ಮಹರ್ಷಿ ಬೆಳಕು: ಅನ್ನದ ಹಿಂದಿನ ಪ್ರೀತಿ


Team Udayavani, Feb 8, 2020, 4:30 AM IST

jai-10

ಭೋಜನ ಎಂಬುದು ಅವರವರ ಅಭಿರುಚಿ ಮತ್ತು ಸೌಲಭ್ಯಕ್ಕೆ ಸಂಬಂಧಿಸಿದ ವಿಷಯ. ಹಾಗಿದ್ದರೂ ಭಾರತೀಯ ಶಾಸ್ತ್ರಗಳು ಈ ಬಗ್ಗೆ ಅನೇಕ ವಿಧಿ-ನಿಷೇಧಗಳನ್ನು ಹೇಳಿದೆ. ಅದರಲ್ಲಿ ಯಾರ ಅನ್ನವನ್ನು ಬಳಸಬೇಕು, ಯಾರ ಅನ್ನವನ್ನು ಬಳಸಬಾರದು, ಯಾವ ಸಂದರ್ಭದಲ್ಲಿ ಬಳಸಬಹುದು ಇತ್ಯಾದಿ ವಿಷಯಗಳು ಸೇರಿವೆ. ಈ ಬಗ್ಗೆ ಮಹಾಭಾರತದಲ್ಲಿ ಒಂದು ಸ್ವಾರಸ್ಯವಾದ ಕಥೆಯಿದೆ.

ಪಾಂಡವರು ವನವಾಸ ಮುಗಿಸಿ ಬಂದ ನಂತರ, ಅವರಿಗೆ ನ್ಯಾಯವಾಗಿ ದಕ್ಕಬೇಕಾಗಿದ್ದ ರಾಜ್ಯವನ್ನು ಕೊಡಲು ದುರ್ಯೋಧನನು ನಿರಾಕರಿಸುತ್ತಾನೆ. ಆಗ ಯುದ್ಧವೇ ಅನಿವಾರ್ಯ ಎಂಬ ಪರಿಸ್ಥಿತಿ ಬಂದೊದಗುತ್ತದೆ. ಯುದ್ಧದಿಂದ ಆಗುವ ಸಾವು-ನೋವುಗಳನ್ನು ಮನಗಂಡ ಧರ್ಮರಾಯನು, ಯುದ್ಧ ಬಿಟ್ಟು ಬೇರೆ ಮಾರ್ಗದಿಂದ ರಾಜ್ಯ ಪಡೆಯಲು ಸಾಧ್ಯವೇ ಎಂದು ಯೋಚಿಸುತ್ತಾನೆ. ಸಂಧಾನಕ್ಕಾಗಿ ಶ್ರೀಕೃಷ್ಣನನ್ನು ತನ್ನ ದೂತನನ್ನಾಗಿ ಕಳುಹಿಸುತ್ತಾನೆ. ಕೃಷ್ಣನ ಆಗಮನವನ್ನೂ ಅದರ ಉದ್ದೇಶವನ್ನೂ ಅರಿತ ಕೌರವನು, ಕೃಷ್ಣನನ್ನು ಆತಿಥ್ಯದಿಂದ ಸಂಪ್ರೀತಿಗೊಳಿಸಿ, ಅವನನ್ನೇ ತಮ್ಮ ಕಡೆಗೆ ಸೆಳೆದುಕೊಳ್ಳಲು ಯೋಚಿಸುತ್ತಾನೆ. ಅದಕ್ಕಾಗಿ ಕೃಷ್ಣನಿಗೆ ಪ್ರಿಯವಾದ ಬಗೆ ಬಗೆಯ ಪದಾರ್ಥಗಳನ್ನು ಭೋಜನಕ್ಕಾಗಿ ಸಿದ್ಧಪಡಿಸಲಾಗುತ್ತದೆ.

ಆದರೆ, ಭಕ್ತಪ್ರಿಯನೂ, ಸರಳನೂ ಆದ ಭಗವಂತನು ನೇರವಾಗಿ ತನ್ನ ಅಂತರಂಗದ ಭಕ್ತನಾದ ವಿದುರನ ಮನೆಗೆ ದಯಮಾಡಿಸುತ್ತಾನೆ. ಅಲ್ಲಿ ಬಹಳ ಪ್ರೀತಿಯಿಂದ ವಿದುರನು ಸಮರ್ಪಿಸಿದ ಹಾಲು- ಹಣ್ಣುಗಳನ್ನು ಸ್ವೀಕರಿಸಿ ಸಂತೃಪ್ತನಾಗುತ್ತಾನೆ.

