Udupi; ಭಾರತ, ಸನಾತನ ಧರ್ಮ ಉಳಿವಿಗಾಗಿ ಬಿಜೆಪಿ ಗೆಲ್ಲಿಸಿ: ಬಸನಗೌಡ ಯತ್ನಾಳ್‌

ಉಡುಪಿ- ಚಿಕ್ಕಮಗಳೂರಿಗೆ ಕೋಟ, ದಕ್ಷಿಣ ಕನ್ನಡಕ್ಕೆ ಚೌಟ ಹಾಗೂ ಕಾಂಗ್ರೆಸ್‌ಗೆ ಗೂಟ

Team Udayavani, Apr 4, 2024, 1:29 AM IST

Udupi;  ಭಾರತ, ಸನಾತನ ಧರ್ಮ ಉಳಿವಿಗಾಗಿ ಬಿಜೆಪಿ ಗೆಲ್ಲಿಸಿ: ಬಸನಗೌಡ ಯತ್ನಾಳ್‌

ಉಡುಪಿ: ಕಾಂಗ್ರೆಸ್‌ ಹಿಂದೂ ವಿರೋಧ ಸಿದ್ಧಾಂತ ಅನುಸರಿಸಿಕೊಂಡು ಬರುತ್ತಿದೆ. ಭಾರತ, ಸನಾತನ ಧರ್ಮದಉಳಿವಿನ ಚುನಾವಣೆ ಇದಾಗಿದೆ. ಉಡುಪಿ-ಚಿಕ್ಕಮಗಳೂರು ಮತ್ತು ದ.ಕ. ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ
ಅಭ್ಯರ್ಥಿಗಳು ಸ್ಪಷ್ಟ ಬಹುಮತದೊಂ ದಿಗೆ ಜಯ ಸಾಧಿಸಲಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಡ ಬಸನಗೌಡ ಪಾಟೀಲ್‌ ಯತ್ನಾಳ್‌ ಹೇಳಿದರು.

ಅಭ್ಯರ್ಥಿ ನಾಮಪತ್ರ ಸಲ್ಲಿಕೆಗೆ ಪೂರ್ವಭಾವಿಯಾಗಿ ಕಡಿಯಾಳಿಯಲ್ಲಿ ನಡೆದ ಸಮಾವೇಶದಲ್ಲಿ ಅವರು ಮಾತನಾಡಿದರು.

ಹಿಂದುತ್ವ ಉಳಿದರೆ ನಾವೆಲ್ಲರೂ ಉಳಿಯುತ್ತೇವೆ. ಕೇಂದ್ರದ ಕಳೆದ 10 ವರ್ಷದ ಅಭಿವೃದ್ಧಿ ಕಾರ್ಯ ಕೇವಲ ಟ್ರೈಲರ್‌. ಮುಂದಿನ 5 ವರ್ಷ ನಿಜವಾದ ಸಿನೆಮಾ. ಉಡುಪಿ-ಚಿಕ್ಕಮಗಳೂರಿನಲ್ಲಿ ಕೋಟ ಶ್ರೀನಿವಾಸ ಪೂಜಾರಿ, ದ.ಕ.ದಲ್ಲಿ ಬೃಜೇಶ್‌ ಚೌಟ್‌ ಜಯಶಾಲಿ ಯಾಗಲಿದ್ದಾರೆ. ಒಟ್ಟಿನಲ್ಲಿ ಉಡುಪಿ- ಚಿಕ್ಕಮಗಳೂರಿಗೆ ಕೋಟ, ದಕ್ಷಿಣ ಕನ್ನಡಕ್ಕೆ ಚೌಟ ಹಾಗೂ ಕಾಂಗ್ರೆಸ್‌ಗೆ ಗೂಟ ಎಂದು ಹೇಳಿದರು.

ಪ್ರಧಾನಿ ಮೋದಿ ಭ್ರಷ್ಟರ ಬಿಡುವುದಿಲ್ಲ. ಈಗ ಕೇಜ್ರಿವಾಲ್‌ ಜೈಲು ಸೇರಿದ್ದಾರೆ. ಮುಂದೆ ಡಿಂಗ್ರಿವಾಲ್‌ ಕೂಡ ಜೈಲಿಗೆ ಹೋಗಲಿದ್ದಾರೆ. ನಿಷ್ಠಾವಂತಕಾರ್ಯಕರ್ತರಿಗೆ ಟಿಕೆಟ್‌ ನೀಡುವುದು ಬಿಜೆಪಿ ಮಾತ್ರ. ಕಾಂಗ್ರೆಸ್‌ನಲ್ಲಿ ಸಚಿವರು ತಮ್ಮ ಸಂಬಂಧಿಕರಿಗೆ ಟಿಕೆಟ್‌ ಕೊಡಿಸಿ, ತಮ್ಮ ಕುರ್ಚಿಯನ್ನು ಭದ್ರ ಮಾಡಿಕೊಂಡಿದ್ದಾರೆ ಎಂದರು.

ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮಾತನಾಡಿ, ಕೇಂದ್ರ ಸರಕಾರದ ನೀತಿ, ಮೋದಿಯ ವರ ನೇತೃತ್ವ, ರಾಷ್ಟ್ರದ ಬಗ್ಗೆ ಇರುವ ನಮ್ಮನಿಯತ್ತು ಹಾಗೂ ಜನರ ಬಗ್ಗೆ ಇರುವ ನಮ್ಮ ಬದ್ಧತೆಯ ಆಧಾರದಲ್ಲಿ ಚುನಾ ವಣೆ ಎದುರಿಸಲಿದ್ದೇವೆ ಎಂದರು.

ಭವಿಷ್ಯ ಬರೆಯುವ ಚುನಾವಣೆ
ಉಡುಪಿ-ಚಿಕ್ಕಮಗಳೂರು ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಇದು ಭಾರತದ ಭವಿಷ್ಯ ಬರೆಯುವ ಚುನಾವಣೆ. ದೇಶದ ರಕ್ಷಣೆ, ಸ್ವಾರ್ಥ ರಹಿತ ರಾಜಕಾರಣ, ಭಯೋತ್ಪಾದನೆ ನಿರ್ಮೂಲನೆಗೆ ಮೋದಿ ಮತ್ತೂಮ್ಮೆ ಪ್ರಧಾನಿಯಾಬೇಕು. ಅವರು ರಾಜಕಾರಣವನ್ನು ವೃತ್ತಿಯಾಗಿ ಮಾಡದೇ ವ್ರತವಾಗಿ ಸ್ವೀಕರಿಸಿದ್ದಾರೆ. ಅವರನ್ನು ಇನ್ನೊಮ್ಮೆ ಪ್ರಧಾನಿ ಮಾಡಲು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಬೇಕು ಎಂದರು.

ದ.ಕ. ಬಿಜೆಪಿ ಅಭ್ಯರ್ಥಿ ಬೃಜೇಶ್‌ ಚೌಟ, ಶಾಸಕರಾದ ವಿ. ಸುನಿಲ್‌ ಕುಮಾರ್‌, ಯಶ್‌ಪಾಲ್‌ ಸುವರ್ಣ, ಗುರ್ಮೆ ಸುರೇಶ್‌ ಶೆಟ್ಟಿ, ಕಿರಣ್‌ ಕೊಡ್ಗಿ,ಮಾಜಿ ಸಚಿವರಾದ ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ, ಆರಗ ಜ್ಞಾನೇಂದ್ರ,
ಕೃಷ್ಣ ಜೆ. ಪಾಲಿಮಾರ್‌, ಪ್ರಮೋದ್‌ ಮಧ್ವರಾಜ, ವಿ.ಪರಿಷತ್‌ ಉಪಸಭಾಪತಿಎಂ.ಕೆ. ಪ್ರಾಣೇಶ್‌, ಸದಸ್ಯ ಭೋಜೇ ಗೌಡ, ಪ್ರತಾಪ್‌ ಸಿಂಹ ನಾಯಕ್‌, ಮಾಜಿಶಾಸಕರಾದ ಜೀವರಾಜ್‌, ಕೆ. ರಘುಪತಿ ಭಟ್‌, ಲಾಲಾಜಿ ಆರ್‌. ಮೆಂಡನ್‌, ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ದೇವರಾಜ ಶೆಟ್ಟಿ, ಜೆಡಿಎಸ್‌ ಉಡುಪಿ ಜಿಲ್ಲಾಧ್ಯಕ್ಷ ಯೋಗೀಶ್‌ ವಿ. ಶೆಟ್ಟಿ, ಪ್ರಮುಖರಾದ ನವೀನ್‌ ಶೆಟ್ಟಿ ಕುತ್ಯಾರು, ರಂಜನ್‌ ಅಜಿತ್‌ ಕುಮಾರ್‌, ಶಿಲ್ಪಾ ಜಿ. ಸುವರ್ಣ, ಕಲ್ಮೂರುಡಪ್ಪ, ಮಣಿರಾಜ್‌ ಶೆಟ್ಟಿ, ದಿನಕರ ಶೆಟ್ಟಿ ಹೆರ್ಗ, ಮಟ್ಟಾರು ರತ್ನಾಕರ ಹೆಗ್ಡೆ, ಮನೋಹರ ಕಲ್ಮಾಡಿ ಉಪಸ್ಥಿತರಿದ್ದರು.

