ನಾಗರಹೊಳೆಯಲ್ಲಿ ಮೊದಲ ಹಂತದ ಗಣತಿ ಮುಕ್ತಾಯ: ಮಲ,ಹಿಕ್ಕೆ, ಲದ್ದಿ ಸಂಗ್ರಹ, ಆ್ಯಪ್ ಮೂಲಕ ದಾಖಲು


Team Udayavani, Jan 25, 2022, 8:43 PM IST

ನಾಗರಹೊಳೆಯಲ್ಲಿ ಮೊದಲ ಹಂತದ ಗಣತಿ ಮುಕ್ತಾಯ: ಮಲ,ಹಿಕ್ಕೆ, ಲದ್ದಿ ಸಂಗ್ರಹ, ಆ್ಯಪ್ ಮೂಲಕ ದಾಖಲು

ಹುಣಸೂರು : ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ರಾಷ್ಟ್ರೀಯ ಹುಲಿ ಗಣತಿಯ ಮೊದಲ ಹಂತದ ಮೂರು ದಿನಗಳ ಕಾಲ ದೊಡ್ಡ ಸಸ್ಯಹಾರಿ ಪ್ರಾಣಿಗಳ ಹಾಗೂ ಮಾಂಸಹಾರಿ ಸೈನ್ ಸರ್ವೆ ಅಂತ್ಯಗೊಂಡಿದ್ದು, ಸಿಬ್ಬಂದಿಗಳು, ಲದ್ದಿ, ಮಲ, ಹಿಕ್ಕೆಯನ್ನು ಸಂಗ್ರಹಿಸಿದರು, ಪ್ರಾಣಿಗಳ ಹೆಜ್ಜೆಗುರುತು, ಮರಪರಚಿರುವುದನ್ನು ಸಿಬ್ಬಂದಿಗಳು ಎಂ-ಸ್ಟ್ರೈಪ್ಸ್ ಎಕೊಲಾಜಿಕಲ್(ಆ್ಯಪ್) ಅಪ್ಲಿಕೇಷನ್‌ನಲ್ಲಿ ದಾಖಲಿಸಿದರು.

ಕಳೆದ ಮೂರು ದಿನ ಹಲವು ವಲಯಗಳಲ್ಲಿ ಹುಲಿ ಹಾಗೂ ಬೃಹತ್ ಸಸ್ಯಹಾರಿ ಪ್ರಾಣಿಗಳಾದ ಆನೆ, ಕಾಡೆಮ್ಮೆ ಮತ್ತಿತರ ಪ್ರಾಣಿಗಳು ನೇರವಾಗಿ ಕಾಣಿಸಿಕೊಂಡಿದ್ದನ್ನು ಆಪ್‌ನಲ್ಲಿ ದಾಖಲಿಸಿದರು.

