ತಾಳಮದ್ದಳೆ ಸ್ಪರ್ಧೆಯಲ್ಲಿ ಮಿಂಚಿದ ಹಿರಿ-ಕಿರಿ ತಂಡಗಳು


Team Udayavani, Dec 27, 2019, 12:15 AM IST

50

ರಾಜ್ಯ ಮಟ್ಟದ ತೆಂಕು-ಬಡಗು ಹವ್ಯಾಸಿ ಕಲಾವಿದರ ತಾಳಮದ್ದಳೆ ಸ್ಪರ್ಧೆಯು ಯಶಸ್ವಿ ಕಲಾವೃಂದ ಕೊಮೆ ತೆಕ್ಕಟ್ಟೆಯಲ್ಲಿ ಇತ್ತೀಚೆಗೆ ಜರುಗಿತು. ಇದರಲ್ಲಿ ಹಿರಿಯರ ವಿಭಾಗದಲ್ಲಿ ಸರಯೂ ಯಕ್ಷ ಬಳಗ ಕೋಡಿಕಲ… ಪ್ರಥಮ ತಂಡ ಪ್ರಶಸ್ತಿ, ಮಕ್ಕಳ ಮೇಳವು ತೃತೀಯ ಪ್ರಶಸ್ತಿಯನ್ನು ಗಳಿಸಿವೆ.

ತೆಂಕು-ಬಡಗು ತಿಟ್ಟುಗಳ ತಂಡಗಳು ಹಿರಿ-ಕಿರಿ ವಿಭಾಗದಲ್ಲಿ ಭಾಗವಹಿಸಿ ಸ್ಪರ್ಧೆಯನ್ನು ತುರಿಯಾವಸ್ಥೆಗೆ ತಂದು ನಿಲ್ಲಿಸಿದವು. ತೀವ್ರ ಪೈಪೋಟಿಯನ್ನು ನೀಡಿದ ತಂಡಗಳು ಪ್ರಶಸ್ತಿಗೆ ಭಾಜನವಾದುವು. ಕೊನೆಗೂ ಪ್ರಶಸ್ತಿಗಳು ಉಭಯ ಪ್ರಾಕಾರಗಳಿಗೂ ಸಮಾನವಾಗಿ ಹಂಚಿಹೋದುವು. ಸ್ಪರ್ಧಾ ವಿಜೇತರನ್ನು ಪ್ರಮಾಣಪತ್ರ, ಸ್ಮರಣಿಕೆ ಹಾಗೂ ಪ್ರಶಸ್ತಿ ನಿಧಿಯೊಂದಿಗೆ ಸನ್ಮಾನಿಸಲಾಯಿತು.

