ಧ್ಯಾನದ ಹಿಂದಿರುವ ನಿಜಾರ್ಥವಾದರೂ ಏನು?


Team Udayavani, Jan 26, 2019, 12:55 AM IST

16.jpg

ಧ್ಯಾನ ಮಾಡುವುದರಿಂದ ದೇವರು ಒಲಿಯುತ್ತಾನೆಯೇ? ಎಂದು ಈಗಿನ ಕಾಲದಲ್ಲಿ ಕೇಳಿದರೆ ಈ ಕಲಿಯುಗದಲ್ಲಿ ಸಾಧ್ಯವೇ ಇಲ್ಲ ಎಂಬ ಸರಳವಾದ ಉತ್ತರ ಕೂಡಲೇ ದೊರೆಯುತ್ತದೆ. ಆದರೆ ಧ್ಯಾನವೆಂಬುದು ಕೇವಲ ದೇವರನ್ನು ಒಲಿಸಿಕೊಳ್ಳುವ ಮಾರ್ಗವಲ್ಲ; ಅದು, ನಮ್ಮ ಮನಸ್ಸನ್ನು ನಿಯಂತ್ರಿಸುವ ಮಾರ್ಗ. ಯಾವುದೇ ಶ್ಲೋಕವನ್ನು ಪಠಿಸುವಾಗ ಅಥವಾ ಧ್ಯಾನ ಮಾಡುವಾಗ ಏಕಾಗ್ರತೆಯಿಂದ ಮಾಡಿದರೆ ನಮ್ಮ ಮನಸ್ಸು ನಿಯಂತ್ರಣಕ್ಕೆ ಬರುತ್ತದೆ. 

ಹಿಂದೂಗಳಲ್ಲಿ ದೇವರನ್ನು ಹಲವಾರು ರೂಪಗಳಲ್ಲಿ ಪೂಜಿಸಲಾಗುತ್ತದೆ. ಗಣಪತಿ, ವಿಷ್ಣು, ಶಿವ, ಕೃಷ್ಣ, ರಾಮ, ಹನುಮಂತ, ದೇವಿಯರು ಹೀಗೆ ಹಲವಾರು ರೂಪಗಳು ನಮ್ಮಲ್ಲಿವೆ. ಪ್ರತಿಯೊಂದು ದೇವರಿಗೂ ಒಂದೊಂದು ವಿಶೇಷವಾದ ಶ್ಲೋಕಗಳಿರುತ್ತವೆ. ಅಂಥ ಶ್ಲೋಕಗಳನ್ನು ಪಠಿಸುವುದರಿಂದ ಅಥವಾ ಧ್ಯಾನ ಮಾಡುವುದರಿಂದ ದೇವರು ಸಂಪ್ರೀತನಾಗುತ್ತಾನೆ ಮತ್ತು ನಮ್ಮೆಲ್ಲ ಸಂಕಷ್ಟಗಳನ್ನು ಪರಿಹರಿಸುತ್ತಾನೆ ಎಂಬ ನಂಬಿಕೆ ಇದೆ. ಇದು ದೇವರನ್ನು ಮನಸ್ಸಿನಲ್ಲಿ ತುಂಬಿಕೊಳ್ಳುವ ರೀತಿಯೂ ಹೌದು.