ಬಿಜೆಪಿ ಮಂಗಳೂರು ವಿಭಾಗ ಪ್ರಭಾರಿ ಕೆ. ಉದಯ ಕುಮಾರ್‌ ಶೆಟ್ಟಿ ಪ್ರಸ್ತಾವನೆಗೈದರು. ಉಡುಪಿ ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್‌ ಕುಮಾರ್‌ ಕುಂದಾಪುರ ಸ್ವಾಗತಿಸಿದರು. ಪ್ರ.ಕಾರ್ಯದರ್ಶಿಗಳಾದ ರಾಘವೇಂದ್ರ ಕಿಣಿ ನಿರೂಪಿಸಿ, ರೇಷ್ಮಾ ಉದಯ ಶೆಟ್ಟಿ ವಂದಿಸಿದರು.

ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು
ಉಡುಪಿ ಮತ್ತು ಚಿಕ್ಕಮಗಳೂರು ಜಿಲ್ಲೆಯ ಬಿಜೆಪಿ ಹಾಗೂ ಜೆಡಿಎಸ್‌ನ ಅಪಾರ ಸಂಖ್ಯೆಯಲ್ಲಿ ಕಾರ್ಯಕರ್ತರು ಸಮಾವೇಶದಲ್ಲಿ ಭಾಗವಹಿಸಿದ್ದರು. ಭಾರತ ಮಾತೆ, ಪ್ರಧಾನಿ ಮೋದಿ, ಬಿಜೆಪಿ ಹಾಗೂ ಅಭ್ಯರ್ಥಿ ಪರ ಘೋಷಣೆ ಮುಗಿಲು ಮುಟ್ಟಿತ್ತು. ವೇದಿಕೆಯು ಬಿಜೆಪಿ-ಜೆಡಿಎಸ್‌ ಮುಖಂಡರ ಸಮಾಗಮಕ್ಕೆ ಸಾಕ್ಷಿಯಾಯಿತು.

