ಬದುಕಿಗೆ ಸಾರ್ಥಕ ಸ್ಪರ್ಶ

ಮಠದ ಬೆಳಕು- ಡಾ. ಶಿವಾನಂದ ಶಿವಾಚಾರ್ಯ ಸ್ವಾಮಿಗಳು, ಹಿರೇಮಠ, ತುಮಕೂರು

Team Udayavani, Dec 7, 2019, 4:28 AM IST

sw-14

ಹತ್ತಿರವಿದ್ದವರು ದೂರ ಸರಿಯುತ್ತಾರೆ. ದೂರ ಇದ್ದವರು ಹತ್ತಿರಕ್ಕೆ ಬರುತ್ತಾರೆ. ಶತ್ರುಗಳು ಮಿತ್ರರಾಗುತ್ತಾರೆ. ಮಿತ್ರರು ಶತ್ರುಗಳಾಗುತ್ತಾರೆ. ಪರಿಚಿತರು ಅಪರಿಚಿತರಾಗುತ್ತಾರೆ. ಅಪರಿಚಿತರು ಪರಿಚಿತರಾಗುತ್ತಾರೆ. ಅದೂ ವಿಶೇಷವಾಗಿ ಕಷ್ಟಕಾಲದಲ್ಲಿ ಪರಿಚಿತರು, ಅಪರಿಚಿತರಂತೆ ವರ್ತಿಸುತ್ತಾರೆ. ಅಪರಿಚಿತರು, ಚಿರಪರಿಚಿತರಂತೆ ಸಹಾಯಹಸ್ತ ಚಾಚಿರುತ್ತಾರೆ. ಪ್ರೇಮ, ವಿವಾಹಕ್ಕೆ ಮುನ್ನುಡಿ ಬರೆಯುತ್ತದೆ. ವಿವಾಹ, ವಿಚ್ಛೇದನಕ್ಕೆ ನಾಂದಿ ಹಾಡುತ್ತದೆ.ಅಂಕೆ, ಶಂಕೆಯಾಗುತ್ತದೆ. ಶಂಕೆ, ಲಂಕೆಯಾಗುತ್ತದೆ. ಲಂಕೆ ದಹನವಾಗುತ್ತದೆ. ಸಮಾಜವಾದ, ಸಮತಾವಾದ ತೆರೆಯ ಹಿಂದೆ ತಳ್ಳಲ್ಪಡುತ್ತವೆ. ಅಧಿಕಾರವಾದ, ಅವಕಾಶವಾದ ತೆರೆಯನ್ನು ಆಕ್ರಮಿಸಿಕೊಂಡಿರುತ್ತದೆ. ಅಣ್ಣ, ತಮ್ಮಂದಿರು ದಾಯಾದಿಗಳಂತೆ ಕಿತ್ತಾಡಿಕೊಂಡಿರುತ್ತಾರೆ. ದಾಯಾದಿಗಳು ಆಪ್ತ, ಪರಮಾಪ್ತರಂತೆ ವೇಷ ತೊಡುತ್ತಾರೆ.

