ಕೊನೆಗೂ ಖಾಸಗಿ ಸಹಭಾಗಿತ್ವದಲ್ಲಿ ಟ್ರಕ್‌ ಟರ್ಮಿನಲ್‌ ನಿರ್ಮಾಣ


Team Udayavani, May 31, 2017, 3:38 PM IST

2805PBE3-truck-terminal.jpg

ಸುರತ್ಕಲ್‌: ದೇವರಾಜು ಅರಸು ಟ್ರಕ್‌ ಟರ್ಮಿನಲ್ಸ್‌ ನಿಗಮವು ಖಾಸಗಿ ಸಹಭಾಗಿತ್ವದಲ್ಲಿ ಮಂಗಳೂರಿನಲ್ಲಿ ಟ್ರಕ್‌ ಟರ್ಮಿನಲ್‌ ನಿರ್ಮಿಸಲು ಪ್ರಕ್ರಿಯೆ ಆರಂಭಿಸಿದೆ.

ಈಗಾಗಲೇ ನಿಗಮದ ಅಧಿಕಾರಿಗಳು ನಗರಕ್ಕೆ ಆಗಮಿಸಿ ಜಿಲ್ಲಾಧಿಕಾರಿ ಜಗದೀಶ್‌ ಅವರೊಂದಿಗೆ ಈ ಕುರಿತು ಚರ್ಚಿಸಿದ್ದಾರೆ. 

ಬೈಕಂಪಾಡಿ ಎಪಿಎಂಸಿ ಮುಂಭಾಗ 30 ಎಕರೆ ಖಾಸಗಿ ಭೂಮಿಯಿದ್ದು, ಅದರ ಮಾಲಕರೊಂದಿಗೆ ಜಂಟಿಯಾಗಿ ಟ್ರಕ್‌ ಟರ್ಮಿನಲ್‌ ನಿರ್ಮಿಸುವ ಬಗ್ಗೆ ಪ್ರಸ್ತಾಪಿಸಲಾಗಿದೆ. ನಿಗಮವು ಸಮಗ್ರ  ಯೋಜನಾ ವರದಿ (ಡಿಪಿಆರ್‌) ರೂಪಿಸಿ ಸಾಧಕ ಬಾಧಕಗಳನ್ನು ಪಟ್ಟಿ ಮಾಡಲಿದೆ. ಅದಾದ ಬಳಿಕ ಟ್ರಕ್‌ ಟರ್ಮಿನಲ್‌ ನಿರ್ಮಾಣ ಪ್ರಕ್ರಿಯೆ ಆರಂಭವಾಗಲಿದೆ. ಇದಲ್ಲದೆ ವಿಶೇಷ ಆರ್ಥಿಕ ವಲಯದಲ್ಲಿ ಸುಸಜ್ಜಿತ ಗೋದಾಮು ಗಳು, ಸರಕು ಸಂಗ್ರಹಣೆಗೆ ಬೇಕಾದ ವ್ಯವಸ್ಥೆಗಳನ್ನು ಕಲ್ಪಿಸುವ ಪ್ರಕ್ರಿಯೆಯೂ ಚಾಲ್ತಿಯಲ್ಲಿದೆ.

ಮಂಗಳೂರು ನಗರ ಕೈಗಾರಿಕ, ವಾಣಿಜ್ಯ ತಾಣವಾಗಿ ಬೆಳೆಯುತ್ತಿದೆ. ಈ ಹೊತ್ತಿನಲ್ಲಿ ಟ್ರಕ್‌ ಟರ್ಮಿನಲ್‌ ಅಗತ್ಯವಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಮೊದಲ ಬಜೆಟಿನಲ್ಲಿಯೇ ಇಲ್ಲಿ ಟ್ರಕ್‌ ಟರ್ಮಿನಲ್‌ ನಿರ್ಮಿಸುವುದಾಗಿ ಘೋಷಿಸಿದ್ದರು.

ಅದಕ್ಕಾಗಿ ನೂರು ಎಕರೆ ಸೂಕ್ತ ಜಾಗವನ್ನು ಗುರುತಿಸಲು ಜಿಲ್ಲಾಡಳಿತಕ್ಕೆ ಸೂಚಿಸಿದ್ದರು. ಆದರೆ ಇದುವರೆಗೆ ಜಿಲ್ಲಾಡಳಿತ ಅನೇಕ ಸಭೆಗಳನ್ನು ನಡೆಸಿದ್ದರೂ, ನಿರ್ಧಾರ ಅಂತಿಮಗೊಂಡಿರಲಿಲ್ಲ. 

