ರಣಜಿ: ಬಂಗಾಲ ಕಾಡಿದ ಅರ್ಪಿತ್‌, ಪೂಜಾರ


Team Udayavani, Mar 11, 2020, 7:00 AM IST

ರಣಜಿ: ಬಂಗಾಲ ಕಾಡಿದ ಅರ್ಪಿತ್‌, ಪೂಜಾರ

ರಾಜ್‌ಕೋಟ್‌: ಅರ್ಪಿತ್‌ ವಸವದ (106 ರನ್‌) ಹಾಗೂ ಚೇತೇಶ್ವರ ಪೂಜಾರ (66 ರನ್‌) ಅವರ ಮಾಸ್ಟರ್‌ ಕ್ಲಾಸ್‌ ಬ್ಯಾಟಿಂಗ್‌ ವೈಭವದಿಂದ ರಣಜಿ ಫೈನಲ್‌ನಲ್ಲಿ ಬಂಗಾಲ ವಿರುದ್ಧ ಆತಿಥೇಯ ಸೌರಾಷ್ಟ್ರ ಬೃಹತ್‌ ಮೊತ್ತದ ಕಡೆ ದಿಟ್ಟ ಹೆಜ್ಜೆ ಇಟ್ಟಿದೆ.

ಎರಡನೇ ದಿನದ ಅಂತ್ಯಕ್ಕೆ ಸೌರಾಷ್ಟ್ರ ಮೊದಲ ಇನ್ನಿಂಗ್ಸ್‌ನಲ್ಲಿ 8 ವಿಕೆಟಿಗೆ 384 ರನ್‌ ಗಳಿಸಿದೆ. ತಂಡದ ಚಿರಾಗ್‌ ಜಾನಿ (ಅಜೇಯ 13) ಹಾಗೂ ಧರ್ಮೇಂದ್ರ ಸಿನ್ಹ ಜಡೇಜ (ಅಜೇಯ 13) ಮೂರನೇ ದಿನಕ್ಕೆ ಬ್ಯಾಟಿಂಗ್‌ ಕಾಯ್ದುಕೊಂಡಿದ್ದು ಮೊತ್ತವನ್ನು ಇನ್ನಷ್ಟು ಹೆಚ್ಚಿಸುವ ವಿಶ್ವಾಸದಲ್ಲಿದೆ.

ಇದರಿಂದಾಗಿ ಬಂಗಾಲ ತೀವ್ರ ಒತ್ತಡಕ್ಕೆ ಸಿಲುಕಿಕೊಂಡಿದೆ.

ಐದು ವಿಕೆಟಿಗೆ 206 ರನ್ನಿನಿಂದ ಸೌರಾಷ್ಟ್ರ ಬ್ಯಾಟಿಂಗ್‌ ಮುಂದುವರಿಸಿತು. ಬೇಗನೇ ಆಲೌಟಾಗಬಹುದೆಂದು ಭಾವಿಸಲಾಗಿತ್ತು. ಆದರೆ ಸೌರಾಷ್ಟ್ರ ಇದನ್ನೆಲ್ಲ ಮೀರಿ ಮುಂದು ವರಿದದ್ದು ವಿಶೇಷವಾಗಿತ್ತು. ಮೊದಲ ದಿನ 29 ರನ್‌ ಗಳಿಸಿ ಅಜೇಯರಾಗಿ ಉಳಿದಿದ್ದ ಅರ್ಪಿತ್‌ ವಸವದ ಶತಕ ಬಾರಿಸಿ ಮೆರೆದರು. ಜ್ವರದಿಂದಾಗಿ ಮೊದಲ ದಿನ ಕ್ರೀಸ್‌ನಿಂದ ಹೊರ ನಡೆದಿದ್ದ ಚೇತೇಶ್ವರ ಪೂಜಾರ ಮಂಗಳವಾರ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ ನಡೆಸಿ ಅರ್ಧ ಶತಕ ಹೊಡೆದರು. ಇಬ್ಬರು ಸೇರಿಕೊಂಡು 6ನೇ ವಿಕೆಟಿಗೆ 380 ಎಸೆತ ಎದುರಿಸಿ 142 ರನ್‌ ಜತೆಯಾಟ ನಿರ್ವಹಿಸಿದರು. ಇಬ್ಬರೂ ತಾಳ್ಮೆಯ ಬ್ಯಾಟಿಂಗ್‌ ನಡೆಸಿದ್ದರಿಂದ ಸೌರಾಷ್ಟ್ರ ಉತ್ತಮ ಮೊತ್ತ ಪೇರಿಸಲು ಸಾಧ್ಯವಾಯಿತು.

