ಬಂಡೆಗೆ ಭೀಮನ ಗದಾ ಪ್ರಹಾರ
Team Udayavani, Oct 5, 2019, 3:04 AM IST
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಒಂದು ಆಕರ್ಷಕ ತಾಣ. ರಾಮಾಯಣದ ಕಾಲದ ನಂಟಿರುವ ಈ ಬೆಟ್ಟದ ತಪ್ಪಲಿನಲ್ಲಿ, ಪಾಂಡವರು ವಾಸವಿದ್ದರು ಎನ್ನುವುದು ಊರಿನವರ ನಂಬಿಕೆ. ಒಮ್ಮೆ ಭೀಮ, ಹೊಲದಲ್ಲಿ ಉಳುಮೆ ಮಾಡುತ್ತಿದ್ದನಂತೆ. ಮೊದಲೇ ಭೀಮನಿಗೆ ಹಸಿವು. ಕುಂತಿಯು ಮಗನಿಗೆ, ದೊಡ್ಡ ದೊಡ್ಡ ಬುತ್ತಿಗಳಲ್ಲಿ ಊಟ ಕಟ್ಟಿಕೊಂಡು, ಹೊಲದತ್ತ ಹೊರಟಳು.
ದಾರಿಯಲ್ಲಿ ಆಕೆಗೆ ಬೃಹತ್ ಬಂಡೆ ಎದುರಾಯಿತು. ಕುಂತಿಗೆ ದಾರಿ ತೋಚದೆ, ಭೀಮನನ್ನು ಗಟ್ಟಿಯಾಗಿ ಕೂಗಿದಳಂತೆ. ಆಗ ಭೀಮ ಬಂದು, ತನ್ನ ಗದೆಯಿಂದ ಬಂಡೆಗೆ ಪ್ರಹಾರ ಮಾಡಿದ. ಬಂಡೆಯು ಕಮಾನಿನ ರೂಪ ಪಡೆದಾಗ, ಕುಂತಿಗೆ ಹಾದಿ ಸುಗಮವಾಯಿತು. ಆ ಕಾರಣ ಇಲ್ಲಿಗೆ “ಭೀಮನ ಬೆಟ್ಟ’ ಎಂಬ ಹೆಸರು ಬಂತು. ಈ ಬಂಡೆ 200 ಅಡಿ ಉದ್ದ, 150 ಅಡಿ ಅಗಲ ಮತ್ತು 70 ಅಡಿ ಎತ್ತರವಿದೆ.
* ಮಂಡ್ಯ ಮಂಜುನಾಥ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
BCCI: ಇಶಾನ್, ಅಯ್ಯರ್ ಗುತ್ತಿಗೆ ರದ್ದು ಮಾಡುವುದು ನನ್ನ ನಿರ್ಧಾರವಾಗಿರಲಿಲ್ಲ ಎಂದ ಜಯ್ ಶಾ
Sandalwood; ಎವಿಡೆನ್ಸ್ ಮೇಲೆ ಪ್ರವೀಣ್ ಕಾನ್ಫಿಡೆನ್
MASOCON: ಕೆಎಂಸಿಯಲ್ಲಿ ಮಣಿಪಾಲ್ ಸರ್ಜಿಕಲ್ ಆಂಕೊಲಾಜಿ ಕಾನ್ಫರೆನ್ಸ್ 2024
Arunagiri ರಥೋತ್ಸವದಲ್ಲಿ ಕಳ್ಳರ ಕೈಚಳಕ: ಐದು ಪವನ್ ತೂಕದ ಮಾಂಗಲ್ಯ ಸರ ಅಪಹರಣ
Head Coach: ಟೀಂ ಇಂಡಿಯಾಗೆ ಹೊಸ ಕೋಚ್; ಹುಡುಕಾಟ ಆರಂಭಿಸಿದ ಬಿಸಿಸಿಐ