ದೃಶ್ಯ ಕಾವ್ಯವಾದ ಅಂಬೆಯ ಒಡಲಾಳ

ಕುಸುಮ ಸಾರಂಗ ವಿದ್ಯಾರ್ಥಿಗಳ ಪ್ರಸ್ತುತಿ

Team Udayavani, Jun 21, 2019, 5:00 AM IST

10

ಸಂದೇಹ ಹಾಗೂ ಅತಾರ್ಕಿಕ ಸಂಗತಿಗಳನ್ನು ಪಕ್ಕಕ್ಕಿಟ್ಟು ನಾಟಕವನ್ನು ನೋಡುವುದಾದರೆ ಇಡೀ ನಾಟಕ ಒಂದು ದೃಶ್ಯಕಾವ್ಯವಾಗಿ ಮೂಡಿಬಂದಿದೆ. ನಾಟಕದಾದ್ಯಂತ ಬಳಸಿದ ರಂಗತಂತ್ರಗಳು ಪ್ರಯೋಗವನ್ನು ಆಕರ್ಷಣೀಯವೆನಿಸಿದೆ.

ಅಂಬೆಯ ಪಾತ್ರವನ್ನು ಕೇಂದ್ರವಾಗಿರಿಸಿ ಪಿತೃಪ್ರಧಾನ ವ್ಯವಸ್ಥೆಯ ರಾಜಕಾರಣವನ್ನು ಡಾ| ಜಯಪ್ರಕಾಶ ಮಾವಿನಕುಳಿ ಅಭಿಯಾನ ನಾಟಕ ರೂಪದಲ್ಲಿ ರಚಿಸಿದ್ದಾರೆ.ಸುಬ್ರಹ್ಮಣ್ಯ ಕೆಎಸ್‌ಎಸ್‌ ಕಾಲೇಜಿನ ಕುಸುಮಸಾರಂಗ ವಿದ್ಯಾರ್ಥಿಗಳು ಕಾಲೇಜಿನಲ್ಲಿ 27ನೇ ಪ್ರಸ್ತುತಿಯಾಗಿ ನಾಟಕವನ್ನು ಇತ್ತೀಚೆಗೆ ಪ್ರದರ್ಶಿಸಿದರು. ದಾಕ್ಷಾಯಿಣಿ ಭಟ್‌ ನಾಟಕವನ್ನು ನಿರ್ದೇಶಿಸಿದ್ದಾರೆ.

ಕಾಶಿರಾಜನ ಕುಮಾರಿ ಅಂಬೆ ಸ್ವಯಂವರಕ್ಕೆ ಬಂದ ಸಾಲ್ವನನ್ನು ಪ್ರೀತಿಸುತ್ತಾಳೆ. ಸ್ವಯಂವರದಲ್ಲಿ ಸಾಲ್ವರಾಜನಿಗೆ ಮಾಲೆ ಹಾಕಬೇಕು ಎನ್ನುವಷ್ಟರಲ್ಲಿ ನುಗ್ಗಿದ ಭೀಷ್ಮ ಇತರೆಲ್ಲ ರಾಜಕುಮಾರರ ಜತೆಗೆ ಸಾಲ್ವನನ್ನೂ ಸೋಲಿಸುತ್ತಾನೆ. ಅಂಬೆಯ ವಿರೋಧ ಲೆಕ್ಕಿಸದೇ ಆಕೆಯ ಇಬ್ಬರು ತಂಗಿಯರ ಜೊತೆಗೆ ಬಲವಂತವಾಗಿ ಹಸ್ತಿನಾವತಿಗೆ ಹೊತ್ತೋಯ್ಯುತ್ತಾನೆ. ಮಲತಮ್ಮ ವಿಚಿತ್ರವೀರ್ಯನಿಗೆ ಆಕೆಯನ್ನು ವಿವಾಹ ಮಾಡಲು ತೀರ್ಮಾನಿಸುತ್ತಾಳೆ. ಆಕೆ ಸಾಲ್ವನನ್ನು ತಾನು ಪ್ರೀತಿಸುತ್ತಿದ್ದು ಕನ್ಯತ್ವವನ್ನು ಸಹ ಕಳೆದುಕೊಂಡಿದ್ದೇನೆಂದು ರಾಣಿ ಸತ್ಯವತಿಗೆ ಹೇಳುತ್ತಾಳೆ. ಕಾಡಿ ಬೇಡಿ ಬಿಡುಗಡೆ ಪಡೆದು ಸಾಲ್ವನಲ್ಲಿಗೆ ಹೋದ ಅಂಬೆ ಅಲ್ಲಿಯೂ ಅವಮಾನಿತಳಾಗುತ್ತಾಳೆ. ಮತ್ತೆ ಹಸ್ತಿನಾವತಿಗೆ ಬಂದ ಅಂಬೆ ಹೊತ್ತು ತಂದ ಭೀಷ್ಮನೇ ತನ್ನನ್ನು ಮದುವೆಯಾಗಬೇಕೆಂದು ಆಗ್ರಹಿಸುತ್ತಾಳೆ. ಆಜನ್ಮ ಬ್ರಹ್ಮಚಾರಿ ಪ್ರತಿಜ್ಞೆ ಮುರಿಯಲು ನಿರಾಕರಿಸಿದ ಭೀಷ್ಮ ಅಂಬೆಯನ್ನು ತಿರಸ್ಕರಿಸುತ್ತಾನೆ. ಅವಮಾನದ ಬೆಂಕಿಯಲ್ಲಿ ಬೆಂದುಹೋದ ಅಂಬೆ ಸೇಡು ತೀರಿಸಿಕೊಳ್ಳುವ ಪ್ರತಿಜ್ಞೆ ಮಾಡುವ ಮೂಲಕ ನಾಟಕ ಅಂತ್ಯವಾಗುತ್ತದೆ.