ಅರ್ಪಿತ್‌-ಪೂಜಾರ ಭರ್ಜರಿ ಆಟ: ಅರ್ಪಿತ್‌ ಮತ್ತು ಪೂಜಾರ ಅವರ ಟೆಸ್ಟ್‌ ಶೈಲಿಯ ಬ್ಯಾಟಿಂಗ್‌ ಗಮನ ಸೆಳೆಯಿತು. ಆತುರದ ಹೊಡೆತಕ್ಕೆ ಹೋಗದೇ ತಪ್ಪು ಎಸೆತಗಳನ್ನು ಮಾತ್ರ ದಂಡಿಸುತ್ತ ರನ್‌ ಪೇರಿಸುತ್ತ ಹೋದರು. ಈ ಜೋಡಿಯನ್ನು ಮುರಿಯಲು ಬಂಗಾಲ ಹಲವು ಬಾರಿ ಬೌಲಿಂಗ್‌ ಬದಲಾವಣೆ ಮಾಡಿತು. ಅವರಿಬ್ಬರು 380 ಎಸೆತ ಎದುರಿಸಿದ ಬಳಿಕ ಬೇರ್ಪಟ್ಟರು. ಈ ಮೂಲಕ ಸೌರಾಷ್ಟ್ರವನ್ನು ಸುಸ್ಥಿತಿಗೆ ತಲುಪಿಸಲು ಯಶಸ್ವಿಯಾದರು.

ಅರ್ಪಿತ್‌ ವಸವದ ಒಟ್ಟು 287 ಎಸೆತ ಎದುರಿಸಿ 11 ಬೌಂಡರಿ ನೆರವಿನಿಂದ ಶತಕ ಬಾರಿಸಿ ಮೆರೆದರು. ಗುಜರಾತ್‌ ವಿರುದ್ಧ ಸೆಮಿಫೈನಲ್‌ ಪಂದ್ಯದಲ್ಲಿ ಅರ್ಪಿತ್‌ ವಸವದ 139 ರನ್‌ ಸಿಡಿಸಿ ತಂಡದ ಗೆಲುವಿಗೆ ಕಾರಣರಾಗಿದ್ದನ್ನು ಸ್ಮರಿಸಬಹುದು.

ಜ್ವರದಿಂದ ಚೇತರಿಸಿದ ಚೇತೇಶ್ವರ್‌
ಮತ್ತೂಂದು ಕಡೆ ಜ್ವರ ಸಂಪೂರ್ಣ ಕಡಿಮೆಯಾಗದಿದ್ದರೂ ಕ್ರೀಸ್‌ಗೆ ಇಳಿದ ಪೂಜಾರ ಮೈಚಳಿ ಬಿಟ್ಟು ಆಡಿದರು. 237 ಎಸೆತ ಎದುರಿಸಿದ ಪೂಜಾರ ಒಟ್ಟು 5 ಬೌಂಡರಿ ನೆರವಿನಿಂದ ತಂಡಕ್ಕೆ ನೆರವಾದರು. ತಂಡದ ಮೊತ್ತ 348 ರನ್‌ ಆಗುತ್ತಿದ್ದಂತೆ ಶತಕ ಗಳಿಸಿದ್ದ ಅರ್ಪಿತ್‌, ಬೌಲರ್‌ ಶಹಬಾಜ್‌ ಅಹ್ಮದ್‌ ಎಸೆತದಲ್ಲಿ ಸಹಾಗೆ ಸ್ಟಂಪ್‌ ಔಟಾದರು. ಆಗ ತಂಡ 6 ವಿಕೆಟಿಗೆ 348 ರನ್‌ಗಳಿಸಿತ್ತು. ಇದಕ್ಕೆ 10 ರನ್‌ ಸೇರಿಸುವಷ್ಟರಲ್ಲಿ ಮುಕೇಶ್‌ ಕುಮಾರ್‌ ಎಸೆತದಲ್ಲಿ ಪೂಜಾರ ಎಲ್‌ಬಿ ಬಲೆಗೆ ಬಿದ್ದು ಹೊರನಡೆದರು. ದಿನದ ಅಂತ್ಯದ ಅವಧಿಯಲ್ಲಿ ಸೌರಾಷ್ಟ್ರದ 3 ವಿಕೆಟ್‌ ಕೇವಲ 16 ರನ್‌ಗೆ ಉರುಳಿದ್ದರೂ ತಂಡಕ್ಕೆ ಹೆಚ್ಚಿನ ಅಪಾಯವಾಗಲಿಲ್ಲ.

