ಇಲ್ಲವ್ನೇ ಹರಿಶ್ಚಂದ್ರ

ಸೇವೆಯೆ ನನ್ನ ತಾಯಿ ತಂದೆ

Team Udayavani, Sep 24, 2019, 5:00 AM IST

f-4

ಸ್ಮಶಾನ ಅಂದ ಕೂಡಲೇ ಆ ಕಡಗೆ ತಿರುಗಿ ನೋಡುವುದಕ್ಕೂ ಹಿಂದೇಟು ಹಾಕುವ ಜನರಿದ್ದಾರೆ. ಹೀಗಿರುವಾಗ, ಎಲ್ಲಾ ಸಮುದಾಯದ ಸ್ಮಶಾನಗಳನ್ನೂ ಸ್ವಂತ ಖರ್ಚಿನಲ್ಲಿ ಸ್ವತ್ಛಗೊಳಿಸುವ ಕಾಯಕ ಜೀವಿಯೊಬ್ಬರ ಈ ಕಥನ ಎಲ್ಲರೂ ಓದಬೇಕಾದದ್ದು…

ಸ್ಮಶಾನ ಎಂದರೆ ಎಲ್ಲರೂ ಒಂದು ಮಾರು ದೂರ ನಿಲ್ಲುತ್ತಾರೆ. ಅಲ್ಲಿಗೆ ಹೋದರೆ ಏನಾಗುತ್ತದೋ ಅನ್ನೋ ಭಾವ. ಸಾವು ಎದುರಾದಾಗ ಮಾತ್ರ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಲು ಅಲ್ಲಿಗೆ ಹೋಗಿ ಬರುತ್ತಾರೆ. ಯಾರಿಗೂ ಕೂಡ ಸ್ಮಶಾನ ಅಂದರೆ, ಪ್ರೀತಿಯೂ ಇಲ್ಲ, ದ್ವೇಷವೂ ಇಲ್ಲದ ಮನಃಸ್ಥಿತಿ. ಎಲ್ಲರೂ ಹೀಗೆ ಇದ್ದು ಬಿಟ್ಟರೆ, ಸ್ಮಶಾನದ ಸ್ವತ್ಛತೆ ಕಾಪಾಡುವುದಾದರೂ ಹೇಗೆ?

ಹಾವೇರಿ ಜಿಲ್ಲೆ, ಬ್ಯಾಡಗಿ ತಾಲೂಕಿನ ಮೋಟೆಬೆನ್ನೂರು ಗ್ರಾಮದಲ್ಲಿ ಅಡಿವೆಪ್ಪ ಕುರಿಯವರ ಈ ರೀತಿ ಯೋಚಿಸಲಿಲ್ಲ. ಬದಲಾಗಿ ಪೊರಕೆ ಹಿಡಿದು ಸ್ಮಶಾನಕ್ಕೆ ನುಗ್ಗಿದರು. ಸ್ಮಶಾನ ಸ್ವತ್ಛ ಗೊಳಿಸುವುದು ಇವರ ಸಮಾಜ ಸೇವೆಯ ಒಂದು ಭಾಗ. ಇದಕ್ಕಾಗಿ ಕವಿರತ್ನ ಕಾಳಿದಾಸ ಸಂಘ ಸ್ಥಾಪನೆ ಮಾಡಿದ್ದಾರೆ. ಒಂದಷ್ಟು ಜನರನ್ನು ಗುಡ್ಡೆ ಹಾಕಿಕೊಂಡು, ಸ್ಮಶಾನ ಸ್ವತ್ಛತೆಯ ಕೆಲಸ ಮಾಡುತ್ತಿದ್ದಾರೆ. ಸುಮಾರು 3 ವರ್ಷಗಳಿಂದ, ಹೆಚ್ಚು ಕಮ್ಮಿ ಆರೇಳು ಸ್ಮಶಾನಗಳನ್ನು ಶುಚಿ ಗೊಳಿಸಿದ ಸಾರ್ಥಕತೆ ಇವರಿಗಿದೆ.

