ಭಾರತದ 20 ಪ್ರಾಚೀನ ಶಿಲ್ಪ-ಕಲಾಕೃತಿಗಳ ಮರಳಿಸಿದ ಆಸ್ಟ್ರೇಲಿಯಾ
ಸ್ವತಃ ಪ್ರಧಾನಿ ಮೋದಿಯವರಿಂದಲೇ ಪರಿಶೀಲನೆ; 9-10ನೇ ಶತಮಾನದ ಶಿಲ್ಪಗಳು
Team Udayavani, Mar 22, 2022, 7:20 AM IST
ನವದೆಹಲಿ: ಭಾರತದಿಂದ ಅಕ್ರಮವಾಗಿ ಬೇರೆ ದೇಶಗಳಿಗೆ ಒಯ್ಯಲಾಗಿದ್ದ ಪುರಾತನ ವಸ್ತುಗಳನ್ನು ಮರಳಿ ಸ್ವದೇಶಕ್ಕೆ ತರುವ ಪ್ರಕ್ರಿಯೆ ಮುಂದುವರಿದಿದೆ. ಅದರಂತೆ, ಸೋಮವಾರ ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಬಿಂಬಿಸುವ 29 ಶಿಲ್ಪಗಳು ಹಾಗೂ ಕಲಾಕೃತಿಗಳನ್ನು ಆಸ್ಟ್ರೇಲಿಯಾ ಮರಳಿಸಿದೆ.
ಭಾರತ-ಆಸ್ಟ್ರೇಲಿಯಾ ಶೃಂಗಕ್ಕೂ ಮುನ್ನವೇ ಈ ಎಲ್ಲ ಪ್ರಾಚೀನ ಕಲಾಕೃತಿಗಳನ್ನು ಹಿಂದಿರುಗಿಸಲಾಗಿದೆ. ವರ್ಚುವಲ್ ಶೃಂಗಕ್ಕೆ ತೆರಳುವ ಮೊದಲು ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಈ ಎಲ್ಲ ಕಲಾಕೃತಿಗಳನ್ನೂ ಪರಿಶೀಲಿಸಿದ್ದಾರೆ. ಜತೆಗೆ, ಇವುಗಳನ್ನು ಭಾರತಕ್ಕೆ ಮರಳಿಸಲು ಕ್ರಮ ಕೈಗೊಂಡ ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಅವರಿಗೆ ಧನ್ಯವಾದವನ್ನೂ ಸಲ್ಲಿಸಿದ್ದಾರೆ.
ವಿವಿಧ ರಾಜ್ಯಗಳ ಶಿಲ್ಪಗಳು
ಭಾರತಕ್ಕೆ ಮರಳಿರುವ ಶಿಲ್ಪಗಳು ಮತ್ತು ಕಲಾಕೃತಿಗಳೆಲ್ಲವೂ ಮರಳುಗಲ್ಲು, ಅಮೃತಶಿಲೆ, ಕಂಚು, ಹಿತ್ತಾಳೆ ಮತ್ತು ಕಾಗದದಿಂದ ತಯಾರಿಸಿರುವಂಥದ್ದು. ಇವುಗಳು ರಾಜಸ್ಥಾನ, ಗುಜರಾತ್, ಮಧ್ಯಪ್ರದೇಶ, ಉತ್ತರಪ್ರದೇಶ, ತಮಿಳುನಾಡು, ತೆಲಂಗಾಣ ಹಾಗೂ ಪಶ್ಚಿಮ ಬಂಗಾಳ ಮೂಲದ ಶಿಲ್ಪಗಳಾಗಿವೆ.
ಇದನ್ನೂ ಓದಿ:ಎಲ್ಲೋಡು ಗ್ರಾಮ ಪಂಚಾಯತ್ ಸುತ್ತಮುತ್ತ ಚಿರತೆಗಳ ಭೀತಿ ; ಭಯದಲ್ಲಿ ಜನತೆ
ಯಾವ್ಯಾವ ಶಿಲ್ಪಗಳಿವೆ?
9 ಅಥವಾ 10ನೇ ಶತಮಾನದ ಶಿವ ಭೈರವ, 12ನೇ ಶತಮಾನದ ಬಾಲ ಸಂತ ಸಂಬಂದಾರ್, ಕುಳಿತಿರುವ ಭಂಗಿಯಲ್ಲಿರುವ ರಾಜಸ್ಥಾನದ ಜೈನ ಮುನಿಯ ಶಿಲ್ಪ, ಮಹಾರಾಜ ಶ್ರೀ ಕಿಶನ್ ಪರ್ಶದ್ ಯಾಮಿನ್ ಲಾಲಾ ದೀನ್ ದಯಾಳ್ ಅವರ ಕಲಾಕೃತಿ, ಹೀರಾಲಾಲ್ ಎ ಗಾಂಧಿಯರ ಭಾವಚಿತ್ರವಿರುವ ಕಲಾಕೃತಿ ಇತ್ಯಾದಿ.