ಅಂಪಾಯರ್‌ಗೆ ಗಾಯ
ಸೌರಾಷ್ಟ್ರ -ಬಂಗಾಲ ನಡುವಿನ ಪಂದ್ಯದ ವೇಳೆ ಮೈದಾನದಲ್ಲಿ ಅವಘಡವೊಂದು ಸಂಭವಿಸಿದೆ. ಹೊಟ್ಟೆಯ ಕೆಳಭಾಗಕ್ಕೆ ಚೆಂಡು ಬಡಿದ ಕಾರಣ ಫೀಲ್ಡ್‌ ಅಂಪಾಯರ್‌ ಸಿ. ಸಂಶುದ್ದಿನ್‌ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಘಟನೆ ಮೊದಲ ದಿನ ಸಂಭವಿಸಿದೆ. ರಾತ್ರಿ ನೋವು ತೀವ್ರಗೊಂಡ ಕಾರಣ ಮಂಗಳವಾರ ಬೆಳಗ್ಗೆ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಲಾಯಿತು. ಹೀಗಾಗಿ ಅವರು ದ್ವಿತೀಯ ದಿನ ಅಂಪಾಯರ್‌ ಆಗಿ ಕರ್ತವ್ಯ ನಿರ್ವಹಿಸಿಲ್ಲ,
ದ್ವಿತೀಯ ದಿನದ ಮೊದಲ ಅವಧಿಯಲ್ಲಿ ಸಂಶುದ್ದಿನ್‌ ಅವರ ಜತೆಗಾರ ಅನಂತ ಪದ್ಮನಾಧನ್‌ ಒಬ್ಬರೇ ಅಂಪಾಯರ್‌ ಆಗಿ ಕರ್ತವ್ಯ ನಿರ್ವಹಿಸಿದರು. ಪಿಯೂಷ್‌ ಖಾಕರ್‌ ಸ್ಕ್ವೇರ್‌ ಲೆಗ್‌ನಲ್ಲಿ ನಿಂತು ನೆರವಿತ್ತರು. ಊಟದ ವಿರಾಮದ ಬಳಿಕ ಪದ್ಮನಾಭನ್‌ ಜತೆ ಎಸ್‌. ರವಿ ಕೂಡ ಮೈದಾನದಲ್ಲಿ ಅಂಪಾಯರ್‌ ಆಗಿ ಕರ್ತವ್ಯ ನಿರ್ವಹಿಸಿದರೆ ಸಂಶುದ್ದಿನ್‌ ಟಿವಿ ಅಂಪಾಯರ್‌ ಪಾತ್ರ ನಿರ್ವಹಿಸಿದರು.

ಸಂಶುದ್ದಿನ್‌ ಬದಲಿಗೆ ಆಯ್ಕೆಯಾದ ಯಶವಂತ್‌ ಬಾರ್ಡೆ ಮೂರನೇ ದಿನ ಪದ್ಮನಾಭನ್‌ ಜತೆಗೂಡಿ ಅಂಪಾಯರ್‌ ಆಗಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಟಾಪ್ ನ್ಯೂಸ್

