ಭೂಮಿ ತೂಕದ ವ್ಯಕ್ತಿತ್ವ


Team Udayavani, Sep 8, 2017, 6:20 AM IST

mahila–08.jpg

ಯಶಸ್ಸು ಎನ್ನುವುದು ಅಮಲಿನಂತೆ. ಒಮ್ಮೆ ತಲೆಗೇರಿದರೆ ಈ ಅಮಲು ತನಗೆ ಬೇಕಾದಂತೆ ಕುಣಿಸುತ್ತದೆ. ಅದರಲ್ಲೂ ಚಿತ್ರರಂಗದಲ್ಲಿ ಯಶಸ್ಸಿನ ಅಮಲು ಏರುವುದೂ ಬೇಗ ಇಳಿಯುವುದೂ ಬೇಗ. ಒಂದೇ ಚಿತ್ರದ ಯಶಸ್ಸಿನಿಂದ ಬೀಗಿ ಬಳಿಕ ಮೂಲೆಗುಂಪಾದ ಅದೆಷ್ಟೋ ಮಂದಿಯನ್ನು ಈ ಮಾಯಾಲೋಕ ಕಂಡಿದೆ. ಅಂತೆಯೇ ಚಿತ್ರ ಸೂಪರ್‌ಹಿಟ್‌ ಆಗಿದ್ದರೂ ಒಂದು ಚೂರೂ ಬದಲಾಗದೆ ತಲೆಯನ್ನು ಭುಜದ ಮೇಲೆ ಇಟ್ಟುಕೊಂಡವರು ಇಲ್ಲಿ ಬಹುಕಾಲ ಬಾಳಿದ್ದಾರೆ. ಈ ವಿಚಾರ ಇಲ್ಲಿ ಪ್ರಸ್ತಾವವಾಗಲು ಕಾರಣ ಭೂಮಿ ಪೆಡ್ನೆಕರ್. ಬೆನ್ನುಬೆನ್ನಿಗೆ ಎರಡು ಹಿಟ್‌ ಚಿತ್ರಗಳನ್ನು ನೀಡಿರುವ ಭೂಮಿಗೆ ಈಗ ನಿಂತ ನೆಲ ಕಾಣುತ್ತಿಲ್ಲ. ಎಲ್ಲರನ್ನು ಅವಳು ಕೀಳಾಗಿ ಕಾಣಿಸಿಕೊಳ್ಳುತ್ತಿದ್ದಾಳೆ ಎನ್ನುವುದು ಭೂಮಿ ಬಗ್ಗೆ ಕೇಳಿ ಬಂದಿರುವ ಆರೋಪ. ಯಶ್‌ರಾಜ ಫಿಲ್ಮ್ಸ್ನಲ್ಲಿ ಅಸಿಸ್ಟೆಂಟ್‌ ಕಾಸ್ಟಿಂಗ್‌ ಡೈರೆಕ್ಟರ್‌ ಆಗಿದ್ದಾಗ ಭೂಮಿ ಗುಂಡುಗುಂಡಾಗಿ ಭೂಮಿಯಷ್ಟೇ ತೂಕವಾಗಿದ್ದಳು. 