ರಾಜ್ಯಾಧಿಕಾರವನ್ನು ಕಾಪಾಡಿಕೊಳ್ಳಲು ರಾಣಿ ಸತ್ಯವತಿ ಪ್ರಯತ್ನಿಸಿದರೆ. ಕೊಟ್ಟ ವಚನಕ್ಕೆ ಭೀಷ್ಮ ಕಟಿಬದ್ದನಾಗುತ್ತಾನೆ. ಕಾಶಿರಾಜನಿಗೆ ತನ್ನ ಸಿಂಹಾಸನದ ಚಿಂತೆಯಾದರೆ, ಸಾಲ್ವರಾಜನನ್ನು ಅವಮಾನ ಸುಡುತ್ತಿರುತ್ತದೆ. ಎಲ್ಲರ ಸ್ವಾರ್ಥ ಹಿತಾಸಕ್ತಿಯಲ್ಲಿ ಅಂಬೆ ಬಲಿಪಶುವಾಗುತ್ತಾಳೆ. ರಾಜ್ಯಾಧಿಕಾರ, ಧರ್ಮ ಹಾಗೂ ಸ್ವಾರ್ಥ ಹಿತಾಸಕ್ತಿಗಾಗಿ ಬಲಿಯಾದ ಸಮಸ್ತ ಮಹಿಳೆಯರ ಪ್ರತಿನಿ ಧಿಯಾಗಿ ಅಂಬೆಯ ಪಾತ್ರ ಮೂಡಿಬಂದಿದೆ. ಅಂಬೆ ಪಾತ್ರಧಾರಿ ಅನಘಾ ಎಂ. ಜಿ. ಕೊನೆಯವರೆಗೂ ತನ್ನ ಹಾವಭಾವಗಳಲ್ಲಿ ಸೇಡನ್ನೇ ಮೈಗೂಡಿಸಿಕೊಂಡಂತೆ ಅಭಿನಯಿಸಿದ್ದಾರೆ. ಏಟಿಗೆ ಎದುರೇಟು, ಉತ್ತರಕ್ಕೆ ಪ್ರತ್ಯುತ್ತರ, ಬಾಣಕ್ಕೆ ತಿರುಗುಬಾಣ, ಮಂತ್ರಕ್ಕೆ ತಿರುಮಂತ್ರ ನೀಡುತ್ತಾ ಪಾತ್ರಕ್ಕೆ ರಂಗು ತುಂಬಿದ್ದಾರೆ.

