ಖಚಿತತೆಯನ್ನು ಕಾಣಿಸಿದ ನೃತ್ಯಾರ್ಪಣ


Team Udayavani, Nov 16, 2018, 6:00 AM IST

14.jpg

ಅರ್ಥಾ ಪೆರ್ಲ ಮತ್ತು ಅಯನಾ ಪೆರ್ಲ ಸಹೋದರಿಯರಲ್ಲಿ ಕಿರಿಯವರಾದ ವಿ| ಅಯನಾ ಪೆರ್ಲ ಅವರ ವಿಶೇಷ ಭರತನಾಟ್ಯ ಪ್ರಸ್ತುತಿ “ನೃತ್ಯಾರ್ಪಣ’ ಎಂಬ ಹೆಸರಿನಲ್ಲಿ ಇತ್ತೀಚೆಗೆ ಮಂಗಳೂರಿನಲ್ಲಿ ಪ್ರದರ್ಶನ ಕಂಡಿತು. ನಿಖರ ತಾಳಜ್ಞಾನ, ಖಚಿತ ನೃತ್ತ ಮತ್ತು ಭಾವಾಭಿನಯಕ್ಕಾಗಿ ಹೆಸರಾಗಿರುವ ಅಯನಾ ಒಂದೂವರೆ ಗಂಟೆ ನೀಡಿದ ಚೈತನ್ಯಪೂರ್ಣ ಪ್ರದರ್ಶನದಲ್ಲಿ ನೃತ್ಯ ಕ್ಷೇತ್ರದ ಬಗೆಗಿನ ಬದ್ಧತೆಯನ್ನು ತೋರ್ಪಡಿಸುವಲ್ಲಿ ಯಶಸ್ವಿಯಾದರು. 

ಆರಂಭದಲ್ಲಿ ಅಲರಿಪುವನ್ನು ಬೆರೆಸಿದ “ಶ್ರೀವಿಘ್ನರಾಜಮ್‌ ಭಜೆ…’ ಎಂಬ ಗಂಭೀರನಾಟ್ಟ ರಾಗದ ಖಂಡಛಾಪು ತಾಳದಲ್ಲಿರುವ ಗಣಪತಿ ಸ್ತುತಿಯೊಂದಿಗೆ ನೃತ್ಯವನ್ನು ಆರಂಭಿಸಿ ತುಂಬ ಭಿನ್ನವಾಗಿ ಅಭಿನಯಿಸಿದರು. ಅರೆಮಂಡಿ ಅಡವಿನಲ್ಲಿ ವಿಶೇಷವಾಗಿ ಗಮನ ಸೆಳೆಯುವ ಈ ಕಲಾವಿದೆ ಗಣಪತಿಯ ವಿವಿಧ ಭಾವಭಂಗಿಗಳನ್ನು ಮನೋಜ್ಞವಾಗಿ ಅಭಿನಯಿಸಿ ತೋರಿಸಿದರು. ವಿ| ಶಾರದಾ ಮಣಿಯವರು ಇದಕ್ಕೆ ಕೊರಿಯೊಗ್ರಫಿ ಮಾಡಿದ್ದಾರೆ.  

