ಸೇಬಾಗುವ ಕಿತ್ತಳೆ


Team Udayavani, Dec 19, 2019, 4:05 AM IST

xc-2

ಹಣ್ಣುಗಳ ಪರಿಚಯ ಎಲ್ಲರಿಗೂ ಇದ್ದೇ ಇರುತ್ತದೆ. ಸೇಬು ಹಣ್ಣಿಗೂ ಕಿತ್ತಳೆ ಹಣ್ಣಿಗೂ ಇರುವ ವ್ಯತ್ಯಾಸವನ್ನು ನಿಮಗ್ಯಾರಿಗೂ ಹೇಳಿಕೊಡಬೇಕಿಲ್ಲ. ಸೇಬು ಕೆಂಪು ಬಣ್ಣದ್ದು. ಕಿತ್ತಳೆ ಹಣ್ಣು ಕೇಸರಿ ಬಣ್ಣದಿಂದ ಕೂಡಿರುತ್ತದೆ. ಕಿತ್ತಳೆ ಹಣ್ಣನ್ನು ತೋರಿಸಿ ಅದನ್ನು ಸೇಬು ಹಣ್ಣು ಎಂದು ಕರೆದ ಮಾತ್ರಕ್ಕೆ ಅದು ಸೇಬು ಹಣ್ಣಾಗಿಬಿಡುವುದಿಲ್ಲ. ಆದರೆ, ಕಣ್ಣ ಮುಂದಿದ್ದ ಕಿತ್ತಳೆ ಹಣ್ಣನ್ನು ಸೇಬು ಹಣ್ಣಾಗಿ ಮಾರ್ಪಾಡಿಸಿದರೆ ಹೇಗೆ? ಈ ರೀತಿ ಮಾಡಿ ತೋರಿಸಿ,ಜಾದು ನೋಡುತ್ತಿರುವ ಇಡೀ ಪ್ರೇಕ್ಷಕ ಸಮುದಾಯವೇ ನಿಬ್ಬೆರಗಾಗುತ್ತದೆ. ಈ ರೀತಿಯ ಬೆರಗುಗಳಿಂದಲೇ ಜಾದೂ ಪ್ರದರ್ಶನ ಯಶಸ್ವಿಯಾಗುವುದು ಮತ್ತು ಆ ಬಗೆಗೆ ಕುತೂಹಲ ಉಳಿದುಕೊಳ್ಳುವುದು.

ಪ್ರದರ್ಶನ
ಕಿತ್ತಳೆಯನ್ನು ಸೇಬು, ಸೇಬನ್ನು ಕಿತ್ತಳೆ ಹಣ್ಣಾಗಿಸುವುದಕ್ಕೆ ಕೆಲ ತಂತ್ರಗಳನ್ನು ಬಳಸಬೇಕು. ಮೊದಲು ಜಾದುಗಾರ ಏನು ಮಾಡುತ್ತಾನೆ ಅಂದರೆ…

ಚನ್ನ ತಲೆಯ ಮೇಲಿನ ಟೋಪಿಯನ್ನು ತೆಗೆದು ಅದು ಖಾಲಿ ಆಗಿರುವುದನ್ನು ಖಾತ್ರಿ ಪಡಿಸಲು ಪ್ರೇಕ್ಷಕರ ಮುಂದೆ ತೋರಿಸುತ್ತಾನೆ. ನಂತರ, ಅದರೊಳಗೆ ಒಂದು ಕಿತ್ತಳೆ ಹಣ್ಣನ್ನು ಇಟ್ಟು “ಅಬ್ರಕಡಬ್ರ’ ಎನ್ನುತ್ತಾ ಕೈ ಹಾಕಿ, ತೆಗೆದಾಗ ಕಿತ್ತಳೆ ಹಣ್ಣು ಸೇಬು ಹಣ್ಣಾಗಿರುತ್ತದೆ. ಈ ರೀತಿ ನೀವೂ ಮಾಡಲು ಸಾಧ್ಯವಾದರೆ ಎಷ್ಟು ಚೆನ್ನಾಗಿರುತ್ತದಲ್ಲವೇ?

