ತೀರ್ಪಿನ ಬಗ್ಗೆ ಅಸಮಾಧಾನವಿದೆ, ನಾವು ಸುಪ್ರೀಂ ಕೋರ್ಟ್ ಗೆ ಹೋಗುತ್ತೇವೆ: ಸಿ.ಎಂ.ಇಬ್ರಾಹಿಂ
Team Udayavani, Mar 15, 2022, 12:09 PM IST
ಬೆಂಗಳೂರು: ಹಿಜಾಬ್ ವಿವಾದ ಕುರಿತಾಗಿ ಹೈಕೋರ್ಟ್ ತೀರ್ಪು ಬಂದಿದೆ. ಆದರೆ ತೀರ್ಪಿನ ಬಗ್ಗೆ ನಮಗೆ ಅಸಮಾಧಾನವಿದೆ. ಅದಕ್ಕೆ ನಾವು ಸುಪ್ರೀಂ ಕೋರ್ಟ್ ಮೊರೆ ಹೋಗುತ್ತೇವೆ ಎಂದು ವಿಧಾನಪರಿಷತ್ ಸದಸ್ಯ ಸಿ.ಎಂ.ಇಬ್ರಾಹಿಂ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ತೀರ್ಪನ್ನು ಧರ್ಮದ ದೃಷ್ಟಿಯಿಂದ ನೋಡಬಾರದು. ಸಂವಿಧಾನದ ದೃಷ್ಠಿಯಿಂದ ನೋಡಬೇಕು. ತೀರ್ಪಿನಿಂದ ಬೀದಿಗಿಳಿಯಬೇಕಾದ ಅವಶ್ಯಕತೆಯಿಲ್ಲ. ನ್ಯಾಯಾಂಗದ ಮೇಲೆ ನಮಗೆ ವಿಶ್ವಾಸವಿದೆ. ಸುಪ್ರೀಂಗೆ ಹೋಗುವುದಕ್ಕೆ ಅವಕಾಶವಿದೆ ಎಂದರು.
ನಾಳೆ ನೀವು ವಿಭೂತಿ ಹಾಕಬಾರದು ಎನ್ನುತ್ತೀರ. ನನಗೆ ಹಾಕಬೇಕೆಂದು ಇಷ್ಟವಿದೆ ನನ್ನನ್ನ ತಡೆಯಲು ನಿಮಗೆ ಹೇಗೆ ಸಾಧ್ಯ? ಇದರ ಬಗ್ಗೆ ಸುಪ್ರೀಂ ಕೋರ್ಟ್ ನಲ್ಲಿ ಚಾಲೆಂಜ್ ಆಗಬೇಕಿದೆ. ಲಾಯರ್ ಮಜೀದ್ ಮೆಮನ್ ಜೊತೆಯೂ ನಾನು ಚರ್ಚೆ ಮಾಡಿದ್ದೇನೆ. ಒಗ್ಗಟ್ಟಾಗಿ ಸುಪ್ರೀಂಗೆ ಹೋಗಲು ಪ್ರಯತ್ನ ಮಾಡುತ್ತಿದ್ದೇವೆ. ರಾಜ್ಯದಲ್ಲಿ ಶಾಂತಿ ಕಾಪಾಡುವುದಕ್ಕೆ ನೋಡುತ್ತಿದ್ದೇವೆ ಎಂದು ಇಬ್ರಾಹಿಂ ಹೇಳಿದರು.
ಇದನ್ನೂ ಓದಿ:ಹಿಜಾಬ್ ಕುರಿತಾಗಿ ‘ಹೈ’ ತೀರ್ಪು: ಮಹತ್ತರ ತೀರ್ಪಿನಲ್ಲಿ ಹೈಕೋರ್ಟ್ ಉಲ್ಲೇಖಿಸಿದ ಅಂಶಗಳೇನು?
ಇದು ಇಲ್ಲಿಗೆ ನಿಲ್ಲುವುದಿಲ್ಲ. ನಾಳೆ ಜೀನ್ಸ್ ಸೇರಿದಂತೆ ಬೇರೆ ಉಡುಪಿನ ಬಗ್ಗೆ ಚರ್ಚೆಯಾಗಬಹುದು. ಹಿಂದೂಗಳು ಸೆರಗನ್ನು ಮೈಮೇಲೆ ಹಾಕುತ್ತಾರೆ. ಮುಸ್ಲಿಂ ಹೆಣ್ಣುಮಕ್ಕಳು ತಲೆಮೇಲೆ ಹಾಕುತ್ತಾರೆ. ಹಾಗಾದರೆ ತಾಯಂದಿರು ಸೆರಗು ಹಾಕುವುದು ತಪ್ಪೇ ಎಂದು ಪ್ರಶ್ನಿಸಿದರು.
