2000 ನೋಟು ಗುಡ್‌ ಬೈ!? ಎಟಿಎಂನಲ್ಲಿ ಕಾಣದ “ದೊಡ್ಡ’ ನೋಟು


Team Udayavani, Mar 2, 2020, 5:55 AM IST

two-thousand

2000 ರೂ.ನ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಂಡಿಲ್ಲ ಎಂದು ಕೇಂದ್ರ ಹಣಕಾಸು ಸಚಿವರೇ ಸ್ಪಷ್ಟಪಡಿಸಿದ್ದಾರೆ. ಆದರೂ, “ನೋಟಿನ ರದ್ದತಿ ಭೂತ’ ಏಕೆ ಕಾಡುತ್ತಿದೆ?

ಹತ್ತು ರೂ. ನಾಣ್ಯಗಳನ್ನು ಜನರು ಸ್ವೀಕರಿಸಲು ಮೀನಾಮೇಷ ಎಣಿಸುತ್ತಿರುವಂತೆ, ಆ ಸಮಸ್ಯೆಗೆ ಪರಿಹಾರ ಮರೀಚಿಕೆ ಆಗುತ್ತಿರುವಂತೆ, ಈಗ ಧುತ್ತೆಂದು 2000 ರೂ. ನೋಟುಗಳೂ ಗೊಂದಲದಲ್ಲಿ ಸಿಲುಕಿವೆ. ಜನಸಾಮಾನ್ಯರು ಅತಂಕಪಡುತ್ತಿದ್ದಾರೆ. ವಾಸ್ತವ ಏನೆಂದರೆ, ಸರ್ಕಾರ ಅಥವಾ ರಿಸರ್ವ್‌ ಬ್ಯಾಂಕ್‌ ಈ ನೋಟುಗಳನ್ನು ರದ್ದುಪಡಿಸಿಲ್ಲ ಮತ್ತು ಅವುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಂಡಿಲ್ಲ. ಮೊನ್ನೆಯಷ್ಟೇ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಕೂಡ ಈ ಮಾತು ಹೇಳಿದ್ದಾರೆ. ಅದರೆ, ಕೆಲವು ಬ್ಯಾಂಕುಗಳ ಇತ್ತೀಚೆಗಿನ ನಡೆ ಮತ್ತು ರಿಸರ್ವ್‌ ಬ್ಯಾಂಕ್‌ ಈ ನೊಟುಗಳನ್ನು ವರ್ಷದಿಂದ ಮುದ್ರಿಸುತ್ತಿಲ್ಲ ಎನ್ನುವ ವದಂತಿಗಳು ಜನರನ್ನು ಗೊಂದಲಕ್ಕೀಡುಮಾಡಿವೆ. ಮಾಹಿತಿ ಹಕ್ಕು ಅಡಿಯಲ್ಲಿ ರಿಸರ್ವ್‌ ಬ್ಯಾಂಕ್‌ ನೀಡಿದ ಮಾಹಿತಿ ಪ್ರಕಾರ, 2000 ರೂ. ಮುಖಬೆಲೆಯ ನೋಟುಗಳ ಮುದ್ರಣವನ್ನು ನಿಲ್ಲಿಸಿದೆ. ಕಾಕತಾಳೀಯ ಎನ್ನುವಂತೆ ಬ್ಯಾಂಕುಗಳು ತೆಗೆದುಕೊಳ್ಳುತ್ತಿರುವ ಕೆಲವು ಕ್ರಮಗಳು ಜನರಲ್ಲಿ ಗಾಬರಿ ಹುಟ್ಟಿಸುತ್ತಿವೆ.

ಕೆಲವು ಬ್ಯಾಂಕುಗಳು ಎಟಿಎಂನಲ್ಲಿ 2000 ರೂ.ನ ನೋಟುಗಳನ್ನು ವಿತರಿಸಲು ಇರುವ ಸೌಲಭ್ಯವನ್ನೇ ರದ್ದುಪಡಿಸುವ ಪ್ರಕ್ರಿಯೆಗೆ ಚಾಲನೆ ನೀಡಿವೆ. ಪರಿಣಾಮ, ಮುಂದಿನ ದಿನಗಳಲ್ಲಿ ಎಟಿಎಂಗಳಲ್ಲಿ, ಕೇವಲ 100, 200, 500 ರೂ. ನೋಟುಗಳು ಮಾತ್ರ ಲಭ್ಯವಾಗಲಿವೆ. ಇನ್ನುಮುಂದೆ ಎಟಿಎಂ ಯಂತ್ರಗಳಲ್ಲಿರುವ 4 ಬಾಕ್ಸ್‌ ಗಳಲ್ಲಿ 3ರಲ್ಲಿ 500 ರೂ. ನೋಟುಗಳನ್ನು ಮತ್ತು ಉಳಿದ ಒಂದರಲ್ಲಿ 200 ಮತ್ತು 100ರ ನೋಟುಗಳನ್ನು ಇರಿಸುವ ವ್ಯವಸ್ಥೆ ಮಾಡಲಾಗುತ್ತದೆ.

