ಕಡಲ ಮಕ್ಕಳ ನಿಲ್ಲದ ಪಯಣ


Team Udayavani, Feb 11, 2019, 7:28 AM IST

11-february-12.jpg

ಜೀವನ ಎಂದೂ ನಿಂತ ನೀರಾಗಿರಬಾರದು. ಎಷ್ಟೇ ಕಷ್ಟಗಳು ಬಂದರೂ ಮುಂದುವರಿಯುತ್ತಾ ಸಾಗಬೇಕು ಎನ್ನುವ ಸಾರವನ್ನಿಟ್ಟುಕೊಂಡು ಹೆಣೆದ ಚಿತ್ರ ‘ದಿ ಡಿಸಪಿಯರ್ಡ್‌’.

ಶ್ಯಾಂಡಿ ಮಿಚೆಲ್‌ ನಿರ್ದೇಶಿಸಿರುವ ಆಂಗ್ಲ ಭಾಷೆಯಲ್ಲಿ 2012ರಲ್ಲಿ ತೆರೆಗೆ ಬಂದ ಈ ಚಿತ್ರಕ್ಕೆ ಸ್ಫೂರ್ತಿಯಾಗಿದ್ದು 92 ವರ್ಷದ ಮೀನುಗಾರ, ತನ್ನ ವೃತ್ತಿಗೆ ವಿದಾಯ ಹೇಳಿದಾಗ, ಆತನೊಂದಿಗೆ ಮಾತಿಗೆ ಕುಳಿತಾಗ ಈ ಕತೆಯ ಎಳೆ ಹೊಳೆಯಿತಂತೆ.

ಬೃಹತ್‌ ಸಾಗರ, ಪುಟ್ಟ ದೋಣಿ, ಕ್ಷಣಕ್ಷಣಕ್ಕೂ ಮೇಲೆ ಕೆಳಗಾಗುವ ಅಲೆಗಳಂತೆ ಆ 6 ಮಂದಿಯ ಉಸಿರು ಕೂಡ. ಸಂಪೂರ್ಣವಾಗಿ ನೀರಿನ ಮೇಲೆ ನಡೆಯುವ ಸಾಹಸವೇ ‘ದಿ ಡಿಸಪಿಯರ್ಡ್‌’ ಎನ್ನುವ ದೃಶ್ಯ ಕಾವ್ಯ.

ಆರು ಮಂದಿ ಮೀನುಗಾರರು, ಮೀನು ಹಿಡಿಯಲೆಂದು ಉತ್ತರ ಅಟ್ಲಾಂಟಿಕ್‌ ಸಾಗರದ ಮಧ್ಯಕ್ಕೆ ಹೋಗಿರುತ್ತಾರೆ. ರಭಸದಿಂದ ಬಂದಪ್ಪಳಿಸಿದ ಅಲೆಗೆ, ದೋಣಿ ಯಾವ ದಿಕ್ಕಿನತ್ತ ಚಲಿಸುತ್ತಿದೆ ಎಂದೇ ಅರಿವಿಗೆ ಬರೋದಿಲ್ಲ. ಹುಟ್ಟು ಹಾಕುತ್ತಾ ಹಾಕುತ್ತಾ, ಕಾಣದ ತೀರಕ್ಕಾಗಿ ಕಾತರಿಸುವ ಆ ಮುಖಗಳಲ್ಲಿ ಸಾವಿನ ಆತಂಕ ಕಾಡುತ್ತಿರುತ್ತದೆ. ದೋಣಿಯಲ್ಲಿದ್ದ ಮೀನುಗಾರರ ಸಂಸಾರದ ಕತೆಗಳನ್ನು ತೋರಿಸುತ್ತಲೇ ನೋಡುಗರನ್ನೂ ಆ ಸಮುದ್ರದ ನಟ್ಟ ನಡುವೆ ನಿಲ್ಲಿಸುತ್ತಾರೆ ನಿರ್ದೇಶಕರು.