ಅಧಿಕಾರಿ ಆತ್ಮಹತ್ಯೆ: ಚುರುಕುಗೊಂಡ ಸಿಐಡಿ ತನಿಖೆ

ಅಧಿಕಾರಿ ಆತ್ಮಹತ್ಯೆ: ಚುರುಕುಗೊಂಡ ಸಿಐಡಿ ತನಿಖೆ

ಅಲ್ಪಸಂಖ್ಯಾಕ ಆಯೋಗದ ಅಧ್ಯಕ್ಷರ ಪದಚ್ಯುತಿ ಕಾನೂನು ಬದ್ಧ

ಅಲ್ಪಸಂಖ್ಯಾಕ ಆಯೋಗದ ಅಧ್ಯಕ್ಷರ ಪದಚ್ಯುತಿ ಕಾನೂನು ಬದ್ಧ

Bhavani Revanna ಜಾಮೀನು ಭವಿಷ್ಯ ನಾಳೆ ನಿರ್ಧಾರ

Bhavani Revanna ಜಾಮೀನು ಭವಿಷ್ಯ ನಾಳೆ ನಿರ್ಧಾರ

ಜೂ. 7ಕ್ಕೆ ದೇವರಾಜೇಗೌಡ ಜಾಮೀನು ವಿಚಾರಣೆ

ಜೂ. 7ಕ್ಕೆ ದೇವರಾಜೇಗೌಡ ಜಾಮೀನು ವಿಚಾರಣೆ

Prajwalಪ್ರಜ್ವಲ್‌ ನಿವಾಸದಲ್ಲಿ ಎಸ್‌ಐಟಿ 10 ಗಂಟೆಗಳ ಕಾಲ ಹುಡುಕಾಟ

ಪ್ರಜ್ವಲ್‌ ನಿವಾಸದಲ್ಲಿ ಎಸ್‌ಐಟಿ 10 ಗಂಟೆಗಳ ಕಾಲ ಹುಡುಕಾಟ

Pen drive ಹಂಚಿಕೆ: ನವೀನ್‌ ಗೌಡ, ಚೇತನ್‌ ಗೌಡ 3 ದಿನ ಎಸ್‌ಐಟಿ ವಶಕ್ಕೆ

Pen drive ಹಂಚಿಕೆ: ನವೀನ್‌ ಗೌಡ, ಚೇತನ್‌ ಗೌಡ 3 ದಿನ ಎಸ್‌ಐಟಿ ವಶಕ್ಕೆ

Koppala: 3 ಲಕ್ಷ ರೂ.ಪಡೆಯುವಾಗ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಅಧಿಕಾರಿ

Koppala: 3 ಲಕ್ಷ ರೂ.ಪಡೆಯುವಾಗ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಅಧಿಕಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Modi, Shah, Dhoni, Shahrukh, Sachin apply for the post of Team India coach!

Team India ಕೋಚ್ ಹುದ್ದೆಗೆ ಮೋದಿ, ಶಾ, ಧೋನಿ, ಶಾರುಖ್, ಸಚಿನ್ ಅರ್ಜಿ! ಏನಿದರ ಅಸಲೀಯತ್ತು?

Shortage of players: Aussies coach, head of selection committee fielded against Namibia

AUSvsNAM; ಆಟಗಾರರ ಕೊರತೆ: ಫೀಲ್ಡಿಂಗ್ ಮಾಡಿದ ಆಸೀಸ್ ಕೋಚ್, ಆಯ್ಕೆ ಸಮಿತಿ ಮುಖ್ಯಸ್ಥ

1-w-eewqe

India ಕ್ರಿಕೆಟ್‌ ತಂಡದ ನೂತನ ಕೋಚ್‌ ಆಗಿ ಗೌತಮ್‌ ಗಂಭೀರ್‌; ಘೋಷಣೆಯಷ್ಟೇ ಬಾಕಿ

1-wewqewqe

Major League ಕ್ರಿಕೆಟ್‌ ಕೂಟಕ್ಕೆ ಅಧಿಕೃತ ಲಿಸ್ಟ್‌ ‘ಎ’ ಸ್ಥಾನಮಾನ

pragyananda

Norway ಚೆಸ್‌ ಕೂಟ: ಪ್ರಜ್ಞಾನಂದಗೆ ಗೆಲುವು

MUST WATCH

udayavani youtube

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕನ ಆತ್ಮಹ*ತ್ಯೆ ಪ್ರಕರಣ,ಅಧಿಕಾರಿಗಳ ಭೇಟಿ

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

ಹೊಸ ಸೇರ್ಪಡೆ

ಅಧಿಕಾರಿ ಆತ್ಮಹತ್ಯೆ: ಚುರುಕುಗೊಂಡ ಸಿಐಡಿ ತನಿಖೆ

ಅಧಿಕಾರಿ ಆತ್ಮಹತ್ಯೆ: ಚುರುಕುಗೊಂಡ ಸಿಐಡಿ ತನಿಖೆ

ಅಲ್ಪಸಂಖ್ಯಾಕ ಆಯೋಗದ ಅಧ್ಯಕ್ಷರ ಪದಚ್ಯುತಿ ಕಾನೂನು ಬದ್ಧ

ಅಲ್ಪಸಂಖ್ಯಾಕ ಆಯೋಗದ ಅಧ್ಯಕ್ಷರ ಪದಚ್ಯುತಿ ಕಾನೂನು ಬದ್ಧ

Bhavani Revanna ಜಾಮೀನು ಭವಿಷ್ಯ ನಾಳೆ ನಿರ್ಧಾರ

Bhavani Revanna ಜಾಮೀನು ಭವಿಷ್ಯ ನಾಳೆ ನಿರ್ಧಾರ

ಜೂ. 7ಕ್ಕೆ ದೇವರಾಜೇಗೌಡ ಜಾಮೀನು ವಿಚಾರಣೆ

ಜೂ. 7ಕ್ಕೆ ದೇವರಾಜೇಗೌಡ ಜಾಮೀನು ವಿಚಾರಣೆ

Prajwalಪ್ರಜ್ವಲ್‌ ನಿವಾಸದಲ್ಲಿ ಎಸ್‌ಐಟಿ 10 ಗಂಟೆಗಳ ಕಾಲ ಹುಡುಕಾಟ

ಪ್ರಜ್ವಲ್‌ ನಿವಾಸದಲ್ಲಿ ಎಸ್‌ಐಟಿ 10 ಗಂಟೆಗಳ ಕಾಲ ಹುಡುಕಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.