ನಾಟಕದಲ್ಲಿ ಅಂಬೆ ಹೇಗೆ ಅಸಹಾಯಕಳ್ಳೋ ಹಾಗೆಯೇ ಪುರುಷ ಪಾತ್ರಗಳೂ ಸಹ ಅಸಹಾಯಕವಾಗಿವೆ. ನಾಟಕದ ವಿನ್ಯಾಸದ ಮೇಲೆ ಪ್ರಭುತ್ವ ಸಾಧಿಸಿದ ನಿರ್ದೇಶಕಿ ದಾಕ್ಷಾಯಿಣಿಯವರು ವಸ್ತುವಿನ ತಾರ್ಕಿಕ ನಿರೂಪಣೆಯಲ್ಲೂ ಬದ್ಧತೆೆ ತೋರಿದ್ದಾರೆ.ತಾರ್ಕಿಕ ಸಂದೇಹ ಹಾಗೂ ಅತಾರ್ಕಿಕ ಸಂಗತಿಗಳನ್ನು ಪಕ್ಕಕ್ಕಿಟ್ಟು ನಾಟಕವನ್ನು ನೋಡುವುದಾದರೆ ಇಡೀ ನಾಟಕ ಒಂದು ದೃಶ್ಯಕಾವ್ಯವಾಗಿ ಮೂಡಿಬಂದಿದೆ. ನಾಟಕದಾದ್ಯಂತ ಬಳಸಿದ ರಂಗತಂತ್ರಗಳು ಪ್ರಯೋಗವನ್ನು ಆಕರ್ಷಣೀಯವೆನಿಸಿದೆ. ಗುಂಪುಗಳನ್ನು ಬಳಸಿಕೊಂಡ ರೀತಿ, ಗುಂಪಿನಿಂದಲೇ ಪಾತ್ರಗಳು ಹೊರಹೊಮ್ಮಿ ಮತ್ತೆ ಗುಂಪಿನಲ್ಲಿ ಒಂದಾಗುವಂತೆ ಬಳಸಲಾದ ಮಾರ್ಪಾಟು ಸೊಗಸಾಗಿ ಮೂಡಿಬಂದಿದೆ.

ಉದ್ಯಾನವನದಲ್ಲಿ ನಡೆಯುವ ಸರಸ ದೃಶ್ಯ ವೈಭವ ಹಾಗೂ ಸತ್ಯವತಿ-ಶಂತನು ಭೇಟಿಯಾದಾಗ ನಟಿಸುವ ಗುಂಪಿನ ದೃಶ್ಯ, ಸ್ವಯಂವರದಲ್ಲಿ ಭೀಷ್ಮನು ರಾಜಕುಮಾರರೊಂದಿಗೆ ಕಾದಾಡುವ ದೃಶ್ಯಸಂಯೋಜನೆಗಳು. ಜತೆಗೆ ಪೂರಕವಾಗಿ ಹಿನ್ನಲೆ ಆಲಾಪ ಮತ್ತು ಸಂಗೀತ ಸೋಜಿಗವನ್ನು ಹುಟ್ಟುಹಾಕುವಂತಿದೆ. ಸಂಗೀತ ಹಾಗೂ ಬೆಳಕು ನಾಟಕಕ್ಕೆ ಮಾಂತ್ರಿಕತೆಯ ಸ್ಪರ್ಶವನ್ನು ನೀಡಿವೆ.

ಎಲ್ಲ ಪಾತ್ರಗಳ ಶೆ„ಲೀಕೃತ ಆಂಗಿಕ ಅಭಿನಯ ನಾಟಕಕ್ಕೆ ವಿಶೇಷತೆಯನ್ನು ಒದಗಿಸಿದೆ. ಭೀಷ್ಮನಾಗಿ ಕೀರ್ತನ್‌, ಸಾಲ್ವನಾಗಿ ಸುಜಿತ್‌ ಹಾಗೂ ಕಾಶಿರಾಜನಾಗಿ ಡಾ| ಗೋವಿಂದ ಎನ್‌. ಎಸ್‌. ಅಭಿನಯ ಪಾತ್ರಕ್ಕೆ ನ್ಯಾಯಸಲ್ಲಿಸಿದ್ದಾರೆ. ಸತ್ಯವತಿ ಪಾತ್ರದಲ್ಲಿ ವರ್ಷಾ ಮಾಯಿಪಜೆ ಅಭಿನಯ ಗಮನಾರ್ಹವಾಗಿತ್ತು. ಉಳಿದೆಲ್ಲ ನಟ ನಟಿಯರೂ ತಮ್ಮ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿ ನಾಟಕವನ್ನು ಅಂದಗೊಳಿಸಿದ್ದಾರೆ.ವಸ್ತ್ರವಿನ್ಯಾಸ, ರಂಗಸಜ್ಜಿಕೆ ಸರಳವಾಗಿದ್ದು ಕೇವಲ ರಾಜಲಾಂಛನಗಳನ್ನು ಮಾತ್ರ ಸಾಂಕೇತಿಕವಾಗಿ ಬಳಸಿಕೊಳ್ಳಲಾಗಿದೆ.

