ಎಳೆಯರಿಂದು ಫ್ಯಾಷನ್‌ ಯುಗದಲ್ಲಿ


Team Udayavani, Mar 6, 2020, 12:26 AM IST

ಎಳೆಯರಿಂದು ಫ್ಯಾಷನ್‌ ಯುಗದಲ್ಲಿ

ಫ್ಯಾಷನ್‌ ಎಂದ ಕೂಡಲೇ ನೆನಪಾಗುವುದು ಬಹುತೇಕ 16ರ ಮೇಲಿನ ವಯೋಮಾನದವರು ಎಂದುಕೊಳ್ಳುತ್ತೇವೆ. ಆದರೆ ಕಾಲ ಹೇಗೆ ಬದಲಾಗುತ್ತದೆ ನೋಡಿ, ಒಂದು ಕಾಲವಿತ್ತು-ಜನರು ತಮ್ಮ ಮಕ್ಕಳ ಬಟ್ಟೆಯ ಬಗ್ಗೆ ಅಷ್ಟಾಗಿ ಯೋಚನೆ ಮಾಡುತ್ತಿರಲಿಲ್ಲ. ಯಾಕೆಂದರೆ ಅಮ್ಮನ ಸೀರೆಯೇ ಮಗಳಿಗೆ ಜರತಾರಿ ಲಂಗ-ದಾವಣಿ ಬಟ್ಟೆಯಾದರೆ ಅಪ್ಪನ ನಿಲುವಂಗಿ ಸ್ವಲ್ಪ ಮಾಸಿದರೆ ಮಗನಿಗೆ ಅಂಗಿಯಾಗುತ್ತಿತ್ತಂತೆ. ಆದರೆ ಇಂದು ಎಳೆ ಮಕ್ಕಳಿಗೂ ಸೀರೆ ಉಡಬಹುದು, ಲುಂಗಿ ತೊಡಬಹುದು ಇದನ್ನೇ ಇಂದು ಚಿಲ್ಡ್ರನ್‌(ಮಕ್ಕಳ) ಫ್ಯಾಷನ್‌ ಎಂದು ಕರೆಯುತ್ತಿದ್ದು, ಎಳೆಮಕ್ಕಳಿಂದ 15ರ ವಯೋಮಾನದವರೂ ಈ ಫ್ಯಾಷನ್‌ ಪಾಲಿಸುತ್ತಾರೆ ಎನ್ನಬಹುದು.

ಹೀಗಿದ್ದರೆ ಒಳ್ಳೆಯದು
ಮಕ್ಕಳ ಚರ್ಮವು ಸುಕೋಮಲವಾಗಿರುವುದರಿಂದ ಅವರ ದೇಹಕ್ಕೆ ಎಲ್ಲ ಬಟ್ಟೆಯೂ ಹೊಂದಿಕೊಳ್ಳಲಾರದು. ಬಹುತೇಕ ಸಂದರ್ಭದಲ್ಲಿ ಪೋಷಕರು ಆಡಂಭರಕ್ಕೆ ಆದ್ಯತೆ ನೀಡಿ ಮಕ್ಕಳ ಚರ್ಮದ ಆರೋಗ್ಯದ ವಿಚಾರವನ್ನೇ ಮರೆತು ಬಿಡುತ್ತಾರೆ. ತೆಳುವಾದ, ಮೃದುವಾದ ಬಟ್ಟೆ ಆರಿಸುವುದು ಉತ್ತಮ. ಬಟ್ಟೆಯಲ್ಲಿ ಬಾರ್ಬಿ ಗೊಂಬೆ, ಟಾಮ್‌ ಆ್ಯಂಡ್‌ ಜೆರಿ, ಸೂಪರ್‌ಮ್ಯಾನ್‌, ಛೋಟಾ ಭೀಮ್‌ ಹಿಗೆ ಕಾಟೂìನ್‌ ಬಟ್ಟೆಗಳು ಮಕ್ಕಳಿಗೆ ಅಚ್ಚುಮೆಚ್ಚಂತೆ. ಶೂ ಧರಿಸಲು ಬಹುಪಾಲು ಮಕ್ಕಳು ಒಲ್ಲೆ ಎಂದಾಗ ಅವರಿಗೆ ಇಷ್ಟವಾಗುವ ಚಪ್ಪಲಿಯನ್ನೇ ಆಯ್ಕೆ ಮಾಡಲು ಮರೆಯಬಾರದು. ಚಪ್ಪಲಿಯಲ್ಲಿ ಲೈಟಿಂಗ್‌, ಶಬ್ಧ ಕೇಳುತ್ತಿದ್ದರೆ ಅದೇ ಚೆಂದ. ಗೊಂಬೆ ಚಪ್ಪಲಿ ಧರಿಸುವುದೆಂದರೆ ಪದೇ ಪದೇ ಕಾಲು ನೋಡಿಕೊಳ್ಳುವುದು, ಸರಿಪಡಿಸಿಕೊಳ್ಳುತ್ತಿರುವುದೇ ಒಂದು ಖುಷಿ. ಇಂತಹ ಆಯ್ಕೆಗೆ ಆದ್ಯತೆ ನೀಡಿದರೆ ಮಕ್ಕಳು ಖುಷಿಯಲ್ಲಿಯೇ ಅದನ್ನು ತೊಡಲು ಬಯಸುತ್ತಾರೆ.

