ಕಾಫಿ ಕಪ್‌ ತೇಲಿ ಹೋಗಿತ್ತಾ! 


Team Udayavani, Apr 5, 2018, 11:16 AM IST

44.jpg

ಮ್ಯಾಜಿಕ್‌ ಮಾಡಲು ಎಷ್ಟೋ ಸಲ ವಿಷೇಷ ವಸ್ತುಗಲು, ಸಾಮಗ್ರಿಗಳ ಅವಶ್ಯಕತೆ ಬೀಳುತ್ತದೆ. ಆದರೆ ನಮ್ಮ ಸುತ್ತಮುತ್ತಲೇ ಇರುವ ವಸ್ತುಗಳಿಂದಲೂ ಸಿಂಪಲ್ಲಾಗಿ ಮ್ಯಾಜಿಕ್‌ ಮಾಡಬಹುದು ಎನ್ನುವುದು ಗೊತ್ತಾ? ಉದ್ದನೆಯ ಪೇಪರ್‌ ಕಪ್‌ಗ್ಳಲ್ಲಿ ಜ್ಯೂಸ್‌ ಕುಡಿದೇ ಕುಡಿದಿರುತ್ತೀರ ತಾನೇ? ಕುಡಿದ ನಂತರ ಆ ಲೋಟಗಳನ್ನು ಎಸೆದು ಬಿಡುತ್ತೇವೆ. ಆದರೆ, ಅದೇ ಪೇಪರ್‌ ಲೋಟಗಳನ್ನು ಬಳಸಿ ಜಾದೂ ಕೂಡ ಮಾಡಬಹುದು. ಕಪ್‌ಗ್ಳನ್ನು ಗಾಳಿಯಲ್ಲಿ ತೇಲಿಸಿ ಗೆಳೆಯರನ್ನು ಅಚ್ಚರಿಗೆ ತಳ್ಳಬಹುದು. ಹೇಗೆ ಅಂತೀರಾ?…  

ಬೇಕಾಗುವ ವಸ್ತುಗಳು
ಉದ್ದದ ಪೇಪರ್‌ ಕಪ್‌, ಚಾಕು 

ಪ್ರದರ್ಶನ 
ಜಾದೂಗಾರನ ಮುಂದೆ ಒಂದು ಪೇಪರ್‌ ಕಪ್‌ ಇರುತ್ತದೆ. ಆತ ಅದನ್ನು ನೆರೆದಿರುವ ಪ್ರೇಕ್ಷಕರಿಗೆ ಎತ್ತಿ ತೋರಿಸುತ್ತಾನೆ. ನಂತರ ಆ ಕಪ್‌ ಅನ್ನು ಎರಡೂ ಕೈಗಳಿಂದ ಹಿಡಿದುಕೊಳ್ಳುತ್ತಾನೆ. ಆಮೇಲೆ ನಿಧಾನಕ್ಕೆ ಒಂದು ಕೈಯನ್ನು ಕಪ್‌ನಿಂದ ದೂರ ತೆಗೆದುಕೊಂಡು ಹೋಗುತ್ತಾನೆ. ಕಪ್‌ ಗಾಳಿಯಲ್ಲಿ ತೇಲಲು ಶುರು ಮಾಡುತ್ತದೆ.

ತಯಾರಿ
ಈ ಜಾದೂವಿನ ರಹಸ್ಯ ಅಡಗಿರುವುದು  ನೀವು ಹಿಡಿದಿರುವ ಪ್ಲಾಸ್ಟಿಕ್‌ ಲೋಟದಲ್ಲಿ. ಅಂದರೆ, ನೀವು ಜಾದೂಗೆ ಬಳಸುವ ಕಪ್‌ನ ಹಿಂಭಾಗದಲ್ಲಿ ಚಾಕೂವಿನಿಂದ ಸಣ್ಣ ಗೀರು ಮಾಡಿಟ್ಟುಕೊಳ್ಳಿ. ಆ ರೀತಿ ರಂಧ್ರ ಮಾಡಿರುವುದು ನೋಡುಗರಿಗೆ ಕಾಣಿಸುವಂತಿರಬಾರದು. ನಂತರ ಆ ರಂಧ್ರದೊಳಗೆ ನಿಮ್ಮ ಹೆಬ್ಬೆರಳನ್ನು ತೂರಿಸಿ. ಇನ್ನೊಂದು ಕೈಯನ್ನು ನಿಧಾನವಾಗಿ ಕಪ್‌ನಿಂದ ದೂರಕ್ಕೆ ತೆಗೆದುಕೊಂಡು ಹೋಗಿ. ಜೊತೆಗೆ ಹೆಬ್ಬೆರಳೊಂದನ್ನು ಬಿಟ್ಟು ಉಳಿದ ಬೆರಳುಗಳು ಸಹ ಕಪ್‌ ಅನ್ನು ಹಿಡಿದುಕೊಳ್ಳದಿರಲಿ. ಈಗ ಇಡೀ ಕಪ್‌ನ ಬ್ಯಾಲೆನ್ಸ್‌ ನಿಮ್ಮ ಹೆಬ್ಬೆರಳಿನಲ್ಲೇ ಇರುತ್ತದೆ. ನೋಡುಗರಿಗೆ ಅದು ಕಾಣಿಸದೇ ಇರುವುದರಿಂದ ಕಪ್‌ ಗಾಳಿಯಲ್ಲಿ ತೇಲಿದಂತೆ ಭಾಸವಾಗುತ್ತದೆ. 

