ಪ್ರತಿಭಾ ವಿಕಸನದಲ್ಲಿ ಸಂಭ್ರಮಿಸಿದ ಎಳೆಯರು
Team Udayavani, May 12, 2017, 3:45 AM IST
ಮಕ್ಕಳು ಇಡೀ ವಿಶ್ವದ ಆಸ್ತಿ ಎಂದರೆ ತಪ್ಪಾಗಲಾರದು. ಹಾಗಾಗಿ ಎಳೆಯರಿಗೆ ಉತ್ತಮವಾದ ಶಿಕ್ಷಣದೊಂದಿಗೆ ಸರಿಯಾದ ಮಾರ್ಗದರ್ಶನ ದೊರಕಿದಾಗ ವಿಶ್ವವೇ ಶಾಂತಿ, ಸಮೃದ್ಧಿಯಿಂದ ಇರಬಲ್ಲುದು. ಎಳೆಯರಲ್ಲಿ ಸಹಜವಾಗಿ ಅನುಕರಣಶೀಲತೆ ಮತ್ತು ಸೃಜನಶೀಲ ಮನೋಭಾವವಿರುವುದರಿಂದ ಹಿರಿಯರಾದ ನಾವು ಅದಕ್ಕೆ ಪ್ರೋತ್ಸಾಹ ನೀಡಿದ್ದೇ ಆದಲ್ಲಿ ಅದಕ್ಕಿಂತ ದೊಡ್ಡ ಕೊಡುಗೆ ಇನ್ನೊಂದಿಲ್ಲ. ಬೇಸಗೆ ಶಿಬಿರಗಳಲ್ಲಿ ಇಂತಹ ಅವಕಾಶವಿರುತ್ತದೆ.
ತೀರಾ ಗ್ರಾಮೀಣ ಭಾಗದ ಎಳೆಯರಿಗೂ ಇಂತಹ ಅವಕಾಶ ಸಿಗಬೇಕೆನ್ನುವ ದೃಷ್ಟಿಯಿಂದ ಬ್ರಹ್ಮಾವರ ಸಮೀಪದ ಪೇತ್ರಿಯ ವಿದ್ಯಾ ಟ್ಯುಟೋರಿಯಲ್ ಕಾಲೇಜಿನಲ್ಲಿ ಮೂರು ವರುಷದಿಂದ ಹದಿನಾರು ವರುಷ ವಯೋಮಾನದ ಮಕ್ಕಳಿಗೆ ಹತ್ತು ದಿನಗಳ ಪ್ರತಿಭಾ ವಿಕಸನ ಶಿಬಿರವನ್ನು ಆಯೋಜಿಸಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಂಪನ್ಮೂಲ ವ್ಯಕ್ತಿಗಳಿಂದ ಭರತನಾಟ್ಯ, ಸಂಗೀತ, ಚಿತ್ರಕಲೆ, ಪೇಪರ್ ಕ್ರಾಪ್ಟ್, ಕ್ಲೇ ಮಾಡೆಲ್, ಪಾಟ್ ಪೈಂಟಿಂಗ್, ಯೋಗ, ಶ್ಲೋಕ, ಕರಾಟೆ, ಒರಿಗಾಮಿ, ಭಾಷಣ ಕಲೆ ಮುಂತಾದವುಗಳ ಬಗ್ಗೆ ಎಳೆಯರ ಮನಸ್ಸಿಗೆ ಮುದ ನೀಡುವಂತೆ ತರಬೇತಿ ನೀಡಲಾಯಿತು. ಜತೆಗೆ ಪ್ರತಿದಿನ ಸಾಮಾನ್ಯ ಜ್ಞಾನ ವೃದ್ಧಿಗಾಗಿ ಪರಿಸರದ ನರ್ಸರಿ, ಕಾರ್ಖಾನೆ, ಐತಿಹಾಸಿಕ ಸ್ಥಳಗಳ ಸಂದರ್ಶನ ಮತ್ತು ಉರಗ ತಜ್ಞ ಗುರುರಾಜ ಸನಿಲ್ ಅವರಿಂದ ಹಾವು-ನಾವು ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.
ಶಿಬಿರದ ಕೊನೆಯ ದಿನ ಎಳೆಯರು ತಾವು ಕಲಿತ ಸಂಗೀತ, ಭರತನಾಟ್ಯ, ಕರಾಟೆ, ಕಿರು ಪ್ರಹಸನ, ಯೋಗ, ಭಾಷಣ ಕಲೆ ಮುಂತಾದವು ಗಳನ್ನು ಅತಿಥಿ ಗಣ್ಯರ, ಪೋಷಕರ, ಪಾಲಕರ ಮತ್ತು ಪ್ರೇಕ್ಷಕರ ಮುಂದೆ ಪ್ರದರ್ಶಿಸುವುದರೊಂದಿಗೆ ಸಭಾಂಗಣದ ಅಂಚಿನಲ್ಲಿ ತಾವು ರಚಿಸಿದ ಚಿತ್ರಕಲೆ, ಮುಖವಾಡ, ಪಾಟ್ ಪೈಂಟಿಂಗ್, ಕರಕುಶಲ ವಸ್ತುಗಳನ್ನು ಕಲಾತ್ಮಕವಾಗಿ ಜೋಡಿಸಿ ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಿದ್ದು ಕಂಡಾಗ, ಗ್ರಾಮೀಣ ಭಾಗದ ಎಳೆಯರಿಗೋಸ್ಕರ ನಡೆದ ಈ ಶಿಬಿರ ನಿಜವಾಗಿಯೂ ಅರ್ಥಪೂರ್ಣ ವೆನಿಸಿತು. ಕಳೆದ ಮೂರು ವರುಷಗಳಿಂದ ಈ ಶಿಬಿರವನ್ನು ಆಯೋಜಿಸುತ್ತಿರುವ ಈ ಕಾಲೇಜಿನ ಸಂಚಾಲಕರಾದ ಕಮಲಾಕ್ಷ ಹೆಬ್ಟಾರ್, ಸಹನಾ ಕೆ. ಹೆಬ್ಟಾರ್, ಪ್ರಸನ್ನ ಪಿ. ಭಟ್ ಮತ್ತು ಬಳಗವು, ಗ್ರಾಮೀಣ ಭಾಗದಲ್ಲಿನ ಎಳೆಯರನ್ನು ಯಾವುದೇ ಪ್ರೋತ್ಸಾಹಿಸುತ್ತಿರುವುದು ಅಭಿನಂದನೀಯ.
ಕೆ. ದಿನಮಣಿ ಶಾಸ್ತ್ರೀ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ
INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್
ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!
Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ
WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್ ಮೆಟ್ಟಿಲೇರಿದ ಪ್ರಕರಣ, ಏನಿದು?