ಧ್ಯಾನ ಎಂಬುದು ಸಾಧಾರಣ ಸಂಗತಿಯಲ್ಲ. ನಮಗೆ ಗೊತ್ತಿರುವ ಶ್ಲೋಕವನ್ನು ದೇವರಮುಂದೆ ನಿಂತುಕೊಂಡೋ, ಕುಳಿತುಕೊಂಡೋ ಕೆಲವು ಅಥವಾ ಹಲವು ಬಾರಿ ಪಠಿಸಿದ ಮಾತ್ರಕ್ಕೆ ಅದು ಧ್ಯಾನ ಎನಿಸಿಕೊಳ್ಳುವುದಿಲ್ಲ. ಅಲ್ಲಿ ಏಕಾಗ್ರತೆ ಬಲವಾಗಿರಬೇಕು. ಆ ಶ್ಲೋಕದಲ್ಲಿಯೇ ಚಿತ್ತವನ್ನು ನೆಟ್ಟಿರಬೇಕು. ಬಾಯಿಯಲ್ಲಿ ಶ್ಲೋಕ ಪಠಿಸುತ್ತ ಮನಸ್ಸು ಇನ್ನೆÇÉೋ ತಿರುಗಾಡುತ್ತ ಇದ್ದರೆ ಅದರಿಂದ ಪ್ರಯೋಜನ ಇಲ್ಲವೇ ಇಲ್ಲ. ಚಿತ್ತವನ್ನು ಕೇಂದ್ರೀಕರಿಸುವುದೇ ಧ್ಯಾನದ ಮೂಲತಣ್ತೀ. ಹಾಗಾಗಿ, ಧ್ಯಾನ ಮಾಡುವಾಗ ನಿರ್ಧಿಷ್ಟ ಭಂಗಿಯಲ್ಲಿ ಅಲುಗಾಡದೆ ಕುಳಿತುಕೊಂಡು, ಹೊರಗಿನ ದೃಶ್ಯಗಳು ಕಣ್ಣಿಗೆ ಬಿದ್ದರೆ  ಮನಸ್ಸು ಚಂಚಲವಾಗುವುದೆಂಬ ಕಾರಣಕ್ಕೆ ಕಣ್ಣುಮುಚ್ಚಿಕೊಂಡು, ಆದಷ್ಟು ಮೌನವಾದ ಸ್ಥಳ ಮತ್ತು ಸಮಯದಲ್ಲಿ ಧ್ಯಾನವನ್ನು ಮಾಡುವುದು ಸರಿಯಾದ ಕ್ರಮ.

ಧ್ಯಾನ ಮಾಡುವುದರಿಂದ ದೇವರು ಒಲಿಯುತ್ತಾನೆಯೇ? ಎಂದು ಈಗಿನ ಕಾಲದಲ್ಲಿ ಕೇಳಿದರೆ ಈ ಕಲಿಯುಗದಲ್ಲಿ ಸಾಧ್ಯವೇ ಇಲ್ಲ ಎಂಬ ಸರಳವಾದ ಉತ್ತರ ಕೂಡಲೇ ದೊರೆಯುತ್ತದೆ. ಆದರೆ ಧ್ಯಾನವೆಂಬುದು ಕೇವಲ ದೇವರನ್ನು ಒಲಿಸಿಕೊಳ್ಳುವ ಮಾರ್ಗವಲ್ಲ; ಅದು, ನಮ್ಮ ಮನಸ್ಸನ್ನು ನಿಯಂತ್ರಿಸುವ ಮಾರ್ಗ. ಯಾವುದೇ ಶ್ಲೋಕವನ್ನು ಪಠಿಸುವಾಗ ಅಥವಾ ಧ್ಯಾನ ಮಾಡುವಾಗ ಏಕಾಗ್ರತೆಯಿಂದ ಮಾಡಿದರೆ ನಮ್ಮ ಮನಸ್ಸು ನಿಯಂತ್ರಣಕ್ಕೆ ಬರುತ್ತದೆ. ನಮ್ಮ ಜೀವನದ ಎÇÉಾ ಆಗುಹೋಗುಗಳಿಗೆ ಮನಸ್ಸೇ ಮುಖ್ಯಕಾರಣವಾಗಿರುವುದರಿಂದ ಈ ಮನಸ್ಸು ನಮ್ಮ ನಿಯಂತ್ರಣದಲ್ಲಿದ್ದರೆ ಆಗ ಜೀವನದಲ್ಲಿ ನೆಮ್ಮದಿಯನ್ನು ಕಾಣಬಹುದು. ಧ್ಯಾನವೇ ಇದಕ್ಕೆ ಮೂಲಮಾರ್ಗವೂ ಹೌದು; ಸರಿಯಾದ ಕ್ರಮವೂ ಹೌದು.

