ಹಿತಭುಕ್‌ ಮಿತಭುಕ್‌ ಋತುಭುಕ್‌


Team Udayavani, Apr 1, 2020, 11:56 AM IST

ಹಿತಭುಕ್‌ ಮಿತಭುಕ್‌ ಋತುಭುಕ್‌

ಒಂದು ಕಥೆ ಇದೆ. ಒಂದೂರಲ್ಲಿ ಒಬ್ಬ ರಾಜಕುಮಾರ. ಮದುವೆಯಾಗಲು ಚತುರಕನ್ಯೆಯನ್ನು ಹುಡುಕುತ್ತಿರುತ್ತಾನೆ. ಒಬ್ಬ ಜಾಣ ಕನ್ಯೆಯ ಬಗೆಗೆ ಆತನಿಗೆ ಯಾರೋ ಹೇಳುತ್ತಾರೆ. ಅವಳ ಮನೆಗೆ ಕನ್ಯಾ ಪರೀಕ್ಷೆಗಾಗಿ ಬರುತ್ತಾನೆ. ಆಕೆಗೆ, ಬಂದವನು ಯಾರು ಎನ್ನುವುದು ಗೊತ್ತಿರುವುದಿಲ್ಲ. ತಾನೊಬ್ಬ ಯಾತ್ರಿಕನೆಂದೂ, ಆಶ್ರಯ ಕೊಡಬೇಕೆಂದೂ ಬೇಡಿಕೊಳ್ಳುತ್ತಾನೆ. ಮನೆಯಲ್ಲಿ ಏನೂ ಇರದ ಕಾರಣ,ಅತಿಥಿಗೆ ಏನು ಆಹಾರ ಕೊಡಲಿ, ಎಂದು ಚಿಂತಾಕ್ರಾಂತಳಾದ ಆಕೆಗೆ, ಒಂದು ಹಿಡಿ ಭತ್ತ ಕೊಟ್ಟು, ಏನಾದರೂ ಅಡುಗೆ ಮಾಡುವಂತೆ ಕೇಳಿಕೊಳ್ಳುತ್ತಾನೆ.

ಆಕೆ ಆ ಭತ್ತವನ್ನು ಕುಟ್ಟಿ, ಕೇರಿ ಅಕ್ಕಿ ಮಾಡಿಕೊಳ್ಳುತ್ತಾಳೆ. ತೌಡಿನೊಂದಿಗೆ, ಒಣಗಿದ ಒಂದಿಷ್ಟು ಕಟ್ಟಿಗೆ, ಚಕ್ಕೆಗಳನ್ನು ಆರಿಸಿ ತಂದು, ಒಲೆ ಹೂಡಿ, ಅಕ್ಕಿಯನ್ನು ಕುದಿಯಲು ಇಟ್ಟು, ಗಂಜಿ ಬಸಿದುಕೊಳ್ಳುತ್ತಾಳೆ. ಒಲೆಯ ಕೆಳಗಿನ ಇದ್ದಿಲನ್ನು ಮಾರಿ, ತುಸು ಉಪ್ಪು, ಖಾರ, ಬೆಲ್ಲ, ತರುತ್ತಾಳೆ. ಹಿತ್ತಲಿನ ಗಿಡದಲ್ಲಿ ಒಂದಿಷ್ಟು ನೆಲ್ಲಿಕಾಯಿಗಳನ್ನು ಕಿತ್ತು, ಗೊಲ್ಲನೊಬ್ಬನಿಗೆ ಕೊಟ್ಟು ತುಸು ಮಜ್ಜಿಗೆ ಕೊಳ್ಳುತ್ತಾಳೆ. ಉಳಿದ ಒಂದಿಷ್ಟು ನೆಲ್ಲಿಕಾಯಿ ಜಜ್ಜಿ, ತುಸು ಬೆಲ್ಲ ಹಾಕಿ ಕುದಿಸಿ ಗೊಜ್ಜು ಮಾಡುತ್ತಾಳೆ. ಬಸಿದ ಗಂಜಿಗೆ ಉಪ್ಪು, ಹಸಿಮೆಣಸಿನ ಕಾಯಿ ಜಜ್ಜಿ ಹಾಕಿ ಕುದಿಸಿ, ರಾಜಕುಮಾರನನ್ನು ಊಟಕ್ಕೆ ಕರೆಯುತ್ತಾಳೆ. ಹಬೆಯಾಡುವ ಅನ್ನ, ಹಿತವಾದ ಮೇಲೋಗರ, ಪಕ್ಕಕ್ಕಿಷ್ಟು ಹುಳಿ, ಸಿಹಿಯ ಗೊಜ್ಜು, ಮಜ್ಜಿಗೆಯ ಊಟ ನೋಡಿ ರಾಜಕುಮಾರ ಅಚ್ಚರಿಗೊಳ್ಳುತ್ತಾನೆ. ಸ್ವಾದಭರಿತ ಊಟದಿಂದ ಸಂತೃಪ್ತನಾಗಿ ಆಕೆಯ ಕೈಹಿಡಿಯುತ್ತಾನೆ.