ಅನಂತರ ಅಯನಾ ಅಭಿನಯಿಸಿದ ಪದವರ್ಣವು ವಿಶೇಷವಾದುದಾಗಿತ್ತು. ಭೈರವಿ ರಾಗದಲ್ಲಿರುವ “ನಂದಗೋಪಾಲನೇ…’ ಎಂಬ ಸಾಹಿತ್ಯವಿರುವ ಈ ವರ್ಣವು ಭೈರವಿ ರಾಗದಲ್ಲಿದ್ದು, ಆದಿತಾಳದಲ್ಲಿ ನಿಬದ್ಧವಾಗಿದೆ. ದೀರ್ಘ‌ವಾಗಿರುವ, ಯೋಗದ ವಿವಿಧ ಭಾವಭಂಗಿಗಳಿಂದ ಸಂಯೋಜಿತವಾದ ನೃತ್ಯವನ್ನು ಚೇತೋಹಾರಿಯಾಗಿ ,ಚೈತನ್ಯಪೂರ್ಣವಾಗಿ ಅಭಿನಯಿಸಿ ದರು. 
ಅನಂತರ ಮುತ್ತುಸ್ವಾಮಿ ದೀಕ್ಷಿತರ ರಚನೆಯಾದ ಕೇದಾರ ರಾಗದ ಮಿಶ್ರಛಾಪು ತಾಳದ “ಆನಂದನಟನ ಪ್ರಕಾಶಮ…’ ಎಂಬ ಸಾಹಿತ್ಯವನ್ನು ಅಭಿನಯಿಸಿದರು. ನೃತ್ತ ಮತ್ತು ನೃತ್ಯ ಎರಡರಲ್ಲೂ ಗಮನ ಸೆಳೆಯುವ ಅಯನಾ ಭರವಸೆಯ ಕಲಾವಿದೆ ಎಂಬುದನ್ನು ಈ ಅಭಿನಯವು ತೋರಿಸಿಕೊಟ್ಟಿತು.ಅನಂತರ “ನಯತವ ಬಾಲಮಿಮಂ’ ಎಂಬ ಗಣಪಯ್ಯ ಹೊಳ್ಳ ಅವರ ರಚನೆಯನ್ನು ಕೈಗೆತ್ತಿಕೊಂಡರು. ಇದು ಹಂಸವಿನೋದಿನಿ ರಾಗದಲ್ಲಿದ್ದು ಆದಿ ತಾಳಕ್ಕೆ ನಿಬದ್ಧವಾದ ರಚನೆಯಾಗಿದೆ. ಕೃಷ್ಣನ ಬಾಲಲೀಲೆಗಳನ್ನು ಗೋಪಿಕೆ ಅಭಿನಯಿಸಿ, ರಮಿಸಿ ಸುಖಪಡುವ ಭಾಗವನ್ನು ಸುಂದರವಾಗಿ ನಿರೂಪಿಸಲಾಗಿದೆ. ಅತಿಸೂಕ್ಷ್ಮ ಭಾವಗಳನ್ನು, ವಿವರಗಳನ್ನು ನೈಜವಾಗಿ ಬಿಂಬಿಸಿರುವುದು ಈ ಅಭಿನಯದಲ್ಲಿನ ವೈಶಿಷ್ಟ್ಯವಾಗಿ ಕಂಡಿತು. 

ಮಧುವಂತಿ ರಾಗದ ಆದಿತಾಳದಲ್ಲಿರುವ ತಿಲ್ಲಾನವು ಉಲ್ಲೇಖಕ್ಕೆ ಅರ್ಹವಾದದ್ದು. ಲಾಲ್‌ಗ‌ುಡಿ ಜಯರಾಮನ್‌ ರಚನೆಗೆ ನೃತ್ಯಪಟು ರಮಾ ವೈದ್ಯನಾಥನ್‌ ಕೊರಿಯೊಗ್ರಫಿ ಮಾಡಿದ್ದಾರೆ. ನೃತ್ತದ ಹಲವು ಭಾವಭಂಗಿಗಳಿಗೆ ಈಗಾಗಲೇ ಹೆಸರಾಗಿರುವ ಅಯನಾ ತಿಲ್ಲಾನವನ್ನು ಮನೋಜ್ಞವಾಗಿ ಅಭಿನಯಿಸಿದರು. ನಟುವಾಂಗದಲ್ಲಿ ವಿ| ಶಾರದಾಮಣಿ ಶೇಖರ್‌ ಸಹಕರಿಸಿದರು. ಕುಮಾರಿ ರಜನಿ ಚಿಪ್ಳೂಣ್‌ಕರ್‌ ನೃತ್ಯದ ಹಾಡುಗಾರಿಕೆಗೆ ಹೊಸಬರಾದರೂ ಒಳ್ಳೆಯ ಕಂಠ ಇರುವುದರಿಂದ ಯಾವುದೇ ತೊಡಕುಗಳಿಲ್ಲದೆ ಉತ್ತಮ ನಿರ್ವಹಣೆ ನೀಡಿದರು. ವಿ| ರಾಜನ್‌ ಪಯ್ಯನ್ನೂರ್‌ ಅವರ ಮೃದಂಗ ಸಹಕಾರ ಉತ್ತಮವಾಗಿತ್ತು. ಕೊಳಲಿನಲ್ಲಿ ಅಭಿಷೇಕ್‌ ಸಹಕಾರ ನೀಡಿದರು.

 ನಾರಾಯಣ ರೈ ಕುಕ್ಕುವಳ್ಳಿ 

ಟಾಪ್ ನ್ಯೂಸ್

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.