ನಾಟ್ಯ ವಿದ್ಯಾರ್ಥಿಗಳ ಜ್ಞಾನ ವಿಸ್ತರಿಸಿದ ತಾಳಮದ್ದಳೆ 


Team Udayavani, Jul 20, 2018, 6:00 AM IST

x-3.jpg

ಸಿರಿಚಂದನ ಕನ್ನಡ ಯುವಬಳಗ (ರಿ.) ಕಾಸರಗೋಡು ಮನೆಮನೆಗಳಲ್ಲಿ ಕನ್ನಡ ಜಾಗೃತಿ ಮೂಡಿಸುವ ಮತ್ತು ಯಕ್ಷಗಾನ ಕಲೆಯ ಮಹತ್ವವನ್ನು ತಿಳಿಸುವ ಉದ್ದೇಶದಿಂದ ನಡೆಸಿಕೊಂಡು ಬರುತ್ತಿರುವ “ಯಕ್ಷ ನುಡಿಸರಣಿ ಮನೆಮನೆ ಅಭಿಯಾನ’ದಂಗವಾಗಿ ಇತ್ತೀಚೆಗೆ ನಾಟ್ಯ ವಿದ್ಯಾಲಯ (ರಿ.) ಕುಂಬಳೆ ಇದರ ಸಹಯೋಗದೊಂದಿಗೆ ಕಾಸರಗೋಡು ಸಮೀಪದ ನಾಯ್ಕಪು ಶ್ರೀ ಗಣೇಶ ಕಲಾಮಂದಿರದಲ್ಲಿ ಭರತನಾಟ್ಯ ವಿದ್ಯಾರ್ಥಿಗಳಿಗಾಗಿ ಸಿರಿಚಂದನ ಕನ್ನಡ ಯುವಬಳಗದ ಕಲಾವಿದರು ನಡೆಸಿಕೊಟ್ಟ ಯಕ್ಷಗಾನ ತಾಳಮದ್ದಳೆ ಪ್ರಾತ್ಯಕ್ಷಿಕೆಯು ನಾಟ್ಯವಿದ್ಯಾರ್ಥಿಗಳ ಪುರಾಣ ಜ್ಞಾನವನ್ನು ವಿಸ್ತರಿಸುವಲ್ಲಿ ಸಹಕಾರಿಯಾಯಿತು. 

ತಾಳಮದ್ದಳೆಯು ಫ‌ಲಾನುಭವಿಗಳಲ್ಲಿ ಪುಟಾಣಿ ಮಕ್ಕಳಿಂದ ಪದವಿ ತರಗತಿಯ ವಿದ್ಯಾರ್ಥಿಗಳೂ ಇದ್ದರು. ಈ ಹಿನ್ನಲೆಯಲ್ಲಿ ಗುರುವಿನ ಮಹತ್ವವನ್ನು ತಿಳಿಸುವ “ಪಂಚಜನ ಮೋಕ್ಷ’ ಪ್ರಸಂಗ‌ವನ್ನು ತಾಳಮದ್ದಳೆಗೆ ಆಯ್ಕೆ ಮಾಡಲಾಗಿತ್ತು. ಹಿರಿಯ ನಾಟ್ಯ ಗುರುಗಳಾದ ದಿವಾಣ ಶಿವಶಂಕರ ಭಟ್‌ ಅವರ ಮಾರ್ಗದರ್ಶನ ಹಾಗೂ ಸತೀಶ ಪುಣಿಚಿತ್ತಾಯ ಅವರ ನಿರ್ದೇಶನದಲ್ಲಿ ಜರಗಿದ ತಾಳಮದ್ದಳೆಯಲ್ಲಿ ಚೆಂಡೆಯಲ್ಲಿ ಸ್ಕಂದ ದಿವಾಣ, ಮದ್ದಳೆಯಲ್ಲಿ ಲವಕುಮಾರ್‌ ಐಲ ಸಹಕರಿಸಿದರು. 4ನೇ ತರಗತಿಯಲ್ಲಿ ಕಲಿಯುತ್ತಿರುವ ಬಾಲಪ್ರತಿಭೆ ಷಣ್ಮುಖ ಕೃಷ್ಣ ಸ್ತುತಿ ಹಾಡನ್ನು ಹಾಡುವುದರ ಮೂಲಕ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾದರು. ಇಂಜಿನಿಯರಿಂಗ್‌ ಆಗಿರುವ ಸಚಿನ್‌ ಅವರೂ ಭಾಗವತಿಕೆಯಲ್ಲಿ ಸಹಕರಿಸಿದರು. ಭಾಗವತರ ಕಂಠಸಿರಿಗೆ ಮದ್ದಳೆಗಾರರ ಪ್ರಾವೀಣ್ಯ ಶ್ರೋತೃಗಳನ್ನು ರಂಜಿಸಿತು.