ತಂತ್ರ ಇದು
ಇಲ್ಲಿ ಎರಡು ಚಿತ್ರಗಳನ್ನು ಕೊಡಲಾಗಿದೆ. ಸರಿಯಾಗಿ ಗಮನಿಸಿ ನೋಡಿ,  ಮೇಲಿನ ಚಿತ್ರದಲ್ಲಿ ತೋರಿಸಿರುವಂತೆ ಕಿತ್ತಳೆ ಹಣ್ಣನ್ನು ಮೊದಲೇ ಅರ್ಧ ಸುಲಿದು, ಒಳಗಿನ ತೊಳೆಗಳನ್ನೆಲ್ಲ ತೆಗೆದು, ಅದರೊಳಗೆ ಒಂದು ಸೇಬನ್ನು ಮೊದಲೇ ಇಟ್ಟಿರಬೇಕು. ಕಿತ್ತಳೆ ಸಿಪ್ಪೆಯನ್ನು ಸುಲಿಯುವಾಗ ಹುಷಾರ್‌! ಯಾವುದೇ ಕಾರಣಕ್ಕೂ ತುಂಡು ತುಂಡಾಗಿ ಚೂರು ಮಾಡಿರಬಾರದು. ಒಂದು ಅಥವಾ ಎರಡು ಚೂರುಗಳನ್ನಾಗಿ ಸುಲಿದರೆ ಸೇಬನ್ನು ಇಡುವುದು ಸುಲಭವಾಗುತ್ತದೆ. ಟೋಪಿಯಲ್ಲಿ ಕಿತ್ತಳೆಯನ್ನು ಇಟ್ಟು ಕೆಳಗಿನ ಚಿತ್ರದಲ್ಲಿರುವಂತೆ ಸೇಬನ್ನು ಹೊರಗೆ ತೆಗೆದು ತೋರಿಸಬೇಕು. ಈ ಪ್ರಕ್ರಿಯೆ ಮಾಡಬೇಕಾದರೆ, ಬಹಳ ಎಚ್ಚರಿಕೆ ಅಗತ್ಯ. ಸ್ವಲ್ಪ ಯಾಮಾರಿದರೂ ಎಡವಟ್ಟಾಗಿಬಿಡುತ್ತದೆ. ಹೀಗಾಗಿ, ಜಾದೂವನ್ನು ಜಾರಿ ಮಾಡುವ ಮೊದಲು ಸ್ವಲ್ಪ ಸರ್ಕಸ್‌ ಮಾಡಬೇಕಾಗುತ್ತದೆ. ಇದು ಸರಿಯಾಗಿದ್ದರೆ, ಚಪ್ಪಾಳೆ ಗ್ಯಾರಂಟಿ.

ಉದಯ್‌ ಜಾದೂಗಾರ್‌

ಟಾಪ್ ನ್ಯೂಸ್

bjpBJP ವಿಧಾನ ಪರಿಷತ್‌ ಚುನಾವಣೆ; ಜೂ.1: ಬಿಜೆಪಿ ಪಟ್ಟಿ ಪ್ರಕಟ?

BJP ವಿಧಾನ ಪರಿಷತ್‌ ಚುನಾವಣೆ; ಜೂ.1: ಬಿಜೆಪಿ ಪಟ್ಟಿ ಪ್ರಕಟ?

Legislative Council Polls; ಪದವೀಧರ ಮತದಾರರ ನಿರಾಸಕ್ತಿ!

Legislative Council Polls; ಪದವೀಧರ ಮತದಾರರ ನಿರಾಸಕ್ತಿ!