ಹುಲಿ ಪತ್ತೆ, ದಾಖಲು :
ಪ್ರಥಮ ಹಂತದ ಮೂರು ದಿನಗಳ ಕಾಲ ಗಣತಿಯಲ್ಲಿ ನಿತ್ಯ ಉದ್ಯಾನದ 91 ಬೀಟ್‌ಗಳಲ್ಲೂ 5ಕಿ.ಮೀ.ವರೆಗೆ ಮೂವರು ಅರಣ್ಯ ಸಿಬ್ಬಂದಿಗಳ ತಂಡ ಗಣತಿ ನಡೆಸಿದೆ. ಮತ್ತಿಗೋಡು ವಲಯದಲ್ಲಿ ಮಂಗಳವಾರದಂದು ಹುಲಿ ಜಿಂಕೆಯನ್ನು ಭೇಟೆಯಾಡಿರುವುದು ಪತ್ತೆಯಾಗಿದೆ. ಕಲ್ಲಹಳ್ಳ ವಲಯದಲ್ಲಿ ಸೋಮವಾರ-ಮಂಗಳವಾರ ಸಹ ಹುಲಿ ಗಣತಿದಾರರಿಗೆ ನೇರವಾಗಿ ಕಾಣಿಸಿಕೊಂಡಿದೆ. ಇದೇ ರೀತಿ ಗಣತಿ ಸಿಬ್ಬಂದಿಗಳಿಗೆ ನಾಗರಹೊಳೆ, ಮೇಟಿಕುಪ್ಪೆ, ಡಿ.ಬಿ.ಕುಪ್ಪೆ, ಅಂತರಸಂತೆ, ಹುಣಸೂರು ವಲಯಗಳಲ್ಲಿ ಹುಲಿ ಕಾಣಿಸಿಕೊಂಡಿದ್ದರೆ, ವೀರನಹೊಸಹಳ್ಳಿ ವಲಯದಲ್ಲಿ ಜಾರ್‌ಗಲ್ – ತುಪ್ಪದಕೊಳ ಗಸ್ತಿನ ಅಂಚಿನಲ್ಲಿ ಹುಲಿ ಘರ್ಜಿಸಿರುವುದನ್ನು ಸಹ ದಾಖಲಿಸಿದ್ದಾರೆ. ಇದೇ ರೀತಿ ಎಲ್ಲ ವಲಯಗಳಲ್ಲೂ ಆನೆ, ಕಾಡೆಮ್ಮೆ ನೇರ ಕಾಣಿಸಿಕೊಂಡಿರುವುದನ್ನು ಆ್ಯಪ್ ನಲ್ಲಿ ದಾಖಲಿಸಿದ್ದಾರೆ.

ರಣಹದ್ದು ವೀಕ್ಷಣೆ : ಅಲ್ಲದೆ ರಣಹದ್ದುಗಳು ಮತ್ತು ಇತರೆ ಪಕ್ಷಿಗಳನ್ನು ವೀಕ್ಷಿಸಿ, ಅವುಗಳನ್ನು ಕೂಡ ದಾಖಲೆ ಮಾಡಿದ್ದಾರೆ.

ಲದ್ದಿ, ಹಿಕ್ಕೆ ಡೆಹರಾಡೂನ್‌ಗೆ ರವಾನೆ:
ಎಲ್ಲ ವಲಯಗಳಲ್ಲೂ ಹುಲಿ, ಆನೆ, ಕಾಡೆಮ್ಮೆ ಮತ್ತಿತರ ದೊಡ್ಡ ಸಸ್ಯಹಾರಿ ಪ್ರಾಣಿಗಳ ಮಲ, ಹಿಕ್ಕೆ ಹಾಗೂ ಲದ್ದಿಯನ್ನು ಆಪ್‌ನಲ್ಲಿ ದಾಖಲಿಸಿ ಡೆಹರಾಡೂನ್‌ನ ವೈಲ್ಡ್ ಲೈಫ್ ಇನ್ಸಿಟ್ಯೂಟ್ ಆಫ್ ಇಂಡಿಯಾಗೆ ಕಳುಹಿಸಲು ಸಂಗ್ರಹಿಸಿದರು. ಇನ್ನು ಅವುಗಳ ಹೆಜ್ಜೆ, ಗಡಿ ಗುರುತಿಸುವಿಕೆ, ಮರಗಳನ್ನು ಪರಚಿರುವ ಗುರುತನ್ನು ಪತ್ತೆಹಚ್ಚಿ ಆ್ಯಪ್ ನಲ್ಲಿ ದಾಖಲಿಸಿದರು.

