಟು ಗಳಿಗೆಯನ್ನು ನಿನ್ನೊಂದಿಗೆ ಸುಖವಾಗಿ, ತೃಪ್ತಿಕರವಾಗಿ ಕಳೆಯುವ ಆಸೆ ನನ್ನದು. ಬೆರಳಿಗೆ ಬೆರಳ ಸೇರಿಸಿ ಬಂದುಬಿಡು ಗೆಳೆಯ, ಬದುಕು ದೊಡ್ಡದಿದೆ ಜೊತೆಗೆ ಹೆಜ್ಜೆ ಹಾಕುವ… 

ಇಂತಿ ನಿನ್ನವಳು
– ಪಲ್ಲವಿ 

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.