ಬೇಗಂ ಜಾನ್‌ ಗೌಹರ್‌ ಖಾನ್‌


Team Udayavani, Apr 28, 2017, 3:45 AM IST

Gauhar-Khan.jpg

ಐಟಮ್‌ ಡ್ಯಾನ್ಸ್‌ , ಪೋಷಕ ಪಾತ್ರ, ಕಿರುತೆರೆ, ರಿಯಾಲಿಟಿ ಶೋ, ಮೋಡೆಲಿಂಗ್‌ ಹೀಗೆ ಎಲ್ಲದಕ್ಕೂ ಸೈ ಎನ್ನುವ ನಟಿಯೊಬ್ಬಳಿದ್ದರೆ ಅವಳು ಗೌಹರ್‌ ಖಾನ್‌. ಹದಿನಾಲ್ಕು ವರ್ಷಗಳ ಹಿಂದೆಯೇ ಗೌಹಾರ್‌ ಚಿಕ್ಕ ಪಾತ್ರವೊಂದರ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟಳು. ಇದಾಗ ಬಳಿಕ ಕಿರುತೆರೆಗೆ ಹೋಗಿ ಹಲವು ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಯಾಗಿ, ಆ್ಯಂಕರ್‌ ಆಗಿ ಕಾಣಿಸಿಕೊಂಡಳು. ಬಿಚ್ಚಸ್‌ ಆ್ಯಂಡ್‌ ಮ್ಯೂಟಿ ಕ್ವೀನ್ಸ್‌, ಮೇಕಿಂಗ್‌ ಮಿಸ್‌ ಇಂಡಿಯಾ, ದ ಖಾನ ಸಿಸ್ಟರ್, ಖತ್ರೋಂ ಕಿ ಖೀಲಾಡಿ, ಇಂಡಿಯಾ ರಾ ಸ್ಟಾರ್‌, ಕಾಮೆಡಿ ನೈಟ್ಸ್‌ ವಿದ್‌ ಕಪಿಲ್‌ – ಹೀಗೆ ಹಲವು ರಿಯಾಲಿಟಿ ಶೋ ಮತ್ತು ಕಾಮೆಡಿ ಶೋಗಳಲ್ಲಿ ಭಾಗವಹಿಸಿದಳು. ಅವಳಿಗೆ ದೊಡ್ಡ ಮಟ್ಟದ ಹೆಸರು ತಂದುಕೊಟ್ಟದ್ದು ಬಿಗ್‌ಬಾಸ್‌ ರಿಯಾಲಿಟಿ ಶೋ. ಬಿಗ್‌ಬಾಸ್‌ 7ರ ವಿಜೇತೆ ಆಕೆ. ಅನಂತರ ಬಿಗ್‌ಬಾಸ್‌ 8 ಮತ್ತು 10ರಲ್ಲಿ ಅತಿಥಿಯಾಗಿ ಪಾಲ್ಗೊಂಡು ಮೆರೆದಳು. 

ಆನ್‌-ಮೆನ್‌ ಎಟ್‌ ವರ್ಕ್‌, ಶಂಕರ್‌ ದಾದಾ ಎಂ.ಬಿ.ಬಿಎಸ್‌., ಕ್ಯಾ ಕೂಲ್‌ ಹೈ ಹಮ್‌  ಮುಂತಾದ ಚಿತ್ರಗಳಲ್ಲಿ ಐಟಮ್‌ ಹಾಡುಗಳಿಗೆ ಕುಣಿದು ಪಡ್ಡೆ ಹುಡುಗರ ನಿದ್ದೆಕೆಡಿಸಿದಳು. ರಾಕೆಟ್‌ ಸಿಂಗ್‌ : ಸೇಲ್ಸ್‌ಮ್ಯಾನ್‌ ಆಫ್ ದ ಇಯರ್‌, ಒನ್ಸ್‌ ಅಪಾನ್‌ ಎ ಟೈಮ್‌ ಇನ್‌ ಮುಂಬಯಿ, ಗೇಮ್‌, ಇಶಕ್‌ಝಾದೆ, ಓ ಯಾರಾ ಲೂಟ್‌ ಗಯಾ, ಫೀವರ್‌, ಫ‌ುದ್ದು, ಬದ್ರಿನಾಥ್‌ ಕಾ ದುಲ್ಹನಿಯಾ ಮುಂತಾದ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಮತ್ತು ನಾಯಕಿಯಾಗಿ ನಟಿಸಿದಳು. ಹೀಗೆ ಎಲ್ಲ ರೀತಿಯ ಪಾತ್ರಗಳಲ್ಲಿ ಮಿಂಚಿದ ಗೌಹಾರ್‌ ಈಗ ಬೇಗಮ್‌ ಜಾನ್‌  ಚಿತ್ರದಿಂದ ಮತ್ತೆ ಸುದ್ದಿಯಲ್ಲಿದ್ದಾಳೆ.

ಇದರಲ್ಲಿ ಪೋಷಕಿ ನಟಿಯೇ ಆಗಿದ್ದರೂ ಗೌಹಾರ್‌ ಅಭಿನಯ ಗಮನ ಸೆಳೆದಿದೆ. ಪುಣೆಯ ಸಂಪ್ರದಾಯಸ್ಥ ಕುಟುಂಬದಲ್ಲಿ ಜನಿಸಿದ ಗೌಹಾರ್‌ ಖಾನ್‌ ಚಿತ್ರರಂಗಕ್ಕೆ ಬಂದಿರುವುದು ಆಕಸ್ಮಿಕವಾಗಿ. ಅವಳ ಅಕ್ಕ ನಿಗಾರ್‌ ಖಾನ್‌ ಮೊದಲೇ ಚಿತ್ರರಂಗದಲ್ಲಿದ್ದರೂ ನಟಿಯಾಗಿ ದೊಡ್ಡ ಯಶಸ್ಸು ಕಂಡಿರಲಿಲ್ಲ. ಹೀಗಾಗಿ ಕಿರಿಯ ಮಗಳಾದ ಗೌಹಾರ್‌ ಸಿನೆಮಾಗಳಲ್ಲಿ ನಟಿಸುವುದು ಮನೆಯವರಿಗೆ ಇಷ್ಟವಿರಲಿಲ್ಲವಂತೆ. ಆದರೆ ಕುತೂಹಲಕ್ಕಾಗಿ ಮಾಡಿದ ಮಾಡೆಲಿಂಗ್‌ ಅವಳನ್ನು ಈ ಮಾಯಾಲೋಕಕ್ಕೆ ಕರೆತಂದಿತು. ಒಂದರ ಹಿಂದೆ ಇನ್ನೊಂದರಂತೆ ಅವಕಾಶಗಳು ಸಿಕ್ಕಿದ ಕಾರಣ ಮರಳಿ ಹೋಗುವ ಯೋಚನೆಯನ್ನೇ ಮಾಡಲಿಲ್ಲ. ಅಕ್ಕನಿಗೆ ಮರೀಚಿಕೆಯಾದ ಯಶಸ್ಸು ತನಗೆ ಸಿಕ್ಕಿದ ಹೆಮ್ಮೆಯಲ್ಲಿದ್ದಾಳೆ ಗೌಹಾರ್‌ ಖಾನ್‌.

ಟಾಪ್ ನ್ಯೂಸ್

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.