ಬೈಕಂಪಾಡಿಯ ಎಪಿಎಂಸಿ ಯಾರ್ಡ್‌ ನಲ್ಲಿಯೂ ಟ್ರಕ್‌ ಟರ್ಮಿನಲ್‌ ನಿರ್ಮಿಸಿದರೆ ಹೇಗೆ ಎನ್ನುವ ವಿಚಾರವೂ ಚರ್ಚೆಗೆ ಬಂದಿತ್ತು. ಆದರೆ ಆ ಜಾಗವನ್ನು ಉಪಯೋಗಿಸುವುದರ ವಿರುದ್ಧ ಎಪಿಎಂಸಿ ಮಾಜಿ ಅಧ್ಯಕ್ಷ ಕೃಷ್ಣರಾಜ ಹೆಗ್ಡೆ ನ್ಯಾಯಾಲಯಕ್ಕೆ ಹೋಗುವುದಾಗಿ ಎಚ್ಚರಿಸಿದ್ದರು.

ಈಗ ಬೆಂಗಳೂರು-ಮಂಗಳೂರು ಮಧ್ಯೆ ನೇರ ಸುರಂಗ ಮಾರ್ಗ ನಿರ್ಮಿಸುವ ಪ್ರಸ್ತಾಪ ಕೇಂದ್ರ ಸರಕಾರದಲ್ಲಿದ್ದು, ಅದು ಜಾರಿಗೆ ಬಂದರೆ ಮಂಗಳೂರಿಗೆ ಬರುವ ಟ್ರಕ್‌ಗಳ ಸಂಖ್ಯೆ ಇನ್ನೂ ಹೆಚ್ಚಲಿದೆ. ಈಗಾಗಲೇ ಸರಾಸರಿ ಐದು ಸಾವಿರಕ್ಕೂ ಮಿಕ್ಕಿ ಟ್ರಕ್‌ಗಳು ಇಲ್ಲಿನ ಬಂದರಿಗೆ ಹೋಗಿ ಬರುತ್ತಿವೆ.  

ಈಗ ಈ ಟ್ರಕ್‌ಗಳಿಗೆ ವಿಶ್ರಾಂತಿಗೆ ಸೂಕ್ತ ಜಾಗವಿಲ್ಲದ ಪರಿಣಾಮ ಬೆ„ಕಂಪಾಡಿ, ಕುಳಾಯಿಯಿಂದ ಕೂಳೂರು ತನಕ ಟ್ರಕ್‌ಗಳ ಸಾಲಾಗಿ ನಿಲ್ಲಿಸಲಾಗುತ್ತಿದೆ. ಬೈಕಂಪಾಡಿಯ ಬಳಿ ಯಾವಾಗಲೂ ಟ್ರಕ್‌ಗಳನ್ನು ಅಡ್ಡಾದಿಡ್ಡಿ ನಿಲ್ಲಿಸುವುದರಿಂದ ಟ್ರಾಫಿಕ್‌ ಜಾಮ್‌ ಆದದ್ದಿದೆ. ಎಪಿಎಂಸಿ ಹೊರಗೆ ಟ್ರಕ್‌ಗಳು ದಿನವಿಡೀ ನಿಂತು ಸಮಸ್ಯೆಯಾಗಿದೆ. 

ಒಂದೆಡೆ ರೋ ರೋ -ಇನ್ನೊಂದೆಡೆ ಬಂದರು !
ಒಂದೆಡೆ ಬಂದರಿಗೆ ನೂರಾರು ಲಾರಿಗಳು,ಇನ್ನೊಂದೆಡೆ ವಿಶೇಷ ಆರ್ಥಿಕ ವಲಯಕ್ಕೆ  ಸರಕು ಸಾಗಿಸಲು ನಿತ್ಯ 250 ಕ್ಕೂ ಮಿಕ್ಕಿ ಲಾರಿಗಳು, ಇನ್ನು ಕೊಂಕಣ ರೈಲ್ವೆಯ ರೋರೋ ಸೇವೆಯಡಿ ಬರುವ ಲಾರಿಗಳು-ಇಷ್ಟೆಲ್ಲ ಲಾರಿಗಳಿಗೆ ನಿಲ್ಲಲು ಸ್ಥಳವೇ ಇಲ್ಲದಂತಾಗಿದೆ. 