ಶುರುವಾದದ್ದು
ಯಾವುದೇ ಸಮುದಾಯದವರೇ ಆದರೂ ಅವರ ಅಂತ್ಯ ಸಂಸ್ಕಾರಕ್ಕೆ ಹೋಗುವುದು ಅಡಿವೆಪ್ಪ ಅವರಿಗೆ ರೂಢಿ. ಮೂರು ವರ್ಷಗಳ ಹಿಂದೆ ಕ್ರಿಶ್ಚಿಯನ್‌ ಸ್ನೇಹಿತರೊಬ್ಬರ ಅಂತ್ಯಸಂಸ್ಕಾರಕ್ಕೆ ಹೋಗಿದ್ದರು. ಅಲ್ಲಿ ಶವವನ್ನು ಹೂಳಲು ಒಂದಿಷ್ಟು ಜಾಗವಿರಲಿಲ್ಲ. ಎಲ್ಲಾ ಕಡೆ ಕಲ್ಲು-ಮುಳ್ಳು-ಕಸ ಬೆಳೆದಿತ್ತು. ಶವ ಹೂಳಲು ಜಾಗಕ್ಕಾಗಿ ಪರದಾಡುವುದನ್ನು ನೋಡಿ ಅಡಿವೆಪ್ಪನವರ ಮನಸ್ಸು ಹಿಂಡಿದಂತಾಯಿತು. ಅಂತಿಮವಾಗಿ ಒಂದು ಮೂಲೆಯಲ್ಲಿ ಶವವನ್ನು ಹೂತು ಸಮಾಧಿ ಮಾಡಿದರೂ, ಅವರ ಒದ್ದಾಟ ಇವರ ಮನಸ್ಸಲ್ಲಿ ನೆಲೆಯಾಯಿತು. ಈ ಘಟನೆ ಅಡಿವೆಪ್ಪರನ್ನು ಇನ್ನಿಲ್ಲದಂತೆ ಕಾಡಿತು. ಮನೆಗೆ ಬಂದವರೇ, ಸಮಾನ ಮನಸ್ಕರರೊಂದಿಗೆ ಸ್ಮಶಾನದ ವಿಚಾರ ಕುರಿತು ಚರ್ಚಿಸಿದರು. ಮರುದಿನ ಹತ್ತರಿಂದ-ಹದಿನೈದು ಜನರನ್ನು ಕಟ್ಟಿಕೊಂಡು ಆ ಕ್ರಿಶ್ಚಿಯನ್‌ ಸ್ಮಶಾನವನ್ನು ಸ್ವತ್ಛಗೊಳಿಸಿದರು. ಆ ಜಾಗದಲ್ಲಿ ತುಂಬು ಹುಲುಸಾಗಿ ಬೆಳೆದಿದ್ದ ಬಳ್ಳಾರಿ ಜಾಲಿ, ನಾಯಿಗಿಡ, ಪಾಥೆìನಿಯಂ ಗಿಡಗಳನ್ನು ಕಿತ್ತು ಹಾಕಿ ಸ್ವತ್ಛ ಮಾಡಿದರು. ಈ ಕೆಲಸದ ನಂತರ ಇವರ ಮನಸ್ಸಿಗೆ ಒಂದಿಷ್ಟು ಸಮಾಧಾನವಾಯಿತು. ಈ ಕೆಲಸದಲ್ಲಿ ಭಾಗಿಯಾದ ಸಮಾನ ಮನಸ್ಕರಿಗೆ, ಒಂದಿಷ್ಟು ಹಣವನ್ನು ತಮ್ಮ ಜೇಬಿನಿಂದ ಎತ್ತಿಟ್ಟರು. ಆನಂತರ ಶುರುವಾದದ್ದೇ ಕವಿರತ್ನ ಕಾಳಿದಾಸ ಸಂಘ. ಅದರಲ್ಲಿ ಗ್ರಾಮದ ನಾಗರಾಜ ಆನ್ವೇರಿ,ಮಾಲತೇಶ ಕುರಿಯವರ,ಮಂಜಪ್ಪ ಎಲಿ,ತಿಪ್ಪಣ್ಣ ಕುರಿಯವರ, ಶೇಖರಪ್ಪ ಹರಮಗಟ್ಟಿ,ಶೇಖಪ್ಪ ಕಾಟೇನಹಳ್ಳಿ,ಚಂದ್ರು ಬೇವಿನಮರದ, ನೀಲಕಂಠಪ್ಪ ಆಡೂರು ಮುಂತಾದವರು ಇದ್ದಾರೆ. ಇವರೆಲ್ಲ ಸೇರಿಕೊಂಡು, ವರ್ಷಕ್ಕೆ ಒಂದರಂತೆ ಸ್ಮಶಾನಗಳನ್ನು ಹುಡುಕಿ ಶುಚಿ ಮಾಡುತ್ತಾ ಬರುತ್ತಿದ್ದಾರೆ.

