ಬಗೆ ಬಗೆ ಬಸಳೆ


Team Udayavani, Nov 30, 2018, 6:00 AM IST

21.jpg

ಕಬ್ಬಿಣಾಂಶ ಹೊಂದಿರುವ ಹಲವಾರು ಸೊಪ್ಪುಗಳಲ್ಲಿ ಬಸಳೆಯೂ ಒಂದು. ರುಚಿಕರ ಖಾದ್ಯ ತಯಾರಿಕೆ ಮಾತ್ರವಲ್ಲ, ಔಷಧಿಯಾಗಿಯೂ ಇದು ಬಹಳ ಉಪಯೋಗಿ.

ಬಸಳೆ ಪತ್ರೊಡೆ 
ಕೆಸುವಿನೆಲೆ ಪತ್ರೊಡೆ ಅರಿಯದವರಿಲ್ಲ. ಆದರೆ, ಬಸಳೆ ಸೊಪ್ಪಿನೊಂದಿಗಿನ ಪತ್ರೊಡೆಯೂ ಅಷ್ಟೇ ರುಚಿಕರ.
ಬೇಕಾಗುವ ಸಾಮಗ್ರಿ: ಬಸಳೆಸೊಪ್ಪು 10-12, ಅಕ್ಕಿ – 3/4 ಕಪ್‌, ಒಣಮೆಣಸು- 6, ಕಡಲೆಬೇಳೆ- 1 ದೊಡ್ಡ ಚಮಚ, ಒಣ ಕೊತ್ತಂಬರಿ- 2 ಚಮಚ, ಮೆಂತ್ಯ- 1/4 ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಹುಣಸೆಹಣ್ಣು ಗೋಲಿಗಾತ್ರ.

ತಯಾರಿಸುವ ವಿಧಾನ: ಕಡಲೆಬೇಳೆ, ಅಕ್ಕಿ ಒಂದು ಗಂಟೆ ನೆನೆಸಿ ಒಣಮೆಣಸು, ಹುಣಸೆ, ಉಪ್ಪು ಸೇರಿಸಿ ರುಬ್ಬಿ. ನಯವಾಗಿ ರುಬ್ಬಬೇಕಾಗಿಲ್ಲ. ಕಡಲೆಬೇಳೆ, ಕೊತ್ತಂಬರಿ, ಮೆಂತ್ಯ ಹುರಿದು ಪುಡಿ ಮಾಡಿ ರುಬ್ಬಿದ ಮಿಶ್ರಣಕ್ಕೆ ಬೆರೆಸಿ. ಈ ಹಿಟ್ಟನ್ನು ಬಸಳೆಸೊಪ್ಪಿಗೆ ಪತ್ರೊಡೆಯಂತೆ ಸವರಿ, ಮಡಚಿ ಆವಿಯಲ್ಲಿ ಬೇಯಿಸಿ. ಬಿಸಿಬಿಸಿ ಬಸಳೆ ಪತ್ರೊಡೆ ಅತ್ಯಂತ ರುಚಿಕರ.

ಬಸಳೆ ವಡೆ 
ಬೇಕಾಗುವ ಸಾಮಗ್ರಿ:
ಬಸಳೆ ಸೊಪ್ಪು – 10, ಅಕ್ಕಿಹಿಟ್ಟು- 1/4 ಕಪ್‌, ಉಪ್ಪು ರುಚಿಗೆ ತಕ್ಕಷ್ಟು , ಕಡಲೆಬೇಳೆ- 1/2 ಕಪ್‌, ಹುರಿದ ಕೆಂಪು ಮೆಣಸು- 4.

ತಯಾರಿಸುವ ವಿಧಾನ: ಕಡಲೆಬೇಳೆ ಒಂದು ಗಂಟೆ ನೆನೆಸಿ. ನಂತರ ಉಪ್ಪು , ಮೆಣಸಿನೊಂದಿಗೆ ತರಿತರಿಯಾಗಿ ರುಬ್ಬಿ . ಬಸಳೆ ಸಣ್ಣದಾಗಿ ಕತ್ತರಿಸಿ ಇದಕ್ಕೆ ಅಕ್ಕಿಹಿಟ್ಟು ಬೆರೆಸಿ, ವಡೆಯಂತೆ ತಟ್ಟಿ ಕರಿಯಿರಿ.

