ಯಾರ್ಯಾರು ಹೇಗೆ ಅಂತಾ ಈಗ ತಿಳಿಯಿತು…

ವರ್ಕ್‌ ಫ್ರಂ ಹೋಮ್‌ ಕತೆಗಳು

Team Udayavani, Apr 21, 2020, 11:24 AM IST

ವರ್ಕ್‌ ಫ್ರಂ ಹೋಮ್‌ ಕತೆಗಳು

(ಲಾಕ್‌ಡೌನ್‌ ಆಗಿರುವ ಈ ಸಂದರ್ಭದಲ್ಲಿ ವರ್ಕ್‌ ಫ್ರಂ ಹೋಮ್‌ನ ಮೊದಲ ಅನುಭವ ಹೇಗಿತ್ತು?- ಅನ್ನೋದನ್ನು ನೀವೂ ಬರೆಯಬಹುದು)

“ರೀ… ಮಗೂನ ಸ್ವಲ್ಪ ನೋಡ್ಕೊಳ್ರಿ- ಅಂದಳು ಹೆಂಡತಿ. ಅವಳ ಮಾತಿನ ಹಿಂದೆ ಮನವಿಯ ಭಾವ ಇರಲಿಲ್ಲ. ಆರ್ಡರ್‌ ಇತ್ತು! ಎದುರಿಗಿದ್ದ ಕ್ಯಾಲೆಂಡರ್‌ ನೋಡಿದೆ. ವರ್ಕ್‌ ಫ್ರಂ ಹೋಂ ಶುರು ಮಾಡಿ, ಆಗಲೇ 15 ದಿನ ಆಗಿತ್ತು. ಹೆಂಡತಿಗೆ ನನ್ನ ಮೇಲೆ ವಿಚಿತ್ರವಾದ ಸಿಟ್ಟು. ಏಕೆಂದರೆ, ವರ್ಕ್‌ ಫ್ರಂ ಹೋಮ್‌ ಅಂದರೆ, ಗಂಡ ಮನೆಯಲ್ಲೇ ಇರ್ತಾನೆ. ಇರೋದು ಅಂದರೆ ಹೇಗೆ? ಪೂರ್ತಿ ಬಿಡುವಾಗಿ ಕೂತಿರುತ್ತಾನೆ. ಆಗಾಗ ಮೆಲ್ಲಗೆ, ಅಲ್ಲಿ- ಇಲ್ಲಿ ಹೋಗಬಹುದು. ಎಲ್ಲಕ್ಕಿಂತ ಮುಖ್ಯವಾಗಿ, ಟೈಂಗೆ ಸರಿಯಾಗಿ ಊಟ, ತಿಂಡಿ ಬೇಯಿಸಿ ಹಾಕುವ ಒತ್ತಡ ಇಲ್ಲ ಅಂತೆಲ್ಲ ಲೆಕ್ಕ ಹಾಕಿದ್ದಳು.

ಪಾಪ, ಅವಳು ಊಹಿಸಿದಂತೆ ಏನೂ ನಡೆಯುತ್ತಿರಲಿಲ್ಲ. ನನಗೋ, ವರ್ಕ್‌ ಫ್ರಂ ಹೋಂ ಅಂತ ಹೇಳಿಯೇ, ಬಾಕಿ ಇದ್ದ ಹಳೇ ಫೈಲ್‌ಗಳನ್ನೆಲ್ಲ ಬಾಸ್‌ ನನ್ನ ತಲೆಗೆ ಕಟ್ಟಿ ಹೋಗಿದ್ದರು. ಅಕೌಂಟೆಂಟ್‌ ಕೆಲಸ ಅಂದರೆ ಸುಮ್ಮನೆ ಅಲ್ಲ. ಒಂಥರಾ ಪಂಕ್ಚರ್‌ ಹಾಕ್ತಾರಲ್ಲ; ಅಂಥದೇ ಕೆಲಸ ನಮ್ಮದು. ಯಾರ್ಯಾರೋ ಮಾಡಿರುವ ಹಾದಿ ತಪ್ಪಿದ ವ್ಯವಹಾರಕ್ಕೆ ಪಂಕ್ಚರ್‌ ಹಾಕಬೇಕು, ಸರ್ಕಾರದ ಕಡೆ ಟ್ಯಾಕ್ಸ್ ಸೋರಿಹೋಗದ ಹಾಗೆ.

