ಬೇಸಿಗೆಗೆ ಸಾಸಿವೆ ಊಟ


Team Udayavani, Mar 11, 2020, 5:24 AM IST

saasivee

ಬೇಸಿಗೆಯಲ್ಲಿ ದೇಹದ ಉಷ್ಣಾಂಶ ಹೆಚ್ಚುವುದರಿಂದ, ಸೇವಿಸುವ ಆಹಾರದ ಮೂಲಕ ದೇಹವನ್ನು ತಂಪಾಗಿಡುವುದು ಮುಖ್ಯ. ಹಾಗಾಗಿಯೇ, ಕರಾವಳಿ-ಮಲೆನಾಡಿನ ಮನೆಗಳಲ್ಲಿ ಬೇಸಿಗೆಯ ದಿನಗಳಲ್ಲಿ ಸಾಸಿವೆ ಎಂಬ ಖಾದ್ಯ ತಯಾರಿಸುತ್ತಾರೆ. ಅಂಥ ಸಾಸಿವೆಗಳಲ್ಲಿ ಹುಳಿ-ಸಿಹಿ ರುಚಿಯ ಮಾವಿನಹಣ್ಣಿನ ಸಾಸಿವೆ ಜನಪ್ರಿಯ. ಮಾವಿನಿಂದ ಅಷ್ಟೇ ಅಲ್ಲ, ಇತರೆ ತರಕಾರಿಗಳನ್ನು ಬಳಸಿಯೂ ಸಾಸಿವೆ ಮಾಡಬಹುದು.

1. ಮಾವಿನಹಣ್ಣು
ಬೇಕಾಗುವ ಸಾಮಗ್ರಿ: ಹುಳಿಸಿಹಿ ಮಾವಿನಹಣ್ಣು- 4, ಕಾಯಿತುರಿ- ಅರ್ಧ ಕಪ್‌, ಹಸಿಮೆಣಸು, ಸಾಸಿವೆ, ಸಿಹಿಮೊಸರು-1 ಕಪ್‌, ಉಪ್ಪು. ಒಗ್ಗರಣೆಗೆ-ಎಣ್ಣೆ, ಸಾಸಿವೆ, ಉದ್ದಿನಬೇಳೆ, ಒಣಮೆಣಸು, ಕರಿಬೇವು.

ಮಾಡುವ ವಿಧಾನ: ಮಾವಿನ ಹಣ್ಣುಗಳನ್ನು ತೊಳೆದು, ಕಿವುಚಿಕೊಳ್ಳಿ. ಮಿಕ್ಸ್‌ರ್‌ಗೆ ಕಾಯಿತುರಿ, ಹಸಿಮೆಣಸು, ಸ್ವಲ್ಪ ಸಾಸಿವೆ ಹಾಕಿ ರುಬ್ಬಿ , ಆ ಮಿಶ್ರಣವನ್ನು ಮಾವಿನಹಣ್ಣಿನ ಮಿಶ್ರಣಕ್ಕೆ ಸೇರಿಸಿ. ಅದಕ್ಕೆ ಮೊಸರು, ಉಪ್ಪು ಬೆರೆಸಿ, ನಂತರ ಒಗ್ಗರಣೆ ಕೊಡಿ.

2. ಟೊಮೇಟೊ- ಈರುಳ್ಳಿ
ಬೇಕಾಗುವ ಸಾಮಗ್ರಿ: ಹೆಚ್ಚಿದ ಟೊಮೇಟೊ ಮತ್ತು ಈರುಳ್ಳಿ ತಲಾ- 2 ಕಪ್‌, ಮೊಸರು-2 ಕಪ್‌, ಕಾಯಿತುರಿ-ಅರ್ಧ ಕಪ್‌, ಹಸಿಮೆಣಸು-2, ಕೊತ್ತಂಬರಿ ಸೊಪ್ಪು, ಉಪ್ಪು- ರುಚಿಗೆ ತಕ್ಕಷ್ಟು, ಸಾಸಿವೆ. ಒಗ್ಗರಣೆಗೆ: ಎಣ್ಣೆ, ಸಾಸಿವೆ, ಉದ್ದಿನಬೇಳೆ, ಒಣಮೆಣಸು, ಕರಿಬೇವು.

ಮಾಡುವ ವಿಧಾನ: ಮೊದಲು ಟೊಮೇಟೊ ಮತ್ತು ಈರುಳ್ಳಿಯನ್ನು ಚಿಕ್ಕದಾಗಿ ಹೆಚ್ಚಿಕೊಳ್ಳಿ. ಹೆಚ್ಚಿದ ಎಲ್ಲವನ್ನೂ ಸೇರಿಸಿ, ಕಾಯಿತುರಿ ಮತ್ತು ಸಾಸಿವೆಯೊಂದಿಗೆ ಸ್ವಲ್ಪ ನೀರು ಹಾಕಿ ರುಬ್ಬಿ. ಉಪ್ಪು ಮತ್ತು ಮೊಸರು ಸೇರಿಸಿ ಒಗ್ಗರಣೆ ಕೊಡಿ.

3. ಹಾಗಲಕಾಯಿ
ಬೇಕಾಗುವ ಸಾಮಗ್ರಿ: ಮಧ್ಯಮ ಗಾತ್ರದ ಹಾಗಲಕಾಯಿ- 1, ಹಸಿಮೆಣಸು-2, ಕಾಯಿತುರಿ- ಅರ್ಧ ಕಪ್‌, ಮೊಸರು-2 ಕಪ್‌, ಉಪ್ಪು- ರುಚಿಗೆ, ಎಣ್ಣೆ-2 ಚಮಚ, ಉದ್ದಿನಬೇಳೆ, ಸಾಸಿವೆ, ಕರಿಬೇವು.