ಜ.27 ರಿಂದ ಲೈನ್ ಟ್ರ್ಯಾಕ್ ಜಾಕ್ಟ್:
ಜ.27 ರಿಂದ ಫೆ.1 ರವರೆಗೆ 105 ಲೈನ್ ಟ್ರ್ಯಾಕ್ ಜಾಕ್ಟ್ ಮೂಲಕ ಎರಡು ಕಿ.ಮೀ.ವರೆಗೆ ಸಂಚರಿಸಿ ಹುಲಿಯ ಆಹಾರವಾದ ಸಸ್ಯಹಾರಿ ಪ್ರಾಣಿಗಳ ಹಾಗೂ ಸಸ್ಯಪ್ರಭೇಧಗಳ ಗಣತಿ ನಡೆಯಲಿದೆ ಎಂದು ಎಸಿಎಫ್ ಸತೀಶ್ ತಿಳಿಸಿದ್ದಾರೆ.

ಟಾಪ್ ನ್ಯೂಸ್

ಉಚ್ಚಾಟಿಸಿದರೇನಂತೆ.. ಜಗದೀಶ್‌ ಶೆಟ್ಟರ್‌ ಮಾದರಿ ಕಣ್ಣ ಮುಂದೆಯೇ ಇದೆ: ರಘುಪತಿ ಭಟ್‌  

ಉಚ್ಚಾಟಿಸಿದರೇನಂತೆ.. ಜಗದೀಶ್‌ ಶೆಟ್ಟರ್‌ ಮಾದರಿ ಕಣ್ಣ ಮುಂದೆಯೇ ಇದೆ: ರಘುಪತಿ ಭಟ್‌  

AAP;  ಧ್ರುವ ರಾಥಿ ವಿಡಿಯೋ ಬಳಿಕ ಅತ್ಯಾಚಾರ-ಕೊಲೆ ಬೆದರಿಕೆ: ಸ್ವಾತಿ ಮಲಿವಾಲ್

AAP; ಧ್ರುವ ರಾಥಿ ವಿಡಿಯೋ ಬಳಿಕ ಅತ್ಯಾಚಾರ-ಕೊಲೆ ಬೆದರಿಕೆ: ಸ್ವಾತಿ ಮಲಿವಾಲ್

9

Crime: 4 ತಿಂಗಳಿನಲ್ಲಿ 1646 ಅಪರಾಧ ಪ್ರಕರಣ

Solo ಎಲ್ಲ ಸೋಲೇ ಇಲ್ಲ… ಒಬ್ಬಂಟಿ ಯಾತ್ರಿಕರ ‌ಡೈರಿ

Solo ಎಲ್ಲ ಸೋಲೇ ಇಲ್ಲ… ಒಬ್ಬಂಟಿ ಯಾತ್ರಿಕರ ‌ಡೈರಿ

T20 World Cup 2024: ಬಾಂಗ್ಲಾ ವಿರುದ್ಧದ ಅಭ್ಯಾಸ ಪಂದ್ಯಕ್ಕಿಲ್ಲ ವಿರಾಟ್-ಹಾರ್ದಿಕ್

T20 World Cup 2024: ಬಾಂಗ್ಲಾ ವಿರುದ್ಧದ ಅಭ್ಯಾಸ ಪಂದ್ಯಕ್ಕಿಲ್ಲ ವಿರಾಟ್-ಹಾರ್ದಿಕ್

6-vitla

Vitla: ಬೀಗ ಹಾಕಿದ್ದ ಮನೆಯಲ್ಲಿ ಕಳ್ಳರ ಕರಾಮತ್ತು; ಡಿ.ವಿ.ಆರ್ ಕೂಡಾ ಕದ್ದೊಯ್ದರು

rajnath singh

Indian Constitution ಪೀಠಿಕೆಯನ್ನು ಬದಲಾವಣೆ ಮಾಡಿದ್ದು ಕಾಂಗ್ರೆಸ್: ರಾಜನಾಥ್ ಸಿಂಗ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉಚ್ಚಾಟಿಸಿದರೇನಂತೆ.. ಜಗದೀಶ್‌ ಶೆಟ್ಟರ್‌ ಮಾದರಿ ಕಣ್ಣ ಮುಂದೆಯೇ ಇದೆ: ರಘುಪತಿ ಭಟ್‌  

ಉಚ್ಚಾಟಿಸಿದರೇನಂತೆ.. ಜಗದೀಶ್‌ ಶೆಟ್ಟರ್‌ ಮಾದರಿ ಕಣ್ಣ ಮುಂದೆಯೇ ಇದೆ: ರಘುಪತಿ ಭಟ್‌  

Udupi Gang war; Did the failure of the beat system lead to the incident?

