ನಿನ್ನ ಪ್ರೇಮದ ಪರಿಯ ನೀನರಿಯೇ ಕನಕಾಂಗಿ…!


Team Udayavani, Jan 14, 2020, 5:00 AM IST

16

ನಿನ್ನ ಕೈ ಬೆರಳು ಹಿಡಿದು ಜಾತ್ರೆಯಲ್ಲಿ ಸುತ್ತಾಡಿದ್ದು, ಮ್ಯಾಚಿಂಗ್‌ ಡ್ರೆಸ್‌ ಹಾಕಿಕೊಂಡು ಅಕ್ಕನ ಮದುವೆಯಲ್ಲಿ ಓಡಾಡಿದ್ದು, ಅಕ್ಕ ಪಕ್ಕ ಕುಳಿತು ನವ ದಂಪತಿಯಂತೆ ಊಟ ಮಾಡಿದ್ದು ನಾನು ಮರೆತಿಲ್ಲ.

ಪ್ರೀತಿಯ ನಾಟಕವಾಡಿ ಹೋದವಳೆ… ಓಮ್ಮೆ ಕೇಳಿಲ್ಲಿ. ನಿನ್ನ ಮೈ ಬಣ್ಣಕ್ಕೆ ಮಾರು ಹೋದವನಲ್ಲ ನಾನು. ನಿನ್ನಲ್ಲಿರುವ ಮಗುವಿನಂಥ ಮುಗ್ಧ ಮಾತುಗಳಿಗೆ ಶರಣಾದವನು. ನೀನು ಮಾತನಾಡಲು ಪ್ರಾರಂಬಿಸಿದಾಗ ನಾನು ನನ್ನ ನೋವನ್ನೆಲ್ಲ ಮರೆತು, ನಿನ್ನ ಜಗತ್ತಿನಲ್ಲಿ ನನ್ನ ಮನಸ್ಸನ್ನು ತೇಲಿ ಬಿಡುತ್ತಿದ್ದೆ. ಒಂದು ದಿನ ನಿನ್ನ ಧ್ವನಿ ಬೀಳದಿದ್ದರೆ ಒಂದೇ ಸಮನೆ ಚಡಪಡಿಸುತ್ತಿದ್ದೆ. ಯಾಕೆ ಗೋತ್ತ? ನನ್ನ ಭವಿಷ್ಯ ಎಂಬ ಕನಸಿನ ಅರಮನೆಯನ್ನು ನಿನ್ನ ಜೊತೆ ಕಟ್ಟಿದ್ದೆ . ಅಷ್ಟರ ಮಟ್ಟಿಗೆ ನಿನ್ನನ್ನು ಪ್ರೀತಿಸುತ್ತಿದ್ದೆ.

ನಿನಗೂ ನನ್ನ ಮೇಲೆ ಅಷ್ಟೇ ಪ್ರೀತಿ ಇದೆ ಎಂದು ಭಾವಿಸಿದ್ದೆ. ಆದರೆ, ನಿನಗೆ ನನ್ನ ಮೇಲೆ ಇದ್ದದ್ದು ಬರಿ ಮೋಹವಷ್ಟೆ, ಟೈಮ್‌ ಪಾಸ್‌ಗಾಗಿ ನನ್ನನ್ನು ಬಳಸಿಕೊಂಡದ್ದು ಅಂತ ತಿಳಿದಿದ್ದು ನಿನ್ನ ಆ ಮುಗª ಧ್ವನಿಯಲ್ಲಿ ಕೇಳಿದ ಒರಟು ಮಾತುಗಳಿಂದ. “ನನಗೆ ನೀನು ಬೇಡ, ನಾ ಕಂಡ ಕನಸಿನ ಆ ಬದುಕು ನಿನ್ನಿಂದ ಸಿಗಲಾರದು’ ಅಂತ ನೀನು ಅಂದಾಗಲೂ ಸಹಿಸಿಕೊಂಡೆ. ಆದರೆ ನನ್ನ ಪ್ರೀತಿಯನ್ನೇ ಅನುಮಾನಿಸಿ, ನಾನು ನಿನಗೆ ಎಷ್ಪನೇ ಹುಡುಗಿ ಅಂದಾಗ ಮಾತ್ರ, ಬರ ಸಿಡಿಲು ಬಡಿದು ಆಕಾಶವೇ ಕಳಚಿ ಬಿದ್ದಂತೆ ಕುಸಿದು ಬಿದ್ದೆ.

