ಭಾಗ್ಯಶ್ರೀ ಮಾತಿಗೆ ಬಾಲಿವುಡ್‌ ಅಚ್ಚರಿ


Team Udayavani, Mar 6, 2020, 4:11 AM IST

ಭಾಗ್ಯಶ್ರೀ ಮಾತಿಗೆ ಬಾಲಿವುಡ್‌ ಅಚ್ಚರಿ

ಬಾಲಿವುಡ್‌ನ‌ಲ್ಲಿ 1989ರಲ್ಲಿ ತೆರೆಗೆ ಬಂದಿದ್ದ ಮೈನೇ ಪ್ಯಾರ್‌ ಕಿಯಾ ಚಿತ್ರ ಅನೇಕರಿಗೆ ನೆನಪಿರಬಹುದು. ಈ ಚಿತ್ರದಲ್ಲಿ ತೆರೆಮೇಲೆ ಒಟ್ಟಾಗಿ ಕಾಣಿಸಿಕೊಂಡಿದ್ದ ಸಲ್ಮಾನ್‌ ಖಾನ್‌ ಮತ್ತು ಭಾಗ್ಯಶ್ರೀ ಜೋಡಿಯ ಅಭಿನಯಕ್ಕೆ ಬಾಲಿವುಡ್‌ ಸಿನಿಪ್ರಿಯರು ಫಿದಾ ಆಗಿದ್ದರು. ತೆರೆಗೆ ಬಂದು ಸೂಪರ್‌ಹಿಟ್‌ ಆಗಿದ್ದ ಮೈನೇ ಪ್ಯಾರ್‌ ಕಿಯಾ ಚಿತ್ರದ ಹಾಡುಗಳು ಇಂದಿಗೂ ಅನೇಕರ ಬಾಯಲ್ಲಿ ಆಗಾಗ್ಗೆ ಗುನುಗುತ್ತಿರುತ್ತದೆ. ಈಗ ಯಾಕೆ ಮೈನೇ ಪ್ಯಾರ್‌ ಕಿಯಾ ಚಿತ್ರದ ಬಗ್ಗೆ ಮಾತು ಅಂತೀರಾ? ಅದಕ್ಕೊಂದು ಕಾರಣವಿದೆ. ಈ ಚಿತ್ರದಲ್ಲಿ ಸಲ್ಮಾನ್‌ ಖಾನ್‌ಗೆ ಜೋಡಿಯಾಗಿ ಅಭಿನಯಿಸಿದ್ದ ನಟಿ ಭಾಗ್ಯಶ್ರೀ, ಇತ್ತೀಚೆಗೆ ಈ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಅಷ್ಟೇ ಆಗಿದ್ದರೆ ಪರವಾಗಿಲ್ಲ, ಬದಲಾಗಿ ಈ ಚಿತ್ರದ ಶೂಟಿಂಗ್‌ ವೇಳೆ ನಟ ಸಲ್ಮಾನ್‌ ಖಾನ್‌ ತನ್ನೊಡನೆ ಫ್ಲರ್ಟ್‌ ಮಾಡಿ, ಕಿರಿಕಿರಿ ಮಾಡುತ್ತಿದ್ದ ಎಂಬ ವಿಷಯವನ್ನು ಬಹಿರಂಗಪಡಿಸಿದ್ದಾರೆ.