ಧ್ಯಾನದ ಮೂಲವೇ ಏಕಾಗ್ರತೆ. ಏಕಾಗ್ರತೆಯನ್ನು ಸಾಧಿಸುವುದಕ್ಕಾಗಿಯೇ ಧ್ಯಾನದ ಮಾರ್ಗವನ್ನು ಹೇಳಲಾಗಿದೆ ಧ್ಯಾನದ ಮೂಲಕ ಏಕಾಗ್ರತೆಯನ್ನೂ ಆ ಮೂಲಕ ಸಾಧಿಸಿದವರೂ ಇ¨ªಾರೆ. ಪ್ರತಿನಿತ್ಯವೂ ನಾವೂ ಒಂದೈದು ನಿಮಿಷವಾದರೂ ಏಕಾಗ್ರಚಿತ್ತರಾಗಿ ಮನಸ್ಸನ್ನು ಹಿಡಿದಿಟ್ಟುಕೊಂಡರೆ ನಮ್ಮಲ್ಲಿನ ಯೋಚನಾಶಕ್ತಿ ಹೆಚ್ಚುತ್ತದಲ್ಲದೆ ಯೋಚನಾರೀತಿಯೂ ಉತ್ತಮದಾರಿಯಲ್ಲಿಯೇ ಸಾಗುತ್ತದೆ. ಆದರೆ ನಾವು ಕೇವಲ ಮೌನದಿಂದ ಏಕಾಗ್ರತೆಯನ್ನು ಸಾಧಿಸಲಾಗದು. ಅದನ್ನು ಧ್ಯಾನದ ಮೂಲಕ ಸಾಧಿಸಬೇಕಾಗುತ್ತದೆ. ಯಾವುದೋ ಒಂದು ಧ್ಯಾನದಲ್ಲಿ ಮನಸ್ಸು ಕೇಂದ್ರೀಕೃತವಾದಾಗ ನಮ್ಮಲ್ಲಿರುವ ಅನಾವಶ್ಯಕ ಚಿಂತೆಯೋಚನೆಗಳೆಲ್ಲ ದೂರವಾಗುತ್ತವೆ. ಆಗ ನಮ್ಮ ಮನಸ್ಸು ನಿಧಾನವಾಗಿ ಪ್ರಬುದ್ಧವಾಗುತ್ತ ಹೋಗುತ್ತದೆ. ಹಾಗಾಗಿ, ನಾವು ಯಾವುದೇ ಕೆಲಸದಲ್ಲೂ ಸರಿಯಾದ ಹಾಗೂ ಸ್ಪಷ್ಟವಾದ ನಿರ್ಣಯವನ್ನು ತೆಗೆದುಕೊಳ್ಳಲು ಸಾಧ್ಯ. ಇದರಿಂದ ಉತ್ತಮ ಯೋಚನೆಗಳಷ್ಟೇ ನಮ್ಮ ಮನಸ್ಸನ್ನು ಆವರಿಸುವುದರಿಂದ ಮತ್ತು ಚಂಚಲತೆ ದೂರವಾಗುವುದರಿಂದ ಸಂದಭೋìಚಿತ ನಿರ್ಣಯಗಳನ್ನು ತೆಗೆದುಕೊಳ್ಳಲು ಮನಸ್ಸನ್ನು ಸದೃಢವಾಗುತ್ತದೆ. ಮತ್ತು ತಿಳಿಯಾಗರುವ ಮನಸ್ಸಿನಿಂದಾಗಿ ಜೀವನದಲಾಗುವ ತಪ್ಪುಗಳಿಂದ ದೂರವುಳಿಯಬಹುದು. ಹೀಗೆ ಮಾಡಿದಾಗ ಸುಖಕರವಾದ ಜೀವನವೂ ನಮ್ಮದಾಗುತ್ತದೆ. ಆದರೆ ಈ ಧ್ಯಾನದ ಸಾಧನೆ ಬಹುಮುಖ್ಯ. ಪ್ರತಿನಿತ್ಯ ಏಕಾಗ್ರತೆಯಿಂದ ಧ್ಯಾನ ಮಾಡಿದರೆ ಪಕ್ವ ಮತ್ತು ಪರಿಶುದ್ಧ ಮನಸ್ಸು ನಮ್ಮದಾಗುತ್ತದೆ. ಇದುವೇ ಧ್ಯಾನದ ಒಳಹೂರಣ;ನಿಜಾರ್ಥ.

ಧ್ಯಾನದ ಶಕ್ತಿ: ಧ್ಯಾನವೆಂಬುದು ಜ್ಞಾನ ಮನದ ಪರಿಶುದ್ಧತೆ ಜೀವನದ ಶಕ್ತಿ.

