ದಡ ದಾಟಿಸಿದ ಆ ಇಪ್ಪತ್ತು ರೂಪಾಯಿ!
ಮೂರೇ ನಿಮಿಷದ ಮನುಷ್ಯ!
Team Udayavani, Apr 9, 2019, 6:30 AM IST
ಅಂದು ಬಳ್ಳಾರಿಯಿಂದ ತುಮಕೂರಿಗೆ ಪ್ರಯಾಣ ಬೆಳೆಸಿದ್ದೆ. ರಾತ್ರಿ 8 ಗಂಟೆಗೆ, ತುಮಕೂರಿನ ಹೈವೇಯಲ್ಲಿ ಬಸ್ಸಿನಿಂದ ಇಳಿದೆ. ಕೂಡಲೇ ನನ್ನ ಗೆಳೆಯ ರಾಮುಗೆ ಫೋನ್ ಮಾಡಿದೆ… “ಬಸ್ ಇಳಿದಿದ್ದೀನಿ. ಇಲ್ಲಿಗೆ ಬೈಕ್ ತಗೊಂಡು ಬಾರೋ’ ಅಂದೆ. ಪಾಪ, ಅವನು ಹೊರಟ. ಆದರೆ, ಹತ್ತೇ ನಿಮಿಷದಲ್ಲಿ ವಾಪಸು ಕರೆ ಮಾಡಿದ್ದ… “ಇಲ್ಲಾ ಮಚ್ಚಾ… ಇಲ್ಲಿ ಪೋಲಿಸರು ಇದ್ದಾರೆ. ಇನ್ನೊಂದು ಹೆಲ್ಮೆಟ್ ತಂದಿಲ್ಲ. ಬೈಕ್ ಹಿಡಿಯಬಹುದು. ನೀನೇ ಬಸ್ಸ್ಟಾಂಡ್ಗೆ ಬಂದು ಬಿಡು’ ಅಂದ.
ನಾನು, “ಸರಿ’ ಅಂತೇಳಿ ಒಪ್ಪಿಕೊಂಡೆ. ಆದರೆ, ಪರ್ಸ್ ತೆಗೆದು ನೋಡ್ತೀನಿ, ಅದರಲ್ಲಿ ದುಡ್ಡೇ ಇರಲಿಲ್ಲ. ನಡೆದೇ ಹೋಗೋದಾದ್ರೆ, ಐದಾರು ಕಿ.ಮೀ. ಆಗುತ್ತೆ. ತೂಕದ ಲಗ್ಗೇಜ್ ಬೇರೆ ಇದೆ. ಏನು ಮಾಡೋದು ಅಂತಲೇ ತೋಚಲಿಲ್ಲ. ಪಕ್ಕದಲ್ಲಿ, ನನ್ನೊಂದಿಗೆ ಬಸ್ ಇಳಿದಿದ್ದ ವ್ಯಕ್ತಿ ಕಾಣಿಸಿದರು. “ಸರ್, ಬೇಜಾರು ಮಾಡ್ಕೋಬೇಡಿ. ಒಂದಿಪ್ಪತ್ತು ರೂಪಾಯಿ ಇದ್ದರೆ ಕೊಡ್ತೀರಾ? ಬಸ್ಸ್ಟಾಂಡ್ಗೆ ಹೋಗೋಕೆ ದುಡ್ಡಿಲ್ಲ’ ಎಂದು, ನನ್ನ ಸಂಕಷ್ಟ ಹೇಳಿಕೊಂಡೆ. ಆ ಪುಣ್ಯಾತ್ಮ ಮರುಮಾತಾಡದೇ, ಆಟೋಗೆ ದುಡ್ಡು ಕೊಟ್ಟು ನನ್ನನ್ನು ಕಳುಹಿಸಿದರು. ಅಲ್ಲಿಯೇ ಅವರಿಗೊಂದು ಥ್ಯಾಂಕ್ಸ್ ಹೇಳಿ ಬಂದೆ.
— ಮೈಲಾರಿ ಸಿಂಧುವಾಳ, ತುಮಕೂರು
ಪರಿಚಿತ ಅಲ್ಲದ ಒಬ್ಬ ವ್ಯಕ್ತಿ, ನಿಮ್ಮ ಬದುಕಿನೊಳಗೆ ಒಂದು ಕ್ಷಣದ ಮಟ್ಟಿಗೆ, ಕೆಲ ನಿಮಿಷಗಳ ಮಟ್ಟಿಗೆ ಪ್ರವೇಶ ಕೊಟ್ಟಿದ್ದರೆ, ಅಂಥ ಅತಿಥಿ ಪಾತ್ರದ ಬಗ್ಗೆ ನಮಗೆ 60 ಪದಗಳಲ್ಲಿ ಬರೆದು ಕಳುಹಿಸಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್
Davanagere; ಪ್ರಧಾನಿ ಮೋದಿ ರ್ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಮಿಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