ಬಾಲಕೃಷ್ಣ ಭೀಮಗುಳಿ

ಟಾಪ್ ನ್ಯೂಸ್

Dhruva Sarja ಮಾರ್ಟಿನ್‌ ರಿಸಲ್ಟ್ ಚಂದನವನಕ್ಕೆ ಹೆಮ್ಮೆ ತರಲಿದೆ…ನಿರ್ಮಾಪಕ ಉದಯ್‌ ಮೆಹ್ತಾ

Dhruva Sarja ಮಾರ್ಟಿನ್‌ ರಿಸಲ್ಟ್ ಚಂದನವನಕ್ಕೆ ಹೆಮ್ಮೆ ತರಲಿದೆ…ನಿರ್ಮಾಪಕ ಉದಯ್‌ ಮೆಹ್ತಾ

Nomination: ಕೊನೆಯ ಕ್ಷಣದಲ್ಲಿ ಓಡೋಡಿ ಬಂದು ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ…

Nomination: ಕೊನೆಯ ಕ್ಷಣದಲ್ಲಿ ಓಡೋಡಿ ಬಂದು ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ…

arvind kejriwal

Delhi Excise Policy Case: ಕೇಜ್ರಿಗೆ ಅಲ್ಪ ರಿಲೀಫ್; ಮಧ್ಯಂತರ ಜಾಮೀನು ನೀಡಿದ ಸುಪ್ರೀಂ

prashanth neel

KGF-3 ಸ್ಕ್ರಿಪ್ಟ್ ಸಿದ್ದವಿದೆ, ಆದರೆ….: ಬಿಗ್ ಅಪ್ಡೇಟ್ ನೀಡಿದ ಪ್ರಶಾಂತ್ ನೀಲ್

2013ರಲ್ಲಿ ನಡೆದ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ: ಇಬ್ಬರಿಗೆ ಜೀವಾವಧಿ, 3 ಮಂದಿ ಖುಲಾಸೆ

2013ರಲ್ಲಿ ನಡೆದ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ: ಇಬ್ಬರಿಗೆ ಜೀವಾವಧಿ, ಮೂವರು ಖುಲಾಸೆ

Colin Munro Announced International Retirement

Retired; ಟಿ20 ವಿಶ್ವಕಪ್ ನಲ್ಲಿ ಸಿಗದ ಸ್ಥಾನ; ವೃತ್ತಿಜೀವನಕ್ಕೆ ತೆರೆಎಳೆದ ಕಿವೀಸ್ ಬ್ಯಾಟರ್

pralhad joshi

Hubli; ಕಾಂಗ್ರೆಸ್ ಅಧಿಕಾರಕ್ಕಾಗಿ ದೇಶವನ್ನು ಒಡೆಯಲೂ ಹೇಸುವುದಿಲ್ಲ: ಪ್ರಹ್ಲಾದ ಜೋಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Dhruva Sarja ಮಾರ್ಟಿನ್‌ ರಿಸಲ್ಟ್ ಚಂದನವನಕ್ಕೆ ಹೆಮ್ಮೆ ತರಲಿದೆ…ನಿರ್ಮಾಪಕ ಉದಯ್‌ ಮೆಹ್ತಾ

Dhruva Sarja ಮಾರ್ಟಿನ್‌ ರಿಸಲ್ಟ್ ಚಂದನವನಕ್ಕೆ ಹೆಮ್ಮೆ ತರಲಿದೆ…ನಿರ್ಮಾಪಕ ಉದಯ್‌ ಮೆಹ್ತಾ

Nomination: ಕೊನೆಯ ಕ್ಷಣದಲ್ಲಿ ಓಡೋಡಿ ಬಂದು ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ…

Nomination: ಕೊನೆಯ ಕ್ಷಣದಲ್ಲಿ ಓಡೋಡಿ ಬಂದು ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ…

Vijayapura ಬಸವ ಜಯಂತಿ ದಿನ ಮಾದರಿ ಕಾರ್ಯ; ಹೆತ್ತವರಿಲ್ಲದ ವಿದ್ಯಾರ್ಥಿಗೆ ಶೈಕ್ಷಣಿಕ ದತ್ತು

Vijayapura ಬಸವ ಜಯಂತಿ ದಿನ ಮಾದರಿ ಕಾರ್ಯ; ಹೆತ್ತವರಿಲ್ಲದ ವಿದ್ಯಾರ್ಥಿಗೆ ಶೈಕ್ಷಣಿಕ ದತ್ತು

arvind kejriwal

Delhi Excise Policy Case: ಕೇಜ್ರಿಗೆ ಅಲ್ಪ ರಿಲೀಫ್; ಮಧ್ಯಂತರ ಜಾಮೀನು ನೀಡಿದ ಸುಪ್ರೀಂ

7-kundapura

Rank: ಕುಂದಾಪುರ ತಾಲೂಕಿಗೆ ಪ್ರಥಮ ಹಾಗೂ ರಾಜ್ಯಕ್ಕೆ 5ನೇ ರ್‍ಯಾಂಕ್ ಪಡೆದ ಶುಕ್ತಿಜಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.