ಹೌದು, ಇತ್ತೀಚೆಗೆ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನಟಿ ಭಾಗ್ಯಶ್ರೀ, ಸುಮಾರು ಮೂವತ್ತು ವರ್ಷಗಳ‌ ಹಿಂದಿನ ಘಟನೆಗಳನ್ನು ತೆರೆದಿಟ್ಟಿದ್ದಾರೆ. “”ನಾನು ಉದ್ಯಮಿ ಹಿಮಾಲಯ ದಸಾನಿಯನ್ನು ಪ್ರೀತಿ ಮಾಡುತ್ತಿರುವ ವಿಷಯ ಮೊದಲು ಗೊತ್ತಾಗಿದ್ದೇ ಸಲ್ಮಾನ್‌ ಖಾನ್‌ಗೆ. ಅದು “ದಿಲ್‌ ದೀವಾನಾ…’ ಸಾಂಗ್‌ ಶೂಟಿಂಗ್‌ ಸಂದರ್ಭದಲ್ಲಿ. ಆ ಹಾಡಿನ ಶೂಟಿಂಗ್‌ ಸಮಯದಲ್ಲಿ ಸಲ್ಮಾನ್‌ ಖಾನ್‌ ನನ್ನ ಹಿಂದೆ ಸುತ್ತುತ್ತಿದ್ದ. ನನ್ನ ಕಿವಿ, ಮುಖದ ಸಮೀಪಕ್ಕೆ ಬಂದು ಹಾಡುಗಳನ್ನು ಹಾಡುತ್ತಿದ್ದ. “ನಮ್ಮ ಬಗ್ಗೆ ಜನ ಇಲ್ಲ ಸಲ್ಲದ ವಿಷಯ ಮಾತನಾಡುತ್ತಾರೆ, ಹೀಗೆಲ್ಲ ಮಾಡಬೇಡ’ ಅಂತ ಸಲ್ಮಾನ್‌ಗೆ ವಾರ್ನಿಂಗ್‌ ಕೊಟ್ಟಿದ್ದೆ. ಆದರೆ, ಅವರು ಕೇಳಲಿಲ್ಲ. ಆ ರೀತಿ ಎರಡು ದಿನಗಳ ಕಾಲ ನನ್ನನ್ನು ಕಾಡಿದ ಬಳಿಕ, ನಾನು ಪ್ರೀತಿಸುತ್ತಿರುವ ಸಂಗತಿ ಗೊತ್ತು ಎಂದು ಹೇಳಿದ್ದರು. ಜೊತೆಗೆ ಲೋಕೇಶನ್‌ಗೂ ಹಿಮಾಲಯ್‌ನ ಕರೆಸುವಂತೆ ಸಲ್ಮಾನ್‌ ಸೂಚಿಸಿದರು. ತನಗೆ ಕಿರಿಕಿರಿ ಮಾಡಬೇಕೆಂಬ ಉದ್ದೇಶದಿಂದ ಸಲ್ಮಾನ್‌ ಖಾನ್‌ ಅತ್ಯಂತ ಸಲುಗೆಯಿಂದ ನನ್ನ ಜೊತೆಗೆ ನಡೆದುಕೊಳ್ಳುತ್ತಿದ್ದರು” ಎಂದು ನಟಿ ಭಾಗ್ಯಶ್ರೀ ಹೇಳಿದ್ದಾರೆ.

ಸಾಮಾನ್ಯವಾಗಿ ವಿವಾಹವಾಗಿ, ಚಿತ್ರರಂಗದಿಂದ ದೂರವುಳಿದ ಬಳಿಕ ನಟಿಯರು ತಮ್ಮ ಹಿಂದಿನ ಜೀವನದ ಘಟನೆಗಳ ಬಗ್ಗೆ ಮಾತನಾಡುವುದು ಅಪರೂಪ. ಈಗ ಭಾಗ್ಯಶ್ರೀ ತನಗೆ ಸಂಬಂಧಿಸಿದ ಹಳೆ ಘಟನೆಯೊಂದನ್ನು ಬಹಿರಂಗಪಡಿಸಿ, ಅದಕ್ಕೆ ಸಂಬಂಧಿಸಿದಂತೆ ಸಲ್ಮಾನ್‌ ಖಾನ್‌ ಹೆಸರನ್ನು ಹೊರತಂದಿರುವುದು ಬಾಲಿವುಡ್‌ ಮಂದಿಯ ಹುಬ್ಬೇರುವಂತೆ ಮಾಡಿದೆ.

ಮೈನೇ ಪ್ಯಾರ್‌ ಕಿಯಾ ಬಾಲಿವುಡ್‌ನ‌ಲ್ಲಿ ಸಲ್ಮಾನ್‌ ಖಾನ್‌ ಹೀರೋ ಆಗಿ ನಟಿಸಿದ ಮೊದಲ ಚಿತ್ರ. ಈ ಚಿತ್ರಕ್ಕೆ ಸೂರಜ್‌ ಭಾರ್ಜಾತ್ಯ ಆಕ್ಷನ್‌- ಕಟ್‌ ಹೇಳಿದ್ದಾರೆ. ಈ ಚಿತ್ರದ ಬಳಿಕ ಸಲ್ಮಾನ್‌ ಖಾನ್‌ ಸ್ಟಾರ್‌ ನಟನ ಪಟ್ಟಕ್ಕೇರಿದರೆ, ಭಾಗ್ಯಶ್ರೀ ತಾನು ಪ್ರೀತಿಸುತ್ತಿದ್ದ ಹಿಮಾಲಯ್‌ ದಾಸನ್‌ ಅವರನ್ನು ಮದುವೆಯಾಗಿ ಬಾಲಿವುಡ್‌ಗೆ ಗುಡ್‌ಬೈ ಹೇಳಿದ್ದರು. ಸದ್ಯ ಭಾಗ್ಯಶ್ರೀ ದಂಪತಿಗೆ ಓರ್ವ ಪುತ್ರ ಮತ್ತು ಪುತ್ರಿ ಇದ್ದಾರೆ. ಪುತ್ರ ಅಭಿಮನ್ಯು ಮರ್ದ್ ಕೊ ದರ್ದ್ ನಹೀ ಹೋತಾ ಚಿತ್ರದ ಮೂಲಕ ಬಾಲಿವುಡ್‌ಗೆ ಇತ್ತೀಚೆಗೆ ಅಡಿಯಿಟ್ಟಿದ್ದಾರೆ.

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.