ಅತಿಯಾಸೆ ಗತಿಗೇಡು


Team Udayavani, Jan 23, 2020, 5:10 AM IST

led-9

ಒಂದು ಊರಿನಲ್ಲಿ ಒಬ್ಬ ಮೀನುಗಾರನಿದ್ದ. ಒಂದು ದಿನ ಅವನ ಬಲೆಯಲ್ಲಿ ದೊಡ್ಡದೊಂದು ಮೀನು ಸಿಕ್ಕಿಬಿದ್ದಿತು. ಅದನ್ನು ಮೀನುಗಾರ ಬಲೆಯಿಂದ ಬಿಡಿಸಿ ಎತ್ತಿಕೊಂಡ. ಮೀನು ಮಾತನಾಡತೊಡಗಿತು, “ಅಯ್ನಾ… ನನ್ನನ್ನು ಬಿಟ್ಟುಬಿಟ್ಟರೆ ನಿನಗೆ ಮೂರು ವರಗಳನ್ನು ಕೊಡುತ್ತೇನೆ’ ಎಂದಿತು. ಮೀನು ಮಾತನಾಡುವುದನ್ನು ಕೇಳಿ ಮೀನುಗಾರನಿಗೆ ಆಶ್ಚರ್ಯವಾಯಿತು. ಅವನು ಮೀನನ್ನು ಮತ್ತೆ ನೀರಲ್ಲಿ ಬಿಡಲು ಒಪ್ಪಿದನು. ಅವನಿಗೆ ಮೂರು ವರಗಳು ಸಿಕ್ಕವು.

ಆ ಮೂರು ವರಗಳನ್ನು ಮನೆಗೆ ಹೋದ ನಂತರ ಬಳಸಿಕೊಂಡರಾಯಿತು ಎಂದುಕೊಂಡ ಮೀನುಗಾರ. ಮೀನಿನ ಬುಟ್ಟಿಯನ್ನು ಕತ್ತೆಯ ಮೇಲೆ ಹೊರಿಸಿ ಮನೆಯ ಕಡೆಗೆ ಹೊರಟ. ಕತ್ತೆ ಬಹಳ ನಿಧಾನವಾಗಿ ನಡೆಯುತ್ತಿತ್ತು. ಮೀನುಗಾರನಿಗೆ ಸಿಟ್ಟು ಬಂದು ಅದಕ್ಕೆ ಚೆನ್ನಾಗಿ ಹೊಡೆದ. ಅದು ಮತ್ತಷ್ಟು ನಿಧಾನವಾಗಿ ನಡೆಯತೊಡಗಿದಾಗ ಮೀನುಗಾರನ ಸಿಟ್ಟು ನೆತ್ತಿಗೇರಿತು. ಅವನು “ಏ ಕತ್ತೆ ನೀನು ಸತ್ತು ಹೋಗಬಾರದೇ’ ಎಂದ. ಅದು ತಕ್ಷಣ ಸತ್ತು ಬಿದ್ದಿತು. ಅವನ ಮೊದಲ ವರ ತೀರಿತ್ತು. ಕತ್ತೆ ಬದುಕಿ ಬರಲಿ ಎಂದರೆ ಇನ್ನೊಂದು ವರ ವ್ಯರ್ಥವಾಗುತ್ತದೆ ಎಂದು ಮೀನುಗಾರ ಕತ್ತೆಯನ್ನು ಅಲ್ಲೇ ಬಿಟ್ಟು ಮನೆ ಸೇರಿದ.