ದೋಣಿಯಲ್ಲಿದ್ದ ನೀರು, ಅಲ್ಪ ಆಹಾರ ಎಲ್ಲವೂ ಮುಗಿದು ಹೋದ ಮೇಲೆ, ಜೀವ ಉಳಿಸಿಕೊಳ್ಳುವುದೇ ಅವರವರಿಗೆ ಮುಖ್ಯವಾದಾಗ, ಅಲ್ಲಿ ಹುಟ್ಟುವ ಸ್ವಾರ್ಥ ಭಾವಗಳು ಮತ್ತೆ ಎಲ್ಲರನ್ನೂ ಧೃತಿಗೆಡಿಸುತ್ತವೆ. ಅವುಗಳನ್ನೆಲ್ಲ ಮೀರಿ, ಸಹಬಾಳ್ವೆಯೊಂದು ಅವರಿಗೆ ಜತೆಯಾಗುತ್ತದೆ. ಸಾಗರ ತಂದೊಡ್ಡುವ ಪ್ರತಿ ಕ್ಷಣದ ಸವಾಲುಗಳನ್ನು ಎದುರಿಸುತ್ತಾ, ಅವರೆಲ್ಲ ಹೇಗೆ ಜೀವ ಉಳಿಸಿಕೊಂಡು, ಮನೆಗೆ ತಲುಪುತ್ತಾರೆ ಎನ್ನುವುದನ್ನು ಅತ್ಯಂತ ರೋಚಕವಾಗಿ ಚಿತ್ರಿಸಲಾಗಿದೆ. ಈ ಚಿತ್ರದಲ್ಲಿ ಕಾಣಸಿಗುವ ಬದುಕಿನ ತಲ್ಲಣಗಳು, ಕಷ್ಟಗಳು ಎದುರಾದಾಗ ನಾವು ಅದಕ್ಕೆ ಪ್ರತಿಸ್ಪಂದಿಸುವ ರೀತಿ, ಸಾವು ಎದುರಾದಾಗ ನಾವೇನು ಮಾಡಬಹುದು ಎನ್ನುವ ದೃಶ್ಯಗಳು ಬದುಕಿಗೆ ಅತ್ಯಮೂಲ್ಯ ಪಾಠವನ್ನು ನೀಡುವಂತಿವೆ. ಒಟ್ಟಿನಲ್ಲಿ ಮನೋಜ್ಞವಾಗಿ ಮೂಡಿ ಬಂದಿರುವ ಈ ಸಿನೆಮಾ ಕ್ಷಣಕ್ಷಣಕ್ಕೂ ಕುತೂಹಲ ಕೆರಳಿಸುವಂತೆ ಮಾಡಿದೆ. 

ಟಾಪ್ ನ್ಯೂಸ್

ಮೂರೂ ದಿನಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ

ಮೂರೂ ದಿನಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ

ಕಾಂಗ್ರೆಸ್ ಸದಸ್ಯತ್ವವೇ ಇಲ್ಲದಿದ್ದರೂ ಉಚ್ಛಾಟನೆ ಮಾಡಿದ್ದಾರೆ: ಲೋಕೇಶ್ ತಾಳಿಕಟ್ಟೆ

Congress ಸದಸ್ಯತ್ವವೇ ಇಲ್ಲದಿದ್ದರೂ ಉಚ್ಛಾಟನೆ ಮಾಡಿದ್ದಾರೆ: ಲೋಕೇಶ್ ತಾಳಿಕಟ್ಟೆ

Form 17c:  ಚುನಾವಣ ಆಯೋಗಕ್ಕೆ ನಿರ್ದೇಶನ ನೀಡಲು ಸುಪ್ರೀಂ ನಕಾರ, ಆದೇಶದಲ್ಲೇನಿದೆ?

Form 17c:  ಚುನಾವಣ ಆಯೋಗಕ್ಕೆ ನಿರ್ದೇಶನ ನೀಡಲು ಸುಪ್ರೀಂ ನಕಾರ, ಆದೇಶದಲ್ಲೇನಿದೆ?

