ಟೆರರ್ ಚಿತ್ರದಲ್ಲಿ ಶ್ರೀನಗರ ಕಿಟ್ಟಿ
Team Udayavani, May 6, 2023, 2:12 PM IST
ನಟ ಆದಿತ್ಯ ಅಭಿನಯದ “ಟೆರರ್’ ಸಿನಿಮಾದ ಕೆಲಸಗಳು ಭರದಿಂದ ನಡೆಯುತ್ತಿದೆ. ಈಗಾಗಲೇ ಸದ್ದಿಲ್ಲದೆ ಸಿನಿಮಾದ ಶೇಕಡ 30ರಷ್ಟು ಚಿತ್ರೀಕರಣ ಪೂರ್ಣಗೊಳಿಸಿರುವ ಚಿತ್ರತಂಡ, ಇತ್ತೀಚೆಗೆ “ಟೆರರ್’ ಸಿನಿಮಾದ ಮೊದಲ ಟೀಸರ್ ಅನ್ನು ಬಿಡುಗಡೆ ಮಾಡಿದೆ.
ಇನ್ನೊಂದು ವಿಶೇಷವೆಂದರೆ, “ಟೆರರ್’ ಸಿನಿಮಾದಲ್ಲಿ ನಟ ಆದಿತ್ಯ ಅವರೊಂದಿಗೆ ನಟ ಶ್ರೀನಗರ ಕಿಟ್ಟಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇನ್ನು ಆದಿತ್ಯ ಮತ್ತು ಶ್ರೀನಗರ ಕಿಟ್ಟಿ ಒಂದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿರುವುದರ ಬಗ್ಗೆ ಮಾತನಾಡುವ “ಟೆರರ್’ ಸಿನಿಮಾದ ನಿರ್ಮಾಪಕ ಸಿಲ್ಕ್ ಮಂಜು, “ಸುಮಾರು 20 ವರ್ಷಗಳ ಹಿಂದೆಯೇ “ಕಂಠಿ’ ಸಿನಿಮಾದ ನಿರ್ದೇಶಕ ಭರತ್ ಅವರ ನಿರ್ದೇಶನದಲ್ಲಿ ಆದಿತ್ಯ ಮತ್ತು ಶ್ರೀನಗರ ಕಿಟ್ಟಿ ಅವರೊಂದಿಗೆ ಒಟ್ಟಿಗೆ ಸಿನಿಮಾ ಮಾಡುವ ಯೋಜನೆ ಹಾಕಿಕೊಂಡಿದ್ದೆವು. ಈ ಸಿನಿಮಾಕ್ಕೆ ಒಂದಷ್ಟು ತಯಾರಿ ಕೂಡ ನಡೆದಿತ್ತು. ಆದರೆ ಕಾರಣಾಂತರಗಳಿಂದ ಆ ಸಿನಿಮಾ ಮುಂದುವರೆಯಲಿಲ್ಲ. ಈಗ ಮತ್ತೂಮ್ಮೆ ಆದಿತ್ಯ ಮತ್ತು ಶ್ರೀನಗರ ಕಿಟ್ಟಿ ಇಬ್ಬರನ್ನೂ ಒಂದೇ ಸಿನಿಮಾದಲ್ಲಿರುವಂತೆ ಮಾಡುವ ಅವಕಾಶ ಬಂದಿದೆ.
“ಟೆರರ್’ ಸಿನಿಮಾದಲ್ಲಿ ಆದಿತ್ಯ ನಾಯಕನಾಗಿ ಕಾಣಿಸಿಕೊಂಡರೆ, ಶ್ರೀನಗರ ಕಿಟ್ಟಿ ಅಂಥದ್ದೇ ಮತ್ತೂಂದು ಪವರ್ಫುಲ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ’ ಎಂದು ಮಾಹಿತಿ ನೀಡಿದರು. ಸುಮಾರು ಆರು ವರ್ಷಗಳ ಬಳಿಕ ಶ್ರೀನಗರ ಕಿಟ್ಟಿ “ಗೌಳಿ’ ಸಿನಿಮಾದ ಮೂಲಕ ರೀ-ಎಂಟ್ರಿ ಪಡೆದುಕೊಂಡಿದ್ದರು. ಅದಾದ ಬಳಿಕ ಕೆಲ ತಿಂಗಳ ಹಿಂದಷ್ಟೇ ಬಿಡುಗಡೆಯಾಗಿದ್ದ ನಟ ಪ್ರಜ್ವಲ್ ದೇವರಾಜ್ ಅಭಿನಯದ “ವೀರಂ’ ಸಿನಿಮಾದಲ್ಲಿ ನಾಯಕನ ಅಣ್ಣನ ಪಾತ್ರದಲ್ಲಿ ಶ್ರೀನಗರ ಕಿಟ್ಟಿ ಕಾಣಿಸಿಕೊಂಡಿದ್ದರು.