ಈ ಜಾದೂ ಪ್ರದರ್ಶನಕ್ಕೆ ಮುನ್ನ ನಿಮ್ಮಷ್ಟಕ್ಕೆ ನೀವು ಅಭ್ಯಾಸ ಮಾಡಿ ಕೈ ಚಳಕವನ್ನು ಕರಗತ ಮಾಡಿಕೊಳ್ಳಿ. ಅಷ್ಟೇ ಅಲ್ಲದೆ, ಪ್ರೇಕ್ಷಕರಿಗೆ ಕಪ್‌ ತೋರಿಸುವಾಗ ಅದಕ್ಕೆ ಮಾಡಿದ ರಂಧ್ರ ಕಾಣಿಸದಂತೆ ಎಚ್ಚರವಹಿಸಿ. 

ಟಾಪ್ ನ್ಯೂಸ್

Sringeri: ದೇವರ ದರ್ಶನಕ್ಕೆಂದು ಬೆಂಗಳೂರಿನಿಂದ ಬಂದಿದ್ದ ಪೊಲೀಸ್ ಪೇದೆ ಮೇಲೆ ಹಲ್ಲೆ

Sringeri: ದೇವರ ದರ್ಶನಕ್ಕೆಂದು ಬೆಂಗಳೂರಿನಿಂದ ಬಂದಿದ್ದ ಪೊಲೀಸ್ ಪೇದೆ ಮೇಲೆ ಹಲ್ಲೆ

2002 ರಲ್ಲಿ ನಡೆದ ಹತ್ಯೆ ಪ್ರಕರಣ: ಡೇರಾ ಸಚ್ಚಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಖುಲಾಸೆ

2002 ರಲ್ಲಿ ನಡೆದ ಹತ್ಯೆ ಪ್ರಕರಣ: ಡೇರಾ ಸಚ್ಚಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಖುಲಾಸೆ

12

Violation of road rules: ಸದಾಶಿವನಗರಠಾಣೆ ವ್ಯಾಪ್ತಿಯಲ್ಲೇ 5 ತಿಂಗಳಲ್ಲಿ 1 ಲಕ್ಷ ಕೇಸ್‌!

8

ಎಚ್. ಆಂಜನೇಯ, ಎಂ.ಡಿ. ಲಕ್ಷ್ಮೀನಾರಾಯಣ ಅವರಿಗೆ ಎಂಎಲ್ಸಿ ಚುನಾವಣೆಗೆ ಅವಕಾಶ ನೀಡುವಂತೆ ಆಗ್ರಹ

Hubballi: ನಮಗೆ ಆದ ಅನ್ಯಾಯ ಬೇರೆ‌ ಯಾರಿಗೂ ಆಗಬಾರದು… ನಿರಂಜನ ಹಿರೇಮಠ ಹೇಳಿಕೆ

Hubballi: ನಮಗೆ ಆದ ಅನ್ಯಾಯ ಬೇರೆ‌ ಯಾರಿಗೂ ಆಗಬಾರದು… ನಿರಂಜನ ಹಿರೇಮಠ ಹೇಳಿಕೆ

Shivamogga: ವಾಲ್ಮೀಕಿ ನಿಗಮದ ಮಂತ್ರಿಯನ್ನು ಕೂಡಲೇ ವಜಾಗೊಳಿಸಿ; ಕೆ.ಬಿ ಪ್ರಸನ್ನ ಆಗ್ರಹ

Shivamogga: ವಾಲ್ಮೀಕಿ ನಿಗಮದ ಮಂತ್ರಿಯನ್ನು ಕೂಡಲೇ ವಜಾಗೊಳಿಸಿ; ಕೆ.ಬಿ ಪ್ರಸನ್ನ ಆಗ್ರಹ

Mizoram: ಭಾರೀ ಮಳೆಯಿಂದ ಕಲ್ಲು ಕ್ವಾರಿ ಕುಸಿತ; ಕನಿಷ್ಠ 10 ಮಂದಿ ಮೃತ್ಯು, ಹಲವರು ನಾಪತ್ತೆ

Mizoram: ಭಾರೀ ಮಳೆಯಿಂದ ಕಲ್ಲು ಕ್ವಾರಿ ಕುಸಿತ; ಕನಿಷ್ಠ 10 ಮಂದಿ ಮೃತ್ಯು, ಹಲವರು ನಾಪತ್ತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

Sringeri: ದೇವರ ದರ್ಶನಕ್ಕೆಂದು ಬೆಂಗಳೂರಿನಿಂದ ಬಂದಿದ್ದ ಪೊಲೀಸ್ ಪೇದೆ ಮೇಲೆ ಹಲ್ಲೆ

Sringeri: ದೇವರ ದರ್ಶನಕ್ಕೆಂದು ಬೆಂಗಳೂರಿನಿಂದ ಬಂದಿದ್ದ ಪೊಲೀಸ್ ಪೇದೆ ಮೇಲೆ ಹಲ್ಲೆ

Sandalwood: ʼಪೆನ್‌ಡ್ರೈವ್‌ʼ ಇದು ಸಿನಿಮಾ ಟೈಟಲ್‌

Sandalwood: ʼಪೆನ್‌ಡ್ರೈವ್‌ʼ ಇದು ಸಿನಿಮಾ ಟೈಟಲ್‌

Sandalwood: ಮಾರಿಗೆ ದಾರಿ ಬಿಟ್ಟ ನವ ತಂಡ

Sandalwood: ಮಾರಿಗೆ ದಾರಿ ಬಿಟ್ಟ ನವ ತಂಡ

UI Movie: ಯುಐ ಹಾಡುಗಳಲ್ಲಿ ಉಪ್ಪಿ ಬಿಝಿ

UI Movie: ಯುಐ ಹಾಡುಗಳಲ್ಲಿ ಉಪ್ಪಿ ಬಿಝಿ

13

Ashika Ranganath: ಚಿರಂಜೀವಿ ಸಿನಿಮಾದಲ್ಲಿ ಆಶಿಕಾ ರಂಗನಾಥ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.