ಸರಯೂ ಬಳಗ ಆಯ್ದು ಕೊಂಡದ್ದು “ಶ್ರೀ ದೇವಿ ಕದಂಬ ಕೌಶಿಕೆ’ಯ ಭಾಗವನ್ನು.ಶ್ರೀದೇವಿ ಕದಂಬ ವನವಾಸಿನಿಯಾಗಿ ನೆಲೆಯಾಗುವಲ್ಲಿಂದ ಕಥೆ ಆರಂಭಗೊಂಡಿತು. ವರ್ಕಾಡಿ ರವಿ ಅಲೆವೂರಾಯರು ಮಹಾಮಾಯೆಯಾಗಿ ಶ್ರೀ ದೇವಿಯ ಪಾತ್ರವನ್ನು ಔನ್ನತ್ಯಕೊಯ್ದರು. ರಕ್ತಬೀಜನಾಗಿ ಪಾತ್ರ ನಿರ್ವಹಣೆ ಮಾಡಿದವರು ವಿಜಯಲಕ್ಷ್ಮೀ ಎಲ…. ನಿಡ್ವಣ್ಣಾಯರು. ರಕ್ತಬೀಜನಿಗಿರುವ ಶ್ರೀದೇವಿಯ ಮೇಲಿನ ಭಕ್ತಿ, ಅದರಿಂದ ತನ್ನೊಡೆಯ ನಿರ್ನಾಮವಾಗುತ್ತಾನೆಂದು ಬುದ್ಧಿ ಹೇಳಿ ತಿದ್ದಲಾಗದೆ, ಕದಂಬಾ ವನದಲ್ಲಿ ಶಿವೆಯನ್ನು ಕಂಡು ಭಾವಪರವಶನಾಗಿ ವರ್ಣಿಸುತ್ತಾ ದೇವಿಯನ್ನು ತನ್ನರಸನಿಗಾಗಿ ಒಯ್ಯಲು ಪ್ರಯತ್ನಿಸುತ್ತಾನೆ. ಆದರೆ ಆ ಪ್ರಯತ್ನದಲ್ಲಿ ವಿಫ‌ಲನಾಗಿ ವೀರಮರಣವನ್ನಪ್ಪುತ್ತಾನೆ. ಈ ಪಾತ್ರ ಚಿತ್ರಣ, ಸ್ವರಭಾರ, ಸ್ಪಷ್ಟ ಉಚ್ಚಾರಗಳಿಂದ ಪರಿಣಾಮವನ್ನು ಬೀರಿ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಕೊನೆಯಲ್ಲಿ ಶುಂಭನಾಗಿ ಅಬ್ಬರದಿಂದ ಪ್ರವೇಶಿಸಿದವರು ಅಕ್ಷಯ್‌ ಸುವರ್ಣರವರು. ಮದುವೆಗಾಗಿ ಕೊನೆಯ ಕಾಲಕ್ಕೂ ಸಿದ್ಧನಾಗಿ ಬಂದು, ಶ್ರೀದೇವಿಗೆ ತನ್ನನ್ನೇ ತಾನು ಅರ್ಪಿಸಿಕೊಳ್ಳುತ್ತಾನೆ. ಶುಂಭ ವಧೆಯ ನಂತರ ಸುರರಿಗೆ ಅಭಯವಿತ್ತು ತಾಯಿ ಮಾಯೆಯಲ್ಲಿ ಲೀನಳಾಗುತ್ತಾಳೆ. ಭಾಗವತರಾಗಿ ಸಂಜೀವ ಕಜೆಪದವು, ಹಿಮ್ಮೇಳದಲ್ಲಿ ವರ್ಕಾಡಿ ಮಾಧವ ನಾವಡರು ಸಹಕರಿಸಿದ್ದರು. ಪ್ರಥಮ ಪ್ರಶಸ್ತಿಗೆ ಈ ತಂಡ ಭಾಜನವಾಯಿತು.