ಈ ಕಥೆಯ ನೀತಿ ಇಷ್ಟೇ. ಸಕಲ ಸಾಮಗ್ರಿಗಳಿ ದ್ದರೆ ಯಾರಾದರೂ ಅಡುಗೆ ಮಾಡಬಲ್ಲರು. ಏನೂ ಇಲ್ಲದೇ ಇದ್ದಾಗಲೂ ಸ್ವಾದ ತುಂಬುವುದು ಇದೆಯಲ್ಲ, ಅದೂ ಒಂದು ಕಲೆ. ಸದ್ಯದ ಪರಿಸ್ಥಿತಿಯಲ್ಲಿ, ತಿಂಗಳೊಪ್ಪತ್ತು ಅಥವಾ ಅದಕ್ಕೂ ಹೆಚ್ಚು ಕಾಲ ಮನೆಯಲ್ಲೇ ಇರಬೇಕಾಗಬಹುದು. ಮನೆಯ ಎಲ್ಲಾ ಸಾಮಗ್ರಿಗಳು ಮುಗಿಯುತ್ತಾ ಬಂದಿವೆ. ಆದರೆ, ತರಕಾರಿಗಾಗಿ ಹೊರಗೆ ಹೋಗಲೂ ಸಾಧ್ಯವಿಲ್ಲ ಅಂದಿರಾ? ಚಿಂತೆ ಬೇಡ, ಈ ಸಮಯದಲ್ಲಿ, ಕಡಿಮೆ ವಸ್ತುಗಳನ್ನು ಬಳಸಿ ಮಾಡಬಹುದಾದ ಕೆಲವು ಅಡುಗೆಗಳು ಹೀಗಿವೆ.

  • ಕುದಿಯುವ ನೀರಿಗೆ ತುಸು ಬೆಲ್ಲ, ಹುಣಸೆರಸ, ಉಪ್ಪು ಹಾಕಿ ಕುದಿಸಿ. ತುಪ್ಪ, ಒಣ ಮೆಣಸಿನಕಾಯಿ, ಜೀರಿಗೆಯ ಒಗ್ಗರಣೆ ಕೊಡಿ. ಘಮಘಮ ಗೊಡ್ಡುಸಾರು ಸಿದ್ಧ. ಒಣಗಿದ ಅಮಸೋಲ್‌ ಸಾರನ್ನೂ ಮಾಡಬಹುದು.
  • ಕಡಲೇಹಿಟ್ಟಿಗೆ ಒಂದಿಷ್ಟು ಉಪ್ಪಿಟ್ಟು ರವೆ ಬೆರೆಸಿ. ಅದಕ್ಕೆ ಉಪ್ಪು, ಖಾರ ಹಾಕಿ ಉದುರುದುರಾಗಿ ಕಲೆಸಿ ಒಗ್ಗರಣೆಯಲ್ಲಿ ಬಾಡಿಸಿ, ತುಸು ನೀರು ಹಾಕಿ ಮುಚ್ಚಿಡಿ. ಇಷ್ಟು ಮಾಡಿದರೆ, ರುಚಿಕಟ್ಟಾದ ಭರಡಾ ಪಲ್ಯ ರೆಡಿ.
  • ಕಡಲೇ ಹಿಟ್ಟು ಮತ್ತು ಉಪ್ಪು ಕಲಸಿ ಈರುಳ್ಳಿ, ಹಸಿಮೆಣಸಿನಕಾಯಿಯ ಒಗ್ಗರಣೆಯಲ್ಲಿ ಹಬೆ ಬರುವವರೆಗೂ ಸಣ್ಣ ಉರಿಯಲ್ಲಿ ಕುದಿಸಿದರೆ ಝಣಕ ರೆಡಿ.
  • ಕಡಲೇಬೀಜ ಹುರಿದು ಉಪ್ಪು, ಖಾರ ಹಾಕಿ ಪುಡಿ ಮಾಡಿಕೊಳ್ಳಿ. ಹೀಗೆಯೇ ಹುಚ್ಚೆಳ್ಳು, ಅಗಸೇಬೀಜದ ಪುಡಿಗಳನ್ನೂ ಪಲ್ಯದ ಬದಲಾಗಿ ರೊಟ್ಟಿ ಚಪಾತಿಗಳಿಗೆ ಬಳಸಬಹುದು.
  • ಕಾಯಿತುರಿ, ಉಪ್ಪು, ಮೆಣಸಿನಕಾಳನ್ನು ಅಕ್ಕಿಯೊಂದಿಗೆ ಕುದಿಸಿದರೆ ಕಾಯಿಗಂಜಿ ರೆಡಿ.
  • ಎಲ್ಲ ಬೇಳೆಗಳನ್ನು ಒಂದೊಂದು ಚಮಚ ಹುರಿದು ಒಣ ಮೆಣಸಿನಕಾಯಿ, ಕರಿಬೇವು, ಇಂಗು ಹಾಕಿ ಪುಡಿ ಮಾಡಿಕೊಳ್ಳಿ. ಹುಣಸೇರಸ ಮತ್ತು ಬೆಲ್ಲ, ಉಪ್ಪು ಹಾಕಿ ಕಲೆಸಿದರೆ ಹಸಿ ಗೊಜ್ಜು. ಇದನ್ನೇ ಒಲೆಯ ಮೇಲೆ ಇಟ್ಟು ಕುದಿಸಿದರೆ ಗಟ್ಟಿ ಕುದಿಸಿದ ಗೊಜ್ಜು.
  • ಒಣಗಿದ ಹಪ್ಪಳಗಳನ್ನು ಸುಟ್ಟು, ಒಗ್ಗರಣೆಯಲ್ಲಿ ಹಾಕಿ ಉಪ್ಪು ಖಾರ ಹುಳಿ ಬೆರೆಸಿದರೆ, ಹಪ್ಪಳದ ಪಲ್ಯ ರೆಡಿ. ಹೀಗೆಯೇ ಹಪ್ಪಳದ ಚಿತ್ರಾನ್ನವನ್ನೂ ಮಾಡಬಹುದು.
  • ಮೊಸರಿದ್ದರೆ ಕಡಲೇಬೇಳೆ ನೆನೆಸಿ ರುಬ್ಬಿಕೊಂಡು,ಮಜ್ಜಿಗೆಯೊಂದಿಗೆ ಬೆರೆಸಿ ಪಳದ್ಯ ಮಾಡಿಕೊಳ್ಳಿ. ಇಲ್ಲವೇ ಅಂಗಳದ ದೊಡ್ಡ ಪತ್ರೆ ಅಥವಾ ವೀಳ್ಯದೆಲೆ ಜೊತೆಗೆ ತಂಬುಳಿ ಮಾಡಿ. ಉದ್ದಿನ ಹಿಟ್ಟಿದ್ದರೆ ಮೊಸರಿನಲ್ಲಿ ಕಲೆಸಿ ಒಗ್ಗರಣೆ ಕೊಡಿ.
  • ಎಲ್ಲ ವಿಧದ ಕಾಳುಗಳನ್ನು ಮೊಳಕೆ ಬರಿಸಿ ಉಸುಳಿ ಮಾಡಬಹುದು. ­