ಈ ಭಾರೀ ದೇಹವೇ ಅವಳಿಗೆ ದಮ್‌ ಲಗಾಕೇ ಐಸಾ ಚಿತ್ರದ ನಾಯಕಿಯಾಗುವ ಅವಕಾಶ ತಂದುಕೊಟ್ಟಿತು. ದಪ್ಪ ಹೆಂಡತಿ ಮತ್ತು ಪೀಚಲು ಗಂಡನ ಕತೆ ಹೊಂದಿದ್ದ ದಮ್‌ ಲಗಾಕೇ ಐಸಾ ಚಿತ್ರ ದೊಡ್ಡ ಮಟ್ಟದ ಹಿಟ್‌ ಎಂದೆನಿಸದಿದ್ದರೂ ಭೂಮಿ ಮಾತ್ರ ಗಮನ ಸೆಳೆಯುವಲ್ಲಿ ಯಶಸ್ವಿಯಾದಳು. ಮೊದಲೇ ಸಾಕಷ್ಟು ದಪ್ಪಗಿದ್ದ ಭೂಮಿ ಈ ಚಿತ್ರಕ್ಕಾಗಿ ಮತ್ತೆ 12 ಕಿಲೋ ತೂಕ ಹೆಚ್ಚಿಸಿಕೊಂಡಿದ್ದಳಂತೆ. ಅನಂತರ ಬರೀ ಒಂದು ವರ್ಷದಲ್ಲಿ  ಎಲ್ಲ ತೂಕ ಇಳಿಸಿಕೊಂಡು ಅಚ್ಚರಿಯುಂಟು ಮಾಡಿದ್ದ ಭೂಮಿ, “ತೂಕ ಕಳೆದುಕೊಳ್ಳುವುದು ಹೇಗೆ?’ ಎಂಬ ವಿಚಾರದಲ್ಲಿ ಉಪನ್ಯಾಸ ನೀಡುವಷ್ಟು ಅನುಭವ ಸಂಪಾದಿಸಿಕೊಂಡಿದ್ದಾಳೆ.

ಟ್ರಿಮ್‌ ಆ್ಯಂಡ್‌ ಸ್ಲಿಮ್‌ ಆಗಿ ಬಂದ ಭೂಮಿಗೆ ಟಾಯ್ಲೆಟ್‌ ಏಕ್‌ ಪ್ರೇಮ್‌ ಕಥಾ ಚಿತ್ರದಲ್ಲಿ ಅಕ್ಷಯ್‌ ಕುಮಾರ್‌ಗೆ ನಾಯಕಿಯಾಗುವ ಅವಕಾಶ ಸಿಕ್ಕಿತು. ಈ ಚಿತ್ರ ಹಿಟ್‌ ಆಗುತ್ತಿದ್ದಂತೆ ಶುಭ ಮಂಗಲ್‌ ಸಾವಧಾನ್‌ ಎನ್ನುವ ಚಿತ್ರ ಬಂತು. ಇದು ಕೂಡ ಹಿಟ್‌ ಆದ ಬಳಿಕ ಭೂಮಿಗೆ ಯಶಸ್ಸಿನ ಅಮಲು ತಲೆಗೇರಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ಆದರೆ ಭೂಮಿ ಇದನ್ನೆಲ್ಲ ನಿರಾಕರಿಸುತ್ತಿದ್ದಾಳೆ. ನನ್ನ ಯಶಸ್ಸು ನೋಡಿ ಹೊಟ್ಟೆಯುರಿಯುತ್ತಿರುವವರು ಹರಡುತ್ತಿರುವ ಸುಳ್ಳು ಸುದ್ದಿಗಳಿವು. ನಾನೂ ಹಿಂದಿನ ಭೂಮಿಯೇ ಆಗಿ ಉಳಿದಿದ್ದೇನೆ. ಈಗಲೂ ಸೆಟ್‌ನ ಹುಡುಗರ ಜತೆಗೆ ಊಟ ಹಂಚಿಕೊಂಡು ತಿನ್ನುವಷ್ಟು ಸರಳತೆ ನನ್ನಲ್ಲಿದೆ. ಆದರೆ ಯಾರಾದರೂ ಜೀವನದಲ್ಲಿ ಮೇಲೇರುತ್ತಿದ್ದರೆ ಸಹಿಸದ ಕೆಲ ಮಂದಿ ಉದ್ದೇಶಪೂರ್ವಕವಾಗಿ ನನ್ನ ಬಗ್ಗೆ ಕೆಟ್ಟ ವದಂತಿ ಹರಡುತ್ತಿದ್ದಾರೆ ಎನ್ನುವುದು ಭೂಮಿಯ ಸಮಜಾಯಿಷಿ. 

