ಏ.26ರಂದು 2ನೇ ಹಂತದ ಚುನಾವಣೆ;ರಾಹುಲ್, ತರೂರ್, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ
ಸ್ಪೀಕರ್ ಓಂ ಬಿರ್ಲಾ ಸೇರಿದಂತೆ ಪ್ರಮುಖರ ಭವಿಷ್ಯ ನಿರ್ಧಾರ
Team Udayavani, Apr 26, 2024, 3:00 PM IST
ನವದೆಹಲಿ: ಏಪ್ರಿಲ್ 26ರಂದು ಕರ್ನಾಟಕ, ಕೇರಳ ಸೇರಿದಂತೆ ಹಲವೆಡೆ 2ನೇ ಹಂತದ ಚುನಾವಣೆ ನಡೆಯಲಿದ್ದು, ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಶಶಿ ತರೂರ್, ಅರುಣ್ ಗೋವಿಲ್, ಬಿಜೆಪಿಯ ಹೇಮಾ ಮಾಲಿನಿ, ಓಂ ಬಿರ್ಲಾ, ಗಜೇಂದ್ರ ಸಿಂಗ್ ಶೇಖಾವತ್ ಸೇರಿದಂತೆ ಹಲವು ಮಂದಿ ಪ್ರಮುಖರು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ.
ಇದನ್ನೂ ಓದಿ:Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ
ಒಟ್ಟು ಏಳು ಹಂತಗಳಲ್ಲಿ ದೇಶದಲ್ಲಿ ಚುನಾವಣೆ ನಡೆಯಲಿದ್ದು, ಈಗಾಗಲೇ ಏಪ್ರಿಲ್ 19ರಂದು 21 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶ ಸೇರಿದಂತೆ 102 ಸ್ಥಾನಗಳಿಗೆ ಚುನಾವಣೆ ನಡೆದಿತ್ತು, ಶೇ.65.5ರಷ್ಟು ಮತದಾನವಾಗಿತ್ತು.
2ನೇ ಹಂತದ ಲೋಕಸಭಾ ಚುನಾವಣೆಯಲ್ಲಿ ಕೇರಳದ ಎಲ್ಲಾ 20 ಕ್ಷೇತ್ರಗಳಲ್ಲಿ, ಕರ್ನಾಟಕದ 14, ರಾಜಸ್ಥಾನದ 13, ಮಹಾರಾಷ್ಟ್ರದ 8, ಉತ್ತರಪ್ರದೇಶ 8, ಮಧ್ಯಪ್ರದೇಶದ 7, ಅಸ್ಸಾಂನ 5, ಬಿಹಾರದ 5, ಚತ್ತೀಸ್ ಗಢ್ 03, ಪಶ್ಚಿಮಬಂಗಾಳ 3, ಮಣಿಪುರ 1, ತ್ರಿಪುರಾ 1 ಮತ್ತು ಜಮ್ಮು-ಕಾಶ್ಮೀರದ 1 ಸ್ಥಾನಕ್ಕಾಗಿ ಮತದಾನ ನಡೆಯಲಿದೆ.
1210 ಅಭ್ಯರ್ಥಿಗಳು: 2ನೇ ಹಂತದಲ್ಲಿ 1210 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. 2019ರ ಲೋಕಸಭೆ ಚುನಾವಣೆಯ 2ನೇ ಹಂತದಲ್ಲಿ 13 ರಾಜ್ಯಗಳ 97 ಲೋಕಸಭೆ ಕ್ಷೇತ್ರಗಳಿಗೆ ಶೇ.66ರಷ್ಟು ಮತದಾನ ನಡೆದಿತ್ತು. ಮೊದಲ ಹಂತದಲ್ಲಿ 21 ರಾಜ್ಯಗಳ 102 ಕ್ಷೇತ್ರಗಳಲ್ಲಿ ಶೇ.65 ಹಕ್ಕು ಚಲಾವಣೆಯಾಗಿತ್ತು. ಪ್ರಮುಖರು ಕಣದಲ್ಲಿ: ಶಶಿ ತರೂರ್, ಸಚಿವ ರಾಜೀವ್ ಚಂದ್ರಶೇಖರ್, ರಾಹುಲ್ ಗಾಂಧಿ, ಸ್ಪೀಕರ್ ಓಂ ಬಿರ್ಲಾ ಸೇರಿದಂತೆ ಪ್ರಮುಖರ ಭವಿಷ್ಯ ನಿರ್ಧಾರವಾಗಲಿದೆ.
