ಸಮಕಾಲೀನ ರಾಜಕೀಯದ ಹುಳುಕುಗಳನ್ನು ತೆರೆದಿಟ್ಟ ಟ್ರಾನ್ಸ್‌ ನೇಶನ್‌


Team Udayavani, Oct 11, 2019, 3:39 AM IST

u-8

ಅಲೋಶಿಯಸ್‌ ಕಾಲೇಜಿನಲ್ಲಿ ಜರಗಿದ ಗಭಾಸ್ಕರ-2019ರಲ್ಲಿ ಪ್ರದರ್ಶಿಸಿದ ಸವಿತಾರಾಣಿ ಪಾಂಡಿಚೇರಿ ನಿರ್ದೇಶಿಸಿದ ಟ್ರಾನ್ಸ್‌ನೇಶನ್‌ ಸಮಕಾಲೀನ ರಾಜಕೀಯದ ಹುಳುಕುಗಳನ್ನು ತೆರೆದಿಡುತ್ತದೆ.

ಇಡೀ ರಾಷ್ಟ್ರ ಇಂದು ಒಂದು ರೀತಿಯ ಬದಲಾವಣೆಯ ಪರ್ವಕ್ಕೆ ವೇಗವಾಗಿ ತೆರೆದುಕೊಳ್ಳುವ ಧಾವಂತದಲ್ಲಿದೆ. ಆಡಳಿತ ನಡೆಸುವ ಪಕ್ಷ ಏಕಧ್ವಜ, ಏಕ ದೇಶ ಎಂಬ ಸಂಹಿತೆಯಂತೆ ಏಕ ವಸ್ತ್ರ ಸಂಹಿತೆಯನ್ನು ತರುವ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸುವುದರೊಂದಿಗೆ, ಯಾವುದೇ ಸಿದ್ಧ ಪಠ್ಯವಿಲ್ಲದ ನಾಟಕ ಟಾನ್ಸ್‌ನೇಶನ್‌ ಅನಾವರಣಗೊಳ್ಳುತ್ತದೆ. ಕಾಮಸೂತ್ರವನ್ನು ವಿಶ್ವಕ್ಕೆ ನೀಡಿದ ದೇಶ, ವಿವಿಧತೆಯಿಂದಲೇ ವಿದೇಶಿಗರೂ ಆಸ್ಥೆಯಿಂದ ಗುರುತಿಸುವ ದೇಶ ಇಂಥ ಏಕ ವಸ್ತ್ರ ಸಂಹಿತೆಯನ್ನು ಆಲೋಚನೆ ಮಾಡುವುದೇ ಅಸಂಬದ್ಧ, ಅಸಂಗತ ಎಂದು ವಿರೋಧ ಪಕ್ಷ ವಿರೋಧಿಸುವುದರೊಂದಿಗೆ ಸದನದ ಬಾವಿಗಿಳಿಯುತ್ತಾರೆ ಜನ ನಾಯಕರು. ಸೆನ್ಸಾರ್‌ ನಿಯಮವನ್ನು ಸಂವಿಧಾನದೊಳಗೆ ತರುವ ಮೂಲಕ ಅವರವರ ಮೂಗಿನ ನೇರಕ್ಕೆ ಕಾನೂನನ್ನು ತಿರುಗಿಸುವ ವಿಡಂಬನಾತ್ಮಕ ಸನ್ನಿವೇಶ ಹಾಸ್ಯವನ್ನು ಉಕ್ಕಿಸುತ್ತಾ, ರಾಜಕಾರಣದ ನೈತಿಕ ಅಧಃಪತನವನ್ನು ವಿವರಿಸುತ್ತಾ ಸಾಗುತ್ತದೆ.

ಮುಂದೆ? ನಮ್ಮ ವ್ಯವಸ್ಥೆಯನ್ನು ಶಾಕ್‌ ನೀಡಿದಂತೆ ತೆರೆದಿಡುತ್ತಾ ಸಾಗುತ್ತದೆ ನಾಟಕ. ಪ್ರತಿಯೊಂದಕ್ಕೂ ಹೆಲ್ಪ್ಲೈನ್‌ ಇದೆ, ಪ್ರತಿಯೊಂದಕ್ಕೂ ಕಾನೂನಿದೆ, ಪ್ರತಿ ಹೆಜ್ಜೆಯಲ್ಲೂ ರಕ್ಷಣೆಯ ಸ್ಲೋಗನ್‌ ಇದೆ. ಆದರೆ ಹೆಣ್ಣು ಮಾತ್ರ ಸದಾ ಅತ್ಯಾಚಾರಕ್ಕೊಳಗಾಗುತ್ತಾಳೆ. ಹೆಲ್ಪ… ಮಾಡಿ ಎಂಬ ಆ ಕೂಗು ಎಂತಹ ಎದೆಯಲ್ಲೂ ಕಳವಳ ಹುಟ್ಟಿಸುತ್ತದೆ. ಸೋಗಲಾಡಿ ಸನ್ಯಾಸಿಯ ಮೂಲಕ ಸಮಾಜದ ದುರವಸ್ಥೆಯನ್ನು ಪರಿಣಾಮಕಾರಿಯಾಗಿ ತೆರೆದಿಡುತ್ತಾ, ಅತ್ಯಾಚಾರ ಸಂತ್ರಸ್ತೆಯ ಅಸಹಾಯಕ ಪರಿಸ್ಥಿತಿಯನ್ನು ಕೈ ಮೀರಿದ ಸಹಜ ನಡೆಯಂತೆ ಬಿಂಬಿಸಿ, ನಾಟಕದ ನಡುವೆ ಒಂದು ಆತಂಕದ ಅಂಕವೂ ಸೇರಿಕೊಂಡು, ಪ್ರತಿ ಪ್ರೇಕ್ಷಕನೂ ನಟನಾಗುವ ಅನುಭಾವ ವಿನೂತನ ಅನಿಸುತ್ತದೆ.

