ಕಲಾ ಚತುರೆ ಗಾಯಿತ್ರಿ ನಾಯಕ


Team Udayavani, Feb 26, 2020, 4:24 AM IST

cha-1

ನೂರು ಪದಗಳಲ್ಲಿ ಹೇಳುವುದನ್ನು ಒಂದು ಚಿತ್ರ ಅಥವಾ ಶಿಲ್ಪದ ಮೂಲಕ ಹೇಳಿ ಬಿಡಬಹುದು. ಅದು ಕಲೆಗೆ ಇರುವ ತಾಕತ್ತು. ಕಲಾವಿದನಿಗೆ ಇರುವ ಜವಾಬ್ದಾರಿ ಕೂಡಾ ಹೌದು. ಆ ಬಗೆಯ ಕಲಾಪ್ರಜ್ಞೆಯನ್ನು ಬೆಳೆಸಿಕೊಂಡು, ಸಾಮಾಜಿಕ ಕಳಕಳಿಯ ಶಿಲ್ಪಗಳನ್ನು ರಚಿಸುವಲ್ಲಿ ಗಾಯಿತ್ರಿ ಜಗದೀಶ ನಾಯಕರದ್ದು ಎತ್ತಿದ ಕೈ.

ಉಡುಪಿಯ ಕಟಪಾಡಿಯವರಾದ ಗಾಯಿತ್ರಿ, ಬಾಲ್ಯದಲ್ಲಿಯೇ ಕಲೆಯ ಆಕರ್ಷಣೆಗೆ ಒಳಗಾದವರು. ಬಿ.ಕಾಂ. ಪದವಿಯ ನಂತರ, ಹವ್ಯಾಸವಾಗಿ ಕಲೆಯನ್ನು ರೂಢಿಸಿಕೊಂಡರು. ನಂತರ, ಕಲಾವಿದ ರಮೇಶ್‌ರಾವ್‌, ಶೈಲೇಶ್‌ ಕೋಟ್ಯಾನ್‌ ಮತ್ತು ಪ್ರಸಿದ್ಧ ಕಲಾವಿದ ವೆಂಕಿಪಲಿಮಾರ್‌ ಅವರ ಮಾಗದರ್ಶನದಲ್ಲಿ ಕಲಾ ಪರಿಣತಿ ಪಡೆದು, ಈಗ ಪೂರ್ಣಪ್ರಮಾಣದಲ್ಲಿ ಕಲೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಆವೆ ಮಣ್ಣಿನ ಕಲಾಕೃತಿ
ಸುತ್ತಲಿನ ಪರಿಸರ, ಅಲ್ಲಿನ ನಿರಂತರ ಬದಲಾವಣೆಗಳನ್ನೇ ತಮ್ಮ ಕಲೆಗೆ ಸ್ಫೂರ್ತಿಯಾಗಿಸಿಕೊಳ್ಳುವುದು ಗಾಯಿತ್ರಿ ಅವರಿಗೆ ಕರಗತ. ಕರಾವಳಿಯಲ್ಲಿ ಹೆಂಚು ತಯಾರಿಸಲು ಬಳಸುವ ಆವೆ ಮಣ್ಣಿನಿಂದ ವಿಭಿನ್ನ ಕಲಾಕೃತಿಗಳನ್ನು ರಚಿಸುವಲ್ಲಿ ಇವರು ಪರಿಣತಿ ಪಡೆದಿದ್ದಾರೆ. ಮರಗಳನ್ನು ರಕ್ಷಿಸಿ, ನಿಸರ್ಗವನ್ನು ಹಾಳು ಮಾಡಬೇಡಿ, ಪ್ರಾಣಿ-ಪಕ್ಷಿಗಳಿಗೆ ಬದುಕಲು ಬಿಡಿ ಎಂಬಿತ್ಯಾದಿ ಸಂದೇಶ ಸಾರುವ ಅನೇಕ ಶಿಲ್ಪಗಳನ್ನು ರಚಿಸಿದ್ದಾರೆ. ಜೊತೆಗೆ, ಮುಖದಲ್ಲಿ ಭಾವನೆಗಳನ್ನು ವ್ಯಕ್ತಪಡಿಸುವಷ್ಟು ನೈಜವಾದ ಮಣ್ಣಿನ ಶಿಲ್ಪಗಳು, ಕಲಾಸಕ್ತರನ್ನು ಆಕರ್ಷಿಸಿವೆ. ಮನೆ, ಮಕ್ಕಳು, ತಾಯಿ, ಹುಡುಗಿ ಹೀಗೆ ಕುಟುಂಬ ವ್ಯವಸ್ಥೆಯನ್ನು ಬಿಂಬಿಸುವ ಶಿಲ್ಪಗಳು… ಕಲಾವಿದೆಯ ಕೈಚಳಕದಲ್ಲಿ ಜೀವ ಪಡೆದಿವೆ.

“ನಮ್ಮಿಂದ ಬೇರೆ ಬೇರೆ ರೀತಿಯಲ್ಲಿ ಪ್ರಕೃತಿ ನಾಶವಾಗುತ್ತಿದೆ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಲು, ಕಲೆ ಒಂದು ಪರಿಣಾಮಕಾರಿ ಮಾಧ್ಯಮ ಅನ್ನಿಸಿತು. ಹಾಗಾಗಿ ನಾನು ಶಿಲ್ಪಗಳ ಮೂಲಕ ಜನರಲ್ಲಿ ಆ ಕುರಿತು ಜಾಗೃತಿ ಮೂಡಿಸುವ ಆಶಯ ಹೊಂದಿದ್ದೇನೆ. ಮನುಷ್ಯನಿಂದಾಗಿ ಪ್ರಕೃತಿಯ ಅಳಿವು ಹೇಗೆ ಆಗುತ್ತದೆ. ಅದನ್ನು ಹೇಗೆ ಉಳಿಸಬಹುದು ಎಂಬ ಸಂದೇಶ ಸಾರುವ ಶಿಲ್ಪಗಳನ್ನು ರಚಿಸಿದ್ದೇನೆ. ‘
-ಗಾಯತ್ರಿ ನಾಯಕ

-ಬಳಕೂರು ವಿ.ಎಸ್‌ ನಾಯಕ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.