ರಾಹುಲ್ ಗಾಂಧಿ ಕೇರಳದ ವಯನಾಡ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು, ಎರಡನೇ ಬಾರಿ ಗೆಲುವಿಗೆ ಎದುರು ನೋಡುತ್ತಿದ್ದಾರೆ. ಗಾಂಧಿ ವಿರುದ್ಧ ಸಿಪಿಐನ ಅನ್ನಿ ರಾಜಾ, ಬಿಜೆಪಿಯ ಸುರೇಂದ್ರನ್ ಸ್ಪರ್ಧಿಸುತ್ತಿದ್ದಾರೆ.
ಹಿರಿಯ ಕಾಂಗ್ರೆಸ್ ಮುಖಂಡ, ಕೇಂದ್ರ ಸಚಿವ ಶಶಿ ತರೂರ್ ತಿರುವನಂತಪುರಂನಿಂದ ಸ್ಪರ್ಧಿಸುತ್ತಿದ್ದು, ನಾಲ್ಕನೇ ಬಾರಿಯ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಇಲ್ಲಿ ಬಿಜೆಪಿಯಿಂದ ರಾಜೀವ್ ಚಂದ್ರಶೇಖರ್ ಮತ್ತು ಸಿಪಿಐನ ಪಿ.ರವೀಂದ್ರನ್ ಅಖಾಡದಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ತಿಮ್ಮಪ್ಪನ ದರ್ಶನಕ್ಕೆ 30 ತಾಸು ಸರತಿ ಸಾಲು; ತಿರುಮಲದಲ್ಲಿ ಏಕಾಏಕಿ ಹೆಚ್ಚಿದ ಜನಸಂದಣಿ
Ayodhya; ರಾಮ ಮಂದಿರದಲ್ಲಿ ಮೊಬೈಲ್ ಬಳಕೆಗೆ ನಿರ್ಬಂಧ
Gujarat; ಗೇಮಿಂಗ್ ಸೆಂಟರ್ ಬೆಂಕಿ ದುರಂತ ಸಾವಿನ ಸಂಖ್ಯೆ 33ಕ್ಕೆ : ಹೈಕೋರ್ಟ್ ವಿಚಾರಣೆ
Bird hit; ಲೇಹ್ಗೆ ಹೊರಟಿದ್ದ ವಿಮಾನಕ್ಕೆ ಹಕ್ಕಿ ಢಿಕ್ಕಿ: ದಿಲ್ಲಿಗೆ ವಾಪಸ್
Cyclone ಬಾಂಗ್ಲಾ ಕರಾವಳಿಗೆ ರೆಮಲ್; ಧಾರಾಕಾರ ಮಳೆ,ತಾಸಿಗೆ 130 ಕಿ.ಮೀ.ವೇಗದಲ್ಲಿ ಚಂಡಮಾರುತ
MUST WATCH
ಹೊಸ ಸೇರ್ಪಡೆ
ಪ್ಲಾಸ್ಟಿಕ್ಗೆ ಪರ್ಯಾಯವಾಗಬಲ್ಲ ಮೆಕ್ಕೆಜೋಳ, ಸಬ್ಬಕ್ಕಿಯ ಕ್ಯಾರಿಬ್ಯಾಗ್!
ಮಳೆಗಾಲಕ್ಕೆ ಸಜ್ಜುಗೊಂಡಿಲ್ಲ ನಾಗೋಡಿ ಘಾಟಿ
Love jihadಶ್ರೀರಾಮ ಸೇನೆಯಿಂದ ರಾಜ್ಯದ 6 ಕಡೆ ಕಾರ್ಯಾಚರಣೆ; ಲವ್ ಜೆಹಾದ್ ತಡೆಗೆ ಸಹಾಯವಾಣಿ
ದುಬಾರಿ ದರಕ್ಕೆ ವಿದ್ಯುತ್ ಖರೀದಿ; ಅಗ್ಗದ ದರಕ್ಕೆ ಮಾರಾಟ; 10 ರೂ.ಗೆ ಖರೀದಿ,3 ರೂ.ಗೆ ಮಾರಾಟ
Chikkaballapur ನಾಗನಕಲ್ಲುಗಳ ಎದುರು ನಾಗರಹಾವುಗಳ ಪ್ರತ್ಯಕ್ಷ