ಟಾಪ್ ನ್ಯೂಸ್

IPL 2024: full list of award winners and prize money

IPL 2024: ಯಾರಿಗೆ ಸಿಕ್ತು ಯಾವ ಅವಾರ್ಡ್?; ಕ್ಯಾಚ್ ಆಫ್ ದಿ ಸೀಸನ್ ವಿಡಿಯೋ ನೋಡಿ

Porsche Accident Case: ಬಾಲಕನ ರಕ್ತದ ಮಾದರಿಯನ್ನು ಕಸದ ಬುಟ್ಟಿಗೆ ಎಸೆದಿದ್ದ ವೈದ್ಯರ ಬಂಧನ

Porsche Accident Case: ಬಾಲಕನ ರಕ್ತದ ಮಾದರಿಯನ್ನು ಕಸದ ಬುಟ್ಟಿಗೆ ಎಸೆದಿದ್ದ ವೈದ್ಯರ ಬಂಧನ

ಮುಂದುವರೆದ ರೇವಣ್ಣ ಟೆಂಪಲ್ ರನ್: ಧರ್ಮಸ್ಥಳಕ್ಕೆ ಭೇಟಿ ನೀಡಿದ ಮಾಜಿ ಸಚಿವ

Belthangady; ಮುಂದುವರೆದ ರೇವಣ್ಣ ಟೆಂಪಲ್ ರನ್: ಧರ್ಮಸ್ಥಳಕ್ಕೆ ಭೇಟಿ ನೀಡಿದ ಮಾಜಿ ಸಚಿವ

Rajkot: ಗೇಮಿಂಗ್‌ ಜೋನ್‌ ಬೆಂಕಿ ಅವಘಡದಲ್ಲಿ ಬೆಂದು ಹೋಯಿತು ನವ ದಂಪತಿಯ ಜೀವ

Rajkot: ಗೇಮಿಂಗ್‌ ಜೋನ್‌ ಬೆಂಕಿ ಅವಘಡದಲ್ಲಿ ಬೆಂದು ಹೋಯಿತು ನವ ದಂಪತಿಯ ಜೀವ

Kejriwal: ಮಧ್ಯಂತರ ಜಾಮೀನು ಅವಧಿಯನ್ನು ವಿಸ್ತರಿಸುವಂತೆ ಸುಪ್ರೀಂ ಗೆ ಕೇಜ್ರಿವಾಲ್ ಅರ್ಜಿ

Arvind Kejriwal: ಮಧ್ಯಂತರ ಜಾಮೀನು ಅವಧಿ ವಿಸ್ತರಿಸುವಂತೆ ಸುಪ್ರೀಂ ಗೆ ಕೇಜ್ರಿವಾಲ್ ಅರ್ಜಿ

Hit & Run: ರಸ್ತೆ ದಾಟುತ್ತಿದ್ದ ವೇಳೆ ಕಾರು ಢಿಕ್ಕಿ; ಗಾಳಿಯಲ್ಲಿ ಹಾರಿದ ವೃದ್ಧ

Hit & Run: ರಸ್ತೆ ದಾಟುತ್ತಿದ್ದ ವೇಳೆ ಕಾರು ಢಿಕ್ಕಿ; ಗಾಳಿಯಲ್ಲಿ ಹಾರಿದ ವೃದ್ಧ

IT Raid: ನಾಸಿಕ್‌ನ ಸುರಾನಾ ಜ್ಯುವೆಲ್ಲರ್ಸ್‌ ಮೇಲೆ ಐಟಿ ದಾಳಿ, 26 ಕೋಟಿ ಮೌಲ್ಯದ ನಗದು ವಶ

IT Raid: ನಾಸಿಕ್‌ನ ಸುರಾನಾ ಜ್ಯುವೆಲ್ಲರ್ಸ್‌ ಮೇಲೆ ಐಟಿ ದಾಳಿ, 26 ಕೋಟಿ ಮೌಲ್ಯದ ನಗದು ವಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Manipal ಆರೋಗ್ಯ, ಶಿಕ್ಷಣಕ್ಕೆ ಮಾಹೆ ಸದಾ ಬೆಂಬಲ; ಡಾ| ಎಚ್‌.ಎಸ್‌. ಬಲ್ಲಾಳ್‌

Manipal ಆರೋಗ್ಯ, ಶಿಕ್ಷಣಕ್ಕೆ ಮಾಹೆ ಸದಾ ಬೆಂಬಲ; ಡಾ| ಎಚ್‌.ಎಸ್‌. ಬಲ್ಲಾಳ್‌

Part-time ಉದ್ಯೋಗ ಆಮಿಷ: ಲಕ್ಷಾಂತರ ರೂ.ಕಳೆದುಕೊಂಡ ಯುವಕ

Part-time ಉದ್ಯೋಗ ಆಮಿಷ: ಲಕ್ಷಾಂತರ ರೂ.ಕಳೆದುಕೊಂಡ ಯುವಕ

Udupi ಧರ್ಮ ಸಂರಕ್ಷಣೆಯಲ್ಲಿ ಪುರೋಹಿತರು, ವಿದ್ವಾಂಸರ ಪಾತ್ರ ಅಪಾರ: ಪುತ್ತಿಗೆ ಶ್ರೀ

Udupi ಧರ್ಮ ಸಂರಕ್ಷಣೆಯಲ್ಲಿ ಪುರೋಹಿತರು, ವಿದ್ವಾಂಸರ ಪಾತ್ರ ಅಪಾರ: ಪುತ್ತಿಗೆ ಶ್ರೀ

Udupi Gangwar; ಮತ್ತೆ ಮೂವರನ್ನು ಬಂಧಿಸಿದ ಪೊಲೀಸರು

Udupi Gangwar; ಮತ್ತೆ ಮೂವರನ್ನು ಬಂಧಿಸಿದ ಪೊಲೀಸರು

Udupi Gang war; Did the failure of the beat system lead to the incident?

Udupi Gang war; ಬೀಟ್‌ ವ್ಯವಸ್ಥೆ ಲೋಪವೇ ಘಟನೆಗೆ ಕಾರಣವಾಯಿತೇ?

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

7

Bengaluru: ಮೊಬೈಲ್‌ ದೋಚುತ್ತಿದ್ದ ಇಬ್ಬರ ಬಂಧನ

Misbehavior: ಡ್ರಗ್ಸ್‌ ಅಮಲಲ್ಲಿ ಅಪ್ರಾಪ್ತೆ ಜತೆ ಅನುಚಿತ ವರ್ತನೆ: ಯುವಕ ಪೊಲೀಸರ ವಶ

Misbehavior: ಡ್ರಗ್ಸ್‌ ಅಮಲಲ್ಲಿ ಅಪ್ರಾಪ್ತೆ ಜತೆ ಅನುಚಿತ ವರ್ತನೆ: ಯುವಕ ಪೊಲೀಸರ ವಶ

Rave party: ಸಿಸಿಬಿ ಪೊಲೀಸರಿಗೆ ಆಂಧ್ರ ರಾಜಕಾರಣಿಗಳಿಂದ ಒತ್ತಡ

Rave party: ಸಿಸಿಬಿ ಪೊಲೀಸರಿಗೆ ಆಂಧ್ರ ರಾಜಕಾರಣಿಗಳಿಂದ ಒತ್ತಡ

IPL 2024: full list of award winners and prize money

IPL 2024: ಯಾರಿಗೆ ಸಿಕ್ತು ಯಾವ ಅವಾರ್ಡ್?; ಕ್ಯಾಚ್ ಆಫ್ ದಿ ಸೀಸನ್ ವಿಡಿಯೋ ನೋಡಿ

4

Arrested: ಬೀದಿಬದಿ ಮಲಗಿದ್ದವರ ಹತ್ಯೆ: ಸರಣಿ ಹಂತಕನ ಸೆರೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.