ಹಾರುತ ದೂರ ದೂರ…


Team Udayavani, Jan 14, 2020, 5:00 AM IST

13

ನನಗಂತೂ ತುಂಬಾ ಸಂತೋಷವಾಗುತ್ತಿದೆ. ಕೊನೆಗೂ ನಮ್ಮ ಪ್ರೀತಿ ನಿಜವಾಯಿತು. ಹಲವು ವರ್ಷಗಳ ನನ್ನ ಪ್ರೇಮದ ತಪಸ್ಸಿಗೆ ಸಿಕ್ಕ ಅದ್ಭುತ ಕೊಡುಗೆ ಎಂದರೆ ಅದು ನೀನೇ. ನಿನ್ನ ಪ್ರೀತಿ, ನಿನ್ನ ಮನಸ್ಸನ್ನು ಗೆಲ್ಲಲು ನಾನು ಪಟ್ಟ ಶ್ರಮ ಅಷ್ಟಿಷ್ಟಲ್ಲ . ಅದೆಷ್ಟೋ ಕನಸುಗಳು ನನ್ನ ಮನದಲ್ಲಿ ಮನೆ ಮಾಡಿವೆ ಎಂದರೆ ನನಗೇ ನಂಬಲಾಗುತ್ತಿಲ್ಲ. ನಿನ್ನನ್ನು ಕವಿತೆಗಳಿಂದ ಅಲಂಕರಿಸಿ, ಉಪಮಾನ ಉಪಮೇಯ ಗಳೊಂದಿಗೆ ಆರಾಧನೆ ಮಾಡಿದರೆ ಸಾಲದು. ಕೊನೆಗೂ ನನ್ನ ಪ್ರೀತಿಗೆ ಜಯ ಲಭಿಸಿದೆ. ಅದೇ ನೆಪದಲ್ಲಿ ನನ್ನೊಳಗೆ ಹೊಸತನ, ಹೊಸ ಕನಸುಗಳು ಚಿಗುರೊಡೆಯುತ್ತಿವೆ. ಕಣ್ಣ ಮುಂದಿರುವ ಭವಿಷ್ಯ, ಬಣ್ಣ ಬಣ್ಣದಿಂದ ಸುಂದರವಾಗಿ ಗೋಚರಿಸುತ್ತಿದೆ . ನಿನ್ನೊಂದಿಗೆ ಕಳೆಯುವ ಕ್ಷಣಗಳೆಲ್ಲ ಆಕಾಶದಲ್ಲಿ ಹಕ್ಕಿಯ ಹಾಗೆ ಹಾರಾಡುತ್ತಿರುವಂತೆ ಭಾಸವಾಗುತ್ತಿವೆ.

ಪ್ರೀತಿಯೆಂಬ ಯುದ್ಧವನ್ನೇನೋ ಗೆದ್ದಾಯಿತು. ಆದರೆ, ಬದುಕೆಂಬ ಯುದ್ಧ ನಮ್ಮ ಕಣ್ಣಮುಂದಿದೆ. ಕನಸುಗಳನ್ನು ನನಸಾಗಿಸಲು ನಾವಿಬ್ಬರೂ ದೃಢವಾದ ಮನಸ್ಸು, ಅಚಲ ಪ್ರೀತಿ, ನಂಬಿಕೆ ವಿಶ್ವಾಸಗಳನ್ನು ಬದುಕಿನ ಕೊನೆಯವರೆಗೂ ಉಳಿಸಿಕೊಳ್ಳುವುದು ಮುಖ್ಯ. ಭವಿಷ್ಯದ ಭದ್ರ ಬುನಾದಿ ನಿರ್ಮಿಸಿಕೊಳ್ಳುವಲ್ಲಿ ನಮ್ಮ ಓದು, ಉದ್ಯೋಗ ಪ್ರಮುಖ ಪಾತ್ರವಹಿಸುತ್ತವೆ. ಈ ನಿಟ್ಟಿನಲ್ಲಿ ನಮ್ಮ ಗಮನ ಇವುಗಳ ಕಡೆಗೆ ಸಾಗಲಿ. ಹಾಗೆಂದ ಮಾತ್ರಕ್ಕೆ ಪ್ರೀತಿಗೆ ಕೊರತೆಯಾಯಿತು ಎಂಬ ಪ್ರಶ್ನೆಯೇ ಹುಟ್ಟುವುದಿಲ್ಲ. ನಮ್ಮ ಪ್ರೀತಿ ಎಂದಿಗೂ ಹಸಿರು. ಕಲ್ಪನೆಗೂ ಸಿಲುಕದ ಸುಂದರ ದಿನಗಳು ಇರುವಾಗ ನಮಗೆ ಯಾವುದರ ಭಯವೂ ಇಲ್ಲ ಎಂಬ ನಂಬಿಕೆ ಅಚಲವಾಗಿರಲಿ. ಎಲ್ಲರೂ ಹರಸಿ ಹಾರೈಸಿ ನಮ್ಮ ಸುಂದರ ಬದುಕಿಗೆ ನಾಂದಿ ಹಾಡುವಂಥ ವಿಶ್ವಾಸವನ್ನು ಗಳಿಸೋಣ. ಆನಂತರ, ಪ್ರೇಮಪಕ್ಷಿ ಗಳಾಗಿ ಹಾರುತ ದೂರ ದೂರ, ಬದುಕೆಂಬ ಕಡಲನ್ನು ದಾಟುವ.

ವೆಂಕಟೇಶ ಚಾಗಿ

ಟಾಪ್ ನ್ಯೂಸ್

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

congress

BJP ಅಭ್ಯರ್ಥಿ ಅವಿರೋಧ ಆಯ್ಕೆ: ಸೂರತ್‌ನ ಕಾಂಗ್ರೆಸ್‌ ಅಭ್ಯರ್ಥಿ ಉಚ್ಚಾಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.