ಅನುಮಾನ ಬಂದರೆ, ಕ್ಲೈಂಟ್ ಗೆ ಫೋನ್‌ ಮಾಡಬೇಕು. ಮಾಹಿತಿ ತಗೊಂಡು, ಮತ್ತೆ ಬೇರೆ ದಾರಿ ಹುಡುಕಬೇಕು. ಎಷ್ಟೋ ಸಲ- “ಸ್ವಲ್ಪ ಹೊತ್ತು ಮಕ್ಕಳನ್ನು ನೋಡ್ಕೊಳ್ಳಿ’ ಎಂದು ನನ್ನ ಹೆಂಡತಿ ಹೇಳುವ ಹೊತ್ತಿಗೇ, ಅತ್ಲಾ ಕಡೆಯಿಂದ ಕ್ಲೈಂಟ್ ಫೋನ್‌ ಮಾಡಿಬಿಡುತ್ತಿದ್ದ. ಅಲ್ಲಿಗೆ, ಅವಳ ಲೆಕ್ಕಾಚಾರಗಳು ಹುಸಿಯಾಗುತ್ತಿದ್ದವು. ಸಹಜವಾಗಿಯೇ ಆಕೆ ಸಿಟ್ಟಾಗುತ್ತಿದ್ದಳು. ನಿಜ ಹೇಳಬೇಕೆಂದರೆ, ವರ್ಕ್‌ ಫ್ರಂ  ಹೋಮ್‌ ಆದಮೇಲೆ, ನನಗೆ ನನ್ನ ಬಾಸ್‌ನ ಹಾಗೂ ಹೆಂಡತಿಯ ಇನ್ನೊಂದು ಮುಖದ ದರ್ಶನವಾಯಿತು. ಹೆಂಡತಿಯದು ಬಿಡಿ. ಅದು ನಿರೀಕ್ಷಿತ ಫ‌ಲಿತಾಂಶ.
ಆದರೆ, ನಮ್ಮ ಬಾಸ್‌ ಮೊದಲು ಹೀಗಿರಲಿಲ್ಲ. ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದವರು, ಇದ್ದಕ್ಕಿದ್ದಂತೆ ನನ್ನನ್ನೂ ಕೋವಿಡ್-19 ಪೇಶೆಂಟ್‌ನಂತೆ ಟ್ರೀಟ್‌ ಮಾಡುತ್ತಿರುವುದರ ಉದ್ದೇಶ ತಿಳಿಯದಾಗಿದೆ.

ದಿನಕ್ಕೆ 10 ಫೈಲ್‌ ಕ್ಲಿಯರ್‌ ಮಾಡಲೇಬೇಕು ಅಂತ ಆಜ್ಞೆ ಮಾಡಿದ್ದಾರೆ. ಈ ಹತ್ತು ಫೈಲ್‌ ಕ್ಲಿಯರ್‌ ಮಾಡಬೇಕು ಅಂದರೆ, ದಿನಕ್ಕೆ 10-12 ಗಂಟೆ ಕೆಲಸ ಮಾಡಬೇಕು. ಅದೇ
ಆಫಿಸಲ್ಲಾಗಿದ್ದರೆ, 9 ಗಂಟೆ ಕೆಲಸ. ಅಲ್ಲಿಗಿಂತ ಎರಡು ಗಂಟೆ ಹೆಚ್ಚುವರಿಯಾಗಿ ಕೆಲಸ ಮಾಡಿದರೂ, ಬಾಸ್‌ಗೆ ತೃಪ್ತಿಯೇ ಇಲ್ಲ. ಅವರದ್ದು ಅತೃಪ್ತಿಯೋ, ಅನುಮಾನವೋ ತಿಳಿಯಲು ಆಗುತ್ತಿಲ್ಲ. ಇವೆಲ್ಲ ನನ್ನ ಸಮಸ್ಯೆ. ಇದನ್ನು ಹೆಂಡತಿಗೆ ಹೇಳುವುದು ಹೇಗೆ? ಲಾಕ್‌ಡೌನ್‌ ಮತ್ತೆ ಮುಂದಕ್ಕೆ ಹೋದದ್ದರಿಂದ, ಮತ್ತೆ ಸಂಕಟದ ಜೊತೆಗೇ ಬದುಕು ವಂತಾಗಿದೆ. ಹೆಂಡತಿ ಈಗ ಹೆಚ್ಚೇನೂ ಕಿರಿಕಿರಿ ಮಾಡುತ್ತಿಲ್ಲ. ಅವಳಿಗೆ ಗೊತ್ತಾಗಿದೆ, ಗಂಡ ಎಲ್ಲೇ ಕೆಲಸ ಮಾಡಿದರೂ ಇಷ್ಟೇ ಅಂತ. ಅದಕ್ಕೇ ನಾನೊಂದು ಐಡಿಯಾ ಮಾಡಿದ್ದೇನೆ. ಒಂದಷ್ಟು ಕೆಲಸಗಳನ್ನು ನಡುರಾತ್ರಿಯೇ ಮುಗಿಸಿಟ್ಟು, ಬೆಳಗ್ಗೆ ಮಕ್ಕಳನ್ನು ಆಟವಾಡಿಸುತ್ತೇನೆ. ತರಕಾರಿ ಹೆಚ್ಚಿ ಕೊಡುತ್ತಿದ್ದೇನೆ. ಈಗ ಅವಳೂ, ನನ್ನ ವರ್ಕ್‌ ಫ್ರಂ ಹೋಂಗೆ ಹೊಂದಿಕೊಂಡು ಬಿಟ್ಟಿದ್ದಾಳೆ. ಮೊನ್ನೆ ಪ್ರಧಾನಿಗಳು, ಮೇ. 3 ರ ತನಕ ಲಾಕ್‌ಡೌನ್‌ ಮುಂದುವರಿಯಲಿದೆ ಅಂತ ಘೋಷಣೆ ಮಾಡಿದಾಗ. ತಿಂಗಳು ಪೂರ್ತಿ ಮನೆಯಲ್ಲೇ ಇರ್ತೀರಲ್ಲ… ಅನ್ನುತ್ತಾ ನಕ್ಕಳು ಹೆಂಡತಿ. ಅವಳ ಮಾತಲ್ಲಿ ಖುಷಿ ಇತ್ತು
ಅನ್ನೋದೇ ನನಗೆ ನೆಮ್ಮದಿ ತಂದ ವಿಚಾರ.