ಮನೆಯಲ್ಲಿ ಅವನ ಹೆಂಡತಿ “ಕತ್ತೆ ಎಲ್ಲಿದೆ…?’ ಎಂದು ಕೇಳಿದಳು. ಮೀನುಗಾರ ಉತ್ತರ ಕೊಡಲೇ ಇಲ್ಲ. ಆಕೆಗೂ ಸಿಟ್ಟು ಹತ್ತಿ “ರೀ… ನೀವು ನನ್ನೊಡನೆ ಏಕೆ ಮಾತನಾಡುತ್ತಿಲ್ಲಾ…?’ ಎಂದು ಏರುಧ್ವನಿಯಲ್ಲಿ ಕೇಳಿದಳು. ಮೀನುಗಾರನಿಗೆ ತಾಳ್ಮೆತಪ್ಪಿ, “ಏ ಹುಚ್ಚಿ… ನೀನೇಕೆ ಮತ್ತೆ ಮತ್ತೆ ಅದೇ ಪ್ರಶ್ನೆ ಕೇಳುತ್ತಿ… ನಿನ್ನ ಬಾಯಿ ಮುಚ್ಚಿಹೋಗಬಾರದೇ…?’ ಎಂದು ಅವನು ಅಬ್ಬರಿಸಿದ. ಮರುಕ್ಷಣವೇ ಹೆಂಡತಿಯ ಬಾಯಿ ಮುಚ್ಚಿಹೋಯಿತು. ಮೀನುಗಾರನ ಎರಡನೇ ವರ ಹೀಗೆ ತೀರಿತು. ಮೀನುಗಾರನ ಬಳಿ ಇನ್ನೊಂದೇ ವರ ಉಳಿದಿತ್ತು.

ದೊಡ್ಡ ವರ ಪಡೆಯುವ ಬಯಕೆ ಅವನಿಗಿತ್ತು. ಆದರೆ ಹೆಂಡತಿಯ ಸ್ಥಿತಿ ನೋಡಲು ಅವನಿಂದಾಗಲಿಲ್ಲ. ಅವನು ಅವಳಿಗೆ ಬಾಯಿ ಬರಲಿ ಎಂದು ಕೇಳಿಕೊಂಡ. ಮರುಕ್ಷಣವೇ ಅವಳು ಮಾತನಾಡತೊಡಗಿದಳು. ಮೀನುಗಾರ ತನಗಿದ್ದ ಮೂರೂ ವರಗಳನ್ನು ಬಳಸಿದ್ದ. ಆದರೆ, ಅವುಗಳಿಂದ ತಾನಂದುಕೊಂಡಂತೆ ಪ್ರಯೋಜನ ಪಡೆಯುವುದು ಸಾಧ್ಯವಾಗಲಿಲ್ಲ. ಮನುಷ್ಯನಿಗೆ ಸಿಟ್ಟು, ಅತಿಯಾಸೆ ಒಳಿತನ್ನು ಮಾಡುವುದಿಲ್ಲ ಎನ್ನುವುದು ಮೀನುಗಾರನಿಗೆ ತಡವಾಗಿ ಅರ್ಥವಾಯಿತು.

– ಸಹನಾ ಹೆಗ್ಗಳಗಿ, ಬಾಗಲಕೋಟ

ಟಾಪ್ ನ್ಯೂಸ್

Pakistan Govt Airlines to Private: PM Shehbaz Sharif

Pakistan ಸರ್ಕಾರಿ ವಿಮಾನ ಕಂಪನಿಗಳು ಖಾಸಗಿಗೆ: ಪಿಎಂ ಶೆಹಬಾಜ್‌ ಷರೀಫ್

Why Ganga river is not clean despite spending Rs 20000 crore: Congress

Varanasi; 20000 ಕೋಟಿ ರೂ. ವ್ಯಯಿಸಿದರೂ ಗಂಗಾ ನದಿ ಏಕೆ ಶುದ್ಧವಾಗಿಲ್ಲ: ಕಾಂಗ್ರೆಸ್‌

Modi Code of Conduct: TMC Accused, Complaint Submitted

Election; ಮೋದಿ ನೀತಿ ಸಂಹಿತೆ: ಟಿಎಂಸಿ ಆರೋಪ, ದೂರು ಸಲ್ಲಿಕೆ!

22-harangi

Madikeri: ಹಾರಂಗಿ ನಾಲೆ ಸಮೀಪ ವ್ಯಕ್ತಿಯ ಶವ ಪತ್ತೆ

HDK ನಾನೂ ಪೆನ್‌ಡ್ರೈವ್‌ ಬಿಡುತ್ತೇನೆ, ದೊಡ್ಡ ತಿಮಿಂಗಲ ಹಿಡಿಯುತ್ತಾರಾ?