ಸರಯೂ ಮಕ್ಕಳ ಮೇಳ ಆಯ್ದ ಕಥಾ ಭಾಗ ನರಕಾಸುರ ಮೋಕ್ಷ. ಕೃಷ್ಣನಾಗಿ ಮಾ| ಚಿಂತನ್‌ ಆರ್‌.ಕೆ. ಸತ್ಯಭಾಮೆಯಾಗಿ ಕು| ಸಾಕ್ಷಾ ಆರ್‌. ಶೆಟ್ಟಿ, ಮುರಾಸುರನಾಗಿ ಕು| ಸಾನ್ವಿ ಜೆ. ಮತ್ತು ಮಾ|ಅದ್ವಿತ್‌ ಪಿ. ನರಕಾಸುರನಾಗಿ ಪಾತ್ರ ನಿರ್ವಹಿಸಿದರು. ದೇವರಾಜನಿಂದ ನರಕನ ಬಗ್ಗೆ ದೂರು ಸ್ವೀಕರಿಸಿ, ಅವನಿಗೆ ಅಭಯ ಕೊಟ್ಟು ಹೊರಟರೆ, ನರಕನನ್ನು ಕೊಲ್ಲಲು ಭಾಮೆಯೂ ಬೇಕು. ಹಾಗಾಗಿ ಅದ್ದೂರಿಯಿಂದ ಹೊರಡುತ್ತಾನೆ. ಆಗ ಅಲ್ಲಿಗೆ ಓಡಿಬಂದ ಸತ್ಯಭಾಮೆ ಕೃಷ್ಣನನ್ನು ಕಾಡಿಬೇಡಿ ಇಬ್ಬರೂ ಪ್ರಾಗೊjàತಿಷಕ್ಕೆ ಬರುತ್ತಾರೆ. ಮುರಾಸುರನ ಪಾಶಗಳನ್ನೂ, ಅವನನ್ನೂ ಸಂಹರಿಸಿಬಿಡುತ್ತಾರೆ. ನಂತರ ಕೃಷ್ಣ ಭಾಮೆಯರು ಸೇರಿಕೊಂಡು ನರಕಾಸುರನನ್ನು ವಧಿಸಿ, ನರಕ ಚತುರ್ದಶಿ-ದೀಪಾವಳಿಯ ಮಹತ್ವವನ್ನು ಸಾರುತ್ತಾರೆ. ಶ್ರೀ ಕೃಷ್ಣನ ಪಾತ್ರ ಚೆನ್ನಾಗಿ ಮೂಡಿಬಂದರೆ, ಸತ್ಯಭಾಮೆಯ ಪಾತ್ರ ಇನ್ನೂ ಮುಗ್ಧವಾಗಿತ್ತು. ನೆನಪಲ್ಲುಳಿಯುವಂತೆ ಮೂಡಿಬಂತು ಸತ್ಯಭಾಮೆಯ ಪಾತ್ರ. ಪುಟ್ಟ ಬಾಲಕಿ ಸಾನ್ವಿ ಮುರಾಸುರನಾಗಿ ಬದಲಾದಳು. ಬಾಲಕ ಅದ್ವಿತ್‌ ನರಕಾಸುರನಾಗಿ ಅಬ್ಬರಿಸಿ-ಬೊಬ್ಬಿರಿದ. ಅಂತೂ ಪುಟಾಣಿಗಳು “ನರಕಾಸುರ ಮೋಕ್ಷ’ವನ್ನು ಚೆನ್ನಾಗಿಯೇ ನಿರ್ವಹಿಸಿದರು. ಪ್ರಥಮ, ದ್ವಿತೀಯ ಪ್ರಶಸ್ತಿಗಳನ್ನು ಬಡಗಿನವರು ಪಡೆದರೆ, ತೆಂಕಿನ ಈ ತಂಡ ತೃತೀಯ ಪ್ರಶಸ್ತಿಯನ್ನು ಪಡೆಯಿತು.

ಪುರುಷೋತ್ತಮ

ಟಾಪ್ ನ್ಯೂಸ್

9

ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿದ್ದ ಪತ್ನಿ ಮೇಲೆ ಬ್ಲೇಡ್‌ನಿಂದ ಹಲ್ಲೆ ಮಾಡಿ ಪರಾರಿಯಾದ ಪತಿ

8

ಪತಿಯಿಂದಲೇ ಭೀಕರವಾಗಿ ಹತ್ಯೆಗೀಡಾದ ಸ್ಯಾಂಡಲ್‌ ವುಡ್‌ ನಟಿ, ಕಾಂಗ್ರೆಸ್‌ ಮುಖಂಡೆ

7

ಬಿಜೆಪಿಯವರು ಬಜೆಟ್ ಓದುವುದಿಲ್ಲ,ಅವರಿಗೆ ಎಕನಾಮಿಕ್ಸ್ ಗೊತ್ತಾಗುವುದಿಲ್ಲ: ಸಿಎಂ ಸಿದ್ದರಾಮಯ್ಯ

ಅಪಘಾತದಿಂದ ತೀವ್ರ ಗಾಯ: ಆಂಬ್ಯುಲೆನ್ಸ್ ಬರುವವರೆಗೆ ಸೆಲ್ಫಿಗೆ ಪೋಸ್‌ ಕೊಟ್ಟ ಯುವತಿಯರು.!