Vijayanagara: ದಶಕಗಳ ನಂತರ ಹುಲಿಕೆರೆ ಕೆರೆಗೆ ನೀರು… ಗ್ರಾಮಸ್ಥರಿಂದ ಗಂಗಾ ಪೂಜೆ

Vijayanagara: ದಶಕಗಳ ಬಳಿಕ ಹುಲಿಕೆರೆ ಕೆರೆಗೆ ನೀರು… ಗ್ರಾಮಸ್ಥರಿಂದ ಗಂಗಾ ಪೂಜೆ

Cannes 2024: Mysore’s Chidananda S Naik won the best short film award

Cannes 2024: ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿ ಪಡೆದ ಮೈಸೂರಿನ ಚಿದಾನಂದ ಎಸ್ ನಾಯಕ್

Lok Sabha Election 2024: 6ನೇ ಹಂತದ ಪ್ರಚಾರ ಅಂತ್ಯ, 25ರಂದು 58 ಕ್ಷೇತ್ರಗಳಲ್ಲಿ ಚುನಾವಣೆ

Lok Sabha Election 2024: 6ನೇ ಹಂತದ ಪ್ರಚಾರ ಅಂತ್ಯ, 25ರಂದು 58 ಕ್ಷೇತ್ರಗಳಲ್ಲಿ ಚುನಾವಣೆ

ಪ್ರಹ್ಲಾದ ಜೋಶಿ

Bellary; ಆಂತರಿಕ ಬೇಗುದಿಯಿಂದ ಸರ್ಕಾರ ಬಿದ್ದರೆ ನಾವು ಹೊಣೆಯಲ್ಲ: ಪ್ರಹ್ಲಾದ ಜೋಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

ಮೂರೂ ದಿನಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ

ಮೂರೂ ದಿನಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆ

ಕಾಂಗ್ರೆಸ್ ಸದಸ್ಯತ್ವವೇ ಇಲ್ಲದಿದ್ದರೂ ಉಚ್ಛಾಟನೆ ಮಾಡಿದ್ದಾರೆ: ಲೋಕೇಶ್ ತಾಳಿಕಟ್ಟೆ

Congress ಸದಸ್ಯತ್ವವೇ ಇಲ್ಲದಿದ್ದರೂ ಉಚ್ಛಾಟನೆ ಮಾಡಿದ್ದಾರೆ: ಲೋಕೇಶ್ ತಾಳಿಕಟ್ಟೆ

Form 17c:  ಚುನಾವಣ ಆಯೋಗಕ್ಕೆ ನಿರ್ದೇಶನ ನೀಡಲು ಸುಪ್ರೀಂ ನಕಾರ, ಆದೇಶದಲ್ಲೇನಿದೆ?

Form 17c:  ಚುನಾವಣ ಆಯೋಗಕ್ಕೆ ನಿರ್ದೇಶನ ನೀಡಲು ಸುಪ್ರೀಂ ನಕಾರ, ಆದೇಶದಲ್ಲೇನಿದೆ?

Vijayanagara: ದಶಕಗಳ ನಂತರ ಹುಲಿಕೆರೆ ಕೆರೆಗೆ ನೀರು… ಗ್ರಾಮಸ್ಥರಿಂದ ಗಂಗಾ ಪೂಜೆ

Vijayanagara: ದಶಕಗಳ ಬಳಿಕ ಹುಲಿಕೆರೆ ಕೆರೆಗೆ ನೀರು… ಗ್ರಾಮಸ್ಥರಿಂದ ಗಂಗಾ ಪೂಜೆ

Cannes 2024: Mysore’s Chidananda S Naik won the best short film award

Cannes 2024: ಅತ್ಯುತ್ತಮ ಕಿರುಚಿತ್ರ ಪ್ರಶಸ್ತಿ ಪಡೆದ ಮೈಸೂರಿನ ಚಿದಾನಂದ ಎಸ್ ನಾಯಕ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.