ಹೋಟೆಲ್‌ನಲ್ಲಿ ಗೊತ್ತಾಯ್ತು ವ್ಯವಹಾರದ ಒಳ ಗುಟ್ಟು…


Team Udayavani, Apr 21, 2020, 12:12 PM IST

ಹೋಟೆಲ್‌ನಲ್ಲಿ ಗೊತ್ತಾಯ್ತು ವ್ಯವಹಾರದ ಒಳ ಗುಟ್ಟು…

ಸಾಂದರ್ಭಿಕ ಚಿತ್ರ

ನನ್ನ ಮಗನೇ, ನಿನಗೇ ಓದು ಬರಲ್ವೋ… ಹೀಗಂತ ನಮ್ಮ ತಂದೆ ಬಯ್ಯೋರು. ಅದು ಬರೀ ಬೈಗುಳ ಅಂದುಕೊಂಡಿದ್ದೆ. ಕೊನೆಗೆ, ಶಾಪದ ರೀತೀನೇ ನನ್ನ ಸುತ್ತೋಕೆ ಶುರು ಮಾಡ್ತು ನೋಡಿ, ಆಗ ಶಾಲೆಯಲ್ಲಿ ಕನ್ನಡ ಬಿಟ್ಟರೆ, ಬೇರೇನೂ ತಲೆಗೆ ಹತ್ತುತ್ತಿರಲಿಲ್ಲ. ಮೂರನೇ ಕ್ಲಾಸಲ್ಲಿ ಮಗ್ಗಿ ಹೇಳಿಕೊಡೋರು. ಅದೊಂಥರ, ಸೀದು ಹೋಗಿರೋ ಕಡ್ಲೆ ಬೀಜದ ಥರ ಕಾಡೋದು. ಒಂದು ಸಲ
ತಿಂದರೆ, ಹತ್ತು ನಿಮಿಷ ಬಾ ಯಲ್ಲಿ ಕಹಿಕಹಿ ಇರುತ್ತಲ್ಲ ಹಾಗೆ! ನಮ್ಮ ಮೇಷ್ಟ್ರು, ಜೀವನದಲ್ಲಿ ಏನಾಗ್ತಿಯಯ್ನಾ ಅಂತ ಕೇಳಿದಾಗೆಲ್ಲ, “ಇನ್‌ಸ್ಪೆಕ್ಟರ್‌ ಆಗ್ತೀನೆ ಸಾರ್‌’ ಅಂತಿದ್ದೆ. ಆದರೂ, ನಿಜಕ್ಕೂ ನಾನು ಅಂಥಾ ಪೋಸ್ಟ್ ಗೆ ಹೋಗ್ತಿನಾ? ಓದೋಕೆ, ಬರೆಯೋಕೆ ಬರೋಲ್ಲ ಅಂತೆಲ್ಲ, ಒಳಮನಸ್ಸು ಹಂಗಿಸೋದು.

ನಾಲ್ಕನೇ ಕ್ಲಾಸ್‌ ತನಕ ಹಾಗೂ ಹೀಗೂ ಹೋದೆ. ಆಮೇಲೆ ಆಗಲಿಲ್ಲ. ಅಪ್ಪನ ಜೊತೆ ಹೋಟೆಲ್‌ಗೆ ಹೋಗೋದು, ಅವರು ಬೋಂಡಾ ಹಾಕುತ್ತಿದ್ದರೆ ಪಕ್ಕದಲ್ಲಿ ನಿಂತಿರೋದು, ಆಮೇಲಾಮೇಲೆ ಬೋಂಡಾ ಸಪ್ಲೈ ಮಾಡೋಕೆಲ್ಲ ಶುರುಮಾಡಿದೆ. ಅಪ್ಪನಿಗೆ ಹುಷಾರಿಲ್ಲ ಅಂದಾಗ, ನಾನೇ ಸ್ವಲ್ಪ ಸ್ವಲ್ಪ ಜವಾಬ್ದಾರಿ ತಗೊಳ್ಳುತ್ತಿದ್ದೆ. ಕ್ರಮೇಣ, ತಿಂಡಿಗಳನ್ನು ಮಾಡಲು ಕಲಿತೆ. ಜೀವನದಲ್ಲಿ
ಇನ್‌ಸ್ಪೆಕ್ಟರ್‌ ಆಗಬೇಕು ಅನ್ನೋ ಕನಸು, ಮರೆತು ಹೋಗುತ್ತಾ ಬಂತು. ಕೈಗೊಂದಷ್ಟು ದುಡ್ಡು ಸಿಗುತ್ತಿದ್ದುದರಿಂದ, ಬೇರೆ ಕಡೆ ಗಮನ ಹರಿಯಲಿಲ್ಲ. ಅಪ್ಪನ ಮರಣದ ನಂತರ, ಮೂವರು ತಮ್ಮಂದಿರನ್ನು ಸಂಬಾಳಿಸಿಕೊಂಡೇ, ಹೋಟೆಲ್‌ ಜವಾಬ್ದಾರಿಯನ್ನೂ ಹೊತ್ತುಕೊಂಡೆ. ಆ ಹೊತ್ತಿಗೆ, ಓದುವ ಹುಮ್ಮಸ್ಸು ಇರಲಿಲ್ಲ. ವಯಸ್ಸು ಆಗುತ್ತಾ ಬಂತು. ಹಣದ ಲೆಕ್ಕಾಚಾರಕ್ಕೆ, ನನ್ನ ಹೋಟೆಲ್ಲೇ ಬ್ಯುಸಿನೆಸ್‌ ಗುರು. ವ್ಯವಹಾರದ ಒಳಗುಟ್ಟುಗಳು ಅರ್ಥವಾದದ್ದು ಹೋಟೆಲ್‌ನಲ್ಲಿಯೇ.