ಅಪಘಾತದಿಂದ ತೀವ್ರ ಗಾಯ: ಆಂಬ್ಯುಲೆನ್ಸ್ ಬರುವವರೆಗೆ ಸೆಲ್ಫಿಗೆ ಪೋಸ್‌ ಕೊಟ್ಟ ಯುವತಿಯರು.!

5

ಜಾರ್ಜಿಯಾದಲ್ಲಿ ಕಾರು ಪಲ್ಟಿಯಾಗಿ ಮೂವರು ಇಂಡೋ-ಅಮೆರಿಕನ್‌ ವಿದ್ಯಾರ್ಥಿಗಳು ದುರ್ಮರಣ

Sandalwood: ರಿಷಿ ಖುಷಿ!: ಅಕೌಂಟ್‌ಗೆ ಮತ್ತೊಂದು ಚಿತ್ರ ತ್ತೊ

Sandalwood: ರಿಷಿ ಖುಷಿ!: ಅಕೌಂಟ್‌ಗೆ ಮತ್ತೊಂದು ಚಿತ್ರ ತ್ತೊ

Chitradurga: ಮಳೆಯಿಂದ ವಿದ್ಯುತ್‌ ಕಡಿತ; ಮೊಬೈಲ್ ಬ್ಯಾಟರಿಯ ಬೆಳಕಿನಲ್ಲೇ ರೋಗಿಗೆ ಚಿಕಿತ್ಸೆ

Chitradurga: ಮಳೆಯಿಂದ ವಿದ್ಯುತ್‌ ಕಡಿತ; ಮೊಬೈಲ್ ಬ್ಯಾಟರಿಯ ಬೆಳಕಿನಲ್ಲೇ ರೋಗಿಗೆ ಚಿಕಿತ್ಸೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

9

ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿದ್ದ ಪತ್ನಿ ಮೇಲೆ ಬ್ಲೇಡ್‌ನಿಂದ ಹಲ್ಲೆ ಮಾಡಿ ಪರಾರಿಯಾದ ಪತಿ

8

ಪತಿಯಿಂದಲೇ ಭೀಕರವಾಗಿ ಹತ್ಯೆಗೀಡಾದ ಸ್ಯಾಂಡಲ್‌ ವುಡ್‌ ನಟಿ, ಕಾಂಗ್ರೆಸ್‌ ಮುಖಂಡೆ

7

ಬಿಜೆಪಿಯವರು ಬಜೆಟ್ ಓದುವುದಿಲ್ಲ,ಅವರಿಗೆ ಎಕನಾಮಿಕ್ಸ್ ಗೊತ್ತಾಗುವುದಿಲ್ಲ: ಸಿಎಂ ಸಿದ್ದರಾಮಯ್ಯ

ಅಪಘಾತದಿಂದ ತೀವ್ರ ಗಾಯ: ಆಂಬ್ಯುಲೆನ್ಸ್ ಬರುವವರೆಗೆ ಸೆಲ್ಫಿಗೆ ಪೋಸ್‌ ಕೊಟ್ಟ ಯುವತಿಯರು.!

ಅಪಘಾತದಿಂದ ತೀವ್ರ ಗಾಯ: ಆಂಬ್ಯುಲೆನ್ಸ್ ಬರುವವರೆಗೆ ಸೆಲ್ಫಿಗೆ ಪೋಸ್‌ ಕೊಟ್ಟ ಯುವತಿಯರು.!

10-hunsur

Hunsur: ಬಿರುಗಾಳಿ ಮಳೆಗೆ ಹಾರಿಹೋದ ಮನೆ ಮೇಲ್ಚಾವಣಿ, ಬ್ಯಾರನ್‌ಗೂ ಹಾನಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.