Udupi Gang war; ಬೀಟ್‌ ವ್ಯವಸ್ಥೆ ಲೋಪವೇ ಘಟನೆಗೆ ಕಾರಣವಾಯಿತೇ?

bjp-jdsವಿಧಾನಪರಿಷತ್‌ ಚುನಾವಣೆ; ಇಂದು ಬಿಜೆಪಿ-ಜೆಡಿಎಸ್‌ ಮೈತ್ರಿ ಸಭೆ

ವಿಧಾನಪರಿಷತ್‌ ಚುನಾವಣೆ; ಇಂದು ಬಿಜೆಪಿ-ಜೆಡಿಎಸ್‌ ಮೈತ್ರಿ ಸಭೆ

ಸಿನೆಮಾ ತಾರೆಯರಿಗೆ ಒತ್ತಡ ಹೇರಬೇಡಿ: ರವಿಚಂದ್ರನ್‌

ಸಿನೆಮಾ ತಾರೆಯರಿಗೆ ಒತ್ತಡ ಹೇರಬೇಡಿ: ರವಿಚಂದ್ರನ್‌

41

MLC Election: ಮೇಲ್ಮನೆಯಲ್ಲಿ ಏಳು ಸ್ಥಾನಗಳು ಕಾಂಗ್ರೆಸ್‌ನಲ್ಲಿ 70 ಆಕಾಂಕ್ಷಿಗಳು

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

ಉಚ್ಚಾಟಿಸಿದರೇನಂತೆ.. ಜಗದೀಶ್‌ ಶೆಟ್ಟರ್‌ ಮಾದರಿ ಕಣ್ಣ ಮುಂದೆಯೇ ಇದೆ: ರಘುಪತಿ ಭಟ್‌  

ಉಚ್ಚಾಟಿಸಿದರೇನಂತೆ.. ಜಗದೀಶ್‌ ಶೆಟ್ಟರ್‌ ಮಾದರಿ ಕಣ್ಣ ಮುಂದೆಯೇ ಇದೆ: ರಘುಪತಿ ಭಟ್‌  

AAP;  ಧ್ರುವ ರಾಥಿ ವಿಡಿಯೋ ಬಳಿಕ ಅತ್ಯಾಚಾರ-ಕೊಲೆ ಬೆದರಿಕೆ: ಸ್ವಾತಿ ಮಲಿವಾಲ್

AAP; ಧ್ರುವ ರಾಥಿ ವಿಡಿಯೋ ಬಳಿಕ ಅತ್ಯಾಚಾರ-ಕೊಲೆ ಬೆದರಿಕೆ: ಸ್ವಾತಿ ಮಲಿವಾಲ್

8-chikkodi

ರಾಜ್ಯಕ್ಕೆ ಬರುತ್ತಿದ್ದ ನೀರನ್ನು ತಡೆ ಹಿಡಿದ ಮಹಾ ಸರ್ಕಾರದ ಕ್ರಮಕ್ಕೆ ರೈತರು ಆಕ್ರೋಶ

12

Jackfruit: ಹಲಸಿನ ಹಣ್ಣಿನ ಬೆಲೆ ದುಬಾರಿ, ರೈತರ ಸಂತಸ

Chikkaballapur: ಇಳುವರಿ ಕುಸಿತ; ಮಾವಿಗೆ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ

Chikkaballapur: ಇಳುವರಿ ಕುಸಿತ; ಮಾವಿಗೆ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.