ಟ್ರಕ್‌ ಟರ್ಮಿನಲ್‌ನಿಂದ ಅನುಕೂಲ
ಮಂಗಳೂರು ಬಂದರು ಪ್ರದೇಶವಾಗಿರುವುದರಿಂದ ನಿತ್ಯವೂ ರಾಜ್ಯ ಮತ್ತು ಹೊರ ರಾಜ್ಯದ ಸಾವಿರಾರು ಲಾರಿಗಳು ಬರುತ್ತವೆ. ಸರಕು ಸಮೇತ ಹೋಗುವುದರಿಂದ ಲೋಡು ಮಾಡಲು ದಿನಗಟ್ಟಲೆ ಕಾಯಬೇಕಾದುದು ಸಾಮಾನ್ಯ. ರೋರೋ ಲಾರಿಗಳ ನಿಲುಗಡೆಗೂ ಸರಿಯಾದ ಸ್ಥಳವಿಲ್ಲ. ಹೀಗಾಗಿ ಟ್ರಕ್‌ಗಳನ್ನು ರಸ್ತೆ ಬದಿ ನಿಲ್ಲಿಸಿದರೆ ಟ್ರಾಫಿಕ್‌ ಪೊಲೀಸರು ದಂಡ ವಿಧಿಸುತ್ತಾರೆ. ಟ್ರಕ್‌ ಟರ್ಮಿನಲ್‌ ನಿರ್ಮಾಣವಾದರೆ ಎಲ್ಲರಿಗೂ ಅನುಕೂಲ.
– ವಸಂತ್‌ ಹೊಸಬೆಟ್ಟು,  ಗೌರವ ಸಲಹೆಗಾರರು , ಕರ್ನಾಟಕ ಕರಾವಳಿ ಲಾರಿ ಮಾಲಕರ  ಸಂಘ ಮಂಗಳೂರು

ಬೈಕಂಪಾಡಿಯಲ್ಲಿ ನಿರ್ಮಾಣ ಪ್ರಯತ್ನ
ದೇವರಾಜ ಅರಸು ಟರ್ಮಿನಲ್ಸ್‌ ವತಿಯಿಂದ ಖಾಸಗಿ ಸಹಭಾಗಿತ್ವದಲ್ಲಿ ಟ್ರಕ್‌ ಟರ್ಮಿನಲ್‌ ನಿರ್ಮಾಣ ಕುರಿತು ಪ್ರಯತ್ನ ಸಾಗಿದೆ. ಬೈಕಂಪಾಡಿ ಬಳಿ 30 ಎಕರೆ ಖಾಸಗಿ ಜಾಗವಿದ್ದು  ಅದರ ಮಾಲಕರು ಆಸಕ್ತಿ ತೋರಿದ್ದಾರೆ. ಈ ಬಗ್ಗೆ ಡಿಪಿಆರ್‌ ತಯಾರಿಸಿ ಅಂತಿಮ ನಿರ್ಧಾರವನ್ನು  ನಿಗಮ ಕೈಗೊಳ್ಳಲಿದೆ. ಈ ಕುರಿತು ಮೂರು ಬಾರಿ ಅಧಿಕಾರಿಗಳು ಆಗಮಿಸಿ ಚರ್ಚಿಸಿದ್ದಾರೆ. 
– ಡಾ| ಜಗದೀಶ್‌, 
ಜಿಲ್ಲಾಧಿಕಾರಿ

ಟಾಪ್ ನ್ಯೂಸ್

Who is the prime ministerial candidate of the opposition party? Answered by Mallikarjuna Kharge