ನಾನಂತೂ ತೂಕ ಹಾಕಿ ತಿಂಡಿ ಕೊಡುತ್ತಿರಲಿಲ್ಲ. ಒಂದು ಅಳತೆ ಇರಬೇಕು, ಅದು ಇತ್ತಾದರೂ, ಅದಕ್ಕಿಂತ ಹೆಚ್ಚಾಗಿಯೇ ಕೊಡುತ್ತಿದ್ದೆ. ಕಾರಣ, ನನ್ನ ಗಿರಾಕಿಗಳು ಗೆಳೆಯರು, ನಮ್ಮ ಊರಿನವರೇ ಆಗಿ ದ್ದರು. ಅವರು ಹೊಟ್ಟೆ ತುಂಬಾ ತಿಂದರೆ ತಪ್ಪೇನು? ನಮ್ಮವರೇ ಅಲ್ವೇ ಅನ್ನೋದು ನನ್ನ ಬಾವನೆ. ನಿಜ ಹೇಳಬೇಕೆಂದರೆ, ಹೋಟೆಲ್‌ ಬ್ಯುಸಿನೆಸ್‌ ಮಾಡೋರಿಗೆ ಈ ರೀತಿ ಮೈಂಡ್‌ಸೆಟ್‌ ಇರಬಾರದು. ಲಾಭದ ಪ್ರಮಾಣ ಇಳಿಕೆಯಾಗುತ್ತದೆ ಅಂತ ತಿಳಿಯುವ ಹೊತ್ತಿಗೆ ಬಹಳ ನಿಧಾನವಾಗಿತ್ತು. ನನಗೆ ಸಿಕ್ಕಾಪಟ್ಟೆ ಲಾಭ ಬರುತ್ತಿರಲಿಲ್ಲ. ಅದಕ್ಕೆ ಕಾರಣ, ಈ ಮನೋಭಾವ. ಏನೇ ಆದರೂ, ಮನಸ್ಸು ಹೇಳಿದಂತೆ ಕೇಳುತ್ತಿದ್ದೆ. ಈ ಹೋಟೆಲ…, ಬದುಕು ನಡೆಸಲು ನೆರವಾಗಿದೆ. ಇಲ್ಲಿ ಸಂಪಾದಿಸಿದ ಹಣದಿಂದಲೇ ಮನೆ ಕಟ್ಟಿಸಿದೆ. ಮಗನ ಮದುವೆ ಮಾಡಿದೆ. ತೀರಾ ಲಾಭ ಅಲ್ಲದೇ ಇದ್ದರೂ, ನಷ್ಟವಂತೂ ಆಗಿಲ್ಲ. ಅಂದಮೇಲೆ, ಇದಕ್ಕಿಂತ ಒಳ್ಳೆಯ ಪ್ರೊಫೆಷನ್‌ ಬೇಕಾ?

ಪಿ. ವಾಸು, ಚಿತ್ರದುರ್ಗ

ಟಾಪ್ ನ್ಯೂಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ

siddaramaiah

Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

ʼರಾಮಾಯಣʼ ಸೆಟ್‌ನಿಂದ ʼರಾಮ – ಸೀತೆʼಯಾದ ರಣ್ಬೀರ್-‌ ಸಾಯಿಪಲ್ಲವಿ ಪಾತ್ರದ ಫೋಟೋ ಲೀಕ್

13-bk-hariprasad

ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್

Hubli; ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡ ಶಕ್ತಿ: ದಿಂಗಾಲೇಶ್ವರ ಸ್ವಾಮೀಜಿ

ಪ್ರಹ್ಲಾದ ಜೋಶಿ ವೀರಶೈವ ಲಿಂಗಾಯತರ ಅವನತಿಗಾಗಿ‌ ಹುಟ್ಟಿಕೊಂಡವರು: ದಿಂಗಾಲೇಶ್ವರ ಸ್ವಾಮೀಜಿ

12-prakash-raj

April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Moksha Kushal

Moksha Kushal; ಕೊಡಗಿನ ಬೆಡಗಿಯ ಕಣ್ತುಂಬ ಕನಸು

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

Mollywood: ಸೂಪರ್‌ ಹಿಟ್ ‘ಮಂಜುಮ್ಮೆಲ್ ಬಾಯ್ಸ್’ ಓಟಿಟಿ ರಿಲೀಸ್‌ ಗೆ ಡೇಟ್‌ ಫಿಕ್ಸ್

15

UV Fusion: ಜೀವನವನ್ನು ಪ್ರೀತಿಸೋಣ

Mamata Banerjee: ಹೆಲಿಕಾಪ್ಟರ್ ಹತ್ತುವಾಗ ಬಿದ್ದು ಮತ್ತೆ ಗಾಯ ಮಾಡಿಕೊಂಡ ಮಮತಾ ಬ್ಯಾನರ್ಜಿ

Mamata Banerjee: ಮತ್ತೆ ಎಡವಿ ಬಿದ್ದ ಮಮತಾ ಬ್ಯಾನರ್ಜಿ… ಕಾಲಿಗೆ ಸಣ್ಣ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.