6 ವಿಭಾಗಗಳಾಗಿ ವಿಂಗಡಣೆ
ಈ ಪುರಾತನ ವಸ್ತುಗಳನ್ನು 6 ವಿಭಾಗಗಳಾಗಿ ವಿಂಗಡಿಸಲಾಗಿದೆ. ಅವೆಂದರೆ, ಶಿವ ಮತ್ತು ಅವನ ಅನುಯಾಯಿಗಳು, ಶಕ್ತಿಯ ಆರಾಧನೆ, ವಿಷ್ಣು ಮತ್ತು ವಿಷ್ಣುವಿನ ಅವತಾರಗಳು, ಜೈನ ಸಂಪ್ರದಾಯ, ಕಲಾಕೃತಿ ಹಾಗೂ ಅಲಂಕಾರಿಕ ವಸ್ತುಗಳು. ಇವುಗಳೆಲ್ಲವೂ 9-10ನೇ ಶತಮಾನಗಳಷ್ಟು ಹಳೆಯ ಕಲಾಕೃತಿಗಳಾಗಿವೆ.
ಇತರ ರಾಷ್ಟ್ರಗಳಿಂದ ಬಂದ ಕಲಾಕೃತಿಗಳು
157- ಅಮೆರಿಕದಿಂದ ಹಿಂದಕ್ಕೆ ಬಂದವು
200-ನಾನಾ ದೇಶಗಳಿಂದ ಈವರೆಗೆ ಭಾರತಕ್ಕೆ ಬಂದ ಕಲಾಕೃತಿಗಳು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
SP, Congress ಪಕ್ಷಗಳಿಗೆ ಗಡಿಯಾಚೆಗಿನ ಜಿಹಾದಿಗಳು ಬೆಂಬಲಿಸುತ್ತಿದ್ದಾರೆ: ಪ್ರಧಾನಿ ಮೋದಿ
ಕಪಿಲ್ ಶರ್ಮಾ ಶೋನಲ್ಲಿ ಅವಕಾಶ ನೀಡುತ್ತೇನೆ ಎಂದು ನಂಬಿಸಿ ಯುವತಿ ಮೇಲೆ ಅತ್ಯಾಚಾರ
AAP; ಧ್ರುವ ರಾಥಿ ವಿಡಿಯೋ ಬಳಿಕ ಅತ್ಯಾಚಾರ-ಕೊಲೆ ಬೆದರಿಕೆ: ಸ್ವಾತಿ ಮಲಿವಾಲ್
Indian Constitution ಪೀಠಿಕೆಯನ್ನು ಬದಲಾವಣೆ ಮಾಡಿದ್ದು ಕಾಂಗ್ರೆಸ್: ರಾಜನಾಥ್ ಸಿಂಗ್
INDIA bloc ವಿಪಕ್ಷಗಳ ಕೂಟದ ಪ್ರಧಾನಿ ಅಭ್ಯರ್ಥಿ ಯಾರು? ಉತ್ತರ ನೀಡಿದ ಮಲ್ಲಿಕಾರ್ಜುನ ಖರ್ಗೆ
MUST WATCH
ಹೊಸ ಸೇರ್ಪಡೆ
SP, Congress ಪಕ್ಷಗಳಿಗೆ ಗಡಿಯಾಚೆಗಿನ ಜಿಹಾದಿಗಳು ಬೆಂಬಲಿಸುತ್ತಿದ್ದಾರೆ: ಪ್ರಧಾನಿ ಮೋದಿ
ಕಪಿಲ್ ಶರ್ಮಾ ಶೋನಲ್ಲಿ ಅವಕಾಶ ನೀಡುತ್ತೇನೆ ಎಂದು ನಂಬಿಸಿ ಯುವತಿ ಮೇಲೆ ಅತ್ಯಾಚಾರ
Channagiri riot; ನಾಲ್ಕು ಪ್ರಕರಣಗಳಲ್ಲಿ 25 ಮಂದಿ ಆರೋಪಿಗಳ ಬಂಧನ
ʼಮಾರ್ಟಿನ್ʼ ಬಳಿಕ ʼಕೆಡಿʼ ಬಗ್ಗೆ ಬಿಗ್ ನ್ಯೂಸ್ ಕೊಟ್ಟ ಧ್ರುವ: ಈ ವರ್ಷ ರಿಲೀಸ್ ಪಕ್ಕಾ
ಉಚ್ಚಾಟಿಸಿದರೇನಂತೆ.. ಜಗದೀಶ್ ಶೆಟ್ಟರ್ ಮಾದರಿ ಕಣ್ಣ ಮುಂದೆಯೇ ಇದೆ: ರಘುಪತಿ ಭಟ್