ನೊಂದವರ ಕಣ್ಣೀರು ಯಾವತ್ತೂ ಒಳ್ಳೆಯದಲ್ಲ…


Team Udayavani, Jan 14, 2020, 5:00 AM IST

14

 

ನೆನಪಿಟ್ಟುಕೋ ಗೆಳೆಯ; ನಿನಗೆ ಉತ್ತಮ ಕೆಲಸದ ಜೊತೆ ಐಶಾರಾಮಿ ಜೀವನವೂ ಸಿಕ್ಕಿರಬಹುದು. ನಿನ್ನನ್ನು ದೇವರಂತೆ ಪೂಜಿಸುವ ಹೃದಯ ಮತ್ತೆಂದಿಗೂ ಸಿಗಲಾರದು.

ನನ್ನ ಬಾಳದಾರಿಯಲ್ಲಿ ಬಿರುಗಾಳಿಯಂತೆ ಬಂದು, ಕೂಡಿಟ್ಟ ನೂರಾರು ಕನಸುಗಳನ್ನು ನುಚ್ಚುನೂರು ಮಾಡಿದವನು ನೀನು. ನೀನೇ ನನ್ನ ಪ್ರಪಂಚ ಎಂದು ಬದುಕುತ್ತಿದ್ದವಳಿಗೆ, ನಿನ್ನ ಮನದಾಳದಿಂದ ಬಂದ ಮಾತನ್ನು ಎಂದಿಗೂ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಗೆಳೆಯ. ಬಣ್ಣ ಬಣ್ಣದ ಮಾತುಗಳನ್ನಾಡಿ ಸಾವಿರ ಆಸೆಗಳನ್ನು ಮನದಲ್ಲಿ ಬಿತ್ತಿ, ಪ್ರೇಮದ ಕಡಲಲ್ಲಿ ತೇಲುವಂತೆ ಮಾಡಿದೆ. ಜೀವನದಲ್ಲಿ ಯಾವುದೇ ಕಷ್ಟ ಬಂದರೂ ಜೊತೆಯಲ್ಲಿ ನಾನಿರುವೆ ಎಂಬ ನಿನ್ನ ಭರವಸೆ ನಿದ್ದೆಯಲ್ಲೂ ನಿನ್ನನ್ನೇ ಕನವರಿಸುವಂತೆ ಮಾಡಿತು.

ನಿನಗೆ ಒಂದಿಷ್ಟು ತೊಂದರೆಯಾದರೂ ಸಹಿಸದ ನಾನು, ನಿನಗಾಗಿ ನಿದ್ದೆ ಬಿಟ್ಟು ಕಾದದ್ದೂ ಇದೆ. ನಿನ್ನ ಕನಸುಗಳೆಲ್ಲ ಈಡೇರಬೇಕೆಂದು ನಾ ಬೇಡದ ದೇವರಿಲ್ಲ. ಇಷ್ಟಪಟ್ಟ ಕೆಲಸ ಸಿಗುವವರೆಗೆ ಮದುವೆ ವಿಷಯವನ್ನು ಮನೆಯಲ್ಲಿ ಪ್ರಸ್ತಾಪಿಸುವುದು ಬೇಡ ಅಂದಿದ್ದೆ . ನಿನ್ನ ಪ್ರತಿಯೊಂದು ಮಾತಿಗೂ ಸರಿ ಎನ್ನುತ್ತಿದ್ದ ನಾನೂ ಸರಿ, ಹಾಗೇ ಆಗಲಿ ಎಂದೆ. ಯಾಕೆಂದರೆ, ನನಗೆ ನಿನ್ನ ಸಂತೋಷ, ನೆಮ್ಮದಿ ಮುಖ್ಯವಾಗಿತ್ತು.

ದೇವರ ದಯೆ ಮತ್ತು ನಿನ್ನ ಶ್ರಮದ ಪ್ರತಿಫ‌ಲ ಎಂಬಂತೆ ನೀನು ಅಂದು ಕೊಂಡ ಕೆಲಸ ಸಿಕ್ಕೇ ಬಿಟ್ಟಿತು. ಆ ದಿನ ನನಗಾದ ಖುಷಿಯನ್ನು ಪದಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ. ಕೆಲಸದ ಕಾರಣದಿಂದ ನೀನು ದೂರದ ಊರಿಗೆ ಹೋದೆ , ಪ್ರತಿ ದಿನ ನೀನು ಸಮಯ ಸಿಕ್ಕಾಗಲೆಲ್ಲ ಮಾತನಾಡುತ್ತಿದ್ದೆ. ಆದರೆ, ನಿನ್ನ ಕಾಳಜಿ, ದಿನ ಕಳೆದಂತೆ ಕಡಿಮೆಯಾಗುತಾ ¤ ಇದೆ ಎಂಬುದು ಗಮನಕ್ಕೆ ಬಂದಾಗ, ಯಾಕೆ ಸರಿಯಾಗಿ ಮಾತನಾಡುತ್ತಿಲ್ಲ ಎಂದು ಕೇಳಿದರೆ ಸಮಯದ ನೆಪವೊಡ್ಡುತ್ತಿದ್ದೆ.

ನಂತರ ದಿನಗಳಲ್ಲಿ, ನಿನ್ನ ಮಾತಿನ ದಾಟಿ ಬದಲಾಗಿದ್ದನ್ನು ಕಂಡು ನಾನು ಪ್ರಶ್ನೆ ಮಾಡಿದಾಗ , ನಿನಗಿಂತ ನನ್ನ ಕೆಲಸವೆ ಮುಖ್ಯ ಎಂದು ಹೇಳಿಯೆ ಬಿಟ್ಟೆ . ನೀನು ಕೊಟ್ಟ ಉತ್ತರದಿಂದ ನಿನ್ನ ಮೇಲೆ ಇದ್ದ ಎಲ್ಲ ನಂಬಿಕೆಯೂ ಸುಟ್ಟು ಹೋಗಿ, ಕಣ್ಣೀರಲ್ಲಿ ಕೈ ತೊಳೆಯುವಂತೆ ಮಾಡಿತು. ನೆನಪಿಟ್ಟುಕೋ ಗೆಳೆಯ; ನಿನಗೆ ಉತ್ತಮ ಕೆಲಸದ ಜೊತೆ ಐಶಾರಾಮಿ ಜೀವನವೂ ಸಿಕ್ಕಿರಬಹುದು. ನಿನ್ನನ್ನು ದೇವರಂತೆ ಪೂಜಿಸುವ ಹೃದಯ ಮತ್ತೆಂದಿಗೂ ಸಿಗಲಾರದು. ಕೊನೆಯಾದಾಗಿ ಒಂದು ಮನವಿ. ನನ್ನ ಭಾವನೆಗಳೊಂದಿಗೆ ಆಟವಾಡಿದಂತೆ ಯಾವ ಹುಡುಗಿಯ ಜೀವನದಲ್ಲೂ ಆಟವಾಡಬೇಡ , ಯಾಕೆಂದರೆ, ನೊಂದ ಹೆಣ್ಣಿನ ಕಣ್ಣೀರು ಯಾವತ್ತೂ ಒಳ್ಳೆಯದಲ್ಲ ಕಣೋ.

ಶೈಲ ಶ್ರೀ ಬಾಯಾರ್‌

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.