INDIA bloc ವಿಪಕ್ಷಗಳ ಕೂಟದ ಪ್ರಧಾನಿ ಅಭ್ಯರ್ಥಿ ಯಾರು? ಉತ್ತರ ನೀಡಿದ ಮಲ್ಲಿಕಾರ್ಜುನ ಖರ್ಗೆ

Udupi Gangwar; ಮತ್ತೆ ಮೂವರನ್ನು ಬಂಧಿಸಿದ ಪೊಲೀಸರು

Udupi Gangwar; ಮತ್ತೆ ಮೂವರನ್ನು ಬಂಧಿಸಿದ ಪೊಲೀಸರು

2

ʼಡ್ಯಾನ್ಸ್‌ ದಿವಾನೆ -4ʼ ಟ್ರೋಫಿ ಗೆದ್ದ ಬೆಂಗಳೂರು ಮೂಲದ ನಿತಿನ್; ಸಾಥ್‌ ಕೊಟ್ಟ ಗೌರವ್

1

ದೇವರ ದರ್ಶನಕ್ಕೆ ತೆರಳುತ್ತಿದ್ದವರ ಮೇಲೆ ಹರಿದ ಟ್ರಕ್‌: 11 ಮಂದಿ ಸ್ಥಳದಲ್ಲೇ ದುರ್ಮರಣ

T20 World Cup: ಅಮೆರಿಕಕ್ಕೆ ಹೊರಟ ರೋಹಿತ್ ಬಳಗ; ವಿಮಾನ ತಪ್ಪಿಸಿಕೊಂಡ ಕೊಹ್ಲಿ, ಹಾರ್ದಿಕ್

T20 World Cup: ಅಮೆರಿಕಕ್ಕೆ ಹೊರಟ ರೋಹಿತ್ ಬಳಗ; ವಿಮಾನ ತಪ್ಪಿಸಿಕೊಂಡ ಕೊಹ್ಲಿ, ಹಾರ್ದಿಕ್

Shaheen Afridi rejected as vice-captain of Pakistan team; But PCB says otherwise

Pakistan ತಂಡದ ಉಪ ನಾಯಕತ್ವ ತಿರಸ್ಕರಿಸಿದ ಶಾಹೀನ್ ಅಫ್ರಿದಿ; ಆದರೆ ಪಿಸಿಬಿ ಹೇಳುವುದೇ ಬೇರೆ

Delhi ಮಕ್ಕಳ ಆಸ್ಪತ್ರೆಯಲ್ಲಿ ಅಗ್ನಿ ಅವಘಡ; ಆರು ಮಕ್ಕಳು ಸಾವು

Delhi ಮಕ್ಕಳ ಆಸ್ಪತ್ರೆಯಲ್ಲಿ ಅಗ್ನಿ ಅವಘಡ; ಆರು ಮಕ್ಕಳು ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಎಲ್ಲ ಠಾಣೆಗಳಲ್ಲಿಯೂ ಸೈಬರ್‌ ಪ್ರಕರಣ ದಾಖಲು

ಎಲ್ಲ ಠಾಣೆಗಳಲ್ಲಿಯೂ ಸೈಬರ್‌ ಪ್ರಕರಣ ದಾಖಲು

beಬೀಚ್‌ಗಳಲ್ಲಿ ಪ್ರವಾಸಿಗರ ರಕ್ಷಣೆಗೆ 26 ಗೃಹರಕ್ಷಕ ಸಿಬಂದಿ

ಬೀಚ್‌ಗಳಲ್ಲಿ ಪ್ರವಾಸಿಗರ ರಕ್ಷಣೆಗೆ 26 ಗೃಹರಕ್ಷಕ ಸಿಬಂದಿ

Kateel ಮೇಳಗಳ ತಿರುಗಾಟ ಮುಕ್ತಾಯ; ದಿನಕ್ಕೆರಡರಂತೆ ಸೇವೆಯಾಟ ಬುಕ್ಕಿಂಗ್‌!

Kateel ಮೇಳಗಳ ತಿರುಗಾಟ ಮುಕ್ತಾಯ; ದಿನಕ್ಕೆರಡರಂತೆ ಸೇವೆಯಾಟ ಬುಕ್ಕಿಂಗ್‌!

ಕರಾವಳಿಯಲ್ಲಿ ಮೋಡದ ವಾತಾವರಣ, ಸಾಧಾರಣ ಮಳೆ; ಕೆಲವೆಡೆ ಹಾನಿ

ಕರಾವಳಿಯಲ್ಲಿ ಮೋಡದ ವಾತಾವರಣ, ಸಾಧಾರಣ ಮಳೆ; ಕೆಲವೆಡೆ ಹಾನಿ

ಮೂಲ್ಕಿಯ ಡಾ| ಹಂಸರಾಜ್‌ ಶೆಟ್ಟಿ ಅವರಿಗೆ ಬ್ರಿಟನ್‌ನ ಎಂಬಿಇ ಪ್ರಶಸ್ತಿ

ಮೂಲ್ಕಿಯ ಡಾ| ಹಂಸರಾಜ್‌ ಶೆಟ್ಟಿ ಅವರಿಗೆ ಬ್ರಿಟನ್‌ನ ಎಂಬಿಇ ಪ್ರಶಸ್ತಿ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

Who is the prime ministerial candidate of the opposition party? Answered by Mallikarjuna Kharge

INDIA bloc ವಿಪಕ್ಷಗಳ ಕೂಟದ ಪ್ರಧಾನಿ ಅಭ್ಯರ್ಥಿ ಯಾರು? ಉತ್ತರ ನೀಡಿದ ಮಲ್ಲಿಕಾರ್ಜುನ ಖರ್ಗೆ

Udupi Gangwar; ಮತ್ತೆ ಮೂವರನ್ನು ಬಂಧಿಸಿದ ಪೊಲೀಸರು

Udupi Gangwar; ಮತ್ತೆ ಮೂವರನ್ನು ಬಂಧಿಸಿದ ಪೊಲೀಸರು

4-

Hunsur: ಉತ್ತಮ ಮಳೆ; ಲಕ್ಷ್ಮಣತೀರ್ಥ ನದಿ ಒಳ ಹರಿವು ಹೆಚ್ಚಳ

2

ʼಡ್ಯಾನ್ಸ್‌ ದಿವಾನೆ -4ʼ ಟ್ರೋಫಿ ಗೆದ್ದ ಬೆಂಗಳೂರು ಮೂಲದ ನಿತಿನ್; ಸಾಥ್‌ ಕೊಟ್ಟ ಗೌರವ್

3-sakleshpura

Sakleshpura: ಕಾಡಾನೆ ದಾಳಿ; ಕೂಲಿ ಕಾರ್ಮಿಕ ವೃದ್ದೆಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.