ಸಮುದಾಯದ ಟಾರ್ಗೆಟ್: ತನ್ವೀರ್ ಸೇಠ್
ಹಿಜಾಬ್ ಬಗ್ಗೆ ನ್ಯಾಯಾಲಯ ತೀರ್ಪು ಕೊಟ್ಟಿದೆ. ಇದನ್ನು ಪ್ರಶ್ನಿಸಿ ನಾವು ಸುಪ್ರೀಂಗೆ ಹೋಗುತ್ತೇವೆ. ದೇಶವನ್ನ ಪ್ರಗತಿಪರವಾಗಿ ಕಟ್ಟಬೇಕು. ದೇಶದ ಐಕ್ಯತೆಗೆ ಇವತ್ತು ಧಕ್ಕೆ ಬಂದಿದೆ. ಇದರಲ್ಲಿ ಯಾವುದೇ ರಾಜಕೀಯವಿಲ್ಲ. ನಾವು ಸುಪ್ರೀಂಕೋರ್ಟ್ ಗೆ ಹೋಗುತ್ತೇವೆ. ಮತಾಂತರ ನಿಷೇಧ ಕಾಯ್ದೆ ಸೇರಿದಂತೆ ಒಂದು ಸಮುದಾಯವನ್ನು ಟಾರ್ಗೆಟ್ ಮಾಡುವ ಕೆಲಸವಾಗುತ್ತಿದೆ ಎಂದು ಮಾಜಿ ಸಚಿವ ತನ್ವೀರ್ ಸೇಠ್ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದುಬಾರಿ ದರಕ್ಕೆ ವಿದ್ಯುತ್ ಖರೀದಿ; ಅಗ್ಗದ ದರಕ್ಕೆ ಮಾರಾಟ; 10 ರೂ.ಗೆ ಖರೀದಿ,3 ರೂ.ಗೆ ಮಾರಾಟ
Hassan ಕ್ಯಾನ್ಸರ್ ಸೋಲಿಸಿ ಮಿಸ್ ಇಂಡಿಯಾ ಸ್ಪರ್ಧೆ ಗೆದ್ದ ಪಲ್ಲವಿ ಭೂಷಣ್
Karnataka Legislative Council; ಕಾಂಗ್ರೆಸ್ ಅಭ್ಯರ್ಥಿ 2 ದಿನದಲ್ಲಿ ಅಂತಿಮ?
ಇನ್ನೂ ಬಾರದ ಪ್ರಜ್ವಲ್ ನಡೆ ನಿಗೂಢ; ಸಂತ್ರಸ್ತೆಯರ ಹೇಳಿಕೆ ದಾಖಲಿಸಿ ಎಸ್ಐಟಿ ತನಿಖೆ
ಇಂದು ರಾಜ್ಯಕ್ಕೆ ಉಪರಾಷ್ಟ್ರಪತಿ ಜಗದೀಪ್ ಧನಕರ್ ಭೇಟಿ
MUST WATCH
ಹೊಸ ಸೇರ್ಪಡೆ
Hit & Run: ರಸ್ತೆ ದಾಟುತ್ತಿದ್ದ ವೇಳೆ ಕಾರು ಢಿಕ್ಕಿ; ಗಾಳಿಯಲ್ಲಿ ಹಾರಿದ ವೃದ್ಧ
IT Raid: ನಾಸಿಕ್ನ ಸುರಾನಾ ಜ್ಯುವೆಲ್ಲರ್ಸ್ ಮೇಲೆ ಐಟಿ ದಾಳಿ, 26 ಕೋಟಿ ಮೌಲ್ಯದ ನಗದು ವಶ
Rajasthan: ರೀಲ್ಸ್ ಚಿತ್ರೀಕರಣದ ವೇಳೆ 150 ಅಡಿಯಿಂದ ನೀರಿಗೆ ಹಾರಿ ಪ್ರಾಣ ಕಳೆದುಕೊಂಡ ಯುವಕ
ಪ್ಲಾಸ್ಟಿಕ್ಗೆ ಪರ್ಯಾಯವಾಗಬಲ್ಲ ಮೆಕ್ಕೆಜೋಳ, ಸಬ್ಬಕ್ಕಿಯ ಕ್ಯಾರಿಬ್ಯಾಗ್!
ಮಳೆಗಾಲಕ್ಕೆ ಸಜ್ಜುಗೊಂಡಿಲ್ಲ ನಾಗೋಡಿ ಘಾಟಿ