ಸೀತಾಪತಿ ಎಂ.ಎ, ದಾವಣಗೆರೆ

ಟಾಪ್ ನ್ಯೂಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

ಸಲ್ಮಾನ್ ಮನೆ ಬಳಿ ಗುಂಡಿನ ದಾಳಿ: ಲಾರೆನ್ಸ್ ಬಿಷ್ಣೋಯ್ ಸಹೋದರನ ವಿರುದ್ಧ ಲುಕ್ ಔಟ್ ನೋಟಿಸ್

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Manipura: ಉಗ್ರರ ದಾಳಿಗೆ ಇಬ್ಬರು CRPF ಯೋಧರು ಹತ… ಉಗ್ರರ ಪತ್ತೆಗೆ ಶೋಧ ಕಾರ್ಯಾಚರಣೆ

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

Lok Sabha Election: ತಾಂತ್ರಿಕ-ಉನ್ನತ ಶಿಕ್ಷಣಕ್ಕೆ ಆದ್ಯತೆ: ಗಾಯತ್ರಿ ಸಿದ್ದೇಶ್ವರ್‌

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

ಹೊಳೆಹೊನ್ನೂರು: ಕೂಡಲಿ ಶೃಂಗೇರಿ ಮಠದಲ್ಲಿ ವಂಚನೆ ಪ್ರಕರಣ: FIR ದಾಖಲು

2-padubidri

Padubidri: ಹೆದ್ದಾರಿ ಮಧ್ಯೆ ಕೆಟ್ಟು ನಿಂತ ಲಾರಿ; ಸಂಚಾರಕ್ಕೆ ಅಡಚಣೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

Delhi: ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲು ಕೇಜ್ರಿವಾಲ್ ಮೀನಮೇಷ: ಹೈಕೋರ್ಟ್ ತರಾಟೆ

1-24-saturday

Daily Horoscope: ಉದ್ಯೋಗ, ವ್ಯವಹಾರಗಳಲ್ಲಿ ಪ್ರಗತಿ, ಅನಿರೀಕ್ಷಿತ ಧನಾಗಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

4

ವಿಚ್ಛೇದನ ನೀಡದಿದ್ದರೆ ತಲೆಯನ್ನು ಕಡಿದು ಕುಕ್ಕರ್‌ನಲ್ಲಿ ಬೇಯಿಸುವೆ ಎಂದ ಪತಿ ವಿರುದ್ಧ FIR

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

Bangalore: ಕೇಸರಿ ಶರ್ಟ್‌ ಧರಿಸಿದ್ದಕ್ಕೆ ಯುವಕನಿಗೆ ಹಲ್ಲೆ; ಆರೋಪ

4-uv-fusion

UV Fusion: ಬಿರು ಬೇಸಿಗೆಯ ಸ್ವಾಭಾವಿಕ ಚಪ್ಪರ ಈ ಹೊಂಗೆ ಮರ

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

Voting: ರಾಜಧಾನಿಯಲ್ಲಿ ಶಾಂತಿಯುತ ಮತದಾನ; ಬಿ.ದಯಾನಂದ್‌

Lok Sabha Election: ಮತ ಪ್ರಮಾಣ; ರಾಜಧಾನಿ ಗರ್ವಭಂಗ

Lok Sabha Election: ಮತ ಪ್ರಮಾಣ; ರಾಜಧಾನಿ ಗರ್ವಭಂಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.