ಸೌಂದರ್ಯವರ್ಧಕಗಳು
ಮಕ್ಕಳಿಗೂ ಸೌಂದರ್ಯವರ್ಧಕವಿದೆಯೇ ಎಂದು ಆಶ್ಚರ್ಯಗೊಳ್ಳದಿರಿ. ಇಂದು ಮಕ್ಕಳಿಗೂ ಮೇಕಪ್‌ ಕಿಟ್‌ ಲಭ್ಯವಿರುತ್ತದೆ. ಮಕ್ಕಳಿಗೂ ಶಾಲಾ ಕಾರ್ಯಕ್ರಮ, ಮುಂತಾದ ಸಭೆ ಸಮಾರಂಭದಲ್ಲಿ ಭಾಗಿಯಾಗಲು, ಮಾತ್ರವಲ್ಲದೆ ರ್‍ಯಾಂಪ್‌ ವಾಕ್‌, ಫ್ಯಾಷನ್‌ ಶೋ ಕಾರ್ಯಕ್ರಮ ಏರ್ಪಡಿಸುವಂತಹ ಸಂದರ್ಭದಲ್ಲಿಯೂ ಇಂತಹ ಸೌಂದರ್ಯವರ್ಧಕ ಅತಿಯಾಗಿ ಬಳಕೆಯಾಗುತ್ತಿದೆ.

ಈಗಿನ ಆದ್ಯತೆ
ಹೆಣ್ಣು ಮಕ್ಕಳ ಫ್ಯಾಷನ್‌ನಲ್ಲಿ ಬಹುತೇಕ ಅಂಬ್ರುಲಾ ಫ್ರಾಕ್‌, ಸಿಂಡ್ರೆಲಾ ಫ್ರಾಕ್‌, ವೆಲ್ವೆಟ್‌ ಫ್ರಾಕ್‌, ಮಿನಿ ಸ್ಯಾರಿ, ಮಿಡ್ಡಿ ಸ್ಕರ್ಟ್‌ ಫ್ಯಾಷನ್‌ ಆಗಿದ್ದರೆ ಗಂಡು ಮಕ್ಕಳಿಗೆ ಪಂಚೆ, ಪೈಜಾಮ, ಜುಬ್ಬ ಇಂದಿನ ಸಾಮಾನ್ಯ ಆಯ್ಕೆ ಆಗಿರುವುದನ್ನು ಕಾಣಬಹುದು.

ಇತರ ದಿರಿಸುಗಳು
ಹೆಣ್ಣುಮಕ್ಕಳಿಗೆ ಹೇರ್‌ ಬ್ಯಾಂಡ್‌, ಲಿಟಲ್‌ ಕ್ಲಿಪ್‌, ಹತ್ತಿ ಮತ್ತು ಇತರ ಬಟ್ಟೆಯ ಕ್ಯಾಪ್‌ ತೊಡಿಸುತ್ತಾರೆ. ಸಾಮಾನ್ಯ ಮದುವೆ ಸಮಾರಂಭದಲ್ಲಿ ಮಕ್ಕಳನ್ನು ಶೃಂಗರಿಸುವಾಗ ಯಾವ ರೀತಿ ಉಡುಗೆ ತೊಡುಗೆ ನಿಮ್ಮ ಮಕ್ಕಳಿಗೆ ಸೂಕ್ತವೆಂಬುವುದನ್ನು ಅರಿಯಿರಿ. ಇಂದು ಮಿನಿ ಸ್ಯಾರಿಯನ್ನು ತೊಡುವ ಮಕ್ಕಳಿಗೆ ಉದ್ದ ಜಡೆ, ಕೈತುಂಬಾ ಬಳೆ ತೊಡಿಸಿದರೆ ಗಂಡು ಮಕ್ಕಳಿಗೆ ಪಂಜೆ ದಿರಿಸು ಮಾನ್ಯತೆ ಪಡೆದಿದೆ. ಇನ್ನು ಬ್ಯಾಗ್‌ ವಿಚಾರದಲ್ಲಿ ಕಾರ್ಟೂನ್‌ ಗೊಂಬೆಗಳೇ ಇವರ ಪ್ರಥಮ ಆದ್ಯತೆಯಾಗಿದೆ.

ಮಕ್ಕಳೇನೋ ಚಿಕ್ಕವರೇ. ಹಾಗೆಂದು ಅವರ ಉಡುಗೆ ತೊಡುಗೆಯ ಬೆಲೆಯೂ ಚಿಕ್ಕದಿರಬೇಕೆಂದಿಲ್ಲವಲ್ಲ. ಇಂದು ಆನ್‌ಲೈನ್‌ನಲ್ಲಿ ಮಕ್ಕಳ ಫ್ಯಾಷನ್‌ಗೆ ಸಂಬಂಧಿಸಿದಂತೆ ಕಣ್ಮನ ಸೆಳೆಯುವ ಮಾದರಿಯನ್ನು ನೀವು ಕಾಣಬಹುದಾಗಿದೆ. ಇಷ್ಟೆಲ್ಲ ಫ್ಯಾಷನ್‌ ಮಕ್ಕಳಿಗಾಗಿಯೇ ಸಿದ್ಧಗೊಂಡಿರುವಾಗ ಎಳೆಯರೂ ಫ್ಯಾಷನ್‌ ಲೋಕಕ್ಕೆ ಲಗ್ಗೆ ಇಟ್ಟಿದ್ದಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ.

– ರಾಧಿಕಾ, ಕುಂದಾಪುರ

ಟಾಪ್ ನ್ಯೂಸ್

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Bantwal: ಮತದಾನ ಮಾಡಿ ಮದುವೆ ಮುಹೂರ್ತಕ್ಕೆ ಅಣಿಯಾದ ನವವಧು

Bantwal: ಮದುವೆ ಮುಹೂರ್ತಕ್ಕೂ ಮೊದಲೇ ಮತದಾನ ಹಕ್ಕು ಚಲಾಯಿಸಿದ ನವವಧು

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ

Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.