ಆ ಮಾತುಗಳನ್ನು ನನಗೆ ಇಂದಿಗೂ ಸಹಿಸಿಕೊಳ್ಳಲಾಗುತ್ತಿಲ್ಲ . ಒಂದು ಸತ್ಯ ಹೇಳ್ತೀನಿ ನೆನಪಿಟ್ಟುಕೋ. ನನ್ನ ಮೊದಲ ಪ್ರೀತಿ ನೀನು. ಖಾಲಿ ಕೈಯಲ್ಲಿರುವಾಗಲೇ, ಪುಡಿಗಾಸನ್ನು ಜೋಡಿಸಿ ನಿನ್ನ ಖುಷಿಗಾಗಿ ಇಟ್ಟವನು ನಾನು. ಈಗ ಒಳ್ಳೆಯ ಉದ್ಯೋಗದಲ್ಲಿದ್ದೇನೆ. ಈಗ ಕೇಳಬೇಕಾ? ನಿನ್ನನ್ನು ರಾಣಿ ಥರಾ ನೋಡ್ಕೊತಿದ್ದೇ. ಈಗ ನೀ ನನ್ನನ್ನು ತೊರೆದು ಸಂತಸದಿಂದ ಇರಬಹುದು.

ನಾಳೆ ಬೇರೊಬ್ಬನನ್ನು ಮದುವೆಯೂ ಆಗಬಹುದು. ಆದರೆ, ನನ್ನಷ್ಟು ನಿಷ್ಕಲ್ಮಶವಾಗಿ ಯಾರೂ ನಿನ್ನ ಪ್ರೀತಿಸಲೂ ಸಾಧ್ಯವಿಲ್ಲ.

ನಿನ್ನ ಕೈ ಬೆರಳು ಹಿಡಿದು ಜಾತ್ರೆಯಲ್ಲಿ ಸುತ್ತಾಡಿದ್ದು, ಮ್ಯಾಚಿಂಗ್‌ ಡ್ರೆಸ್‌ ಹಾಕಿಕೊಂಡು ಅಕ್ಕನ ಮದುವೆಯಲ್ಲಿ ಓಡಾಡಿದ್ದು, ಅಕ್ಕ ಪಕ್ಕ ಕುಳಿತು ನವ ದಂಪತಿಯಂತೆ ಊಟ ಮಾಡಿದ್ದು, ಕಾಲೇಜಿನಲ್ಲಿ ನಿನ್ನ ಕಾರ್ಯಕ್ರಮಗಳು ಇದ್ದಾಗ ಮುಂದಿನ ಸಾಲಿನಲ್ಲಿ ಕುಳಿತು ನೊಡುತ್ತಿದ್ದದ್ದು , ನಿನ್ನ ನೋಡುವ ಸಲುವಾಗಿ ಕಾಲೇಜಿಗೆ ಬಂಕ್‌ ಮಾಡಿದ್ದು… ಇದನ್ನೆಲ್ಲ ನೀನು ಮರೆತಿರಬಹುದು. ಆದರೆ, ನಾನು ಮರೆತಿಲ್ಲ. ಮುಂದೊಂದು ದಿನ ನನ್ನ ಪ್ರೀತಿಯ ಬೆಲೆ ನಿನಗೆ ಅರ್ಥವಾಗುತ್ತದೆ. ಆದರೆ ಪ್ರಯೋಜನವಿಲ್ಲ, ಏಕೆಂದರೆ, ಆಗ ಕಾಲ ಮಿಂಚಿ ಹೋಗಿರುತ್ತದೆ. ಆಗ ಮರಳಿ ಬರುವ ಪ್ರಯತ್ನವೂ ಮಾಡಬೇಡ.

ಏಕೆಂದರೆ, ಮತ್ತೂಮ್ಮೆ ನಿನ್ನ ಮೋಹದ ಬಲೆಗೆ ಬೀಳುವ ಹುಡುಗ ನಾನಲ್ಲ .

ಅಮೃತ ಚಂದ್ರಶೇಖರ ತೀರ್ಥಹಳ್ಳಿ

ಟಾಪ್ ನ್ಯೂಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ

1-eweweqwe

Voting:ಹಿರಿಯ ನಾಗರಿಕರೇ ಮಾದರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

3-uv-fusion

Devotion: ಭಕ್ತಿಯ ಅರ್ಥವಾದರೂ ಏನು?

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Lok Sabha Election: ಬಿಜೆಪಿ ಸರ್ಕಾರದಿಂದ ಕ್ರೀಡೆಗೆ ಆದ್ಯತೆ: ಬಿ.ವೈ.ರಾಘವೇಂದ್ರ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.