ವಿಶ್ವವಿಜೇತೆ ಸಿಂಧುಗೆ ವಿಶ್ರಾಂತಿ ಅಗತ್ಯ


Team Udayavani, Nov 2, 2019, 4:03 AM IST

varada-tare

ಈ ವಾರದ ತಾರೆಯಾಗಿ ಗುರ್ತಿಸಿಕೊಂಡಿದ್ದು ಪಿ.ವಿ.ಸಿಂಧು. ಇದಕ್ಕೆ ಕಾರಣ ಆಕೆಯ ಸಾಧನೆಯಲ್ಲ, ಕಳಪೆ ಸಾಧನೆ. ಒಂದೆರಡು ತಿಂಗಳ ಹಿಂದೆ ಬ್ಯಾಡ್ಮಿಂಟನ್‌ ವಿಶ್ವಕಪ್‌ ಗೆದ್ದು, ಇಡೀ ದೇಶದಲ್ಲಿ ಸುದ್ದಿಯಾಗಿದ್ದ ಸಿಂಧು, ಅಲ್ಲಿಂದೀಚೆಗೆ ಆಡಿದ ಕೂಟದಲ್ಲೆಲ್ಲ ಸೋಲುತ್ತಿದ್ದಾರೆ. ಅವರ ವಿಶ್ವಕಪ್‌ ಗೆಲುವು ಹಾಗಾದರೆ ಸುಳ್ಳೇ ಎನ್ನುವ ಮಟ್ಟಿಗೆ ಗೊಂದಲವುಂಟಾಗಿದೆ. ಇತ್ತೀಚೆಗೆ ಫ್ರೆಂಚ್‌ ಓಪನ್‌ನ ಎಂಟರಘಟ್ಟದ ಹೋರಾಟದಲ್ಲಿ ದೀರ್ಘ‌ಕಾಲ ಹೋರಾಡಿಯೂ, ಸಿಂಧು ಸೋತಿದ್ದಾರೆ.

ಅವರು ಹೀಗೇಕೆ ವಿಫ‌ಲವಾಗುತ್ತಿದ್ದಾರೆ ಎನ್ನುವುದೇ ಅರ್ಥವಾಗದ ಪ್ರಶ್ನೆ. ಸಿಂಧು ಭಾರತೀಯ ಬ್ಯಾಡ್ಮಿಂಟನ್‌ ಇತಿಹಾಸದಲ್ಲಿ ಯಾರೂ ಮಾಡಿರದ ಸಾಧನೆ ಮಾಡಿದ್ದಾರೆ. ವಿಶ್ವಕಪ್‌ನಲ್ಲಿ 2 ಬೆಳ್ಳಿ, 2 ಕಂಚು, ಒಮ್ಮೆ ಚಿನ್ನ ಗೆದ್ದಿದ್ದಾರೆ. ಬಿಡಬ್ಲ್ಯುಎಫ್ ವಿಶ್ವ ಟೂರ್‌ ಪ್ರಶಸ್ತಿ ಗೆದ್ದ ದೇಶದ ಏಕೈಕ ಕ್ರೀಡಾಪಟು. ಒಲಿಂಪಿಕ್ಸ್‌ನಲ್ಲೂ ಬೆಳ್ಳಿ ಗೆದ್ದಿದ್ದಾರೆ. ಇಷ್ಟೆಲ್ಲ ಸಾಧನೆ ಮಾಡಿರುವ ಅವರು ಸಣ್ಣಮಟ್ಟದ ಕೂಟದಲ್ಲಿ ಮಾತ್ರ ಸತತವಾಗಿ ಕೈಚೆಲ್ಲುತ್ತಿದ್ದಾರೆ.

ಇದೇಕೆ ಹೀಗೆ? ಈ ಕೂಟಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲವೇ? ಅಥವಾ ಗೆಲ್ಲುವ ಶಕ್ತಿಯನ್ನು ಕಳೆದುಕೊಂಡಿದ್ದಾರೆಯೇ? ನಿರಂತರವಾದ ಆಟ ಅವರನ್ನು ಸುಸ್ತುಗೊಳಿಸಿದೆಯೇ? ಸದ್ಯದ ಸ್ಥಿತಿ ನೋಡಿದರೆ ಸಿಂಧು ವಿಶ್ರಾಂತಿ ತೆಗೆದುಕೊಳ್ಳುವುದೇ ಉತ್ತಮ. ಬ್ಯಾಡ್ಮಿಂಟನ್‌ ವಿಶ್ವಕಪ್‌ನಲ್ಲಿ ಚಿನ್ನ ಗೆಲ್ಲುವುದು ಭಾರತೀಯರ ಕನಸಾಗಿತ್ತು. ಮೊದಲಬಾರಿಗೆ ವಿಶ್ವಕಪ್‌ ಫೈನಲ್‌ಗೇರಿದ್ದು ಸೈನಾ ನೆಹ್ವಾಲ್‌. ಅವರು ಅಲ್ಲಿ ಸೋತು ಬೆಳ್ಳಿ ಪದಕ ಪಡೆದರು.