ಆತಂಕ ಬೇಡ
ಇದು 2000 ರೂ. ನೋಟುಗಳ ಅಮಾನ್ಯಿàಕರಣವಲ್ಲ. 2016 ರ ನೋಟುಗಳ ರದ್ದತಿ ಸಂದರ್ಭ ಖಂಡಿತ ಮರುಕಳಿಸುತ್ತಿಲ್ಲ. ಬ್ಯಾಂಕುಗಳಲ್ಲಿ ಗ್ರಾಹಕರು ಹಣ ಜಮಾ ಮಾಡುವಾಗ ಈ ನೋಟುಗಳನ್ನು ಸ್ವೀಕರಿಸಲಾಗುತ್ತದೆ. ಅದರೆ, ಗ್ರಾಹಕರಿಗೆ ಹಣ ನೀಡುವಾಗ ಈ ನೋಟುಗಳ ಬದಲಾಗಿ 100, 200 500ರ ನೋಟುಗಳನ್ನು ನೀಡಲಾಗುತ್ತದೆ. ಬ್ಯಾಂಕುಗಳು ತಮ್ಮಲ್ಲಿ ಸಂಗ್ರಹವಾದ 2000 ರೂ. ಮುಖಬೆಲೆಯ ನೋಟುಗಳನ್ನು ರಿಸರ್ವ್‌ ಬ್ಯಾಂಕ್‌ಗೆ ಕಳಿಸುತ್ತವೆ. ಹೀಗೆ, ನೋಟುಗಳನ್ನು ರಿಸರ್ವ್‌ ಬ್ಯಾಂಕ್‌ಗೆ ಹಿಂತಿರುಗಿಸುವ ಪ್ರಕ್ರಿಯೆಗೆ ಒಂದು ವರ್ಷ ತಗುಲಬಹುದು ಎನ್ನುವ ಅಂದಾಜಿದೆ.

ಈ ನೋಟುಗಳು ಎಟಿಎಂಗಳಲ್ಲಿ ಬರದಿದ್ದರೂ, ಇದರ ಚಲಾವಣೆ ಸ್ಥಗಿತವಾಗಿಲ್ಲ. ಹಣಕಾಸು ಮಂತ್ರಾಲಯ ಈ ನಿಟ್ಟಿನಲ್ಲಿ ನೇರವಾಗಿ ನಿರ್ದೇಶನ ನೀಡದಿದ್ದರೂ, ಬ್ಯಾಂಕುಗಳು ತಮ್ಮದೇ ನಿರ್ಧಾರ ತೆಗೆದುಕೊಂಡಿವೆ ಎಂದು ಹೇಳಲಾಗುತ್ತಿದೆ.