 ಕೃಷ್ಣನಾಗಿ ಶಶಿಧರ ಕುದಿಂಗಿಲ, ಬಲರಾಮನಾಗಿ ನವೀನ ಕುಂಟಾರು, ಪಂಚಜನನಾಗಿ ದಿವಾಕರ ಬಲ್ಲಾಳ್‌ ಎ.ವಿ., ಯಮನಾಗಿ ಮನೋಜ್‌ ಎಡನೀರು, ಚಿತ್ರಗುಪ್ತನಾಗಿ ಕಾರ್ತಿಕ್‌ ಪಡ್ರೆ ಹಾಗೂ ಸಾಂದೀಪನಿ ಮಹರ್ಷಿಯಾಗಿ ಶ್ರದ್ಧಾ ಭಟ್‌ ನಾಯರ್ಪಳ್ಳ ಭಾಗವಹಿಸಿದರು. ಶ್ರೀಕೃಷ್ಣ -ಬಲರಾಮರಾಗಿ ಪಾತ್ರನಿರ್ವಹಿಸಿದ ಶಶಿಧರ ಕುದಿಂಗಿಲ ಹಾಗೂ ನವೀನ ಕುಂಟಾರು ಅವರು ಗುರುವಾದ ಸಾಂದೀಪನಿ ಮಹರ್ಷಿಗಳ ಶಿಷ್ಯರಾಗಿ ಮಾತನಾಡುವುದರೊಂದಿಗೆ ಶಿಷ್ಯನೋರ್ವನು ಹೇಗಿರಬೇಕೆಂಬ ಉತ್ತಮ ಸಂದೇಶ ನೀಡಿದರು.

ಪಂಚಜನನ ಪಾತ್ರವನ್ನು ನಿರ್ವಹಿಸಿದ ದಿವಾಕರ ಬಲ್ಲಾಳ್‌ ಅವರು ಖಳಪಾತ್ರವಾಗಿದ್ದುಕೊಂಡೇ ಕ್ರೌರ್ಯದ ನಿರ್ಮೂಲನೆಯ ಧ್ವನಿಯಾದರು. ಸಾಂದೀಪನಿಯ ಪಾತ್ರವು ಗುರುವಿನ ಮಹತ್ವ ಹಾಗೂ ಗುರುಶಿಷ್ಯ ಬಾಂಧವ್ಯವನ್ನು ತಿಳಿಸಿದ್ದಲ್ಲದೆ ಗುರುದಕ್ಷಿಣೆ ಕೇವಲ ಮೂರ್ತಸ್ವರೂಪದ್ದಾಗಿರದೆ ಅಂತರಂಗದ ಭಾವನೆಗೆ ಸಂಬಂಧಪಟ್ಟದ್ದಾಗಿರಬೇಕೆಂದೂ, ಗುರುವಿನ ಸಂಕಷ್ಟಕ್ಕೆ ಸ್ಪಂದಿಸುವ ಭಾವ ಶಿಷ್ಯನಲ್ಲೂ, ಶಿಷ್ಯನ ಕಷ್ಟಕ್ಕೆ ಸ್ಪಂದಿಸುವ ಮನೋಭಾವ ಗುರುವಿನಲ್ಲೂ ಇರಬೇಕೆಂದೂ ತಿಳಿಸಿತು.

ಒಟ್ಟಿನಲ್ಲಿ ತಾಳಮದ್ದಳೆ ಪ್ರಾತ್ಯಕ್ಷಿಕೆ ಶ್ರೋತೃಗಳಿಗೆ ಪುರಾಣದ ಕಥೆಯೊಂದನ್ನು ತಿಳಿಸುವುದರ ಜತೆಗೆ ಗುರು, ಶಿಷ್ಯ ಹಾಗೂ ಗುರುದಕ್ಷಿಣೆಯ ಕುರಿತು ಉತ್ತಮ ಸಂದೇಶ ಲಭಿಸುವಂತೆ ಮಾಡಿತು. ಕಾರ್ಯಕ್ರಮದ ಪ್ರಾರಂಭದಿಂದ ಕೊನೆಯವರೆಗೆ ಭಾಗವಹಿಸಿದ ಸಹೃದಯಿ ಶ್ರೋತೃಗಳ ಸಹಮತ ಸಹಕಾರ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿತು.

 ಶ್ರದ್ಧಾ ನಾಯರ್ಪಳ್ಳ 

ಟಾಪ್ ನ್ಯೂಸ್

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.