ವಿಷ್ಣು ಭಟ್ಟ ಹೊಸ್ಮನೆ

ಟಾಪ್ ನ್ಯೂಸ್

ಖರ್ಗೆ

ECI; ಮತದಾನದ ಅಂಕಿಅಂಶಗಳ ಆರೋಪ ಮಾಡಿದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಆಯೋಗದ ಕಿಡಿ

Road Mishap ದಾಂಡೇಲಿ; ಕಾರು-ದ್ವಿಚಕ್ರ ವಾಹನ ಅಪಘಾತ: ಸವಾರ ಗಂಭೀರ

Road Mishap ದಾಂಡೇಲಿ; ಕಾರು-ದ್ವಿಚಕ್ರ ವಾಹನ ಅಪಘಾತ: ಸವಾರ ಗಂಭೀರ

Jay Shah said that canceling the contract of Ishaan and Iyer was not his decision

BCCI: ಇಶಾನ್, ಅಯ್ಯರ್ ಗುತ್ತಿಗೆ ರದ್ದು ಮಾಡುವುದು ನನ್ನ ನಿರ್ಧಾರವಾಗಿರಲಿಲ್ಲ ಎಂದ ಜಯ್ ಶಾ

Arunagiri ರಥೋತ್ಸವದಲ್ಲಿ ಕಳ್ಳರ ಕೈಚಳಕ: ಐದು ಪವನ್ ತೂಕದ ಮಾಂಗಲ್ಯ ಸರ ಅಪಹರಣ

Arunagiri ರಥೋತ್ಸವದಲ್ಲಿ ಕಳ್ಳರ ಕೈಚಳಕ: ಐದು ಪವನ್ ತೂಕದ ಮಾಂಗಲ್ಯ ಸರ ಅಪಹರಣ

BCCI will call applications for head coach role

Head Coach: ಟೀಂ ಇಂಡಿಯಾಗೆ ಹೊಸ ಕೋಚ್; ಹುಡುಕಾಟ ಆರಂಭಿಸಿದ ಬಿಸಿಸಿಐ

Sirsi: ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಮುಂದಾದ ಜೀವಜಲ ಕಾರ್ಯಪಡೆ

Sirsi: ಕುಡಿಯುವ ನೀರಿನ ಸಮಸ್ಯೆ ನಿವಾರಿಸಲು ಮುಂದಾದ ಜೀವಜಲ ಕಾರ್ಯಪಡೆ

Road Mishap: ಆಗುಂಬೆ ಬಳಿ ಭೀಕರ ಅಪಘಾತ.. ಸ್ಥಳದಲ್ಲೇ ಓರ್ವ ದುರ್ಮರಣ, ಚಾಲಕನ ಸ್ಥಿತಿ ಗಂಭೀರ

Road Mishap: ಆಗುಂಬೆ ಬಳಿ ಭೀಕರ ಅಪಘಾತ.. ಸ್ಥಳದಲ್ಲೇ ಓರ್ವ ದುರ್ಮರಣ, ಚಾಲಕನ ಸ್ಥಿತಿ ಗಂಭೀರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

ಖರ್ಗೆ

ECI; ಮತದಾನದ ಅಂಕಿಅಂಶಗಳ ಆರೋಪ ಮಾಡಿದ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಆಯೋಗದ ಕಿಡಿ

Road Mishap ದಾಂಡೇಲಿ; ಕಾರು-ದ್ವಿಚಕ್ರ ವಾಹನ ಅಪಘಾತ: ಸವಾರ ಗಂಭೀರ

Road Mishap ದಾಂಡೇಲಿ; ಕಾರು-ದ್ವಿಚಕ್ರ ವಾಹನ ಅಪಘಾತ: ಸವಾರ ಗಂಭೀರ

Jay Shah said that canceling the contract of Ishaan and Iyer was not his decision

BCCI: ಇಶಾನ್, ಅಯ್ಯರ್ ಗುತ್ತಿಗೆ ರದ್ದು ಮಾಡುವುದು ನನ್ನ ನಿರ್ಧಾರವಾಗಿರಲಿಲ್ಲ ಎಂದ ಜಯ್ ಶಾ

ಎವಿಡೆನ್ಸ್‌ ಮೇಲೆ ಪ್ರವೀಣ್ ಕಾನ್ಫಿಡೆನ್‌

Sandalwood; ಎವಿಡೆನ್ಸ್‌ ಮೇಲೆ ಪ್ರವೀಣ್ ಕಾನ್ಫಿಡೆನ್‌

MASOCON

MASOCON: ಕೆಎಂಸಿಯಲ್ಲಿ ಮಣಿಪಾಲ್ ಸರ್ಜಿಕಲ್ ಆಂಕೊಲಾಜಿ ಕಾನ್ಫರೆನ್ಸ್ 2024

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.