ಮಾಡುವ ವಿಧಾನ: ಬಾಣಲೆಯಲ್ಲಿ ಎಣ್ಣೆ ಹಾಕಿ, ಉದ್ದಿನಬೇಳೆ, ಸಾಸಿವೆ, ಹಸಿಮೆಣಸು ಹಾಕಿ ಹುರಿಯಿರಿ. ನಂತರ ಅದಕ್ಕೆ ಹೆಚ್ಚಿದ ಹಾಗಲಕಾಯಿ ಹಾಕಿ ಕಂದು ಬಣ್ಣ ಬರುವವರೆಗೆ ಹುರಿಯಿರಿ. ನಂತರ ಆರಲು ಬಿಡಿ. ಕಾಯಿತುರಿಗೆ ಉಪ್ಪು ಸೇರಿಸಿ, ರುಬ್ಬಿ. ಅದನ್ನು ಹುರಿದಿಟ್ಟ ಮಿಶ್ರಣಕ್ಕೆ ಸೇರಿಸಿ. ನಂತರ ಮೊಸರು ಬೆರೆಸಿ.

4. ಬಾಳೆಕಾಯಿ
ಬೇಕಾಗುವ ಸಾಮಗ್ರಿ:ಬೇಯಿಸಿದ ಬಾಳೆಕಾಯಿ- 2, ಮೊಸರು-2 ಕಪ್‌, ಹಸಿಮೆಣಸು-1, ಕಾಯಿತುರಿ-ಅರ್ಧ ಕಪ್‌,  ಒಗ್ಗರಣೆಗೆ: ಎಣ್ಣೆ, ಉದ್ದಿನಬೇಳೆ, ಸಾಸಿವೆ ಒಣಮೆಣಸು, ಕರಿಬೇವು.

ಮಾಡುವ ವಿಧಾನ: ಬಾಳೆಕಾಯಿಯನ್ನು ಬೇಯಿಸಿ, ಸಿಪ್ಪೆ ಸುಲಿದು ಚಿಕ್ಕದಾಗಿ ಹೆಚ್ಚಿ ಅಥವಾ ಕೈಯಿಂದ ನುರಿದುಕೊಳ್ಳಿ. ಕಾಯಿತುರಿ, ಹಸಿಮೆಣಸು, ಸ್ವಲ್ಪ ನೀರು ಹಾಕಿ ರುಬ್ಬಿ. ಆ ಮಸಾಲೆಯನ್ನು ಬೇಯಿಸಿದ ಬಾಳೆಕಾಯಿ, ಉಪ್ಪು, ಮೊಸರು ಸೇರಿಸಿ ಒಗ್ಗರಣೆ ಕೊಡಿ.

5. ಸೌತೆಕಾಯಿ
ಬೇಕಾಗುವ ಸಾಮಗ್ರಿ: ಹೆಚ್ಚಿದ/ ತುರಿದ ಎಳೆ ಸೌತೆಕಾಯಿ- 2 ಕಪ್‌, ಹೆಚ್ಚಿದ ಹಸಿಮೆಣಸಿನ ಕಾಯಿ-2, ಕಾಯಿತುರಿ- ಅರ್ಧ ಕಪ್‌, ಸಿಹಿ ಮೊಸರು -2 ಕಪ್‌, ಕೊತ್ತಂಬರಿ ಸೊಪ್ಪು, ಸಾಸಿವೆ, ಉಪ್ಪು- ರುಚಿಗೆ. ಒಗ್ಗರಣೆಗೆ- ಎಣ್ಣೆ, ಸಾಸಿವೆ, ಉದ್ದಿನಬೇಳೆ, ಒಣಮೆಣಸು, ಕರಿಬೇವು.

ಮಾಡುವ ವಿಧಾನ: ಕಾಯಿತುರಿಯನ್ನು ಸಾಸಿವೆ ಮತ್ತು ಸ್ವಲ್ಪ ನೀರಿನೊಂದಿಗೆ ರುಬ್ಬಿ, ಹೆಚ್ಚಿಟ್ಟ ಸೌತೆಕಾಯಿ, ಹಸಿಮೆಣಸು ಮತ್ತು ಕೊತ್ತಂಬರಿ ಸೊಪ್ಪಿನ ಮಿಶ್ರಣಕ್ಕೆ ಸೇರಿಸಿ. ಅದಕ್ಕೆ ಮೊಸರು ಮತ್ತು ಉಪ್ಪು ಸೇರಿಸಿ, ನಂತರ ಒಗ್ಗರಣೆ ಕೊಡಿ.

-ಗೀತಾ ಎಸ್‌ ಭಟ್‌

ಟಾಪ್ ನ್ಯೂಸ್

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

congress

BJP ಅಭ್ಯರ್ಥಿ ಅವಿರೋಧ ಆಯ್ಕೆ: ಸೂರತ್‌ನ ಕಾಂಗ್ರೆಸ್‌ ಅಭ್ಯರ್ಥಿ ಉಚ್ಚಾಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

voter

VOTE; ನೋಟಾಗೆ ಬಹುಮತ ಬಂದರೆ ಏನು ಮಾಡಬೇಕು?:ಚುನಾವಣ ಆಯೋಗಕ್ಕೆ ಸುಪ್ರೀಂ ನೋಟಿಸ್‌

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.