HDK ನಾನೂ ಪೆನ್‌ಡ್ರೈವ್‌ ಬಿಡುತ್ತೇನೆ, ದೊಡ್ಡ ತಿಮಿಂಗಲ ಹಿಡಿಯುತ್ತಾರಾ?

Legislative Council Polls: 29 ಮಂದಿ ನಾಮಪತ್ರ ಸಲ್ಲಿಕೆ

Legislative Council Polls: 29 ಮಂದಿ ನಾಮಪತ್ರ ಸಲ್ಲಿಕೆ

ರಾಜ್ಯದಲ್ಲಿ ಶೈಕ್ಷಣಿಕ ದುರಾಡಳಿತ: ಬಿಜೆಪಿ ಉನ್ನತಮಟ್ಟದ ತನಿಖೆ ನಡೆಸಿ: ಅರುಣ್‌ ಶಹಾಪೂರ್‌

Arun Shahapur ರಾಜ್ಯದಲ್ಲಿ ಶೈಕ್ಷಣಿಕ ದುರಾಡಳಿತ: ಬಿಜೆಪಿ ಉನ್ನತಮಟ್ಟದ ತನಿಖೆ ನಡೆಸಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ten-ten

ಏರ್‌ ಡೆಕ್ಕನ್‌ ವಿಮಾನಯಾನ ಸಂಸ್ಥಾಪಕ ಜಿ. ಆರ್‌. ಗೋಪಿನಾಥ್‌

farmer

ದೇವರು ಬಿತ್ತಿದ ಕಾಳು

ಟೋಪಿಯಿಂದ ಸೃಷ್ಟಿ

ಟೋಪಿಯಿಂದ ಸೃಷ್ಟಿ

ಚಿಕ್ಕ ಮೀನಿನ ದೊಡ್ಡ ಆಸೆ

ಚಿಕ್ಕ ಮೀನಿನ ದೊಡ್ಡ ಆಸೆ

ಫ್ಲೈಟ್‌ ವಿಲೇಜ್‌

ಫ್ಲೈಟ್‌ ವಿಲೇಜ್‌

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

Mumbai; ಉದ್ಧವ್‌ ಬಣದ ಅಭ್ಯರ್ಥಿ ಅನಿಲ್‌ ದೇಸಾಯಿ ರ್ಯಾಲಿಯಲ್ಲಿ ಇಸ್ಲಾಮಿಕ್‌ ಧ್ವಜ ಹಾರಾಟ?

Mumbai; ಉದ್ಧವ್‌ ಬಣದ ಅಭ್ಯರ್ಥಿ ಅನಿಲ್‌ ದೇಸಾಯಿ ರ್ಯಾಲಿಯಲ್ಲಿ ಇಸ್ಲಾಮಿಕ್‌ ಧ್ವಜ ಹಾರಾಟ?

Pakistan Govt Airlines to Private: PM Shehbaz Sharif

Pakistan ಸರ್ಕಾರಿ ವಿಮಾನ ಕಂಪನಿಗಳು ಖಾಸಗಿಗೆ: ಪಿಎಂ ಶೆಹಬಾಜ್‌ ಷರೀಫ್

Why Ganga river is not clean despite spending Rs 20000 crore: Congress

Varanasi; 20000 ಕೋಟಿ ರೂ. ವ್ಯಯಿಸಿದರೂ ಗಂಗಾ ನದಿ ಏಕೆ ಶುದ್ಧವಾಗಿಲ್ಲ: ಕಾಂಗ್ರೆಸ್‌

Modi Code of Conduct: TMC Accused, Complaint Submitted

Election; ಮೋದಿ ನೀತಿ ಸಂಹಿತೆ: ಟಿಎಂಸಿ ಆರೋಪ, ದೂರು ಸಲ್ಲಿಕೆ!

22-harangi

Madikeri: ಹಾರಂಗಿ ನಾಲೆ ಸಮೀಪ ವ್ಯಕ್ತಿಯ ಶವ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.