Rohini Sindhuri ವೇತನದಲ್ಲಿ 77 ಸಾವಿರ ರೂ. ಕಡಿತಕ್ಕೆ ಸರಕಾರದ ಕಾರ್ಯದರ್ಶಿಗೆ ಪತ್ರ

Rohini Sindhuri ವೇತನದಲ್ಲಿ 77 ಸಾವಿರ ರೂ. ಕಡಿತಕ್ಕೆ ಸರಕಾರದ ಕಾರ್ಯದರ್ಶಿಗೆ ಪತ್ರ

Manipal: ಕೆಎಂಸಿ ಆಸ್ಪತ್ರೆಗೆ ಮತ್ತೊಂದು ಮನ್ನಣೆ

Manipal: ಕೆಎಂಸಿ ಆಸ್ಪತ್ರೆಗೆ ಮತ್ತೊಂದು ಮನ್ನಣೆ

ಬೇಡಿಕೆಗಳ ಈಡೇರಿಕೆಗಾಗಿ ಪ್ರಾಮಾಣಿಕ, ಕ್ರಿಯಾಶೀಲವಾಗಿ ದುಡಿಯುವೆ: ರಘುಪತಿ ಭಟ್‌

ಬೇಡಿಕೆಗಳ ಈಡೇರಿಕೆಗಾಗಿ ಪ್ರಾಮಾಣಿಕ, ಕ್ರಿಯಾಶೀಲವಾಗಿ ದುಡಿಯುವೆ: ರಘುಪತಿ ಭಟ್‌

ಅಭಿವೃದ್ಧಿ ಕಾರ್ಯಗಳಿಗೆ ಕಾಂಗ್ರೆಸ್‌ ಅನುದಾನ ನೀಡಿಲ್ಲ; ಪ್ರತಾಪಸಿಂಹ ನಾಯಕ್‌

ಅಭಿವೃದ್ಧಿ ಕಾರ್ಯಗಳಿಗೆ ಕಾಂಗ್ರೆಸ್‌ ಅನುದಾನ ನೀಡಿಲ್ಲ; ಪ್ರತಾಪಸಿಂಹ ನಾಯಕ್‌

Road Mishap ಸುಳ್ಯ: ಬೊಲೆರೊ -ಕಾರು ಅಪಘಾತ; ಗಾಯ

Road Mishap ಸುಳ್ಯ: ಬೊಲೆರೊ -ಕಾರು ಅಪಘಾತ; ಗಾಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕನ ಆತ್ಮಹ*ತ್ಯೆ ಪ್ರಕರಣ,ಅಧಿಕಾರಿಗಳ ಭೇಟಿ

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

ಹೊಸ ಸೇರ್ಪಡೆ

bjpBJP ವಿಧಾನ ಪರಿಷತ್‌ ಚುನಾವಣೆ; ಜೂ.1: ಬಿಜೆಪಿ ಪಟ್ಟಿ ಪ್ರಕಟ?

BJP ವಿಧಾನ ಪರಿಷತ್‌ ಚುನಾವಣೆ; ಜೂ.1: ಬಿಜೆಪಿ ಪಟ್ಟಿ ಪ್ರಕಟ?

Legislative Council Polls; ಪದವೀಧರ ಮತದಾರರ ನಿರಾಸಕ್ತಿ!

Legislative Council Polls; ಪದವೀಧರ ಮತದಾರರ ನಿರಾಸಕ್ತಿ!

Manipal: ಕೆಎಂಸಿ ಆಸ್ಪತ್ರೆಗೆ ಮತ್ತೊಂದು ಮನ್ನಣೆ

Manipal: ಕೆಎಂಸಿ ಆಸ್ಪತ್ರೆಗೆ ಮತ್ತೊಂದು ಮನ್ನಣೆ

Rohini Sindhuri ವೇತನದಲ್ಲಿ 77 ಸಾವಿರ ರೂ. ಕಡಿತಕ್ಕೆ ಸರಕಾರದ ಕಾರ್ಯದರ್ಶಿಗೆ ಪತ್ರ

Rohini Sindhuri ವೇತನದಲ್ಲಿ 77 ಸಾವಿರ ರೂ. ಕಡಿತಕ್ಕೆ ಸರಕಾರದ ಕಾರ್ಯದರ್ಶಿಗೆ ಪತ್ರ

ಬೇಡಿಕೆಗಳ ಈಡೇರಿಕೆಗಾಗಿ ಪ್ರಾಮಾಣಿಕ, ಕ್ರಿಯಾಶೀಲವಾಗಿ ದುಡಿಯುವೆ: ರಘುಪತಿ ಭಟ್‌

ಬೇಡಿಕೆಗಳ ಈಡೇರಿಕೆಗಾಗಿ ಪ್ರಾಮಾಣಿಕ, ಕ್ರಿಯಾಶೀಲವಾಗಿ ದುಡಿಯುವೆ: ರಘುಪತಿ ಭಟ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.