ಕಳಚಿ ಬಿದ್ದ ಕಲಾಕುಸುಮ ಶ್ರೀನಿವಾಸ ರಾವ್‌


Team Udayavani, May 4, 2018, 6:00 AM IST

s-13.jpg

ಬಹುಮುಖಿ ಕಲಾವಿದ ನಿವೃತ್ತ ಶಿಕ್ಷಕ ಮದಂಗಲ್ಲು ಶ್ರೀನಿವಾಸ ರಾವ್‌ ಎ.23ರಂದು 65ನೇ ವಯಸ್ಸಿನಲ್ಲಿ ನಿಧನ ಹೊಂದಿದರು. ವೃತ್ತಿಯಲ್ಲಿ ಅಧ್ಯಾಪಕನಾಗಿದ್ದರೂ ಓರ್ವ ಹವ್ಯಾಸಿ ಯಕ್ಷಗಾನ ಕಲಾವಿದನಾಗಿ, ತಾಳಮದ್ದಳೆ ಅರ್ಥಧಾರಿಯಾಗಿ, ರಂಗನಟನಾಗಿ, ಪ್ರಸಾದನಾ ಕಲಾವಿದನಾಗಿ, ನೇಪಥ್ಯ ಕಲಾವಿದನಾಗಿ ರಾತ್ರಿಯಿಂದ ಬೆಳಗಿನವರೆಗೆ ಹವ್ಯಾಸಿ ಯಕ್ಷಗಾನ ಕಲಾವಿದರ ಮುಖವರ್ಣಿಕೆ ಬರೆಯುತ್ತಾ, ನಾಟಕ ಹಾಗೂ ಶಾಲಾ ವಾರ್ಷಿಕೋತ್ಸವಗಳಿಗೆ ಪ್ರಸಾದನ ಕೈಂಕರ್ಯ ನಡೆಸುತ್ತಾ, ನೇಪಥ್ಯದಲ್ಲಿ ವೇಷಭೂಷಣ ಕಟ್ಟುತ್ತಾ 48 ವರ್ಷಗಳಿಂದ ಸದ್ದಿಲ್ಲದೆ ಕಲಾ ಸೇವೆ ನಡೆಸುತ್ತಾ ಬಂದವರು. ಆಪ್ತರಿಂದ ಒಪ್ಪಣ್ಣನೆಂದೇ ಕರೆಸಿಕೊಂಡವರು.

ಇಂದಿನ ಅನೇಕ ಹಿರಿಯ ಹವ್ಯಾಸಿ ಕಲಾವಿದರೂ ಕೂಡ ಒಂದಲ್ಲ ಒಂದು ಸಲ ಇವರಿಂದ ಮುಖವರ್ಣಿಕೆ ಬರೆಸಿಕೊಂಡವರೆ. ಹವ್ಯಾಸಿ ಯಕ್ಷಗಾನ ಬಯಲಾಟಗಳಿಗೆ ಆಪತ್‌ ಕಲಾವಿದನಾಗಿ ಒದಗುವವರು.ಆಟಕ್ಕೆ ಯಾವುದೇ ಕಲಾವಿದರ ಗೈರಾದಾರೆ ಆ ವೇಷಕ್ಕೆ ಒಪ್ಪಣ್ಣನೇ ಗತಿ. ಆಪತ್‌ ಕಲಾವಿದನಾಗಿ ಶಾಲಾ ದಿನದಲ್ಲಿ ರಂಗವೇರಿದ ಶ್ರೀನಿವಾಸ ರಾವ್‌ ಜೀವನದುದ್ದಕ್ಕೂ ಆಪತ್‌ ಕಲಾವಿದನಾಗೇ ಗುರುತಿಸಿಕೊಂಡಿದ್ದೇನೆ ಎನ್ನುತ್ತಿದ್ದರು. 