 

-ದೀಪಾ ಜೋಶಿ

ಟಾಪ್ ನ್ಯೂಸ್

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Kannada ನಾಮಫ‌ಲಕ; ತತ್‌ಕ್ಷಣ ಕ್ರಮ ಬೇಡ: ಹೈಕೋರ್ಟ್‌

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ

Udupi; ಬಿಜೆಪಿ ಭದ್ರಕೋಟೆಯಾಗಿರುವ ಕರಾವಳಿ-ಮಲೆನಾಡಿನ ಕ್ಷೇತ್ರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

udayavani youtube

ಇಲ್ಲಿ ಗ್ರಾಹಕರನ್ನ ನೋಡಿಕೊಳ್ಳುವ ರೀತಿಗೆ ಎಂಥಹವರೂ ಫಿದಾ ಆಗ್ತಾರೆ

udayavani youtube

ಶ್ರೀ ಪಣಿಯಾಡಿ ಅನಂತಪದ್ಮನಾಭ ದೇವಸ್ಥಾನ,ಪಣಿಯಾಡಿ|

udayavani youtube

Rameshwaram Cafe: ಹೇಗಾಯ್ತು ಸ್ಫೋಟ? ಭಯಾನಕ ಸಿಸಿಟಿವಿ ದೃಶ್ಯ ನೋಡಿ

udayavani youtube

ಅಯೋಧ್ಯೆ ಶ್ರೀ ರಾಮನ ಸೇವೆಯಲ್ಲಿ ಉಡುಪಿಯ ಬೆಳ್ಕಳೆ ಚಂಡೆ ಬಳಗ

ಹೊಸ ಸೇರ್ಪಡೆ

1

ಉಚಿತವಾಗಿ ಕೆಲಸಕ್ಕೆ ಬರಲು ನಿರಾಕರಿಸಿದ್ದಕ್ಕೆ ಕಾರ್ಮಿಕರ ಗುಡಿಸಲಿಗೆ ಬೆಂಕಿಯಿಟ್ಟ ವ್ಯಕ್ತಿ

3-mandya

Mandya: ದಾಖಲೆ ಇಲ್ಲದ 99.20 ಲಕ್ಷ ಜಪ್ತಿ ಮಾಡಿದ ಚುನಾವಣಾಧಿಕಾರಿಗಳು

2-bng-crime

Bengaluru: ಭಜನೆ ಹಾಕಿದಕ್ಕೆ ದಾಂಧಲೆ: ಮೂವರ ಬಂಧನ

14-uv-fusion

Youths: ಎತ್ತ ಸಾಗುತ್ತಿದೆ ಯುವಜನತೆಯ ಚಿತ್ತ?

10-uv-fusion

Challenges of Life: ಬದುಕಿನ ಸವಾಲುಗಳ ಎದುರಿಸಿ ಮುನ್ನಡೆಯೋಣ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.