ಅಲ್ಲಿಂದ ಸೈನಾಗೆ ಅಂತಹದೊಂದು ಸಾಧನೆ ಸಾಧ್ಯವಾಗಲೇ ಇಲ್ಲ. ಸಿಂಧು ಮಾತ್ರ 2 ಬಾರಿ ಫೈನಲ್‌ಗೇರಿ ಸೋತಿದ್ದರು. ಅದೂ ಅದ್ಭುತ ಹೋರಾಟದ ನಂತರ. ಪದೇಪದೆ ಫೈನಲ್‌ನಲ್ಲೇ ಅವರು ಸೋಲುವುದನ್ನು ನೋಡಿದಾಗ, ಇದೇನೋ ಮಾನಸಿಕ ಸಮಸ್ಯೆ ಎಂದು ಭಾವಿಸಿದವರೇ ಹೆಚ್ಚು. ಆದರೆ ಸಿಂಧು ಹೋರಾಟ ನಿಲ್ಲಿಸಲಿಲ್ಲ, ಈ ಬಾರಿ ತಮ್ಮ ಹಿಂದಿನ ತಪ್ಪುಗಳನ್ನೆಲ್ಲ ತಿದ್ದಿಕೊಂಡು ಫೈನಲ್‌ಗೇರಿ, ಸುಲಭವಾಗಿ ವಿಶ್ವಕಪ್‌ ಗೆದ್ದೇ ಬಿಟ್ಟರು.

ಎದುರಾಳಿಗೆ ಸಣ್ಣ ಅವಕಾಶವನ್ನೂ ಕೊಡದೇ, ಅಧಿಕಾರಯುತವಾಗಿ ಗೆದ್ದರು. ಆಗ ಸಿಂಧು ಮತ್ತೆ ವೈಭವದ ದಿನಗಳಿಗೆ ಮರಳಿದರು ಎಂದು ಎಲ್ಲರೂ ಖುಷಿಪಟ್ಟರು. ಆಗಿದ್ದೇ ಬೇರೆ. ಅಲ್ಲಿಂದೀಚೆಗೆ ಅವರು ಗೆಲ್ಲಲೇ ಇಲ್ಲ. ಈ ಸೋಲುಗಳನ್ನು ಸಹಿಸಿಕೊಳ್ಳುವುದು ಸಿಂಧುವಿನಷ್ಟೇ ಅಭಿಮಾನಿಗಳಿಗೂ ಕಷ್ಟ ತಾನೇ?

ಟಾಪ್ ನ್ಯೂಸ್

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

1-lorry

West Bengal;ಝಾರ್ಖಂಡ್‌ನಿಂದ ಬರುವ ವಾಹನಕ್ಕೆ ನಿಷೇಧ

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

Lok Adalat: 35.84 ಲಕ್ಷ ಪ್ರಕರಣ ಇತ್ಯರ್ಥ

gold 2

FATF; ಭಾರತದ ಚಿನ್ನೋದ್ಯಮ ಮೂಲಕ ಉಗ್ರರಿಗೆ ನೆರವು

1-uu

‘U-WIN’ ಪೋರ್ಟ್‌ಲ್‌ಗೆ ಅಕ್ಟೋಬರ್‌ನಲ್ಲಿ ಚಾಲನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

Pager ಸ್ಫೋಟಕ್ಕೆ ಕೇರಳ ವ್ಯಕ್ತಿಯ ಸಂಸ್ಥೆ ನಂಟು!

1-lorry

West Bengal;ಝಾರ್ಖಂಡ್‌ನಿಂದ ಬರುವ ವಾಹನಕ್ಕೆ ನಿಷೇಧ

1-jagan

Jagan ಮೋದಿಗೆ ದೂರು, ಸುಪ್ರೀಂ ಮೊರೆ: ನಾಯ್ಡು ವಿರುದ್ಧ ಕ್ರಮ ಏಕೆ ಕೈಗೊಳ್ಳಬಾರದು?

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

Mysuru Dasara ಉದ್ಘಾಟಕರಾಗಿ ಪ್ರೊ| ಹಂಪನಾ: ಮೈಸೂರಿನಲ್ಲಿ ಮುಖ್ಯಮಂತ್ರಿ ಘೋಷಣೆ

congress

Maharashtra ಮುಂದಿನ ಸಿಎಂ ಕಾಂಗ್ರೆಸ್ಸಿಗ: ಬಾಳಾ ಸಾಹೇಬ್‌ ಥೋರಾಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.