“ಇದೆಲ್ಲ ಏಕೆ ಹೀಗೆ?’ ಎಂದು ಕೇಳುವ ಹಾಗಿಲ್ಲ. ಇದುವೇ ಜೀವನ.ಜೀವನವೆಂದರೆ, ಏಕತಾನತೆ ಇಲ್ಲ; ಅದು ವಿವಿಧತೆ. ವಿವಿಧತೆಯಲ್ಲಿ ಏಕತೆಯನ್ನು ಕಂಡುಕೊಳ್ಳುವುದು- ಬಿಡುವುದು, ನಮ್ಮ ವಿವೇಚನೆಗೆ ಬಿಟ್ಟ ವಿಷಯ. “ಬದುಕು ಹೀಗೇಕೆ?’ ಎನ್ನುತ್ತಾ ಗೊಂಯ್‌ ಗೊಂಯ್‌, ಕೊರಕೊರ ಅನ್ನೋದು ಬೇಡ. ಜೀವನ ಧರ್ಮಕ್ಷೇತ್ರವೂ ಹೌದು, ಕುರುಕ್ಷೇತ್ರವೂ ಹೌದು.”ಬದುಕು ಜಟಕಾ ಬಂಡಿ. ವಿಧಿ ಅದರ ಸಾಹೇಬ’- ಇದು ಡಿ.ವಿ.ಜಿ. ಉವಾಚ. ಅಕ್ಷರಶಃ ಸತ್ಯವಾದ ಮಾತು. ಬದುಕು ಗುಟ್ಕಾ ಬಂಡಿಯಾದರೂ ಆಗಲೂ ವಿಧಿನೇ ಅದರ ಸಾಹೇಬ..! ನಾವುಗಳು ಬದುಕಿನ ಸಾರ್ಥಕತೆಗೆ ಉಸಿರು ತುಂಬಬೇಕು. ಬದುಕನ್ನು ದ್ವೇಷ, ದೋಷ, ದುವ್ಯìಸನಗಳಿಗೆ ಒಪ್ಪಿಸಿಬಿಟ್ಟು ಪವಿತ್ರವಾದ ಮಾನವಜನ್ಮವನ್ನು ಹಾಳುಮಾಡಬಾರದು. ನಮ್ಮ ದಾಸರುಗಳು ಕೂಡ “ಮಾನವ ಜನ್ಮ ದೊಡ್ಡದು. ಇದನು ಹಾನಿಮಾಡಬೇಡಿರಿ ಹುಚ್ಚಪ್ಪಗಳಿರಾ’ ಎಂದು ಪ್ರೀತಿಯಿಂದ ಗಲ್ಲಕ್ಕೆ ತಿವಿದು ನಮಗೆಲ್ಲ ಬುದ್ಧಿಹೇಳಿದ್ದಾರೆ. ಅವರುಗಳ ಬುದ್ಧಿಮಾತಿಗೆ ನಾವು ಕಿವಿಯಾಗಬೇಕು. ದೇವರು ನಿಗದಿಪಡಿಸಿದ ಆಯುಷ್ಯದ ಅವಧಿಯಲ್ಲಿ ಬದುಕಿಗೆ ಸಾರ್ಥಕ, ಸೃಜನಾತ್ಮಕ ಸ್ಪರ್ಶ ಕೊಟ್ಟುಕೊಂಡು ಇರಬೇಕಾದುದು ನಮ್ಮೆಲ್ಲರ ಆದ್ಯ ಕರ್ತವ್ಯ.

ಟಾಪ್ ನ್ಯೂಸ್

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

Thekkatte: ಕಾರು ಮರಕ್ಕೆ ಢಿಕ್ಕಿ; ಯುವತಿ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

1-aade

Archery ವಿಶ್ವಕಪ್‌: ಜ್ಯೋತಿಗೆ ಹ್ಯಾಟ್ರಿಕ್‌ ಚಿನ್ನ

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

KSRTC ಬಸ್‌ -ಆಟೋರಿಕ್ಷಾ ನಡುವೆ ಅಪಘಾತ; ಚಾಲಕ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು

Kundapura ಮಿನಿ ಗೂಡ್ಸ್‌ ವಾಹನ ಢಿಕ್ಕಿ; ಪಾದಚಾರಿ ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

Uppinangady ಮದುವೆ ಆಮಂತ್ರಣ: ನೀತಿ ಸಂಹಿತೆಯಡಿ ಕೇಸು ದಾಖಲು

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

Congress 1.20 ಲಕ್ಷಕ್ಕೂ ಅಧಿಕ ಮತಗಳ ಗೆಲುವು: ಪದ್ಮರಾಜ್‌ ಆರ್‌.

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

BJP ಅಭೂತಪೂರ್ವ ವಿಜಯದ ವಿಶ್ವಾಸ: ಕಾ| ಬೃಜೇಶ್‌ ಚೌಟ

Thekkatte: ಕಾರು ಮರಕ್ಕೆ ಢಿಕ್ಕಿ; ಯುವತಿ ಸ್ಥಳದಲ್ಲೇ ಸಾವು, ನಾಲ್ವರಿಗೆ ಗಂಭೀರ ಗಾಯ

badminton

Uber Cup ಬ್ಯಾಡ್ಮಿಂಟನ್‌: ಕೆನಡಾವನ್ನು ಮಣಿಸಿದ ಭಾರತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.