ಬ್ರೇಕ್‌ನ ನಂತರ…


Team Udayavani, Feb 5, 2020, 5:02 AM IST

feb-14

ಪ್ರವಾಸ ಹೋಗ್ಬೇಕು, ದೂರದ ಊರುಗಳಿಗೆ ರೋಡ್‌ ಟ್ರಿಪ್‌ ಮಾಡ್ಬೇಕು ಅಂತ ಯಾರಿಗೆ ಆಸೆ ಇರೋದಿಲ್ಲ ಹೇಳಿ? ಕೆಲವರು ವರ್ಷಕ್ಕೊಮ್ಮೆ, ಆರು ತಿಂಗಳಿಗೊಮ್ಮೆ “ಸೋಲೋ ಟ್ರಿಪ್‌’ ಅಂತ, ತಮ್ಮ ಕನಸನ್ನು ನನಸು ಮಾಡಿಕೊಳ್ತಾರೆ. ಆದರೆ, ಅಂಥವರಲ್ಲಿ ಮಹಿಳೆಯರ ಸಂಖ್ಯೆ ಕಡಿಮೆಯೇ. ಯಾಕಂದ್ರೆ, ಒಬ್ಬೊಬ್ಬರೇ ಟೂರ್‌ ಹೋಗುವುದು, ರೋಡ್‌ ಟ್ರಿಪ್‌ ಹೋಗೋದು ಸುರಕ್ಷಿತವಲ್ಲ ಎಂಬ ಭಾವನೆ ಹಲವರದ್ದು. ಈ ಮಾತಿಗೆ ಅಪವಾದ ಎಂಬಂತೆ, ಪ್ರವಾಸವನ್ನೇ ಬ್ಯುಸಿನೆಸ್‌ ಮಾಡಿಕೊಂಡ ಮಹಿಳೆಯೊಬ್ಬರಿದ್ದಾರೆ. ಅವರೇ ಮುಂಬೈನ ಸುಜಲ್‌ ಪಟವರ್ಧನ್‌.

ಸುಜಲ್‌, ಪ್ರತಿಷ್ಠಿತ ಕಂಪನಿಯೊಂದರಲ್ಲಿ 12 ವರ್ಷಗಳ ಕಾಲ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥೆಯಾಗಿದ್ದರು. ಮೀಟಿಂಗ್‌, ಡೆಡ್‌ಲೈನ್‌, ಸ್ಯಾಲರಿ, ಪ್ರಮೋಷನ್‌ ಅಂತ ಅವರ ಜೀವನಚಕ್ರ ಆಫೀಸಿನ ಸುತ್ತುತ್ತಲೇ ಸುತ್ತುತ್ತಿತ್ತು. ಆದರೆ, ಸುಜಲ್‌ಗೆ ಪ್ರವಾಸದ ಹುಚ್ಚಾ ಇತ್ತು. ಸಮಯದ ಅಭಾವದಿಂದ ಹಲವು ವರ್ಷಗಳ ಕಾಲ ಪ್ರವಾಸ ಮಾಡಲು ಆಗಿರಲಿಲ್ಲ. ತಮ್ಮ ಯಾಂತ್ರಿಕ ಬದುಕಿನಿಂದ ಬ್ರೇಕ್‌ ಪಡೆಯಲು 2015ರಲ್ಲಿ, ಗೆಳತಿ ಮೇಧಾ ಜೋಸೆಫ್ ಮತ್ತು ನಾಲ್ವರು ಸ್ನೇಹಿತರ ಜೊತೆಗೆ, ಮೊರಾಕ್ಕೋಗೆ ರೋಡ್‌ ಟ್ರಿಪ್‌ ಹೋಗಿದ್ದರು. 57 ದಿನಗಳಲ್ಲಿ 15 ದೇಶ, 23 ಸಾವಿರ ಕಿ.ಮೀ. ಪ್ರವಾಸ ಹೋದ ಅವರು, ಮತ್ತೆಂದೂ ಕೆಲಸಕ್ಕೆ ವಾಪಸಾಗುವ ಮನಸ್ಸು ಮಾಡಲಿಲ್ಲ.