ಪುಂಡುವೇಷ, ಕಿರೀಟವೇಷ, ಬಣ್ಣದವೇಷ, ಹೆಣ್ಣು ಬಣ್ಣ, ಹಾಸ್ಯ, ಕನ್ನಡ, ತುಳು, ಪೌರಾಣಿಕ, ಕಾಲ್ಪನಿಕ ಹೀಗೆ ಎಲ್ಲಾ ಪ್ರಕಾರದ ವೇಷಗಳಿಗೆ ಸೈ ಎನಿಸಿದವರು. ಇವರ ಭಸ್ಮಾಸುರ ಮೋಹಿನಿಯ ಶಿವ, ದೇವಿ ಮಹಾತೆ¾ಯ ಬ್ರಹ್ಮ, ಶೂರ್ಪನಖೀ, ತಾಟಕಿ, ಪೂತನಿ, ರಾವಣ, ದೇವೇಂದ್ರ, ಮಹಿಷಾಸುರ, ವಾವರ, ಅಬ್ಬು ಸೇಕು, ಕೇಳು ಪಂಡಿತ, ಕೇತಕಿ ವರ್ಮ, ಬುದ್ಧಿವಂತ, ಕೇಮರ ಬಲ್ಲಾಳ ಹೀಗೆ ಪೌರಾಣಿಕ ಸಾಮಾಜಿಕ, ತುಳು ಕನ್ನಡ ಎಲ್ಲ ಪ್ರಕಾರದ ವೇಷಗಳನ್ನು ಮಾಡಿದ್ದಾರೆ. ನಾಟಕ ರಂಗದಲ್ಲಿ ಬಯ್ಯಮಲ್ಲಿಗೆಯ ಚಿಕ್ಕಮ್ಮ, ಬೊಳ್ಳಿಮೂಡುಂಡು ನಾಟಕದ ಗಂಗಾ, ಕೃಷ್ಣ ದೇವರಾಯದ ಅಪ್ಪಾಜಿ ಇವರ ಪ್ರಸಿದ್ಧ ಪಾತ್ರಗಳು.

 ಅಧ್ಯಾಪನ ವೃತ್ತಿಯ ಜತೆಗೆ ಹಿರಿಯ ಕಲಾವಿದ ದೇವಕಾನ ಕೃಷ್ಣ ಭಟ್ಟರಿಂದ ಪ್ರಸಾದನ ಕಲೆ ಕಲಿತು ಗಣೇಶ ಕಲಾವೃಂದ ಪೈವಳಿಕೆ ಸಂಸ್ಥೆಯಲ್ಲಿ ಸೇವೆಗೈಯುತ್ತಾ ಬಂದಿದ್ದರು. ಪಣಂಬೂರು ಶ್ರೀಧರ ಐತಾಳರು ಒಪ್ಪಣ್ಣರಿಗೆ ಯಕ್ಷಗಾನದ ಮೊದಲ ಪಾಠ ಹೇಳಿಕೊಟ್ಟವರು. ಮಾವ ಕುರಿಯ ವಿಠಲ ಶಾಸ್ತ್ರಿಗಳ ಮಾರ್ಗದರ್ಶನ, ಅಣ್ಣ , ತಮ್ಮಂದಿರೊಂದಿಗೆ ಯಕ್ಷಗಾನದ ಒಡನಾಟ, ಹೀಗೆ ಕೇಳಿ ನೋಡಿ ಕಲಿತದ್ದೇ ಹೆಚ್ಚು ಎನ್ನುತ್ತಿದ್ದರು ರಾವ್‌. ದೇಶ ವಿದೇಶಗಳಲ್ಲಿ ಹಲವಾರು ಪ್ರಶಸ್ತಿ , ಸಮ್ಮಾನದ ಗೌರವಗಳಿಗೆ ಪಾತ್ರರಾದವರು ರಾವ್‌.  

ಯೋಗೀಶ ರಾವ್‌ ಚಿಗುರುಪಾದೆ 

ಟಾಪ್ ನ್ಯೂಸ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.