ಅದಾದ ಬಳಿಕ ಈಗ “ಟೆರರ್’ ಸಿನಿಮಾದಲ್ಲಿ ಶ್ರೀನಗರ ಕಿಟ್ಟಿ ಮತ್ತೂಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದು, ಪಾತ್ರದ ಬಗ್ಗೆ ಚಿತ್ರತಂಡ ಹೆಚ್ಚಿನ ಗುಟ್ಟು ಬಿಟ್ಟುಕೊಟ್ಟಿಲ್ಲ. ಎಲ್ಲ ಅಂದುಕೊಂಡಂತೆ ನಡೆದರೆ, ಇದೇ ಆಗಸ್ಟ್ ವೇಳೆಗೆ “ಟೆರರ್’ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿತ್ತು, ಶ್ರೀನಗರ ಕಿಟ್ಟಿ ಹೊಸ ಗೆಟಪ್ ಹೇಗಿರಲಿದೆ ಎಂಬುದು ಆ ವೇಳೆಗೆ ಗೊತ್ತಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿನೆಮಾ ತಾರೆಯರಿಗೆ ಒತ್ತಡ ಹೇರಬೇಡಿ: ರವಿಚಂದ್ರನ್
Kannada Cinema; ನೆರಳಿಲ್ಲದ ದಾರಿಯಲ್ಲಿ ‘ನಸಾಬ್’
Martin: ಬಂತು ಸ್ಟಾರ್ ಸಿನಿಮಾ; ಧ್ರುವ ಸರ್ಜಾ ಚಿತ್ರ ಬಿಡುಗಡೆ ದಿನಾಂಕ ಘೋಷಿಸಿದ ತಂಡ
Cannes 2024: ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿ ಪಡೆದ ಮೈಸೂರಿನ ಚಿದಾನಂದ ಎಸ್ ನಾಯಕ್
Sandalwood; 2ಘಟನೆ ಒಂದೇಪರಿಣಾಮ: ಇವರು ಗೆದ್ದು ಸೋತವರಾ? ಸೋತು ಗೆದ್ದವರಾ? ನೀವೇ ನಿರ್ಧರಿಸಿ
MUST WATCH
ಹೊಸ ಸೇರ್ಪಡೆ
INDIA bloc ವಿಪಕ್ಷಗಳ ಕೂಟದ ಪ್ರಧಾನಿ ಅಭ್ಯರ್ಥಿ ಯಾರು? ಉತ್ತರ ನೀಡಿದ ಮಲ್ಲಿಕಾರ್ಜುನ ಖರ್ಗೆ
Udupi Gangwar; ಮತ್ತೆ ಮೂವರನ್ನು ಬಂಧಿಸಿದ ಪೊಲೀಸರು
Hunsur: ಉತ್ತಮ ಮಳೆ; ಲಕ್ಷ್ಮಣತೀರ್ಥ ನದಿ ಒಳ ಹರಿವು ಹೆಚ್ಚಳ
ʼಡ್ಯಾನ್ಸ್ ದಿವಾನೆ -4ʼ ಟ್ರೋಫಿ ಗೆದ್ದ ಬೆಂಗಳೂರು ಮೂಲದ ನಿತಿನ್; ಸಾಥ್ ಕೊಟ್ಟ ಗೌರವ್
Sakleshpura: ಕಾಡಾನೆ ದಾಳಿ; ಕೂಲಿ ಕಾರ್ಮಿಕ ವೃದ್ದೆಗೆ ಗಾಯ