ಮತ್ತೇನು ಮಾಡಿದರು ಗೊತ್ತಾ? ತಮ್ಮ ಪ್ರವಾಸದ ಆಸಕ್ತಿಯನ್ನೇ ಬ್ಯುಸಿನೆಸ್‌ ಆಗಿಸಿಕೊಂಡರು. ಸುಜಲ್‌-ಮೇಧಾ ಸೇರಿ, ಎರಡೇ ತಿಂಗಳಲ್ಲಿ ಇಂಬಾರ್ಕ್‌ ಹೆಸರಿನಲ್ಲಿ ಟ್ರಾವೆಲ್‌ ಸ್ಟಾರ್ಟ್‌ ಅಪ್‌ ಶುರು ಮಾಡಿದ್ರು. ಆ ಕಂಪನಿಯ ಕೆಲಸ ಏನೆಂದರೆ, ವಿದೇಶಗಳಿಗೆ ರೋಡ್‌ ಟ್ರಿಪ್‌ ಹೋಗುವವರಿಗೆ ಮಾಹಿತಿ ನೀಡುವುದು, ಪರವಾನಗಿ ಪಡೆಯಲು ಸಹಕರಿಸುವುದೂ ಸೇರಿದಂತೆ, ಎಲ್ಲ ರೀತಿಯಲ್ಲಿ ಪ್ರವಾಸಿಗರಿಗೆ ನೆರವಾಗುವುದು. ಒಟ್ಟಿನಲ್ಲಿ, ಪ್ರವಾಸದ ಅನುಭವವನ್ನು ಮತ್ತಷ್ಟು ಸ್ಮರಣೀಯಗೊಳಿಸುವ ಕೆಲಸವನ್ನು ಸುಜಲ್‌ರ ತಂಡ ಮಾಡುತ್ತದೆ. ಈಗಾಗಲೇ ಬಹಳಷ್ಟು ಮಹಿಳೆಯರು ಇವರ ಮಾರ್ಗದರ್ಶನದಲ್ಲಿ ಪ್ರವಾಸ ಕೈಗೊಂಡಿರುವುದು ಇವರಿಗೆ ಖುಷಿ ತಂದಿದೆ. ಮಹಿಳಾ ಪ್ರವಾಸಿಗರ ಸುರಕ್ಷತೆಗೆ ಇವರ ತಂಡ ಹೆಚ್ಚಿನ ಕಾಳಜಿ ವಹಿಸುತ್ತದೆ. ಆಸಕ್ತಿಯ ಕ್ಷೇತ್ರವನ್ನೇ ಉದ್ಯೋಗವಾಗಿಸಿಕೊಂಡಿರುವ ಸುಜಲ್‌ಗೆ ತಮ್ಮ ನಿರ್ಧಾರದ ಕುರಿತು ಎಳ್ಳಷ್ಟೂ ಪಶ್ಚಾತ್ತಾಪವಿಲ್ಲವಂತೆ.

ಟಾಪ್ ನ್ಯೂಸ್

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

shettar

Minority ತುಷ್ಟೀಕರಣದಿಂದ ನೇಹಾಳ ಹತ್ಯೆಯಾಗಿದೆ :ಜಗದೀಶ್ ಶೆಟ್ಟರ್

1-adasdsad

Davanagere; ಪ್ರಧಾನಿ ಮೋದಿ ರ್‍ಯಾಲಿಗೆ ಅನುಮತಿ ನೀಡಬಾರದು:ಕಾಂಗ್ರೆಸ್ ಮನವಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-sadasd

Yadgir BJP ಬೃಹತ್ ರೋಡ್ ಶೋ; ದೇಶದ ರಕ್ಷಣೆಗಾಗಿ ಮತ್ತೆ ಬೆಂಬಲಿಸಿ: ನಡ್ಡಾ

1-wqeqqwe

Vote; ಕರ್ನಾಟಕ ಮೊದಲ ಹಂತ: ಶೇಕಡಾವಾರು ಮತದಾನದ ವಿವರ

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

1-wqeqewqe

EVM ಕುರಿತು ಸುಪ್ರೀಂ ತೀರ್ಪು ಪ್ರತಿಪಕ್ಷಗಳಿಗೆ ಕಪಾಳ ಮೋಕ್ಷ: ಪ್ರಧಾನಿ ಮೋದಿ

militry

Baramulla ಗುಂಡಿನ ಚಕಮಕಿಯಲ್ಲಿ ಉಗ್ರರಿಬ್ಬರ ಹತ್ಯೆ; ಇಬ್ಬರು ಸೇನಾ ಸಿಬಂದಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.