ಟಾಪ್ ನ್ಯೂಸ್

Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ

Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ

Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ

Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ

ocon

ಲೀಡ್‌ ಕೊಡಿಸದಿದ್ದರೆ ಅಧಿಕಾರವೂ ಸಿಗದು; ಹುದ್ದೆ ಬಯಸುವ ಕಾರ್ಯಕರ್ತರಿಗೆ ಡಿಕೆಶಿ ಚಾಟಿ

Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ

Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ

Singapore Airlines; 3 ನಿಮಿಷಗಳಲ್ಲಿ 6 ಸಾವಿರ ಅಡಿ ಕುಸಿದ ವಿಮಾನ: 1 ಸಾವು

Singapore Airlines; 3 ನಿಮಿಷಗಳಲ್ಲಿ 6 ಸಾವಿರ ಅಡಿ ಕುಸಿದ ವಿಮಾನ: 1 ಸಾವು

ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಇಬ್ಬರಿಗೆ ಗಾಯ

Vitla ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದು ಇಬ್ಬರಿಗೆ ಗಾಯ

Heavy Rain ಕರಾವಳಿ, ಕೊಡಗು ಜಿಲ್ಲೆಯಲ್ಲಿ ಗುಡುಗು ಸಹಿತ ಬಿರುಸಿನ ಮಳೆ

Heavy Rain ಕರಾವಳಿ, ಕೊಡಗು ಜಿಲ್ಲೆಯಲ್ಲಿ ಗುಡುಗು ಸಹಿತ ಬಿರುಸಿನ ಮಳೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Malayalam Kannada Translated Story

ವಿಲ್ಲನ್ ‌ಗಳು ಮಾತನಾಡುವಾಗ ಏನನ್ನೂ ಬಚ್ಚಿಡುವುದಿಲ್ಲ

k-20

ಸೆರಗು-ಲೋಕದ ಬೆರಗು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ಕಡಿಮೆ ಮಾಡೋಣ ಪ್ಲಾಸ್ಟಿಕ್‌ ಸದ್ದು

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ದಿರಿಸು-ಪುಸ್ತಕಗಳ ನಡುವೆ ಬದುಕು ನವಿಲುಗರಿ

ಎಲ್ಲ ದಿನಗಳೂ ಮಹಿಳಾ ದಿನಗಳೇ!

ಎಲ್ಲ ದಿನಗಳೂ ಮಹಿಳಾ ದಿನಗಳೇ!

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ

Rain ಕರಾವಳಿ ಸಹಿತ ರಾಜ್ಯದ ವಿವಿಧೆಡೆ ಉತ್ತಮ ಮಳೆ, ನಾಲ್ಕು ಜೀವಹಾನಿ

Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ

Ambedkar ಇಲ್ಲದಿದ್ದರೆ ನೆಹರೂ ಮೀಸಲು ನೀಡುತ್ತಿರಲಿಲ್ಲ : ಮೋದಿ

ocon

ಲೀಡ್‌ ಕೊಡಿಸದಿದ್ದರೆ ಅಧಿಕಾರವೂ ಸಿಗದು; ಹುದ್ದೆ ಬಯಸುವ ಕಾರ್ಯಕರ್ತರಿಗೆ ಡಿಕೆಶಿ ಚಾಟಿ

Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ

Puttur ಅಂಗಳದಲ್ಲಿದ್ದ ವ್ಯಕ್ತಿ ಸಾವು ಸಿಡಿಲಾಘಾತ / ಹೃದಯಾಘಾತ ಶಂಕೆ

Singapore Airlines; 3 ನಿಮಿಷಗಳಲ್ಲಿ 6 ಸಾವಿರ ಅಡಿ ಕುಸಿದ ವಿಮಾನ: 1 ಸಾವು

Singapore Airlines; 3 ನಿಮಿಷಗಳಲ್ಲಿ 6 ಸಾವಿರ ಅಡಿ ಕುಸಿದ ವಿಮಾನ: 1 ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.