ನೀನೆಂದರೆ ನನ್ನೊಳಗೆ..


Team Udayavani, Mar 31, 2020, 3:32 PM IST

ನೀನೆಂದರೆ ನನ್ನೊಳಗೆ..

ಕೃಷ್ಣ ಸುಂದರಿ… ಅಚಾನಕ್ಕಾಗಿ ಎದುರಾಗಿ, ಬಚ್ಚಿಟ್ಟಿದ್ದ ಹಳೇ ನೆನಪುಗಳ ಸುರುಳಿಯನ್ನು ಬಿಚ್ಚಿಟ್ಟುಹೋದೆಯಲ್ಲೇ… ಬದುಕು ಸರಳ ಅಂದುಕೊಂಡಾಗೆಲ್ಲಾ, ಛಕ್ಕನೆ ಎದುರಾದ ಯಾವುದೋ ತಿರುವು, ಮತ್ತೆಲ್ಲೋ ಬಿಟ್ಟು ಬಂದಿದ್ದ ಮರೆವು, ಯಾವುದೋ ಬಣ್ಣದೊಳಗೆ ಅವಿತಿದ್ದ ಚೆಲುವು. ಮತ್ತಾವುದೋ ಕಣ್ಣೊಳಗೆ ಅಡಗಿದ್ದ ಒಲವು. ಈ ಎಲ್ಲ ನೆನಪುಗಳು ಕಿಡಿಯಂತೆ ಕಳೆದುಹೋಗಿದ್ದ ಅರೆ ಕ್ಷಣ, ಒಳಗೆಲ್ಲೋ ಹಿಡಿಹಿಡಿ ಬೆಳಕಾಗಿ ಕಾಣುತ್ತದೆ.  ತಕ್ಷಣ, ಮುಗಿಯದ ಹಾದಿಯಿದೆ ಎಂದುಕೊಂಡು ನಡೆಯುವವನಿಗೆ ಕಡಲು ಎದುರಾಗಿ ಕಂಗೆಡಿಸುವಂತೆ, ಈ ಬದುಕ ಪಯಣ. ಅದರಲ್ಲಿ ನಿನ್ನ ನೆನಪು.

ಯಾಕೋ ನಿನ್ನೆದುರು ಮಾತಿಗಿಂತ ಮೌನ ಹೆಚ್ಚು ಮಾತಾಡುತ್ತದೆ ಅನ್ನಿಸಿತು. ಕಂಗೆಟ್ಟ ಕಡಲ ಎದುರು ನಿಂತವನಿಗೊಂದು ಹಾಯಿದೋಣಿ ಸಿಕ್ಕಂತೆ. ಅನೂಹ್ಯ ಕ್ಷಣವೊಂದು ಉಲ್ಲಾಸದ ಜತೆ ನಡೆದು ಬಂದು ಕೈ ಹಿಡಿದಂತೆ. ಏಕತಾನತೆಯ ಬದುಕಿನ ನೀಲಾಕಾಶದಲಿ ಕಾಮನಬಿಲ್ಲೊಂದು ಮೂಡಿಬಂದಂತೆ, ರಾತ್ರಿಯ ನೀರವತೆಯಲ್ಲಿನಕ್ಷತ್ರಗಳು ನಕ್ಕಂತೆ, ಹಗಲಿನ ಗಜಿಬಿಜಿಯ ಸಂತೆಯಲ್ಲೂ ಸ್ವಂತದೊಂದು ದ್ವೀಪ ಸಿಕ್ಕಂತೆ. ಖಾಲಿ ಖಾಲಿಯಿದ್ದ ಚಿತ್ತಭಿತ್ತಿಯಲ್ಲಿ ಹೊಸತೊಂದು ಚಿತ್ರ ಮೂಡಿದಂತೆ. ಬದುಕಿಗೆ ಏನೋ ವಿವರಿಸಲಾಗದ ಹೊಸ ಹುರುಪು, ಮನಸಿಗೆ ಬಣ್ಣಿಸಲಾಗದ ಹೊಸ ಹೊಳಪು,