ಸಹೋದರತ್ವ-ಭಾತೃತ್ವ-ಸಮನ್ವಯತೆ ಮರೆಯಾಗಿರುವ ಈ ಕಾಲಘಟ್ಟದಲ್ಲಿ, ಮುಸ್ಲಿಂ ಸಮುದಾಯಯದ ಖಬರಸ್ಥಾನವನ್ನು ಸ್ವತ್ಛಗೊಳಿಸುವ ಕಾರ್ಯವನ್ನೂ ಈ ತಂಡ ಮಾಡಿದೆ. ಗೋರಿಯ ಸುತ್ತ-ಮುತ್ತ ಬೆಳೆದಿರುವ ಜಾಲಿಮುಳ್ಳು,ಪಾರ್ಥೇನಿಯಂ ಇನ್ನಿತರ ಕಸವನ್ನು ಸ್ವತ್ಛಗೊಳಿಸಿ,ಆ ಸ್ಥಳವನ್ನು ಹಸನ ಮಾಡಿ ಬಂದಿದ್ದಾರೆ. ಇವರ ಸೇವೆ ಪರಿಸರಕ್ಕೂ ವ್ಯಾಪಿಸಿದೆ. ಮೋಟೆ ಬೆನ್ನೂರಿನಲ್ಲಿ ಹಾದು ಹೋಗಿರುವ ಗಜೇಂದ್ರಗಡ ಮತ್ತು ಸೊರಬ ರಸ್ತೆಯ ರಸ್ತೆ ವಿಭಜಕದಲ್ಲಿ ಬೆಳೆದು ನಿಂತಿದ್ದ ಹುಲ್ಲು ಕಸಕಡ್ಡಿಗಳನ್ನು ತಮ್ಮ ಸ್ವಂತ ಹಣದಲ್ಲಿ ಸ್ವತ್ಛಗೊಳಿಸಿದ್ದಾರೆ. ಅಲ್ಲದೆ, ಸರಕಾರಿ ಶಾಲೆಗಳ ಬಗೆಗೆ ಬಹಳಷ್ಟು ಅಭಿಮಾನ ಹೊಂದಿರುವ ಇವರು, ಮೋಟೆಬೆನ್ನೂರಿನ ಸರಕಾರಿ ಹೆಣ್ಣುಮಕ್ಕಳ ಶಾಲೆ, ಕನ್ನಡ ಗಂಡು ಮಕ್ಕಳ ಶಾಲೆ,ಮೈಲಾರ ಮಹದೇವಪ್ಪ ಪ್ರೌಢಶಾಲೆ ಮತ್ತು ಹುತಾತ್ಮ ಮೈಲಾರ ಮಹದೇವಪ್ಪ ಮತ್ತು ಖ್ಯಾತ ಸಾಹಿತಿ ಮಹದೇವರವರ ಸ್ಮಾರಕ ನಿರ್ಮಾಣಕ್ಕೆಲ್ಲಾ ತಮ್ಮ ಸಂಘದಿಂದ ಹಣ ನೀಡಿ, ಬಲಗೈಗೆ ಕೊಟ್ಟಿದ್ದು ಎಡಗೈಗೆ ಗೊತ್ತಾಗಬಾರದು ಅನ್ನೋ ರೀತಿ ಇದ್ದಾರೆ.

ಮಲ್ಲಪ್ಪ . ಫ‌ ಕರೇಣ್ಣನವರ

ಟಾಪ್ ನ್ಯೂಸ್

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

ಗದಗ: ತೋಟದಾರ್ಯ ಮಠ ಅನ್ನ-ಅಕ್ಷರ ದಾಸೋಹಕ್ಕೆ ಪ್ರಸಿದ್ಧ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

ಚನ್ನಮ್ಮನ ಕಿತ್ತೂರು: ಮಹಾನ್‌ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ

ಚನ್ನಮ್ಮನ ಕಿತ್ತೂರು: ಮಹಾನ್‌ ಯೋಗಿಗಳು-ಸೂಫಿ ಸಂತರ ನಾಡಿದು- ಶಿಲೇದಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.