ಮಾರನೇ ದಿವಸ ಕೌರವನ ಸಭೆಗೆ ಪಾಂಡವರ ದೂತನಾಗಿ ದಯಮಾಡಿಸುತ್ತಾನೆ. ಆಗ ಹಿಂದಿನ ದಿವಸದ ಆತಿಥ್ಯದ ಸಿದ್ಧತೆಯನ್ನು ತಿಳಿಸುತ್ತಾ ಕೌರವನು, ಕೃಷ್ಣನನ್ನು ಹೀಯಾಳಿಸುತ್ತಾನೆ. “ನೀನು ಎಷ್ಟಾದರೂ ನೀಚ ಕುಲದವನು. ಆದ್ದರಿಂದಲೇ ನಿನಗೆ ಸಮಾನನಾದ, ಅಲ್ಪನಾದ ವಿದುರನಲ್ಲಿ ಆತಿಥ್ಯ ಸ್ವೀಕರಿಸಿದೆ. ಸರಿಯಾಯಿತು ಬಿಡು. ನಿನಗೆ ರಾಜೋಚಿತವಾದ ಭೋಜನವಾದರೂ ಏಕೆ?’ ಎಂದು.

ಅದಕ್ಕೆ ಕೃಷ್ಣನು ಕೊಡುವ ಉತ್ತರವು ಬಲು ಸೊಗಸಾಗಿದೆ. “ಎಲೈ ದುರ್ಯೋಧನನೇ ಯಾರಾದರೂ ಪ್ರೀತಿಯಿಂದ ಕೊಟ್ಟ ಅನ್ನವನ್ನು ಮಾತ್ರವೇ ಸ್ವೀಕರಿಸಬೇಕು ಅಥವಾ ಪ್ರೀತಿಯಿಂದ ಕೊಡದಿದ್ದರೂ ನಾವು ಆಪತ್ತಿನಲ್ಲಿದ್ದರೆ ಆಗ ದೊರಕುವ ಅನ್ನವನ್ನು ಬಳಸಬಹುದು. ಆದರೆ, ನೀನೇನೂ ಪ್ರೀತಿಯಿಂದ ನಮ್ಮನ್ನು ಆದರಿಸಲೂ ಇಲ್ಲ. ಆದರವಿಲ್ಲದಿದ್ದರೂ ಭುಂಜಿಸುವ ಅನಿವಾರ್ಯತೆಯೂ ನನಗೆ ಇರಲಿಲ್ಲ’ ಎನ್ನುತ್ತಾನೆ. ಈ ಮಾತು ಎಷ್ಟೊಂದು ಅರ್ಥಪೂರ್ಣ ಅಲ್ಲವೇ?

 - ಬಿ. ಜಿ.ಅನಂತ
ಸಂಸ್ಕೃತಿ ಚಿಂತಕರು, ಅಷ್ಟಾಂಗ ಯೋಗ ವಿಜ್ಞಾನ ಮಂದಿರಂ

ಟಾಪ್ ನ್ಯೂಸ್

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bahumuki

ಅರಮನೆಯಂಥ ಬಂಗಲೆ ಇದೆ, ಏನುಪಯೋಗ?

ಮೊದಲ ಗುರಿಯೇ ಕೊನೆಯದೂ ಆಗಿದೆ!

ಮೊದಲ ಗುರಿಯೇ ಕೊನೆಯದೂ ಆಗಿದೆ!

bahumuki

ಹುಡುಗಿಯ ಚುಂಬನ ಮತ್ತು ಆಗಸದ ತಾರೆ

ಟೊಮೇಟೊ ಹಣ್ಣಿನ ಗೊಜ್ಜು

ಟೊಮೇಟೊ ಹಣ್ಣಿನ ಗೊಜ್ಜು

ದೀಪವನ್ನೇ ಏಕೆ ಬಳಸಬೇಕು?

ದೀಪವನ್ನೇ ಏಕೆ ಬಳಸಬೇಕು?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

cbsc

CBSE ವರ್ಷಕ್ಕೆ 2 ಬಾರಿ ಪರೀಕ್ಷೆ:ರೂಪರೇಖೆಗೆ ಸೂಚನೆ

indi-1

Airbus; 30 ಏರ್‌ಬಸ್‌ ವಿಮಾನ ಖರೀದಿಗೆ ಮುಂದಾದ ಇಂಡಿಗೋ ಕಂಪೆನಿ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

1-weqwwqewq

ಬಾಂದ್ರಾ- ವರ್ಲಿ ಸೀ ಲಿಂಕ್‌ಗೆ 25,000 ಟನ್‌ ಗರ್ಡರ್‌ ಅಳವಡಿಕೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Telangana: ಪಿಯು ಫ‌ಲಿತಾಂಶದ ಬೆನ್ನಲ್ಲೇ 7 ವಿದ್ಯಾರ್ಥಿ ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.