ಇದೆಲ್ಲಾ ಹೇಗಾಯಿತು ಅಂತ ನನ್ನ ನಾನೇ ಕೇಳಿಕೊಳ್ಳುತ್ತಲೇ ಇದ್ದೇನೆ. ನನ್ನೊಳಗೆ ಇಷ್ಟೊಂದು ಆಳವಾಗಿ ನೀ ಇದ್ದೀಯೆಂಬುದ ತಿಳಿಸಲು ನೀನೇ ಎದುರಿಗೆ ಬರಬೇಕಾಯ್ತು ನೋಡು. ಕಾಲವೆಂಬುದು ಎಂಥಾ ಕ್ರೂರಿಯಲ್ಲವಾ? ಅದು ಸುಳ್ಳು ಸುಳ್ಳೇ ಮರೆವಿನ ಶಾಪ ಕೊಟ್ಟಂತೆ ನಾಟಕವಾಡಿ, ನೆನಪುಗಳ ಬುತ್ತಿಯನ್ನು ಕೈಗಿಟ್ಟುಹೋಗುತ್ತದೆ. ಬದುಕಿನ ಪಯಣದ ಹಾದಿಯಲ್ಲಿ ಇವತ್ತಿನ ಹಸಿವುನೀಗಿಕೊಳ್ಳಲು ಬುತ್ತಿ ಬಿಚ್ಚಿದರೆ, ನೆನಪುಗಳ ಪಕ್ವಾನ್ನ. ನನ್ನ ಪಾಲಿನ ಬದುಕೇ ಹೀಗಿರುವಾಗ, ನಿನ್ನನ್ನು ಮರೆಯುವುದಾರೂ ಹೇಗೆ ಹೇಳು?

 

-ಜೀವ ಮುಳ್ಳೂರು

ಟಾಪ್ ನ್ಯೂಸ್

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

1-hockey

Paris Olympics ಹಾಕಿ ಕಂಚಿನಿಂದಾಚೆ ಮಿಂಚಲಿ ಭಾರತ

modi (4)

NITI Aayog ಸಭೆ ಇಂದು; “ವಿಕಸಿತ ಭಾರತ’ದ ಬಗ್ಗೆ ಚರ್ಚೆ: 7 ರಾಜ್ಯಗಳಿಂದ ಬಹಿಷ್ಕಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ಸರ್ಕಾರದ ವಿರುದ್ಧ ವಿಧಾನಸಭೆಯಲ್ಲಿ ಬಿಜೆಪಿ-JDS ಶಾಸಕರಿಂದ ಭಜನೆ

udayavani youtube

ಶಿರೂರು ಗುಡ್ಡಕುಸಿತ; ಕಾಣೆಯಾದವರ ಹುಡುಕಾಟಕ್ಕೆ ಡ್ರೋನ್ ಬಳಸಿ ಕಾರ್ಯಾಚರಣೆ

udayavani youtube

ಕರ್ಮಫಲ ಶಿಕ್ಷಣದಿಂದ ಆತ್ಮೋನ್ನತಿ

udayavani youtube

ತಪ್ತ ಮುದ್ರಾ ಧಾರಣೆ ವಿಶೇಷ ಮಹತ್ವದ್ದು, ಯಾಕೆ?

udayavani youtube

ಬಾಳೆಯಿಂದ ವಾರ್ಷಿಕ 50-60 ಲಕ್ಷ ರೂ. ಆದಾಯ

ಹೊಸ ಸೇರ್ಪಡೆ

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

CM ಆಪ್ತರ ಜತೆ ನಾಡಿದ್ದು ಸಿಎಂ ದಿಲ್ಲಿಗೆ; ವಾಲ್ಮೀಕಿ, ಮುಡಾ ಹಗರಣ: ಹೈಕಮಾಂಡ್‌ಗೆ ವಿವರಣೆ?

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Ramanagara ಜಿಲ್ಲೆ ಇನ್ನು ಬೆಂಗಳೂರು ದಕ್ಷಿಣ; ರಾಜ್ಯ ಸಚಿವ ಸಂಪುಟದಲ್ಲಿ ನಿರ್ಧಾರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Siddaramaiah ನನ್ನ ವಿರುದ್ಧ ವಿಪಕ್ಷ ಷಡ್ಯಂತ್ರ

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

Pilikula Biological Park: ಕಾಳಿಂಗ ಸರ್ಪಗಳಿಗೆ “ಮೈಕ್ರೋ ಚಿಪ್‌’!

1-aaasdeqweqw

India-Sri Lanka ಟಿ20 ಸರಣಿ ಇಂದಿನಿಂದ : ಸೂರ್ಯ, ಗಂಭೀರ್‌ ಯುಗಾರಂಭ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.