ಲೈಲಾ, ಮಜನು ಎಂಬ ಪಾತ್ರಗಳ ಮೂಲಕ ಹೆಣ್ಣಿನ ಶೋಷಣೆಯ ಆಳ ಬಿಚ್ಚಿಡುತ್ತಾ, ಕೊನೆಗೂ ಅತ್ಯಾಚಾರ ಸಂತ್ರಸ್ತೆಗೆ ನ್ಯಾಯ ಮರೀಚಿಕೆಯೇ ಆಗುತ್ತದೆ. ನಮ್ಮ ನಾಯಕರು,ಪ್ರಭಾವಿಗಳು, ನ್ಯಾಯ ವ್ಯವಸ್ಥೆ ಎಲ್ಲೆಡೆಯಲ್ಲೂ ಮಹಿಳಾ ಸಬಲೀಕರಣದ ಮಾತಾಡುವ ವ್ಯವಸ್ಥೆ ಮಹಿಳೆಗೆ ನ್ಯಾಯ ಕೊಡುವಲ್ಲಿ ಸೋಲುತ್ತದೆ.ಸೋಲಿನೊಂದಿಗೆ ಆಕೆಗೆಂದೂ ಸಬಲೆಯ ಪಟ್ಟ ಕೊಡದಿರುವ ವ್ಯವಸ್ಥಿತ ಸಂಚು ಗೆಲ್ಲುತ್ತದೆ. ಇದೂ ಸಂವಿಧಾನದ ಚೌಕಟ್ಟಿನಲ್ಲೇ ನಡೆಯುತ್ತದೆ. ಶಾಸಕಾಂಗ ಮತ್ತು ನಮ್ಮ ಕಾನೂನುಗಳು ಇದಕ್ಕೆ ಸಹಕಾರಿಯಾಗುತ್ತವೆ.

ಟ್ರಾನ್ಸ್‌ನೇಶನ್‌ ಮುಗಿಸಿ ಹೊರ ಬರುವಾಗ ಅನೇಕ ಭಿನ್ನ ಅನುಭವ.ಹೃದಯ ಭಾರ ಭಾರ. ಎಲ್ಲೋ ನಾವೂ ಈ ಅವ್ಯವಸ್ಥೆಯ ಭಾಗವೇನೋ ಎಂಬ ಶಾಕ್‌. ನಿರ್ದಿಷ್ಟ ಮಾನದಂಡಗಳಿಲ್ಲದೆ, ನಿರ್ದಿಷ್ಟ ಪಠ್ಯವಿಲ್ಲದೆ, ಒಡೆದು ಕಟ್ಟುವಿಕೆಯ ಪ್ರಯೋಗದೊಂದಿಗೆ ಪ್ರದರ್ಶನವಾದ ನಾಟಕ ಇದು. ಪ್ರತಿ ಪಾತ್ರವೂ ನಮ್ಮೊಳಗೊಂದು ನಡುಕದಿಂದ ಕೂಡಿದ ಪ್ರಶ್ನೆ ಸೃಷ್ಟಿಗೆ ಕಾರಣವಾದದ್ದು ಸುಳ್ಳಲ್ಲ. ಈ ಶ್ರೇಯಸ್ಸು ಕಲಾವಿದರಿಗೆ ಮತ್ತು ಒಂದು ತಂಡವಾಗಿ ಪಟ್ಟ ಶ್ರಮಕ್ಕೆ ಕನ್ನಡಿ. ಈ ನಾಟಕದಲ್ಲಿ ಪ್ರದರ್ಶನವಿರುವಲ್ಲಿ ಸ್ಥಳೀಯ ಸಮಸ್ಯೆಗಳನ್ನೆ ಮುಖ್ಯವಾಗಿ ಬಿಂಬಿಸುವ ಮೂಲಕ, ಪ್ರೇಕ್ಷಕನನ್ನು ನಾಟಕದ ಪಾತ್ರಧಾರಿಯಾಗಿಸುವ ವಿಶಿಷ್ಟ ಪ್ರಯತ್ನವೂ ನಡೆಯುತ್ತದೆ.

ಅರೆಹೊಳೆ ಸದಾಶಿವ ರಾವ್‌

ಟಾಪ್ ನ್ಯೂಸ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ನಾಟಕವಾದ ತಮಿಳು ಮಹಾಕಾವ್ಯದ ಕನ್ನಗಿ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಭರತಮುನಿ ಜಯಂತ್ಯುತ್ಸವದಲ್ಲಿ ರಂಜಿಸಿದ ನೃತ್ಯ ರೂಪಕ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ಸರ್ವೇಜನಾಃ ಕಾಂಚನಮಾಶ್ರಯಂತೇ 51ನೇ ಪ್ರದರ್ಶನ

ದೇಶಾಭಿಮಾನ ಸಾರುವ ಮಾನಸಗಂಗಾ

ದೇಶಾಭಿಮಾನ ಸಾರುವ ಮಾನಸಗಂಗಾ

karakushala-

ಪುಟ್ಟಕರಗಳಿಂದ ಮೂಡಿದ ಕರಕುಶಲ ಕಲಾಕೃತಿಗಳು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.