ಇದಕ್ಕೆ ಕಾರಣವೇನು?
2016ರಲ್ಲಿ 17.74 ಲಕ್ಷ ಕೋಟಿ ಹಣ ಚಲಾವಣೆಯಲ್ಲಿದ್ದರೆ, 2019ರಲ್ಲಿ ಅದು 22.35 ಲಕ್ಷ ಕೋಟಿಗೆ ಏರಿತ್ತು. ಇದು 14.15% ಹೆಚ್ಚಳ.ಇದಕ್ಕೆ 2000 ರೂ. ಮುಖಬೆಲೆಯ ನೋಟುಗಳೇ ಕಾರಣ ಎಂಬುದು ಕೆಲವು ಅರ್ಥಿಕ ತಜ್ಞರ ಅಭಿಪ್ರಾಯ. ಈ ಚಲಾವಣೆಯನ್ನು ನಿಯಂತ್ರಣಗೊಳಿಸಲು 2000 ರೂ. ಮುಖಬೆಲೆಯ ನೋಟುಗಳನ್ನು ಹಂತ ಹಂತವಾಗಿ ಹಿಂತೆಗೆದುಕೊಳ್ಳಲಾಗುತ್ತಿದೆ ಎನ್ನಲಾಗುತ್ತದೆ. ಬ್ಯಾಂಕುಗಳ ಪ್ರಕಾರ ಗ್ರಾಹಕರು ಎಟಿಎಂನಲ್ಲಿ 2000 ರೂ. ಪಡೆದುಕೊಂಡವರು, ಚಿಲ್ಲರೆಗಾಗಿ ಪುನಃ ಬ್ಯಾಂಕುಗಳಿಗೇ ಬರುತ್ತಿದ್ದಾರೆ. ಇದರಿಂದ ಗ್ರಾಹಕರು ಮತ್ತು ಬ್ಯಾಂಕುಗಳು ಇಬ್ಬರಿಗೂ ಅನನುಕೂಲ. ಮಾರುಕಟ್ಟೆಯಲ್ಲಿ ಸಣ್ಣ, ಸಣ್ಣ ಅಂಗಡಿಗಳಲ್ಲಿ 2000 ರೂ. ನೋಟಿಗೆ ಚಿಲ್ಲರೆ ದೊರಕುವುದು ಕಷ್ಟ ಮತ್ತು ಆ ನೋಟನ್ನು ಸ್ವೀಕರಿಸುವಾಗ ಅದನ್ನು ಹಿಂದೆ- ಮುಂದೆ ತಿರುಗಿಸಿ, ಆ ನೋಟಿನ ಸಾಚಾತನದ ಬಗೆಗೆ ಸಂದೇಹಿಸಿ, ಚಿಂತಿಸುವವರೇ ಹೆಚ್ಚು. ಎಚ್ಚರಿಕೆಯ ದೃಷ್ಟಿಯಲ್ಲಿ ಅದನ್ನು ತೆಗೆದುಕೊಳ್ಳದವರೂ ಇ¨ªಾರೆ. ಸಾಮಾನ್ಯ ಜನರಿಗೆ ಒಂದು ದಿನದ ಕೂಲಿಯೇ 500ರ ಹತ್ತಿರ ಇರುವಾಗ 2000 ರೂ. ನೋಟು ನಿಜವಾಗಿ ಒಂದು ರೀತಿಯ ಹೊರೆ ಎನ್ನಲೇಬೇಕು.

ಸರ್ಕಾರದ ಜಾಣ ನಡೆ
ಈ ನೋಟುಗಳು ಹಣ ಹೋರ್ಡಿಂಗ್‌ ಮಾಡುವವರಿಗೆ ತುಂಬಾ ಸಹಾಯಕ ಎನ್ನುವ ಮಾತೂ ಇದೆ. ಈ ನೋಟುಗಳನ್ನು ಹಿಂಪಡೆಯುಲು ಇದೂ ಒಂದು ಕಾರಣ ಇದ್ದಿರಬಹುದು. ಬ್ಯಾಂಕುಗಳಲ್ಲಿ ಲಕ್ಷಾಂತರ- ಕೋಟ್ಯಂತರ ವ್ಯವಹರಿಸುವವರಿಗೆ 2000 ರೂ. ನೋಟುಗಳು ತುಂಬಾ ಅನುಕೂಲ ನೀಡುತ್ತಿದ್ದು, ಇದು ಅವರಿಗಷ್ಟೇ ಸಹಾಯಕ ಎನ್ನುವ ಮಾತು ಕೇಳಿಬರುತ್ತಿದೆ. ನಗದು ವ್ಯವಹಾರ ಕಡಿಮೆಯಾಗಿ, “ಡಿಜಿಟಲ್‌ ಮೋಡ್‌’ ಬಳಸುವುದರಿಂದ ದೊಡ್ಡ ಮೌಲ್ಯದ ನೋಟುಗಳ ಅವಶ್ಯಕತೆ ಇಲ್ಲ ಎನ್ನಲಾಗುತ್ತಿದೆ. 2000ದ ನೋಟನ್ನು ಅಮಾನ್ಯಿàಕರಿಸಿದರೆ ಅಥವಾ ರದ್ದು ಮಾಡಿದರೆ, 2016ರಲ್ಲಿ ಉಂಟಾದಂತೆ ಗೊಂದಲವಾಗಬಹುದು ಎಂದು ಸರ್ಕಾರವು ಅತಿಜಾಣ್ಮೆಯಿಂದ ಹೆಜ್ಜೆ ಇಡುತ್ತಿದೆ ಎಂದು ಕೆಲವು ಬ್ಯಾಂಕರುಗಳು ಹೇಳುತ್ತಾರೆ.

– ರಮಾನಂದ ಶರ್ಮಾ

ಟಾಪ್ ನ್ಯೂಸ್

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.