ಬಸಳೆ ತಂಬುಳಿ
ಬೇಕಾಗುವ ಸಾಮಗ್ರಿ:
ಬಸಳೆಸೊಪ್ಪು- 8, ಜೀರಿಗೆ- 1/2 ಚಮಚ, ಮೊಸರು- 1/2 ಕಪ್‌, ಕಾಯಿತುರಿ- 2 ಚಮಚ, ಬೆಣ್ಣೆ – 1 ಚಮಚ, ಉಪ್ಪು ರುಚಿಗೆ ತಕ್ಕಷ್ಟು , ಮೆಣಸು-1.

ತಯಾರಿಸುವ ವಿಧಾನ: ಬಸಳೆಸೊಪ್ಪನ್ನು ತೊಳೆದುಕೊಂಡು ಸಣ್ಣಗೆ ಹೆಚ್ಚಿ. ನಂತರ ಬೆಣ್ಣೆ , ಜೀರಿಗೆಯೊಂದಿಗೆ ಹುರಿಯಿರಿ. ನಂತರ ಕಾಯಿತುರಿ, ಮೆಣಸಿನೊಂದಿಗೆ ನಯವಾಗಿ ರುಬ್ಬಿ. ಮೊಸರು, ಉಪ್ಪು ಸೇರಿಸಿ ಒಗ್ಗರಿಸಿ. ಬಾಯಿಹುಣ್ಣಿರುವವರಿಗೆ ಇದರ ಸೇವನೆ ಉತ್ತಮ.

ಬಸಳೆ ಕಷಾಯ 
ಬೇಕಾಗುವ ಸಾಮಗ್ರಿ:
ಬಸಳೆ ಸೊಪ್ಪು – 6, ಬೆಲ್ಲ- ಒಂದು ದೊಡ್ಡ ತುಂಡು, ಹಾಲು- 1/2 ಕಪ್‌.

ತಯಾರಿಸುವ ವಿಧಾನ: ಬಸಳೆ ಎಲೆಗಳನ್ನು ಚೆನ್ನಾಗಿ ತೊಳೆದು ಒಂದು ಕಪ್‌ ನೀರಿನಲ್ಲಿ ಕುದಿಸಿ, ಅರ್ಧಕ್ಕೆ ಇಳಿಸಿ, ಸೋಸಿಕೊಳ್ಳಿ. ಇದಕ್ಕೆ ಬೆಲ್ಲ, ಬಿಸಿ ಹಾಲು ಸೇರಿಸಿ ಸೇವಿಸಿ. ಉಷ್ಣ ಪ್ರಕೃತಿಯವರಿಗೆ, ಬಾಯಿಹುಣ್ಣಿನ ತೊಂದರೆ ಅನುಭವಿಸುವವರಿಗೆ ಇದರ ಸೇವನೆ ಉತ್ತಮ.

ದೀಪಾ ಡಿ ಹೆಗಡೆ 

ಟಾಪ್ ನ್ಯೂಸ್

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

gold 2

FATF; ಭಾರತದ ಚಿನ್ನೋದ್ಯಮ ಮೂಲಕ ಉಗ್ರರಿಗೆ ನೆರವು

1-uu

‘U-WIN’ ಪೋರ್ಟ್‌ಲ್‌ಗೆ ಅಕ್ಟೋಬರ್‌ನಲ್ಲಿ ಚಾಲನೆ

MASIDI

Fiscal Crisis: ಅಯೋಧ್ಯೆ ಮಸೀದಿ ಟ್ರಸ್ಟ್‌ ಸಮಿತಿಗಳ ವಿಸರ್ಜನೆ

ಭಕ್ತರ ನಂಬಿಕೆಗೆ ದ್ರೋಹ ಬಗೆದವರಿಗೆ ಶಿಕ್ಷೆಯಾಗಲಿ

ಭಕ್ತರ ನಂಬಿಕೆಗೆ ದ್ರೋಹ ಬಗೆದವರಿಗೆ ಶಿಕ್ಷೆಯಾಗಲಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

gold 2

FATF; ಭಾರತದ ಚಿನ್ನೋದ್ಯಮ ಮೂಲಕ ಉಗ್ರರಿಗೆ ನೆರವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.