ಅದಿತಿ – ಅರುಂಧತಿ ಚೆಲುವಾದ ಪ್ರಸ್ತುತಿ
Team Udayavani, Jul 26, 2019, 5:00 AM IST
ರಂಜನಿ ಮೆಮೋರಿಯಲ್ ಟ್ರಸ್ಟ್ನ ಆಶ್ರಯದಲ್ಲಿ ಜೂ.15ರಂದು ಸಂಜೆ ಲತಾಂಗಿಯಲ್ಲಿ ಅದಿತಿ, ಅರುಂಧತಿ, ಪನ್ನಗ ಶರ್ಮನ್ ಇವರ ಕಛೇರಿಯನ್ನು ಆಯೋಜಿಸಲಾಗಿತ್ತು.
ಅದಿತಿ – ಅರುಂಧತಿ ಅವರಲ್ಲಿ ಉತ್ತಮ ಹೊಂದಾಣಿಕೆ ಇದೆ. ಗಟ್ಟಿಯಾಗಿ ಕಲಿತ ಪಾಠಾಂತರದ ಸೊಗಸು ಇದೆ. ಪರಿಶ್ರಮ, ನಿರಂತರ ಅಭ್ಯಾಸ ನಡೆಸಿದರೆ ಏನಾಗಬಹುದು ಎಂಬುವುದಕ್ಕೆ ಈ ಸೋದರಿಯರು ಸಾಕ್ಷಿಯಾಗಿ ನಿಲ್ಲುತ್ತಾರೆ. ನವರಾಗಮಾಲಿಕಾ ವರ್ಣದ ಚೆಲುವಾದ ಪ್ರಸ್ತುತಿಯ ನಂತರ ವಿನಾಯಕ (ಹಂಸಧ್ವನಿ)ಯನ್ನು ನುಡಿಸಲಾಯಿತು. ದೀಕ್ಷಿತರ ಮೀನಾಕ್ಷಿಯಾಗಲೀ, ಶ್ಯಾಮಾಶಾಸ್ತ್ರಿಗಳ ಮರಿವೇರೆ ಗತಿಯಲ್ಲಿ ಅಚ್ಚುಕಟ್ಟುತನ ಇದ್ದರೂ ಅವಸರವೇ ಪ್ರಧಾನವಾಗಿ ಮೆರೆಯುತ್ತಿತ್ತು. ಆಲಾಪನೆಗಳು ಹೆಚ್ಚಿನ ಮನೋಧರ್ಮವನ್ನು ಬಯಸುತ್ತವೆ. ಪನ್ನಗಶರ್ಮರ ಸೂಕ್ತ ನಡೆಗಳು ನುಡಿಸಾಣಿಕೆಗೆ ಪೂರಕವಾಗಿದ್ದವು. ಕಾರ್ವೈಗಳನ್ನು ಹೆಚ್ಚಾಗಿ ನೀಡಿದರೆ ಕಛೇರಿಯು ಇನ್ನೂ ಹೆಚ್ಚಿನ ಯಶಸ್ಸನ್ನು ಸಾಧಿಸಬಲ್ಲದು.
ಗಾನಮೂರ್ತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
2nd PUC: ಮರುಮೌಲ್ಯಮಾಪನದಲ್ಲಿ ರಾಜ್ಯಕ್ಕೆ ಆರನೇ ರ್ಯಾಂಕ್ ಪಡೆದ ತೀರ್ಥಹಳ್ಳಿಯ ಸುಚಿಂತ್
Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ
Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